POLICE BHAVAN KALABURAGI

POLICE BHAVAN KALABURAGI

19 October 2011

GULBARGA DIST REPORTED CRIMES


ಕುಖ್ಯಾತ ಮನೆ ಕಳವು ಮಾಡುವ ದಂಪತಿಯ ಬಂಧನ, ಸುಮಾರು 3 ಲಕ್ಷ ರೂ. ಬೆಲೆಬಾಳುವ ಬಂಗಾರ, ಬೆಳ್ಳಿ ಆಭರಣಗಳು ವಶ
ಖಚಿತ ಮಾಹಿತಿ ಆಧಾರದ ಅನ್ವಯ ಶಹಾಬಾದ ನಗರದ ಬಸ್ಸ್ ನಿಲ್ದಾಣದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಕುಖ್ಯಾತ ಮನೆ ಕಳ್ಳತನ ಮಾಡುವ ದಂಪತಿಗಳನ್ನು ಬಂಧಿಸಿ ಸದರಿಯವರಿಂದ ಗುಲಬರ್ಗಾ ನಗರದ ಎಮ್.ಬಿ. ನಗರ ಮತ್ತು ರೋಜಾ ಠಾಣೆ ವ್ಯಾಪ್ತಿಯ ಬಡಾವಣೆಯ ಮನೆಗಳಿಂದ ಕಳ್ಳತನ ಮಾಡಿದ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಮತ್ತು ವಗೈರೆ ಸುಮಾರು 3 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಜಾರಿಯಲ್ಲಿರುತ್ತದೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀಪ್ರವೀಣ ಮಧುಕರ ಪವಾರ ಎಸ್ ಪಿ ಗುಲಬರ್ಗಾ ,ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ
ಎಸ್ ಪಿ ಗುಲಬರ್ಗಾ,ಮತ್ತು ಶ್ರೀ ಹೆಚ್. ತಿಮಪ್ಪ ಡಿ.ಎಸ.ಪಿ ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಇಂದು ದಿನಾಂಕ 18-10-2011 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಶ್ರೀ ಬಿ. ಪಿ ಚಂದ್ರಶೇಖರ ಸಿಪಿಐ ಎಂಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ.ಐ ವಿಶ್ವವಿದ್ಯಾಲಯ ಠಾಣೆ 2) ಶ್ರೀ ಸಂಜೀವಕುಮಾರ ಪಿ.ಎಸ.ಐ ಎಂಬಿ ನಗರಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಶಿವಪುತ್ರ ಸ್ವಾಮಿ ಹೆಚಸಿ , ಶ್ರೀ ಅಶೋಕ ಪಿಸಿ , ಅರ್ಜುನ ಎಪಿಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ಬಲರಾಮ ಪಿಸಿ, ಮಶಾಕ ಪಿಸಿ ಮತ್ತು ಮಹಿಳಾ ಪಿಸಿ ಸುಧಾರವರು ಖಚಿತ ಬಾತ್ಮಿ ಮೇರೆಗೆ ಶಹಬಾರದ ನಗರದ ಬಸ್ ನಿಲ್ದಾಣದಲ್ಲಿ ಖಚಿತ ಬಾತ್ಮಿಯಂತೆ ಕುಖ್ಯಾತ ಮನೆ ಕಳುವು ಮಾಡುವ ಆರೋಪಿತರಾದ 1) ಜಯಶ್ರೀ ಗಂಡ ಕನ್ವರ ಉಪಾಧ್ಯಾಯ ಉ: ಕಚರಾ ಆಯುವದು ಸಾ: ಬಾಪೂ ನಗರ ಗುಲಬರ್ಗಾ 2) ಕನ್ವರ ತಂದೆ ಭಗವಾನ ಉಪಾಧ್ಯಾಯ ಉ: ಕೂಲಿ ಕೆಲಸ ಸಾ: ಬಾಪೂ ನಗರ ಗುಲಬರ್ಗಾ ಇವರನ್ನು ಓಡಿ ಹೋಗುತ್ತಿರುವಾಗ ಮಿಂಚಿನ ದಾಳಿ ಮಾಡಿ ಸದರಿಯವರ ಮೇಲೆ ಬಲವಾದ ಸಂಶಯ ಬಂದು ಠಾಣೆಗೆ ತಂದು ತನಿಖೆ ಒಳಪಡಿಸಿದಾಗ ಈಗ ಸುಮಾರು 8 ದಿವಸಗಳಿಂದ ಗುಲಬರ್ಗಾ ನಗರದ ಬಿಲಾಲಾಬಾದ ಕಾಲೋನಿ ಹಾಗೂ ಜಾಗೃತಿ ಕಾಲೋನಿಯಲ್ಲಿ ಬೀಗ ಹಾಕಿದ ಮನೆ ಬಾಗಿಲ ಕೀಲಿಗಳನ್ನು ಮುರಿದು ಒಳಗೆ ಹೋಗಿ ಟ್ರಂಕ ಮತ್ತು ಅಲಮಾರಿಗಳಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತರಿಂದ ಮನೆ ಕಳುವು ಮಾಡಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ಮಾನ್ಯ ಎಸಪಿ ಸಾಹೇಬರು ಪ್ರಕರಣವನ್ನು ಬೇಧಿಸಿದ ಅಧೀಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

No comments: