POLICE BHAVAN KALABURAGI

POLICE BHAVAN KALABURAGI

20 May 2019

KALABURAGI DIST REPORTED CRIMES


ನರೋಣಾ ಪೊಲೀಸ್ ಠಾಣೆ:
ಕೊಲೆ ಪ್ರಕರಣ:ದಿನಾಂಕ:19/05/2019 ರಂದು ಜಿ.ಜಿ.ಹೆಚ್ ಕಲಬುರಗಿಯಿಂದ ಡೆತ್ ಎಂ.ಎಲ್.ಸಿ ವಸೂಲಾದ ಮೇರೆಗೆ ಜಿ.ಜಿ.ಹೆಚ್ ಕಲಬುರಗಿಗೆ ಭೇಟಿಕೊಟ್ಟು ವಿಚಾರಿಸಲಾಗಿ ಮೃತ ಕಾಶಿಬಾಯಿ ಇವಳ ಮಗನಾದ ಶರಣಬಸ್ಪಪಾ ತಂದೆ ಬೀರಣ್ಣಾ ಖಟೆಗೆ ಸಾ:ಮುನ್ನಳ್ಳಿ ಲಿಖಿತ ದೂರು ಸಲ್ಲಿಸಿದ್ದು ಅದರಲ್ಲಿ  ದಿನಾಂಕ:18/05/2019 ರಂದು  ರಾತ್ರಿ ಸುಮಾರು 10-00 ಗಂಟೆಗೆ ನಾವೆಲ್ಲರೂ ಊಟಮಾಡಿ ನಾನು ಮಗಲಗಿಕೊಳ್ಳಲು ಮನೆಯೆ ಹತ್ತಿರ ಇರುವ ಕುರಿ ದೊಡ್ಡಿ ಪ್ಲಾಟಿಗೆ ಹೋಗಿದ್ದು. ರಾತ್ರಿ  ಅಂದಾಜು 01-30 ಎ.ಎಂ ಗಂಟೆ ಸುಮಾರಿಗೆ ನಮ್ಮ ಮನಯ ಹತ್ತಿರ ಚಿರಾಡುವ ಸಪ್ಪಳ ಕೇಳಿ ನಾನು ಗಾಬರಿಯಾಗಿ ಹೋಗಿ ನೋಡಲಾಗಿ ನನ್ನ ತಾಯಿ ಕಾಶಿಬಾಯಿಗೆ ಬೆಂಕಿ ತಗುಲಿ ಚೀರಾಡುತ್ತಿದ್ದು . ಇದನ್ನು ನೋಡಿ ಗುಂಡಪ್ಪಾ ನಮ್ಮ ಕಾಕಾ ರೇವಣಸಿದ್ದಪ್ಪಾ ರಾಜಾ, ಚಂದ್ರಕಲಾ ಹಾಗೂ ನಮ್ಮ ಸಂಬಂಧಿಕರಾದ ಗುರುಬಾಯಿ ಶ್ರೀದೇವಿ ಎಲ್ಲರೂ ಆರಿಸಿ ನನ್ನ ತಾಯಿಯ ಉಪಚಾರ ಸಲುವಾಗಿ ಒಂದು ಖಾಸಗಿ ವಾಹನದಲ್ಲಿ ಆಳಂದದ ಡಾ||ಪಿ.ಎನ್.ಶಾ ಆಸ್ಪತ್ರೆಗೆ ಒಯ್ದು ಅಲ್ಲಿಂದ ಅದೇ ಕಾರಿನಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಸೇರಿಮಾಡಿರುತ್ತೇವೆ. ಈ ಬಗ್ಗೆ ನನ್ನ ತಾಯಿಗೆ ವಿಚಾರಿಸಿದಾಗ ತಾನು ಮತ್ತು ಗುಂಡಪ್ಪಾ ಇಬ್ಬರು ಮನೆಯ ಮುಂದಿನ ಫತ್ರಾ ಖೊಲ್ಲಿಯಲ್ಲಿ ಮಲಗಿದ್ದಾಗ ರಾತ್ರಿ ಯಾರೋ ಬಂದು ನನ್ನ ಮೈಮೇಲೆ ಗಾಸ್ಲೇಟ್ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋದರು ಅಂತಾ ತಿಳಿಸಿದ್ದು. ನನ್ನ ತಾಯಿಯವರು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಹೊಂದುತ್ತಾ ದಿನಾಂಕ:19/05/2019 ರಂದು ಬೆಳಿಗ್ಗೆ 0700 ಗಂಟೆಗೆ ಮೃತ ಪಟ್ಟಿರುತ್ತಾಳೆ. ನನ್ನ ತಾಯಿಗೆ ಯಾರೋ ದುರುದ್ದೇಶದಿಂದ ಮೈಮೇಲೆ ಸೀಮೆ ಎಣ್ಣೆ ಸುರಿದ ಮೈಗೆ ಬೆಂಕಿ ಹಚ್ಚಿದ್ದು . ನನ್ನ ತಾಯಿ ಭಾರಿ ಸುಟ್ಟಗಾಯಗಳಿಂದ ಮೃತಪಟ್ಟಿರುತ್ತಾಳೆ ಕಾರಣ ತಾವು ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ: ದಿನಾಂಕ:19/05/2019 ರಂದು 2ಶ್ರೀ ಸೂರ್ಯಕಾಂತ ತಂ ಸಿದ್ರಾಮಪ್ಪ ಸಾ: ಬೆಳಮಗಿ 1ರವರು ಠಾಣೆಗೆ ಹಾಜರಾಗಿ ನನ್ನ ಮಗ ಶರಣಬಸಪ್ಪನು ನಮ್ಮೂರಿನಲ್ಲಿ ಕಿರಾಣಿ ವ್ಯಾಪಾರ ಮಾಡಿಕೊಂಡಿದ್ದು ದಿನಾಂಕ:19/05/2019 ರಂದು ಸಾಯಂಕಾ 7-00 ಗಂಟೆ ಸುಮಾರಿಗೆ ವ್ಹಿ.ಕೆ ಸಲಗರ ಗ್ರಾಮದಲ್ಲಿ ಕೆಲಸವಿದೆ ಅಂತಾ ನಮಗೆ ಹೇಳಿ ಮೊಟಾರ್ ಸೈಕಲ್ ನಂಬರ್ ಕೆಎ32-ಇಡಿ3280 ನೇದ್ದರ ಮೇಲೆ ತನ್ನ ಗೆಳೆಯನಾದ ಶೌಕತಲಿ ತಂದೆ ಲಾಲಸಬ ನಾಗೂರೆ ಇವರ ಸಂಗಡ ಹೋಗಿದ್ದು. ಸಾಯಂಕಾಲ 7-20 ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ತಂದೆ ರೇವಣಸಿದ್ದಯ್ಯ ಜಂಗಿನಮಠ ಇವರು ನನ್ನ ಮೊಬೈಲಗೆ ಫೋನ ಮಾಡಿ ನಮ್ಮೂರಿನ ನಂದುಸ್ವಾಮಿ ಹೊಲದ ಹತ್ತಿರ ವ್ಹಿ.ಕೆ ಸಲಗರ ಕಡೆ ಹೋಗುವ ರೋಡಿನ ಮೇಲೆ ಶರಣಬಸಪ್ಪಾ ಹಾಗೂ ಶಾಕತಲಿ ಇಬ್ಬರಿಗೂ ಅಪಘಾತವಾಗಿದೆ ಅಂತಾ ತಿಳಿಸಿದ ಮೇರೆಗೆ ನಾನು ಹಾಗೂ ನಮ್ಮೂರಿನ ರಾಮು ಡೋಲೆ, ಚಂದ್ರಕಾಂತ ಹೇಡೆ, ಸಾಯಬಣ್ಣಾ ಡೋಲೆ, ಶೌಕತಲಿ ತಂದೆಯಾದ ಲಾಲಸಾಬ ನಾಗೂರೆ, ವಸೀಮ್ ನಾಗೂರೆ ಎಲ್ಲರೂ ಸೇರಿ ಒಂದು ಖಾಸಗಿ ಜೀಪನಲ್ಲಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗನಾದ ಶರಣಪ್ಪ @ ಶರಣಬಸಪ್ಪನಿಗೆ ತಲೆಗೆ ಬಾರಿಒಳಪೆಟ್ಟಾಗಿ ಮೂಗಿನಿಂದ ಕಿವಿಯಿಂದ ಬಾಯಿ ಯಿಂದ ರಕ್ತ ಹೋಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಹಾಗೂ ಶೌಕತಲಿ ಇತನಿಗೆ  ತೆಲೆಗೆ ಭಾರಿ ರಕ್ತಗಾಯ  ಮತ್ತು ಗುಪ್ತಗಾಯ ಹಾಗೂ ಎರಡು ಕಾಳುಗಳಿಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ಅವನಿಗೆ ಆತನ ತಂದೆ ಲಾಲಸಾಬ ನಾಗೂರೆ ವಸೀಮ್ ಜಾಗಿರದಾರ ಇವರು ಒಂದು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು. ಸದರಿ ಘಟನೆಯ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ನಮ್ಮೂರಿನ ಸಿದ್ರಾಮಪ್ಪಾ ತಳಕೇರಿ ಹಾಗೂ ನಾಗಯ್ಯ ಜಂಗಿನಮಠ ಇವರಿಗೆ ವಿಚಾರಿಸಲಾಗಿ ವ್ಹಿ.ಕೆ ಸಲಗರ ಗ್ರಾಮದಿಂದ ಬೆಳಮಗಿ ಗ್ರಾಮದ ಕಡೆಗೆ ಬರುವಾಗ ಒಂದು ಕ್ರೂಸರ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಾ ಬೆಳಮಗಿ ಕಡೆಗೆ ಹೊರಟು ನಂದುಸ್ವಾಮಿ ಹೊಲದ ಹತ್ತಿರ ಬೆಳಮಗಿ ಕಡೆಯಿಂದ ಮೊಟಾರ್ ಸೈಕಲ್ ನಂಬರ್ ಕೆಎ32ಇಡಿ3280 ನೇದ್ದಕ್ಕೆ ಅಪಘಾತ ಪಡಿಸಿ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನೋಡಿದಾಗ ಮೊಟಾರ್ ಸೈಕಲ್ ಸವಾರ ಶರಣಬಸಪ್ಪನಿಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು. ಹಿಂಬದಿ ಸವಾರನಾದ ಶೌಕತಲಿ ತಲೆಗೆ ಹಾಗೂ ಎರಡು ಕಾಲುಗಳಿಗೆ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯವಾದ ಬಗ್ಗೆ ತಿಳಿಸಿತ್ತಾರೆ. ಅಪಘಾತ ಪಡಿಸಿದ ಕ್ರೂಜರ್ ವಾಹನ ಸ್ಥಳದಲ್ಲಿಯೆ ಇದ್ದು ಅದರ ನಂಬರ್ ಪರಿಶೀಲಿಸಲಾಗಿ ಕೆಎ05-ಎಂಬಿ-9646 ಇದ್ದು ಅದರ ಚಾಲಕನು ಓಡಿ ಹೋಗಿದ್ದು ಆತನ ಹೆಸರು ವಿಳಾಸ ಗೊತ್ತಿರುವುದಿಲ್ಲ ಕಾರಣ ಅಪಘಾತ ಪಡಿಸಿದ ಕ್ರೂಜರ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಚೌಕ ಪೊಲೀಸ್ ಠಾಣೆ:
ವಾಹನ ಕಳುವು ಪ್ರಕರಣ:ದಿನಾಂಕಃ 18.05.2019 ರಂದು ಶ್ರೀ ಪಾಂಡುರಂಗ ತಂದೆ ಬೀಮರಾವ ಸಾ: ವೀರಭದ್ರೇಶ್ವರ ಕಾಲೋನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ  ತನ್ನ ದ್ವಿ-ಚಕ್ರವಾಹನ ಟಿವಿಎಸ್ ಎಕ್ಸ.ಎಲ್  ವಾಹನ ಸಂಖ್ಯೆ ಕೆ.ಎ32ಇಕೆ6203 ನೇದ್ದನ್ನು ದಿನಾಂಕ 11.05.2019 ರಂದು ಮದ್ಯಾಹ್ನ ಹೆಡ್ ಪೋಷ್ಟ ಆಫೀಸ್ ಮುಂದುಗಡೆ ಗೇಟ ಹತ್ತಿರದಲ್ಲಿ ನಿಲ್ಲಿಸಿ ಆಫೀಸದಲ್ಲಿ ಹೋಗಿ ಹಣ ತುಂಬಿದ ನಂತರ ಬಂದು ನೋಡುವಷ್ಟರಲ್ಲಿ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ-ಚಕ್ರ ವಾಹನ ಇರಲಿಲ್ಲ ನಾನು ಹತ್ತಿರದಲ್ಲಿ ಎಲ್ಲ ಕಡೆಗೆ ಹುಡುಕಾಡಲಾಗಿ ಎಲ್ಲಿಯೂ ಇರಲಿಲ್ಲ ನನ್ನ ಮೋಟರ ಸೈಕಲ ಕಳುವು ಆಗಿರುತ್ತದೆ. ತಾವುಗಳು ಕಳುವಾದ ನನ್ನ ವಾಹನವನ್ನು ಪತ್ತೆ ಮಾಡಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

18 May 2019

KALABURAGI DIST REPORTED CRIMES


ರಾಘವೇಂದ್ರ ನಗರ ಠಾಣೆ:
ಕಳವು ಪ್ರಕರಣ: ಶ್ರೀ ವೀರಶೇಟ್ಟಿ ತಂದೆ ಮಾಣಿಕರಾವ ಪಾಟೀಲ ಸಾಃ ವಿಶ್ವರಾದ್ಯ ಕಾಲೋನಿ  ಕಲಬುರಗಿ ರವರು ಠಾಣೆಗೆ ಹಾಜರಾಗಿ ದಿನಾಂಕಃ 14.05.2019 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿ ಊಟ ಮಾಡಿಕೊಂಡು ನಮ್ಮ ಮನೆಗೆ ಸರಿಯಾಗಿ ಬಾಗಿಲಗಳಿಗೆ ಚಿಲಕ ಹಾಕಿಕೊಂಡು ನಮ್ಮ ಮನೆಯ ಮೇಲಗಡೆ ಮಲಗಿ ಕೊಂಡಿರುತ್ತೇವೆ. ಮದ್ಯ ರಾತ್ರಿ ಅಂದರೆ ದಿನಾಂಕಃ 15.05.2019 ರಂದು 03.00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದ ಮನೆಯವರಾದ ಸಂತೋಷ ತಂದೆ ಬಸವರಾಜ ಪಾಟೀಲ ಇವರು ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಯಾರೋ ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಚಿಲಕ ಮುರಿಯುತ್ತಿರುವದನು ನೋಡಿ  ನಮ್ಮಗೆ ಬಂದು ಎಬ್ಬಿಸಿದ್ದಾಗ ನಾವು ಹೋಗಿ ನೋಡುವಷ್ಟರಲ್ಲೆ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿರುವ ಕೀಲಿ ಮುರಿದ್ದು  ಮನೆಯಲ್ಲಿರುವ ಅಲಮಾರ ಮುರಿದ್ದು ಅಲಮಾರಿಯಲ್ಲಿಟ್ಟಿರುವ 1) ಒಂದು ಬಂಗಾರದ ಲಾಕೇಟ್ 07 ಗ್ರಾಂ ಅಃಕಿಃ 21,000, 2) ಮೂರು  ಉಂಗುರುಗಳು 9 ಗ್ರಾಂ ಅಃಕಿಃ 18,000, 3) ಎರಡು ಜೊತೆ ಕಿವಿಯೋಲೆ 10 ಗ್ರಾಂ ಅಃಕಿಃ 30,00, 4) ಒಂದು ಬಂಗಾರದ ಪದಕ 1 ಗ್ರಾಂ ಅಃಕಿಃ 3000, 5) ಬೆಳ್ಳಿಯ ಉಡದಾರ 2 ತೋಲೆ ಅಃಕಿಃ 600 ರೂ, 6) ಬೆಳ್ಳಿಯ ಖಡಗ್ಗ 2 ತೋಲೆ 5 ಗ್ರಾಂ ಅಃಕಿಃ 700, ಇತರೆ ಬೆಳ್ಳಿಯ ಸಾಮಾನಗಳು  5 ತೋಲೆ 5 ಗ್ರಾಂ ಅಃಕಿಃ 1500 ರೂ, 1500 ನಗದು ಹಣ ಹೀಗೆ ಒಟ್ಟು 2 ತೋಲೆ 7 ಗ್ರಾಂ ಬಂಗಾರದ ಆಭರಣ ಅಃಕಿಃ 72,000 ರೂ ಹಾಗೂ 10 ತೋಲೆ ಬೇಳ್ಳಿ ಆಬರಣಗಳು ಅಃಕಿಃ 2800 ರೂ ಮತ್ತು ನಗದು ಹಣ 1500 ರೂ  ಎಲ್ಲಾ ಸೇರಿ 76,300 ರೂ ಬೆಲೆ ಬಾಳುವದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರಗಿಸಿ ನಮ್ಮ ವಸ್ತಗಳು ನಮ್ಮ ದೂರಕಿಸಿಕೊಡುವಂತೆ ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನರೋಣಾ ಪೊಲೀಸ್ ಠಾಣೆ:
ಅಪಘಾತ ಪ್ರಕರಣ : ದಿನಾಂಕ:17/05/2019 ರಂದು ಶ್ರೀಮತಿ ಸುರೇಖಾ ಗಂಡ ಅನೀಲ್ ಚವ್ಹಾಣ್ ಸಾ:ನರೋಣಾ ತಾಂಡಾ ನಂ-1 (ಕುಶಪ್ಪನತಾಂಡಾ) ಇವರು ಠಾಣೆಗೆ ಹಾಜರಾಗಿ ನನ್ನ ಗಂಡ ಅನೀಲ್ ತಂದೆ ಟೀಕು ಚವ್ಹಾಣ್ ಇವರು ಇಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಅಂತಾ ಬೋದನ ಗ್ರಾಮಕ್ಕೆ ಹೋಗಿರುತ್ತಾರೆ. ನಾನು ಮತ್ತು ನನ್ನ ಮಗಳಾದ ಅಂಜಲಿ ಇಬ್ಬರು ನಮ್ಮ ಮನೆಯ ಹತ್ತಿರ ಇರುವ ಗಣಪತಿ ಚವ್ಹಾಣ್ ಇವರ ಮನೆಯ ಪಕ್ಕದಲ್ಲಿ ಬ್ಯಾರಲನಲ್ಲಿ ಸಂಗ್ರಹಿಸಿ ಇಟ್ಟಿದ್ದ, ಟ್ಯಾಂಕರ್ ನೀರು ತರಲು ಹೋಗಿರುತ್ತೇವೆ. ನಾನು ಮತ್ತು ನನ್ನ ಮಗಳು ನೀರು ತಗೆದುಕೊಂಡು ನಮ್ಮ ಮನೆ ಕಡೆಗೆ ಬರುತ್ತಿರುವಾಗ ತಾಂಡಾದೋಳಗಿನಿಂದ ವಿಷ್ಣು ತಂದೆ ಮೋತಿರಾಮ್ ರಾಠೋಡ್ ಇವನು ತನ್ನ ಮೊಟಾರ್ ಸೈಕಲ್ ನಂಬರ್ ಕೆಎ32ಇಟಿ2771 ನೇದ್ದನ್ನು ಅತೀವೇಗ ದಿಂದ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳು ಅಂಜಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಅಂಜಲಿ ಇವಳ ತಲೆಗೆ ಭಾರಿ ಒಳಪೆಟ್ಟಾಗಿ ಬಾಯಿ ಯಿಂದ ಕವಿ ಯಿಂದ ಮೂಗಿನಿಂದ ರಕ್ತ ಹೊರಬಂದು ಒದ್ದಾಡುತ್ತಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ, ಕಾರಣ ನನ್ನ ಮಗಳು ಅಂಜಲಿಗೆ ಮೊಟಾರ್ ಸೈಕಲ್ ಅಪಘಾತ ಪಡಿಸಿ ಓಡಿ ಹೋದ ವಿಷ್ಣು ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ಪೊಲೀಸ್ ಠಾಣೆ:
ಸುಲಿಗೆ ಪ್ರಕರಣ: ದಿನಾಂಕ: 17/05/2019 ರಂದು ಶ್ರೀ ಶರಣಯ್ಯ ತಂದೆ ಶಿವಕುಮಾರ ಮಠಪತಿ ಸಾ: ಡೊಣ್ಣೂರ ಇವರು ಠಾಣೆಗೆ ಹಾಜರಾಗಿ ದಿನಾಂಕ: 16/05/2019 ರಂದು ಕಲಬುರಗಿ ನಂದಿನಿ ಕೆ ಎಮ್ ಫ ಅಪೀಸದಿಂದ ನಂದಿನಿ ಹಾಲು ಮತ್ತು ಇತರೆ ನಂದಿನಿ ಸಾಮಗ್ರಿಗಳನ್ನು 407 ಟೆಂಪೊ ನಂಬರ ಕೆ ಎ 25 ಬಿ 5758 ನೇದ್ದರಲ್ಲಿ  ಹಾಕಿಕೊಂಡು ಸೇಲ್ಸಮ್ಯಾನ ಶರಣಯ್ಯ ಸ್ವಾಮಿ ಇತನೊಂದಿಗೆ ಶಹಾಬಾದ ಮಾರ್ಗವಾಗಿ ಯಾದಗೀರಿಗೆ ಹೋಗಿ ಹಾಲು ಮತ್ತು ಮೊಸರು ಸರಬರಾಜು ಮಾಡಿ ನಂದಿನಿ ಪಾರ್ಲರ ಮತ್ತು ಏಜೆನ್ಸಿರವರಿಂದ ಕಲೇಕ್ಷನ ಹಣ  ಹೀಗೆ ಒಟ್ಟು 108499/- ರೂಪಾಯಿಗಳನ್ನು ಒಂದು ಬ್ಯಾಗನಲ್ಲಿ ಹಾಕಿಕೊಂಡು ಯಾದಗೀರಿಯಿಂದ ವಾಡಿ ಶಹಾಬಾದ ಮಾರ್ಗವಾಗಿ ಕಲಬುರಗಿಗೆ ಹೋಗುತ್ತಿದ್ದಾಗ ಭಂಕೂರ ಕ್ರಾಸ ದಾಟಿ ಮುಂದೆ  ಹೋಗುತ್ತಿದ್ದಾಗ ಇಂದು ನಮ್ಮ ಹಿಂದುಗಡೆಯಿಂದ  ಎರಡು ಮೋಟಾರ ಸೈಕಲಗಳ ಮೇಲೆ  ನಾಲ್ಕು ಜನರು ಬಂದು ನಮ್ಮ 407 ಟೆಂಪೋ ವಾಹನಕ್ಕೆ ತಡೆದು ನನಗೆ ಮತ್ತು ಚಾಲಕ ಬಸವರಾಜ ಹುಂಡೇಕರಗೆ ಹಿಡಿದು ಎಳೆದಾಡಿ ನಮಗೆ ಹೊಟ್ಟೆಗೆ ಮತ್ತು ಬೆನ್ನಿಮೇಲೆ ಮತ್ತು ಮುಖದ ಮೇಲೆ ಹೊಡೆದು ನನ್ನ ಹತ್ತಿರ ಇದ್ದ ಹಣದ ಬ್ಯಾಗ ಹಾಗೂ ನನ್ನ ಮೊಬೈಲ ಮತ್ತು ನನ್ನ ಡ್ರೈವರನ ಮೊಬೈಲಕಸಿದುಕೊಂಡು ಅವರು ತಂದಿರುವ ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಕಲಬುರಗಿಗೆ ಕಡೆಗೆ ಓಡಿ ಹೋದರು ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲಾ ಕಾರಣ ನಮ್ಮ ಟೆಂಪೋ ನಿಲ್ಲಿಸಿ ನಮಗೆ ಹೊಡೆ ಬಡೆ ಮಾಡಿ ಅಂಜಿಸಿ ನಮ್ಮ ಹತ್ತಿರ ಇದ್ದ ನಗದು ಹಣ 108499/- ರೂಪಾಯಿಗಳು ಇದ್ದ ಬ್ಯಾಗ ಹಾಗೂ ನನ್ನ ಮೊಬೈಲ ಅ.ಕಿ 5000/- ರೂ ಮತ್ತು ಡ್ರೈವರ ಹತ್ತಿರ ಇದ್ದ ಮೊಬೈಲ ಕಸಿದುಕೊಂಡು ಹೋದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ್ ಠಾಣೆ:
ಹಲ್ಲೆ ಪ್ರಕರಣ: ದಿನಾಂಕ; 17/05/2019 ರಂದು ಶ್ರೀ ಮಹ್ಮದ್ ಖಾಲೀದ್ ತಂದೆ ಅಬ್ದುಲ್ ಸತ್ತಾರ ಸಾಬ್ ಗುತ್ತೆದಾರ ಸಾ; ಜೇವರಗಿ ಈತನಿಗೆ ದಿನಾಂಕ; 13/05/2019 ರಂದು ತನ್ನ ಲಾರಿ ಚಲಾಯಿಸುಕೊಂಡು ಹೋಗುತ್ತಿರುವಾಗ ಜೇವರ್ಗಿಯ ರಿಲಾಯನ್ಸ ಪೆಟ್ರೋಲ್ ಬಂಕ್ ಹತ್ತಿರ ಪೀರಪ್ಪ ತಂದೆ ಬಸಪ್ಪ ಯಾತನೂರ, ಗಂಗಾಧರ ತಂದೆ ನಿಂಗಣ್ಣ ವಿಭೂತಿ, ಗೊಲ್ಲಾಳಪ್ಪ ತಂದೆ ಬಸಪ್ಪ, ಶ್ರೀಕಾಂತ ತಂದೆ ಬಸಪ್ಪ ಮತ್ತು ಆತನ ಸಂಗಡಿಗರು ಬಂದು ಬಿಳಿ ವಿನಾಕಾರಣ ನಮ್ಮ ಹತ್ತಿರ ಹಪ್ತಾ ನೀಡುವಂತೆ ಕೇಳುತ್ತಾ , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ನಮ್ಮ ಏರಿಯಾದಲ್ಲಿ ಬಂದು ನಮಗೆ ಹಪ್ತಾ ಕೊಡದೆ ಹೋಗುತ್ತೀರಿ. ಹಪ್ತಾ ಕೊಡು ಇಲ್ಲದಿದ್ದರೆ ಗಾಡಿ ಬಿಡಲ್ಲಎಂದು ನಮ್ಮ ಜೊತೆ ಜಗಳ ತೆಗೆದು ನನ್ನ ಮತ್ತು ನಮ್ಮ ಡ್ರೈವರ್ ಅಂಬರೀಶನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ನನಗೆ ಎದೆಗೆ ಮತ್ತು ಗುಪ್ತಾಂಗಕ್ಕೆ ಹೊಡೆದಿರುತ್ತಾರೆಅಷ್ಟರಲ್ಲಿ ರೌಫ್ ಹವಲ್ದಾರ ಮತ್ತು ಶರಣು ಡಿಂಕೆ ರವರು ಬಂದು ಬಿಡಿಸಿರುತ್ತಾರೆ. ಕಾರಣ ಸದರಿ ಪೀರಪ್ಪ ತಂದೆ ಬಸಪ್ಪ ಯಾತನೂರ ಗಂಗಾಧರ ತಂದೆ ನಿಂಗಣ್ಣ ಮತ್ತು ಇವರ ಸಂಗಡಿಗರ ವಿರುದ್ದ ಕ್ರಮ ಕೈಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

16 May 2019

KALABURAGI DISTRICT REPORTED CRIMES

ಹಲ್ಲೆ ಮಾಡಿ ಹಣ ಕಿತ್ತುಕೊಂಡು ಹೋದ ಪ್ರಕರಣ :
ಫರತಾಬಾದ ಠಾಣೆ : ಶ್ರೀ ದೇವಿಂದ್ರಪ್ಪ ತಂದೆ ಯಂಕಪ್ಪ ಕಾಶಿರಾಜ್ ಸಾಃ ಹೋಸಕೇರಾ ತಾಃ ಶಹಾಪೂರ ಜಿಃ ಯಾದಗಿರ ರವರು  ದಿನಾಂಕ 15/05/2019 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜಿನಲ್ಲಿ ನನ್ನ ಸಂದರ್ಶನ (ಇಂಟರವಿವ್ಯೂ) ಇದ್ದ ಪ್ರಯುಕ್ತ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಕವಲ್ದಾರ ಸಾಃ ರಾಜಾಪೂರ(ಬಿ) ತಾಃ ಶಹಾಪೂರ ಇಬ್ಬರು ಕೂಡಿಕೊಂಡು ನನ್ನ ಗೆಳೆಯನ ಕಾರ ನಂ ಕೆಎ-36 ಎ-7140 ನೆದ್ದರಲ್ಲಿ ಮುಂಜಾನೆ 8.30 ಗಂಟೆಯ ಸುಮಾರಿಗೆ ನಮ್ಮೂರಿನಿಂದ ಹೊರಟಿದ್ದು, ನಾನು ಬರುವಾಗ ಸಂಗಡ ನಗದು ಹಣ 1,00,000/-ರೂಪಾಯಿ ಒಂದು ಬ್ಯಾಗಿನಲ್ಲಿ ಹಾಕಿ ಅದನ್ನು ಕಾರಿನ ಮುಂಭಾಗದ ಡಿಕ್ಕಿಯಲ್ಲಿಟ್ಟುಕೊಂಡು ಕಲಬುರಗಿ ಬಂದು ಕಲಬುರಗಿಯಲ್ಲಿ ಇಂಟರವಿವ್ಯೂ ಕೊಟ್ಟು ನಂತರ ಅದೇ ಕಾರಿನಲ್ಲಿ ಕಲಬುರಗಿಯಿಂದ ನಮ್ಮೂರಿಗೆ ಹೊರಟಿದ್ದು, ಮದ್ಯಾಹ್ನ 1.00 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೇದ್ದಾರಿ 218ರ ಕೆಂದ್ರ ಕಾರಾಗೃಹದ ಎದುರುಗಡೆ ಇರುವ ದಾಬಾದಲ್ಲಿ ಊಟಕ್ಕೆಂದು ರೈಸ್ ಪಾರ್ಸಲ್ ಕಟ್ಟಿಸಿಕೊಂಡು ನಂತರ ಅಲ್ಲಿಂದ ಅಂದಾಜು 2.00  ಕಿ.ಮೀ ದೂರು ಬಂದು ಅಂದರೆ ಪಾಣೆಗಾಂವ ಕ್ರಾಸ ಎದುರುಗಡೆ ರೋಡಿನ ಪಕ್ಕದಲ್ಲಿರುವ ಒಂದು ಹೊಲದಲ್ಲಿನ ಬೇವಿನ ಮರದಡಿ ಕುಳಿತು ಊಟ ಮಾಡಿದರಾಯಿತ್ತು ಅಂತಾ ಅಂದುಕೊಂಡು ಬೇವಿನ ಮರದಡಿ ಕಾರ ನಿಲ್ಲಿಸಿ ನಾನು ಮತ್ತು ನನ್ನ ಗೆಳೆಯನಾದ ಸಿದ್ದಪ್ಪ ತಂದೆ ಪರಮಣ್ಣ ಇಬ್ಬರು ಕುಳಿತು ಊಟ ಮಾಡುತ್ತಿದ್ದಾಗ ಸಮಯ ಸುಮಾರು 1.30 ಪಿ.ಎಮದ ಸುಮಾರಿಗೆ ಯಾರೋ ಇಬ್ಬರು ಅಪರಿಚಿತರು ಒಂದು ಕಪ್ಪು ಬಣ್ಣದ ಪಲ್ಸರ ಮೋಟಾರ ಸೈಕಲ ಮೇಲೆ ತಮ್ಮ ಮುಖಕ್ಕೆ ದಸ್ತಿ (ಕರಚೀಫ್) ಕಟ್ಟಿಕೊಂಡು ನಾವಿದ್ದಲ್ಲಿಗೆ ಬಂದು ನಮಗೆ ನೀವು ಯಾರು ಇಲ್ಲಿ ಯಾಕೆ ಕುಳಿತ್ತಿದ್ದಿರಿ ಏನು ಮಾಡುತ್ತಿದ್ದಿರಿ ಅಂತಾ ಕೇಳಿದಾಗ ನಾವು ಅವರಿಗೆ ಊಟ ಮಾಡುತ್ತಿದ್ದೇವೆ ಅಂತಾ ಹೇಳಿದೇವು ನಂತರ ಅವರು ತಮ್ಮ ಹತ್ತಿರ ಇದ್ದ ಚಾಕು ತೋರಿಸಿ ನಿಮ್ಮ ಕಿಸೆಯಲ್ಲಿ ಏನೇನು ಇದೆ ತೆಗೆರಿ ಅಂತಾ ಹೇಳಿದರು ನಾವು ನಮ್ಮ ಹತ್ತಿರ ಏನು ಇಲ್ಲ ಅಂತಾ ಹೇಳಿದಾಗ ಅವರು ನಮ್ಮ ಕಿಸೆಯಲ್ಲಿ ಜಬರದಸ್ತಿಯಿಂದ ಕೈ ಹಾಕಿ ಚೆಕ್ಕ ಮಾಡಿದರು. ಅವರಲ್ಲೊಬ್ಬನು ಸಿದ್ದಪ್ಪನ ಹತ್ತಿರ ಇದ್ದ ನಗದು ಹಣ 400/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಇನ್ನೋಬ್ಬನು ನನ್ನ ಕಿಸೆಯಲ್ಲಿದ್ದ ನಗದು ಹಣ 600/-ರೂ ಜಬರದಸ್ತಿಯಿಂದ ಕಿತ್ತಿಕೊಂಡನು. ನಂತರ ಕಾರಿನ ಡೋರ್ ತೆಗಿರಿ ಅಂತಾ ಹೇಳಿ ಅವರು ನಮ್ಮ ಕಾರಿನ ಡೋರ್ ತೆಗೆದರು ಕಾರಿನ ಮುಂಭಾದ ಡಿಕ್ಕಿಯಲ್ಲಿದ್ದ ಹಣದ ಬ್ಯಾಗ ತೆಗೆದುಕೊಳ್ಳಲು ಹೊದಾಗ ನಾನು ಹಣವಿದ್ದ ಬ್ಯಾಗನು ಕಸಿದುಕೊಳ್ಳಲು ಹೊದಾಗ ಅವರು 1,00,000/-ರೂಪಾಯಿ ಹಣವಿದ್ದ ಬ್ಯಾಗನ್ನು ನನ್ನಿಂದ ಜಬರದಸ್ತಿಯಿಂದ ಕಿತ್ತಿಕೊಂಡರು, ನಂತರ ಅವರು ನನ್ನ ಕೈ ಬೆರಳಲ್ಲಿದ್ದ  ಬಂಗಾರ ಉಂಗುರು ಕೊಡು ಅಂತಾ ಜಬರದಸ್ತಯಿಂದ ಕಿತ್ತಿಕೊಳ್ಳಲು ಬಂದಾಗ ನಾನು ತಡೆದು ಉಂಗುರು ಕೊಡುವುದಿಲ್ಲ ಅಂದಿದ್ದಕ್ಕೆ ಅವರುಗಳು ಅಲ್ಲೆ ಬಿದಿದ್ದ ಕಲ್ಲುಗಳು ತೆಗೆದುಕೊಂಡು ನನ್ನ ಬೆನ್ನಿಗೆ, ಕಾಲಿಗೆ, ಭುಜಕ್ಕೆ ಹೊಡೆದರು. ನಂತರ ಅವರು ಅದೇ ಪಲ್ಸರ ಮೋಟಾರ ಸೈಕಲ ಮೇಲೆ ಹೊಲದಲ್ಲಿನ ಕಾಲು ದಾರಿಯಿಂದ ಹೊದರು. ಗಾಬರಿಯಲ್ಲಿ ಮೋಟಾರ ಸೈಕಲ ನಂಬರ ನೋಡಿರುವುದಿಲ್ಲ. ಅವರು ಕನ್ನಡ ಮಾತಾಡುತ್ತಿದ್ದು, ಸದೃಡವಾಗಿದ್ದು, ಅಂದಾಜು ವಯಾ 25-35 ವಯಸ್ಸಿನವರಿರಬಹುದು ನಾವು ಅವರಿಗೆ ನೋಡಿದ್ದಲ್ಲಿ ಗುರ್ತಿಸುತ್ತೇವೆ. ನನಗೆ ಅಷ್ಟೇನು ಪೆಟ್ಟಾಗದ ಕಾರಣ ಆಸ್ಪತ್ರೆಗೆ ಹೊಗುವುದಿಲ್ಲ. ದಿನಾಂಕ 15/05/2019 ರಂದು 1.30 ಪಿ.ಎಮಕ್ಕೆ ರಾಷ್ಟ್ರೀಯ ಹೆದ್ದಾರಿ 218ರ ಪಾಣೆಗಾಂವ ಕ್ರಾಸ ಎದುರುಗಡೆ ಇರುವ ಹೊಲದಲ್ಲಿನ ಬೇವಿನ ಮರದಡಿ ನಾವು ಊಟ ಮಾಡಲು ಕುಳಿತಾಗ ಇಬ್ಬರು ಅಪರಿಚಿತರು ಮೋಟಾರ ಸೈಕಲ ಮೇಲೆ  ಬಂದು ನಮಗೆ ಹೊಡೆ ಬಡೆ ಮಾಡಿ ನಮ್ಮಿಂದ ನಗದು ಹಣ 1,01,000/-ರೂ ಜಬರದಸ್ತಿಯಿಂದ ಕಿತ್ತಿಕೊಂಡು ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ.ದತ್ತು  ರವರು .ರಾಜು ತಂದೆ ಗೋಪಾಲ ಜಮಾದಾರ ಸಾ:ಮಡಕಿತಾಂಡ ಇವರ ಹೊಲವನ್ನು ನಾನು ಕಡತಿ ಹಾಕಿಕೊಂಡಿದ್ದು ಸದರಿ ಹೊಲದಲ್ಲಿ ಕಬ್ಬು ಖಾಕಿರುತ್ತೇನೆ. ಇದರ ಬಾಜು ಹಣಮಂತ ತಂದೆ ಗುಂಡಪ್ಪಾ ಧನಗರ ಸಾ:ದಮ್ಮೂರ ಇವರ ಹೊಲ ಇರುತ್ತದೆ, ಸದರಿ ಹೊಲ ನಮ್ಮ ಅಣ್ಣನಾದ ಬಳಿರಾಮ್ ತಂದೆ ಧನಸಿಂಗ್ ಚವ್ಹಾಣ್ ಕಡತಿ ಹಾಕಿಕೊಂಡಿದ್ದು ಹೊಲದಲ್ಲಿ ಅಲಸಂದಿ ಬೆಳೆ ಹಾಕಿರುತ್ತಾರೆ.  ನಾನು ದಿನಾಂಕ: 15/05/2019 ರಂದು ಬೆಳಿಗ್ಗೆ 0830ರ ಸುಮಾರಿಗೆ ನಾನು ಕಡತಿಹಾಕಿಕೊಂಡ ರಾಜು ಇವರ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಹಣಮಂತನ ಹೊಲದಲ್ಲಿ ನಮ್ಮ ತಾಂಡಾದ 1)ತುಕಾರಾಮ್ ತಂದೆ ಧನಸಿಂಗ್ ಚವ್ಹಾಣ್ ಹಾಗೂ ಆತನ ಹೆಂಡತಿ 2)ಪುತಳಾಬಾಯಿ ಗಂಡ ತುಕಾರಾಮ್ ಚವ್ಹಾಣ್,  ಇವರು ತಮ್ಮ ಕುರಿದನಗಳನ್ನು ಬಿಟ್ಟಿದ್ದು, ನಾನು ನೋಡಿ ಅಲ್ಲಿಗೆ ಅವರಿಗೆ ಹೀಗೆ ಬೆಳೆಯಲ್ಲಿ ಕುರಿ ದನ ಬಿಡುವುದು ಸರಿಯಲ್ಲ ಅಂತಾ ಹೇಳಿದಕ್ಕೆ ಅವರಿಬ್ಬರು ನನ್ನ ಸಂಗಡ ಬಾಯಿ ಬಡೆದು, ನನ್ನೊಂದಿಗೆ ಜಗಳ ಮಾಡಿ ತುಕಾರಾಮ್ ನನಗೆ ರಂಡಿಮಗನೆ, ಭೋಸಡಿಮಗೆ ಅಂತಾ ಬೈದು ತಲೆಯ ಮೇಲಿನ ಕುದಲು ಹಿಡಿದು ಒಂದು ಕಲ್ಲು ತಗೆದುಕೊಂಡು ತನ್ನ ಕೈಯಲ್ಲಿ ಹಿಡಿದು ನಿನಗೆ ಬಿಡಂಗಿಲ್ಲ ಸೂಳೆ ಮಗನೆ ಅಂತಾ ಬೈಯುತ್ತ ನನ್ನ ಹೊಟ್ಟೆಯ ಮೇಲೆ ಜೋರಾಗಿ ಗುದ್ದಿ ಗುದ್ದಿ ಭಾರಿ ಗುಪ್ತಗಾಯ ಪಡಿಸಿದನು. ಆಗ ಆತನ ಹೆಂಡತಿ ಪುತಳಬಾಯಿ ಇವಳು ಈ ಹಟ್ಯಾ ಭಾಡಕೋಗಾ ಭಹಳ ಸೊಕ್ಕು ಬಂದಾದ ಅಂತಾ ಬೈದು ಕಲ್ಲಿನಿಂದ ಬೆನ್ನಮೇಲೆ ಜೋರಾಗಿ 2-3 ಸಲ ಗುದ್ದಿದಳು ನನಗೆ ಹೊಟ್ಟೆ ಬೆನ್ನಿಗೆ ಭಾರಿ ಒಳಪೆಟ್ಟಾಗಿ ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದಾಗ, ಅದೇ ವೇಳೆಗೆ ನನ್ನ ಅಣ್ಣ ಬಳಿರಾಮ ಹಾಗೂ ಆತನ ಮಗ ಯುವರಾಜ್, ಇಬ್ಬರು ಹೊಲಕ್ಕೆ ಬಂದಿದ್ದು, ಅವರೂ ಕೂಡ ಈ ಘಟನೆಯನ್ನು ಸ್ವಲ್ಪ ಧೂರದಿಂದ ನೋಡಿ ನಮ್ಮ ಕಡೆ ಬರುವುದನ್ನು ನೋಡಿ ತುಕಾರಾಮ್ ಹಾಗೂ ಪುತಳಬಾಯಿ ಇವರು ನನಗೆ ಹೊಡೆಬಡೆ ಮಾಡುವುದನ್ನು ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.