POLICE BHAVAN KALABURAGI

POLICE BHAVAN KALABURAGI

22 March 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 17/03/2019 ರಂದು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ರೋಡಿನ ಮೇಲೆ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನು ತನ್ನಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ತಂದೆಯಾದ ವಜೀರ ಪಟೇಲ ಇತನು ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-32 ಡಬ್ಲ್ಯೂ-9346 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ಸದರಿ ವಜೀರ ಪಟೇಲ ಇತನಿಗೆ ತಲೆಗೆ  ಭಾರಿ ರಕ್ತಗಾಯ, ಎದೆಗೆ ಭಾರಿ ಗುಪ್ತಗಾಯ, ಎಡಗಾಲಿನ ತೊಡೆಗೆ ಭಾರಿ ಗುಪ್ತಗಾಯಗಳಾಗಿದ್ದು, ಅಪಘಾತಪಡಿಸಿದ ಮೋಟಾರ ಸೈಕಲ ಮೇಲಿದ್ದ ಧರ್ಮರಾಜ ಇತನಿಗೆ ತಲೆಗೆ ಭಾರಿ ಗುಪ್ತಗಾಯ, ಬಲಗಣ್ಣಿಗೆ ಭಾರಿ ರಕ್ತಗಾಯ ಕಿವಿಯಿಂದ & ಮೂಗಿನಿಂದ ರಕ್ತಸೋರುತ್ತಿದ್ದು, ಇನ್ನೂಳಿದವರಿಗೂ ಗಾಯಗಳಾಗಿರುತ್ತವೆ. ಕಾರಣ ಸದರಿ ಮೋಟಾರ ಸೈಕಲ ನಂ ಕೆಎ-32 ಇಸಿ-9817 ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನು ರೀತಿ ಕ್ರಮ ಜರೂಗಿಸಬೇಕೆಂದು ಶ್ರೀ ಸಲೀಮ ಪಟೇಲ ತಂದೆ ವಜೀರ ಪಟೇಲ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಸ್ತೆ ಅಪಘಾತದಲ್ಲಿ ದುಃಖಪತಗೊಂಡು ಉಪಚಾರ ಕುರಿತು ಸೇರಿಯಾದ ವಜೀರ ಪಟೇಲ ತಂದೆ ನಬಿ ಪಟೇಲ  ರವರು ರಾಷ್ಟ್ರೀಯ ಹೇದ್ದಾರಿ 218ರ ಸೀತನೂರ ಕ್ರಾಸ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನನ್ನ ತಂದೆ ವಜೀರ ಪಟೇಲ ಇವರಿಗೆ ಭಾರಿ ರಕ್ತಗಾಯ & ಭಾರಿ ಗುಪ್ತಗಾಯಗಳಾಗಿದ್ದು, ಉಪಚಾರ ಕುರಿತು ಸನ್ ರೈಜ್ ಆಸ್ಪತ್ರೆಗೆ ಸೇರಿಯಾಗಿದ್ದು, ಉಪಚಾರ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ 20/03/2019 ರಂದು 2.17 ಪಿ.ಎಮಕ್ಕೆ ಮೃತಪಟ್ಟಿರುತ್ತಾರೆ. ಅಂತಾ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಬ್ದುಲ ಯಾಸಿನ್ ತಂಧೆ ಹಾಷಮ್ ಪೀರ ಸಾ: ಆಲ್ ಅಮೀನ್ ಶಾಲೆ ಹತ್ತಿರ ಗಾಲಿಬ ಕಾಲೋನಿ ಎಮ್.ಎಸ್.ಕೆ.ಮೀಲ್ ಕಲಬುರಗಿ ರವರು  ದಿನಾಂಕ 21.03.2019 ರಂದು ಮಧ್ಯಾನ 12:30 ಗಂಟೆಯ ಸುಮಾರಿಗೆ ನಾನು ನನ್ನ ತಂಗಿಯಾದ ಉಮ್ಮೇಫೈಜಾ ಇವಳಿಗೆ ಶಾಲೆಯಿಂದ ಕರೆದುಕೊಂಡು ಬರಲು ಶಟ್ಟಿ ಚಿತ್ರ ಮಂದಿರ ಹತ್ತಿರ ಇದ್ದಾಗ ನನ್ನ ಗೆಳೆಯ ಆರೀಫ್ ಇತನು ನನಗೆ ಪೋನ ಮಾಡಿ  ನಾನು ಗಾಲಿಬ ಕಾಲೋನಿಯಲ್ಲಿರುವಾಗ ನಮ್ಮ ಬಡಾವಣೆಯ ಹುಡಗರಾದ ನಾಗು @ ನಾಗ್ಯಾ, ವಿಶಾಲ ಮೂಕ ಬಾಬು ಮತ್ತು ವಿಜಯ ಇವರು ನಮ್ಮ ಜನಾಂಗದ ಹುಗುಡನಿಗೆ ಬಣ್ಣ ಹಾಕತ್ತಿದ್ದರು ಆಗ ನಾನು ಅವರ ಹತ್ತಿರ ಹೋಗಿ ಅವರು ಬಣ್ಣ ಆಡುವದಿಲ್ಲ ಅವನಿಗೆ ಬಣ್ಣ ಹೊಡೆಯುವದು ಬೇಡ ಅಂತ ಹೇಳಿದಾಗ ಅವರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿರುತ್ತಾರೆ. ಕೂಡಲೆ ಇಲ್ಲಿಗೆ ಬಾ ಅಂತ ನನಗೆ ಪೋನ ಮಾಡಿ ಕರೆದಿದ್ದು ಕೂಡಲೆ ನಾನು ನನ್ನ ತಂಗಿಯನ್ನು ನಮ್ಮ ಮನೆಗೆ ಬಿಟ್ಟು ಆಲ್ ಅಮೀನ ಚೌಕ ಹತ್ತಿರ ಹೋಗಿದ್ದು ಅಲ್ಲಿ ಆರೀಫ್, ಅಕ್ಬರ, ಶೋಯೇಬ, ಮಕಸೂದ, ತಬರೇಜ ಜೋದಿನ್, ಮತ್ತು ಜೀಲಾನ ಕೂಡಿಕೊಂಡು ಆಲ್ ಅಮೀನ ಚೌಕದ ಹತ್ತಿರ ಕುಳಿತು ಕೊಂಡಿದ್ದರು ನಾನು ಅಲ್ಲಿಗೆ ಹೋಗಿದ್ದು ಜಗಳ ಬಗ್ಗೆ ನಾನು ಆರೀಫ್ನಿಗೆ ವಿಚಾರಿಸುತ್ತಿರುವಾಗ ಸುಮಾರು ಮಧ್ಯಾನ 1 ಗಂಟೆಯ ಸುಮಾರಿಗೆ 1. ವಿಜಯ, 2. ನಾಗು @ ನಾಗ್ಯಾ, 3. ರವಿ, 4. ವಿಶ್ಯಾಲ 5. ಮೂಕ ಬಾಬು ಹಾಗೂ ಇನ್ನೂ 6-7 ಜನರು ಕೂಡಿಕೊಂಡು ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದು ಅವಾಚ್ಯವಾಗಿ ಬೈಯುತ್ತಾ ಆರೀಫ್ ಸೂಳೆ ಮಗನದು ಬಹಾಳ ಆಯಿತು ಇವನಿಗೆ ಹೊಡೆದು ಸಾಯಿಸಿ ಬೀಡುರಿ ಅಂತ ಅವರು ಕೂಗಾಡುತ್ತಾ ಆರೀಫ್ನಿಗೆ ಕೊಲೆ ಮಾಡುವ ಉದ್ದೇಶದಿಂದ ತಮ್ಮ ಕೈಯಲ್ಲಿದ್ದ ಕಟ್ಟಿಗೆ ಮತ್ತು ಕಲ್ಲುಗಳಿಂದ ಆರೀಫ್ನಿಗೆ ತಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಎದೆಗೆ, ಮತ್ತು ಕಾಲಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿದ್ದು ಅಲ್ಲದೆ ನನಗೆ ಅಕ್ಬರನಿಗೆ ಮತ್ತು ಜೀಲಾ ಇತನಿಗೆ ಕಟ್ಟಿಗೆಯಿಂದ ಹೊಡೆದು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಆರೀಫ್ನಿಗೆ ಭಾರಿ ರಕ್ತಗಾಯವಾಗಿದನ್ನು ನೋಡಿ ಅವರು ಅಲ್ಲಿಂದ ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಅಬ್ದುಲ್ ಖಾಲೀದ ತಂದೆ ಅಬ್ದುಲ್ ಸಮಿ ಸಿದ್ದಿಕಿ ಸಾ|| ರೇವಣಸಿದ್ದೇಶ್ವರ್ ಕಾಲೋನಿ ಆಳಂದ ರವರ ಪತ್ನಿ ನಾಜಿಯಾ ಬೇಗಂ ಇವಳಿಗೆ ಆರಾಮವಿಲ್ಲದೆ ಇದ್ದ ಕಾರಣ ನಾವು ಅವಳಿಗೆ ದಿನಾಂಕ 16/03/2019 ರಂದು ಕಲಬುರಗಿಯ ಬಾಬಾ ಹೌಸ್ ಖಾಸಗಿ ಆಸ್ಪತ್ರೆ ಸೇರಿಕೆಯನ್ನು ಮಾಡಿರುತ್ತೆವೆ, ನನ್ನ ಮಕ್ಕಳಿಗೆ ನಮ್ಮ ತಂದೆ ತಾಯಿಯವರು ವಾಸವಾಗಿರುವ ರಜವಿ ರೋಡಿನ ಹತ್ತಿರ ಇರುವ ಮನೆಯಲ್ಲಿ ಬಿಟ್ಟು ಕಲಬುರಗಿಗೆ ಹೋಗಿ ದಿನಾಂಕ 19/03/2019 ರಂದು ಸಾಯಂಕಾಲ 06-00 ಗಂಟೆಗೆ ಮರಳಿ ಬಂದು ನಮ್ಮ ಮನೆಯಲ್ಲಿರುವ ಬಟ್ಟೆ ಬರೆಗಳನ್ನು ತೆಗೆದುಕೊಂಡು ಮನೆಯ ಹಿಂದಿನ & ಮುಂದಿನ ಬಾಗಿಲುಗಳಿಗೆ ಬೀಗ ಹಾಕಿ ನಮ್ಮ ತಂದೆ ತಾಯಿಯವರ ಹತ್ತಿರ ಹೋಗಿರುತ್ತೆವೆದಿನಾಂಕಃ 20/03/2019 ರಂದು ಬೆಳಿಗ್ಗೆ 07-00 ಗಂಟೆಗೆ ನಮ್ಮ ಮನೆಯ ಬಾಗಿಲು ತೆಗೆದು ಒಳಗಡೆ ಹೋಗಿ ನೋಡಲು ಅಡುಗೆ ಕೋಣೆಯ ಬಾಗಿಲು ತೆರೆದಿದ್ದು ಮನೆಯಲ್ಲಿದ ಅಲಮಾರಿಯಲ್ಲಿನ ಬಟ್ಟೆಗಳು ಹಾಗೂ ಇತರೇ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಆಗ ಗಾಬರಿಯಾಗಿ ಅಲಮಾರಿಯಲ್ಲಿ ಲಾಕರ ತೆರೆದಿದ್ದು ಲಾಕರಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು  ಒಟ್ಟು 24,000/-ರೂಪಾಯಿಯ ಬೆಲೆಬಾಳುವ ಬಂಗಾರದ ಆಭರಣಗಳನ್ನು ನಿನ್ನೆ ದಿನಾಂಕ:19/03/2019 ರಂದು ರಾತ್ರಿ 10:30 ಪಿ.ಎಮ್.ದಿಂದ ಇಂದಿನ ಬೇಳಗಿನ ಜಾವ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಹಿಂದಿನ ಕಂಪೌಂಡ ಗೋಡೆಯ ಮೇಲಿನಿಂದ ಮನೆಯ ಒಳಗೆ ನುಗ್ಗಿ ಅಡುಗೆ ಮನೆಯ ಬಾಗಿಲಿಗೆ ಜೋರಾಗಿ ಒತ್ತಿದರಿಂದ  ಒಳಕೊಂಡಿ ಮುರಿದು ಬಾಗಿಲು ತೆರೆದಿದ್ದು ಆಗ ಮನೆಯೊಳಗೆ ಇಟ್ಟಿದ ಅಲಮಾರಿಯನ್ನು ಮುರಿದು ಅದರಲ್ಲಿ ಇಟ್ಟಿದ ಈ ಎಲ್ಲಾ ಮೇಲ್ಕಂಡ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹ್ಮದ ಇರ್ಫಾನ ಅಹ್ಮದ ತಂದೆ ವಾಹೇದ ಅಲಿ ಸಾ|| ಪ್ಲ್ಯಾಟ್ ನಂ; 4 ಸುಕೂನ್ ಅಪಾರ್ಟಮೆಂಟ ಅಭಾವ್ ಫೂಟಜೋನ ಎಮ್ ಜಿ ರೋಡ ಕಲಬುರಗಿ ರವರು ದಿನಾಂಕ; 18/03/2019 ರಂದು ಸಂಗಮೇಶ್ವರ ಕಾಲೋನಿಯ ಎಸ್‌‌.ಬಿ.ಐ  ಬ್ಯಾಂಕ ಹತ್ತಿರದ ನ್ಯೂ ಇಂಡಿಯಾ ಇನ್ಸುರೆನ್ಸ ಆಫೀಸ್ ಕೇಳಗಡೆ ನನ್ನ ಹಿರೋ ಪ್ಯಾಷನ್ ಎಕ್ಸ್ ಫ್ರೂ ಮೊಟಾರ ಸೈಕಲ್ ನಂ; KA32 EC9957 CHASSIS.NO.MBLJA12ACDGA05232 ENGINE NO.JA12ABDGA06356 ||ಕಿ|| 25,000/-ರೂ ನೇದ್ದನ್ನು ನಿಲುಗಡೆಮಾಡಿ ರಾಹುಲ್ ಗಾಂದಿ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 3;30 ಪಿ.ಎಂಕ್ಕೆ  ಮರಳಿ ಬಂದು ನೋಡಲಾಗಿ ಸದರಿ ನನ್ನ ಮೊಟಾರ ಸೈಕಲ್ ಇರಲಿಲ್ಲ ಯಾರೋ ಕಳ್ಳರು ನನ್ನ ಮೊಟಾರ ಸೈಕಲ್ ಕಳ್ಳತನಮಾಡಿಕೊಂಡು ಹೊಗಿರುತ್ತಾರೆ. ನಾನು ಇಲ್ಲಿಯವರೆಗೆ ಹುಡುಕಾಡಿದರೂ ನನ್ನ ಮೊಟಾರ ಸೈಕಲ್ ಸಿಕ್ಕಿರುವದಿಲ್ಲ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

20 March 2019

KALABURAGI DISTRICT REPORTED CRIMES

ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸೋಮಶೇಖರ ತಂದೆ ಗುರುಲಿಂಗಪ್ಪ ಖಾನಗೌಡರ ಸಾ|| ಸುಂಬಡ ತಾ|| ಜೇವರ್ಗಿ ರವರ ತಂದೆಯ ಹೆಸರಿಗೆ  ನಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು, ಅದರ ಸರ್ವೆ ನಂ 76 ನೇದ್ದರಲ್ಲಿ 4 ಎಕರೆ ಜಮೀನು ಇರುತ್ತದೆ, ಹೊಲದ ಸಲುವಾಗಿ ನಮ್ಮ ತಂದೆ ಯಡ್ರಾಮಿ ಪಿ.ಕೆ.ಜಿ.ಬಿ ಬ್ಯಾಂಕನಲ್ಲಿ ಸುಮಾರು 95,000/- ಸಾವಿರ ಹಾಗೂ ಖಾಸಗಿಯಾಗಿ 3 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆ ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ, ಸಾಲ ಹೇಗೆ ತೀರಿಸುವುದು. ಸಲ ಹೊಲದಲ್ಲಿನ ಬೆಳೆಯು ಸಹ ಸರಿಯಾಗಿ ಬೆಳೆದಿಲ್ಲಾ, ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 19-03-2019 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಗುರುಲಿಂಗಪ್ಪ ತಾಯಿ ಸಾವಿತ್ರಿ ತಮ್ಮ ಮಡಿವಾಳಪ್ಪ ಎಲ್ಲರೂ ಕೂಡಿ ಮನೆಯಲ್ಲಿ ಇದ್ದಾಗ ನಮ್ಮ ತಂದೆ ಮನೆಯ ಒಳಗಡೆ ಹೋಗಿ, ಮೈಗೆ ಸೀಮೆ ಎಣ್ಣಿ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಾ ಹೋರಗೆ ಬಂದರು, ಆಗ ನಾವು ಗಾಬರಿಗೊಂಡು, ಬೆಂಕಿ ಹಾರಿಸಿದೇವು, ಆಗ ತಂದೆಗೆ ನೋಡಲಾಗಿ, ತಮ್ಮ ತಂದೆಯ ಹೊಟ್ಟೆಗೆ,ಮರ್ಮಾಂಗಕ್ಕೆ,ಎರಡು ಮೊಳಕಾಳ ಹತ್ತಿರ ಮೈಗೆ ಅಲ್ಲಲ್ಲಿ ಸುಟ್ಟ ಗಾಯಗಳು ಆಗಿರದ್ದುವು, ನಂತರ ನಾವು ಚಿರಾಡುವ ಶಬ್ದ ಕೇಳಿ ನಮ್ಮ ಅಣ್ಣತಮ್ಮಂಕ್ಕಿಯ ಬಸವರಾಜ ತಂದೆ ಪ್ರಭುರಾಯಗೌಡ ಖಾನಗೌಡರ,ಮಲ್ಲಿನಾಥ ತಂದೆ ಸುಬ್ಬರಾಯಗೌಡ ಖಾನಗೌಡರ ಇವರು ಬಂದರು ಎಲ್ಲರೂ ಕೂಡಿ ಉಪಚಾರ ಕುರಿತು  ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಜೇವರಗಿಗೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಜೇವರಗಿ ಸಮೀಪ ಪೈಯರ ಆಪೀಸ್ ಎದುರಡಗೆ ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಮ್ಮ ತಂದೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ರೇವೂರ ಠಾಣೆ : ದಿನಾಂಕ:13/03/2019 ರಂದು ರಾತ್ರಿ 1:30  ಎ.ಎಮ್.ಕ್ಕೆ ಅಫಜಲಪೂರ ತಾಲೂಕಿನ ನೀಲೂರ ಗ್ರಾಮದ ಜಿಯೋ ರಿಲಾಯನ್ಸ ಟವರಿನ 1) ) PATCH CORD SM DUP LCUPC 60M||ಕಿ||68182/- ರೂಪಾಯಿ 2) RRH POWER,JH,850 BAND 60M||ಕಿ||87272/-ರೂಪಾಯಿ ಒಟ್ಟು 155454/-ರೂಪಾಯಿ ಕಿಮ್ಮತ್ತಿನ ಕೇಬಲ ವಾಯರನ್ನು ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಆನಂದ ತಂದೆ ಯೋಗೇಶ್ವರಪ್ಪ ಜಿಯೋ ರಿಲಾಯನ್ಸ ಟವರ ಕಂಪನಿ ನಂ 51 ಪ್ಲಾಲೇಸ ರೋಡ ಕ್ರಾಸ್ ವಸಂತ ನಗರ ಬೆಂಗಳೂರು 52 ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

15 March 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ  ಅಣ್ಣನಾದ ಸಿದ್ದಪ್ಪ ತಂದೆ ದುರ್ಗಪ್ಪ ತಳಕೇರಿ ಸಾ:ಬೇಳಗುಂಪಾ ರವರ ತಮ್ಮನಾದ ಶಿವಯೋಗಿ ಇತನು  ದಿನಾಂಕ 09/03/2019 ರಂದು ಮದ್ಯಾಹ್ನ 3-30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದಿನ ಸಿ.ಸಿ ರಸ್ತೆಯ ಮೇಲೆ ನಮ್ಮ ಮನೆಯ ಸ್ವಲ್ಪ ದೂರದಲ್ಲಿದ್ದ ನಾಗಮ್ಮ ಇವಳ ಚಿಕ್ಕ ಮಗ ಜದೀಶ ಇವನು ಕೇಲವು ಹುಡುಗರೊಂದಿಗೆ ಆಟವಾಡುತ್ತಿದ್ದಾಗ ನನ್ನ ತಮ್ಮ ಮನೆಯ ಮುಂದೆ ಆಟವಾಡಬೇಡಿ ಅಂತಾ ಹೇಳಿ ಬೆದರಿಸಿ ಕಳುಹಿಸಿಕೊಟ್ಟಿದ್ದರಿಂದ ಜಗದೀಶನು ತನ್ನ ತಾಯಿ ನಾಗಮ್ಮಳಿಗೆ ಕರೆದುಕೊಂಡು ನನ್ನ ತಮ್ಮ ಶಿವಯೋಗಿ ಇತನಿಗೆ ಯಾಕೇ ಬೆದರಿಸಿದ್ದಿರಿ ಅಂತಾ ಕೇಳಲು ಹೋದಾಗ ಆಗ ನಾಗಮ್ಮಳ ಹಿರಿಯ ಮಗನಾದ ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ತನ್ನ ಕೈಯಲ್ಲಿದ್ದ ಬಡಿಗೆ ಹಿಡಿದುಕೊಂಡು ಬಂದವನೇ ಶಿವಯೋಗಿ ಇತನಿಗೆ ಖಲಾಸ ಮಾಡುತ್ತೆನೆ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಮ್ಮನ ಬಲ ಮೇಲಕಿಗೆ ಹಾಗೂ ತಲೆಯ ಮೇಲೆ ಜೋರಾಗಿ ಹೊಡೆದನು ಇದರಿಂದ್ದ  ನನ್ನ ತಮ್ಮನಿಗೆ ಭಾರಿ ಗುಪ್ತ ಗಾಯವಾಗಿ ಸ್ಥಳದಲ್ಲಿಯೇ ಬೇಹೋಶ ಆಗಿ ಬಿದ್ದಿರುತ್ತಾನೆ ಈ ಘಟನೆಯನ್ನು ನೋಡಿದ ನಾನು ನನ್ನ ಹೆಂಡತಿ ಮಲ್ಲಮ್ಮ ಹಾಗೂ ನನ್ನ ಮಕ್ಕಳಾದ ಮಲ್ಲಿಕಾರ್ಜುನ, ಶ್ರೀಶೈಲ, ಹಾಗೂ ನಮ್ಮೂರಿನ ಜಗಳದ ಕಾಲಕ್ಕೆ ಅಲ್ಲೆ ಇದ್ದ ಸುಬ್ಬಣ್ಣ ತಂದೆ ಭೀಮಶಾ ಕಟ್ಟಿಮನಿ, ಅರ್ಜುನ ತಂದೆ ಕಾಳಪ್ಪ ಎದರುಮನಿ ಎಲ್ಲರೂ ಕೂಡಿ ಬಂದು ಹೊಡೆಯುವುದನ್ನು ಬಿಡಿಸಿಕೊಂಡಿರುತ್ತೆವೆ ನನ್ನ ತಮ್ಮನಿಗೆ ಒಂದು ಖಾಸಗಿ ವಾಹನ ಮಾಡಿಕೊಂಡು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು.ಕಾರಣ ನನ್ನ ತಮ್ಮನಿಗೆ ನಮ್ಮ ಗ್ರಾಮದ ನಾಗರಾಜ ತಂದೆ ಸಾಬಣ್ಣ ಕಟ್ಟಿಮನಿ ಇತನು ಕೊಲೆ ಮಾಡುವ ಉದ್ದೇಶದಿಂದ ಬೈದು ಬಡಿಗೆಯಿಂದ ತಲೆಯ ಮೇಲೆ ಮೇಲಕಿನ ಮೇಲೆ ಹೊಡೆದು ಭಾರಿ ಗುಪ್ತ ಗಾಯ ಮಾಡಿದ್ದು ನನ್ನ ತಮ್ಮನನನ್ನು ಚಿಕಿತ್ಸೆಗೋಸ್ಕರ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ತಮ್ಮನಾದ ಶಿವಯೋಗಿತಂದೆ ದುರ್ಗಪ್ಪ ತಳಕೇರಿ ಇತನು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 14-03-2019 ರಂದು ಮಧ್ಯಾಹ್ನ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಸದಾಶಿವಯ್ಯ ತಂದೆ ಮಲ್ಲಿನಾಥ ಹಿರೇಮಠ ಸಾ:ಬಿದರಚೇಡ ಗ್ರಾಮ, ಹಾ.: ವಿಶ್ವನಗರ ಸೇಡಂ, ರವರು ದಿನಾಂಕ 13/03/2019 ರಂದು ರಾತ್ರಿ 10-30 ಗಂಟೆಯ ಸುಮಾರಿಗೆ ನಾನು ನನ್ನ ಹೆಂಡತಿ ಶ್ರೀದೇವಿ, ಮಗಳು ದಾಕ್ಷಾಯಿಣಿ ಎಲ್ಲರೂ ಊಟ ಮಾಡಿಕೊಂಡು ಮನೆಯ ಬಾಗಿಲು ಮುಚ್ಚಿ ಕೀಲಿ ಹಾಕಿ ಮನೆಯ ಛತ್ತಿನ ಮೇಲೆ ಹೋಗಿ ಮಲಗಿಕೊಂಡಿದ್ದು, ಇಂದು ದಿನಾಂಕ 14/03/2019 ರಂದು ಮುಂಜಾನೆ 05-00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಶ್ರೀದೇವಿ ಇವಳು ಎದ್ದು ಛತ್ತಿನ ಮೇಲಿಂದ ಕೆಳಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಕೀಲಿಯು ಮುರಿದು ಬಾಗಿಲು ತೆರೆದಿದ್ದು ಕಂಡುಬಂದು ಗಾಬರಿಯಾಗಿ ನನಗೆ ಎಬ್ಬಿಸಿದ್ದು, ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ಮನೆಯಲ್ಲಿ ಬಂದು ನೋಡಲಾಗಿ ನಮ್ಮ ಮನೆಯಲ್ಲಿ ಅಡುಗೆ ಮನೆಯಲ್ಲಿಟ್ಟಿದ್ದ ಅಲಮಾರಿಯ ಕೀಲಿ ಮುರಿದು, ಅಲಮಾರಿ ಲಾಕರ ಒಳಗಡೆ ಇಟ್ಟಿದ್ದ, ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಹೀಗೆ ಒಟ್ಟು  1,58,000-00 ರೂ.ಗಳು, ಬೆಲೆಬಾಳುವ ಬಂಗಾರದ ಆಭರಣಗಳು, ಮತ್ತು ನಗದು ಹಣ, ಯಾರೋ ಕಳ್ಳರು ನಿನ್ನೆ ದಿನಾಂಕ 13/03/2019 ರ ರಾತ್ರಿ 10-30 ಗಂಟೆಯಿಂದ ಇಂದು ದಿನಾಂಕ 14/03/2019 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳ್ಳತನಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ಶ್ರೀ ಸಿದ್ದಪ್ಪ ವಿ ಹೊದಲುರ ಕಂದಾಯ ನಿರೀಕ್ಷಕರು ಕರಜಗಿ ರವರು ದಿನಾಂಕ 14/03/2019 ರಂದು ನಸುಕಿನ ಜಾವ ಮಾನ್ಯ ತಹಸಿಲ್ದಾರರು ಅಫಜಲಪೂರ ರವರ ಮೌಖಿಕ ಆದೇಶದ ಮೇರೆಗೆ ನಾನು ಮತ್ತು ಮೋದಿನಸಾಬ  ಗ್ರಾಮ ಲೇಕ್ಕಾಧಿಕಾರಿ ಮಣೂರ ಇಬ್ಬರೂ ಕೂಡಿ ಶೇಷಗಿರಿ ದಾರಿಯಲ್ಲಿ ಭಿಮಾನದಿಯ ದಡಕ್ಕೆ ಬೇಟಿ ನೀಡಿದಾಗ ಅಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ್ದ ಟ್ಯಾಕ್ಟರ ಸಂಖ್ಯೆ ಕೆಎ-28 ಟಿ-  ಇಂಜೆನ್ ನಂ NNWY02452 ನೇದ್ದನ್ನು ಜಪ್ತಿ ಮಾಡಲಾಗಿರುತ್ತದೆ. ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರನ್ನು ಸ್ಥಳದಲ್ಲಿಯೆ ಬಿಟ್ಟು ಪರಾರಿಯಾಗಿರುತ್ತಾನೆ. ಸದರಿ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರಿಂದ ಸದರಿ ಟ್ಯಾಕ್ಟರ ಮಾಲಿಕ ಮತ್ತು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 14/03/2019 ರಂದು ರಾತ್ರಿ  09-30 ಗಂಟೆ ಸುಮಾರಿಗೆ ಹೀರಾಪೂರ ಮಜೀದ ಎದುರುಗಡೆ ಹೋದಾಗ ಅಲ್ಲಿ ಹೀರಾಪೂರ ಮಜೀದ ಹತ್ತಿರ ಇರುವ ಒಂದು ಲೈಟಿನ ಕಂಬದ ಬೆಳಕಿನಲ್ಲಿ 1)ಆನಂದ ತಂದೆ ಹಣಮಂತ ರಾಂಪೂರೆ ಸಾ: ಕಾಂತಾ ಕಾಲನಿ ಕಲಬುರಗಿ 2)ವಾಜೀದ ಪಟೇಲ್ ತಂದೆ ಲಾಡ್ಲೆ ಪಟೇಲ್ ಸಾ: ಹೀರಾಪೂರ 3) ವೈಭವ ಸಾ: ಹೀರಾಪೂರ 4)ಅಸದ ಸಾ: ಹೀರಾಪೂರ 5) ಜೈಭೀಮ ಸಾ: ರಾಜಾಪೂರ 6) ಇಲ್ಲು ಸಾ:ಹೀರಾಪೂರ 7)ಸಾಜೀದ ಸಾ: ಹೀರಾಪೂರ ಮತ್ತು ಇತರರು ನಿಂತಿದಿದ್ದನ್ನು ನೋಡಿ ಅವರ ಹತ್ತಿರ ನಾನು ಮತ್ತು ಈ ಮೇಲಿನ ಎಲ್ಲಾ ಜನರು ಹೋಗಿ ಆನಂದ ರಾಂಪೂರೆ ಇತನಿಗೆ ಶಿವುಕುಮಾರ ಮೋಟಾರ ಸೈಕಲ ವಾಪಸ್ಸು ಕೊಡು ಅಂತಾ ಹೇಳಿದಾಗ ಆಗ ಆನಂದ ಮತ್ತು ವೈಭವ ಹಾಗೂ ವಾಜೀದ ಅಸದ ನಾಲ್ಕು ಜನರು ನನಗೆ ನಮ್ಮ ವ್ಯವಹಾರದಲ್ಲಿ ಯಾಕೇ ನಡುವೆ ಬರುತ್ತೀ ಭೋಸಡಿ ಮಗನೇ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅನ್ನುತ್ತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಆನಂದ ರಾಂಪೂರೆ ಇತನು ತನ್ನ ಹತ್ತಿರವಿದ್ದ ಚಾಕು ನನ್ನ ಬಲ ಹೊಟ್ಟೆ ಪಕ್ಕೆಗೆ ಹೊಡೆದನು. ವಾಜೀದ ಇತನು ಕೂಡಾ ತನ್ನ ಹತ್ತಿರವಿದ್ದ ಚಾಕುದಿಂದ ನನ್ನ ಬಲ ಬೆನ್ನ ಹಿಂದೆ ಹೊಡೆದನು. ವೈಭವ ಇತನು ಕಲ್ಲಿನಿಂದ ಎಡಗೈ ಭುಜದ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಅಸದ ಇತನು ಕೈ ಮುಷ್ಟಿ ಮಾಡಿ ನನ್ನ ಬಲ ಮೆಲಕಿನ ಮೇಲೆ ಹೊಡೆದು ಗುಪ್ತಗಾಯಗೊಳಿಸಿದನು. ಜೈಭೀಮ ಇತನು ಕೂಡಾ ಕೈ ಮುಷ್ಟಿ ಮಾಡಿ ಹೊಟ್ಟೆಯಲ್ಲಿ ಹೊಡೆದನು.ಇಲ್ಲು ಮತ್ತು ಸಾಜೀದ ಮತ್ತು ಇತರರು ಕೂಡಿಕೊಂಡು  ಕೈ ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನನ್ನ ಜೊತೆಯಲ್ಲಿದ್ದ ಗೆಳೆಯರಾದ ಶಿವುಕುಮಾರ, ಸುಭಾಷ, ರವಿ, ಅಂಬರೀಷ ಹಡಪದ ಇವರೆಲ್ಲರೂ ಬಿಡಿಸಿಕೊಂಡಾಗ ಅವರಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋದೆನು. ಇಲ್ಲದಿದ್ದರೆ ಈ ಮೇಲಿನ ಎಲ್ಲಾ ಜನರು ನನಗೆ ಕೊಲೆ ಮಾಡಿಯೇ ಬಿಡುತ್ತಿದ್ದರು. ಅಂತಾ ಶ್ರೀ ಸಚೀನ ತಂದೆ ಶ್ರೀಮಂತ ಹೂಗಾರ ಸಾ : ಬಿದ್ದಾಪೂರ ಕಾಲನಿ ಕಲಬುರಗಿ  ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.