POLICE BHAVAN KALABURAGI

POLICE BHAVAN KALABURAGI

04 November 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಂಗ್ರಹಿಸದ್ದರ ಮೇಲೆ ದಾಳಿ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ 1) ಬಸವರಾಜ ತಂದೆ ಶರಣಪ್ಪ ಮೇಲ್ಕೇರಿ 2)ಬಸವರಾಜ ತಂದೆ ತೋಪಣ್ಣ ತಳವಾರ 3)ದತ್ತಪ್ಪ ತಂದೆ ಲಚ್ಚಪ್ಪ 4) ನಿಂಗಪ್ಪ ತಂದೆ ಲಚ್ಚಪ್ಪ 5)ಲಕ್ಷ್ಮಿಬಾಯಿ ಗಂಡ ಮಹಾದೇವಪ್ಪ ರವರು 225 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 03/11/2018 ರಂದು  ಬೆಳಿಗ್ಗೆ 11.45 ಗಂಟೆಯಿಂದ 12.45 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 11,25,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 28 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 33 ನೇದ್ದರ ಪಟ್ಟೇದಾರರಾದ 1)ಸುರೇಶ ತಂದೆ ಮಲ್ಕಪ್ಪ ತಳವಾರ 2)ಭಾಗವ್ವ ಗಂಡ ಶರಣಪ್ಪ ತಳವಾರ ರವರು 140 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 7,00,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 33 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 38 ನೇದ್ದರ ಪಟ್ಟೇದಾರರಾದ 1) ಭೀಮಶ್ಯಾ ತಂದೆ ಲಚ್ಚಪ್ಪ ಸರ್ವೇ ನಂ 39 ನೇದ್ದರ ಪಟ್ಟೇದಾರರಾದ 2) ಪ್ರಧಾನಿ ತಂದೆ ಶಂಕರ ರವರು 70 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 3,50,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 38,39 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ಧನಸಿಂಗ್ ಪವಾರ ಸಾ|| ಗೋಬ್ಬುರವಾಡಿ ರವರದು 1998ರಲ್ಲಿ ಬಳುರ್ಗಿ ತಾಂಡಾದ ಬೇಬಿಬಾಯಿ ಎಂಬುವವಳೊಂದಿಗೆ ಮದುವೆಯಾಗಿದ್ದು ನನಗೆ 1) ಪೂರ್ಣಚಂದ್ರ 2) ಬಸವರಾಜ 3) ಮಂಜುನಾಥ  ಅಂತಾ 3 ಮಕ್ಕಳಿರುತ್ತಾರೆ. 13 ವರ್ಷಗಳಹಿಂದೆ ನನಗೂ ಮತ್ತು ನನ್ನ ಹೆಂಡತಿಗೂ ಸಂಸಾರದ ವಿಷಯದಲ್ಲಿ ಜಗಳವಾಗಿ ಅಂದಿನಿಂದ ನನ್ನ ಹೆಂಡತಿ ಮೂರು ಜನ ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಬಳುರ್ಗಿ ತಾಂಡಾದಲ್ಲಿ ಮಕ್ಕಳೊಂದಿಗೆ ವಾಸವಿರುತ್ತಾಳೆ 2004ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ಕಿರುಕುಳ ಕೋಡುತ್ತಿದ್ದಾನೆ ಅಂತಾ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದಲ್ಲಿ ಸುಳ್ಳು ಅಂತಾ ಆದೇಶವಾಗಿರುತ್ತದೆ. ಪುನಃ 2012 ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ನಾನು ಎರಡನೇಯ ಮದುವೇಯಾಗಿದ್ದೇನೆ ಅಂತಾ ನ್ಯಾಯಾಲಯದಲ್ಲಿ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದ ವಿಚಾರಣೆಯಲ್ಲಿದ್ದು ದಿನಾಂಕ 27-10-2018 ರಂದು ಅಂತಿ ಆಧೇಶದಲ್ಲಿರುತ್ತದೆ. ದಿನಾಂಕ 27-10-2018 ರಂದು ನಾನು ನನ್ನ ಹೆಂಡತಿ ಮಾಡಿದ ಕೇಸಿನ ವಿಚಾರವಾಗಿ ಅಫಜಲಪೂರದ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದಲ್ಲಿ ಹಾಜರಿ ಮುಗಿಸಿಕೊಂಡು ನ್ಯಾಯಾಲಯದಿಂದ 2.15 ಪಿಎಮ್ ಸುಮಾರಿಗೆ ಹೊರಗೆ ನ್ಯಾಯಾಲಯದ ಮುಂದೆ ನಾನು ಮತ್ತು 1) ಶಂಖರ ತಂದೆ ರಾಮು ರಾಠೋಡ 2) ರಾಘವೇಂದ್ರ ತಂದೆ ಗುರಣ್ಣಾ ರಾಠೋಡ ಮೂರು ಜನರು ಹೋಗುತ್ತಿದ್ದಾಗ ನನ್ನ ಹೆಂಡತಿಯಾದ 1) ಬೇಬಿಬಾಯಿ ನನ್ನ ಹೆಂಡತಿಯ ಅಣ್ಣನಾದ 2) ಮನೋಹರ ತಂದೆ ರತನಸಿಂಗ ರಾಠೋಡ ಹಾಗೂ ನನ್ನ ಮಕ್ಕಳಾದ 3) ಬಸವರಾಜ 4) ಪೂರ್ಣಚಂದ್ರ ಮತ್ತು ನನ್ನ ಹೆಂಡತಿಯ ಅತ್ತೆಯ ಮಗನಾದ 5) ಲಾಲು ತಂದೆ ಹೀರು ರಾಠೋಡ ಸಾ|| ಎಲ್ಲರೂ ಬಳೂರ್ಗಿ ತಾಂಡಾ ಇವರೆಲ್ಲರೂ ನನ್ನ ಹತ್ತಿರ ಬಂಧು ನನಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ನ್ಯಾಯಾಲಯದಲ್ಲಿ ಕೇಸ ಗೆಲ್ಲಬಹುದು ಆದರೆ ನಾವು ನಿನಗೆ  ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿ ಎಲ್ಲರೂ ಕೂಡಿ ಜಗಳ ತೆಗೆದು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಿರುತ್ತಾಳೆ, ಮತ್ತು ಮಕ್ಕಳು ನನ್ನನ್ನು ಕೈಯಿಂದ ಹೊಡೆದು ನೆಲ್ಲಕೆ ಕೇಡುವಿ ಕಾಲಿನಿಂದ ಒದ್ದಿರುತ್ತಾರೆ, ಮನೋಹರ ರಾಠೋಡ ಇತನು ಅಲ್ಲೆ ಕಂಪೌಂಡ ಹತ್ತಿರ ಬಿದ್ದಿದ್ದ ರಾಡನ್ನು ತೆಗೆದುಕೊಂಡು ಬಂದು ರಾಡಿನಿಂದ ನನ್ನ ಸೊಂಟದ ಮೇಲೆ ಹೊಡೆದಿರುತ್ತಾನೆ, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆಯಿದ್ದ ಶಂಕರ ರಾಠೋಡ ರಾಘವೇಂದ್ರ ರಾಠೋಡ ಇನ್ನೂ ಕೆಲವು ಜನರು ಕೂಡಿ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಮನೋಹರ ರಾಠೊಡ ಲಾಲು ರಾಠೋಡ ಎಲ್ಲರೂ ನನಗೆ ಮುಂದೆ ನೀನು ಹೇಗೆ ನೌಕರಿ ಮಾಡುತ್ತಿ ನೋಡುತ್ತೇವೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವ ಭಯಹಾಕಿ ರಾಡನಿಂದ ಮತ್ತು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಾಗ ಚಪ್ಪಲಿ ಹರಿದಿದ್ದರಿಂದ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಶಿವಕುಮಾರ ತಂದೆ ಭೀಮರಾಯ ವಸ್ತಾರಿ ಸಾಃ ಮಾರಡಗಿ (ಎಸ್.ಎ) ಗ್ರಾಮ ತಾಃ ಜೇವರಗಿ ರವರ ಊರವನಾದ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ, ಈತನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸುವದು ಮತ್ತು ಅವಳು ಹೋದಲೆಲ್ಲ ಹಿಂದೆ ಹಿಂದೆ ಹೋಗುವದು ಮಾಡಿ ನಮ್ಮ ಮಗಳಿಗೆ ಸಲುಗೆಯಿಂದ ಮಾತನಾಡಿ ನಾನು ನಿನಗೆ ಪ್ರೀತಿ ಮಾಡುತ್ತಿದ್ದೆನೆ ಮತ್ತು ನಿನಗೆ ಮದುವೆಯಾಗುತ್ತೆನೆ ಎಂದು ಹೇಳಿ ಅವಳಿಗೆ ಸುಮಾರು 2 ವರ್ಷದಿಂದ ತೊಂದರೆ ಕೊಟ್ಟಿರುತ್ತಾನೆ. ಈ ವಿಷಯ ನಮ್ಮ ಮಗಳು ನಮಗೆ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ದೇವಪ್ಪನ ಮನೆಗೆ ಹೋಗಿ ದೇವಪ್ಪನಿಗೆ ಮತ್ತು ಅವನ ಅಣ್ಣಂದಿರರಿಗೆ ಹಾಗೂ ತಾಯಿಯವರಿಗೆ ನಮ್ಮ ಮಗಳು ಚಿಕ್ಕವಳಿರುತ್ತಾಳೆ. ಹೀಗೆ ಮಾಡುವುದು ಸರಿಯಲ್ಲಾ ಎಂದು ಬುದ್ದಿವಾದ ಹೇಳಿದ್ದು ದಿನಾಂಕ 30.10.2018 ರಂದು ರಾತ್ರಿ ನಾನು ಮತ್ತು ನನ್ನ ನನ್ನ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಮಗಿಕೊಂಡಿರುತ್ತೆವೆ. ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿ ಸಪ್ಪಳ ಆಗಿದ್ದರಿಂದ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮ ಇವಳು ಏಕಿ ಮಾಡಲು ಎದ್ದಿರುತ್ತೆನೆಂದು ಹೇಳಿ ಮನೆಯಿಂದ ಹೊರಗೆ ನಮ್ಮ ಮನೆಯ ದೊಡ್ಡಿಯ ಕಡೆಗೆ ಹೋದಳು. ಅವಳು ಬಹಳ ಸಮಯವಾದರು ಮರಳಿ ಮನೆಯೊಳಗೆ ಬರಲಿಲ್ಲ ಅದಕ್ಕೆ ನಾನು ಮನೆಯಿಂದ ಹೊರಗೆ ಬಂದು ದೊಡ್ಡಿಯ ಕಡೆಗೆ ಹೋಗಿ ನೋಡಲು ನಮ್ಮ ಮಗಳು ಅಲ್ಲಿ ಕಾಣಲಿಲ್ಲ. ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿ ನಾವಿಬ್ಬರು ಅಕ್ಕಪ್ಪಕ್ಕದ ಮನೆಯವರಿಗೆ ಕೇಳಿ ಊರಲ್ಲಿ ಹುಡುಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲ. ದಿನಾಂಕ;. 31.10.2018 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮ್ಮ ಮಗಳಿಗೆ ಹುಡುಕುತ್ತಾ ನಮ್ಮೂರ ಮಸೂದಿಯ ಹತ್ತಿರ ಬಂದಾಗ ಅಲ್ಲಿ ನಮ್ಮ ಸಂಭಂಧಿಕರಾದ ಬಸವರಾಜ ತಂದೆ ಚಂದಪ್ಪ ಹೇರೂರ ಈತನು ಸಿಕ್ಕಾಗ ಅವನಿಗೆ ನಮ್ಮ ಮಗಳು ಸಿದ್ದಮ್ಮಳು ರಾತ್ರಿ ಮನೆಯಿಂದ ಏಕಿ ಮಾಡಲು ಹೊರಗೆ ಬಂದು ಮರಳಿ ಬಂದಿರುವುದಿಲ್ಲಾ ಎಲ್ಲಿಗೆ ಹೋಗಿರುತ್ತಾಳೆಂಬುದು ಗೊತ್ತಾಗಿರುವುದಿಲ್ಲಾ ಎಲ್ಲಿಯಾದರು ನೋಡಿದ್ದಿಯೇನು ಎಂದು ಕೇಳಿದಾಗ ಅವನು ಹೇಳಿದ್ದೆನೆಂದರೆ ದಿನಾಂಕ; 31/10/2018 ರಂದು ರಾತ್ರಿ 12-05 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹೊರಗಡೆ ಎತ್ತುಗಳಿಗೆ ಮೇವು ಹಾಕಲು ಬಂದಿದ್ದಾಗನಮ್ಮೂರ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ ಇತನು ತನ್ನ ಟಂ-ಟಂ ದಲ್ಲಿ ಸಿದ್ದಮ್ಮಳಿಗೆ ಕೂಡಿಸಿಕೊಂಡು ಮುದಬಾಳ(ಬಿ) ಕ್ರಾಸ್ ಕಡೆಗೆ ಹೋಗುವುದು ನಾನು ನೊಡಿರುತ್ತೇನೆ. ನಾನು ಕೈ ಮಾಡಿದರು ಟಂ-ಟಂ ನಿಲ್ಲಿಸದೆ ಹಾಗೇ ನಡೆಯಿಸಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಟಂಟಂ ವಾಹನದ ನಂಬರ ಕಂಡಿರುವುದಿಲ್ಲ. ಎಂದು ತಿಳಿಸಿದನು. ನಂತರ ದಿನಾಂಕ; 31/10/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ದೇವಪ್ಪ ಈತನ ಮನೆಗೆ ಹೋಗಿ ವಿಚಾರಿಸಲು ದೇವಪ್ಪ ಇತನು ಮನೆಯಲ್ಲಿ ಇದ್ದಿರಲಿಲ್ಲ. ನಮ್ಮ ಮಗಳ ಬಗ್ಗೆ ಅವರಿಗೆ ಕೇಳಲಾಗಿ, ದೇವಪ್ಪನ ಅಣ್ಣಂದಿರಾದ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಇವರೆಲ್ಲರೂ ಕೂಡಿ ನನಗೆ ಏ ಬೊಸಡಿ ಮಗನೆ ದೇವಪ್ಪ ನಿನ್ನ ಮಗಳಿಗೆ ತೆಗೆದುಕೊಂಡು ಹೋಗಿದ್ದರೆ ನಾವೇನು ಮಾಡಬೇಕು?. ನಾವೇ ಕಳಿಸಿದ್ದೆವೆ. ರಂಡಿ ಮಕ್ಕಳೆ ನೀವು ನಮ್ಮದು ಏನು ಕಿತ್ತಿಕೊಳಲಿಕ್ಕೆ ಆಗುವುದಿಲ್ಲ. ನಮ್ಮ ಹಿಂದೆ ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇದ್ದಾನೆ ನೀವು ನಮ್ಮ ತಂಟೆಗೆ ಬಂದರೆ ಉಳಿಯುವದಿಲ್ಲ ಎಂದು ಜೀವದ ಭೆದರಿಕೆ ಹಾಕಿರುತ್ತಾರೆ, ನಂತರ ನಮ್ಮೂರ ಭೀಮರಾಯ ತಂದೆ ಹುಲೇಪ್ಪ ಹೇರೂರ, ಭೀಮರಾಯ ತಂದೆ ದೇವಪ್ಪ ವಸ್ತಾರಿ ಇವರು ಬಂದು ತಿಳಿ ಹೇಳಿ ಅಲ್ಲಿಂದ ಕಳಿಸಿರುತ್ತಾರೆ. \ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸಿ, ಪ್ರೀತಿ ಮಾಡುತ್ತೆನೆ ಮತ್ತು ಮದುವೆ ಮಾಡಿಕೊಳುತ್ತೆನೆ ಎಂದು ಅವಳಿಗೆ ನಂಬಿಸಿ ತಲೆ ಕೆಡಿಸಿ ಪುಸಲಾಯಿಸಿ ಅಪಹರಿಸಿಕೊಂಡು ಟಂ-ಟಂದ ಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಅದಕ್ಕೆ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಮತ್ತು 6) ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

03 November 2018

KALABURAGI DISTRICT REPORTED CRIMES

ವರದಕ್ಷಣೆ ಕಿರುಕಳ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ನೀಲಮ್ಮ ಗಂಡ ಸಂತೋಷ ಇವರು ಆರೋಪಿ ಸಂತೋಷ ತಂದೆ ಶಿವಶರಣಪ್ಪ ಸಾ: ಕೂಕನೂರ ಇತನೊಂದಿಗೆ ಮದುವೆಯಾಗಿದ್ದು ಇರುತ್ತದೆ. ಸದ್ಯ ಪಿರ್ಯಾದಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇರುತ್ತದೆ. ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ನಿನ್ನ ಚರಾ ಆಸ್ತಿ ಮತ್ತು ಸ್ಥಿರ ಆಸ್ತಿ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ದಿನಾಂಕ   23-01-2018 ರಂದು 9-30 ಎ ಎಂ ಕ್ಕೆ ಕೂಕನೂರ ಗ್ರಾಮದಲ್ಲಿ ಸಂತೋಷ ತಂದೆ ಶಿವಶರಣಪ್ಪ ಸಂಗಡ 3 ಜನರು ಸಾ: ಎಲ್ಲರೂ ಕೂಕನೂರ ಗ್ರಾಮ. ರವರು  ನನ್ನ ಮನೆಗೆ ಬಂದು ಅವಾಚ್ಯವಾಗಿ ಬೈದು, ಅವಳಿಗೆ ಹಲ್ಲೆ ಮಾಡಿ, ಜೀವ ಬೇದರಿಕೆ ಹಾಕಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸಿರಾಜ್ ತಂದೆ ಇಸ್ಮಾಯಿಲ್ ನಗರ್ಚಿ ಸಾ||ನಿಚೆಗಲ್ಲಿ ಅಫಜಲಪೂರ ರವರ ತಂದೆಯಾದ ಇಸ್ಮಾಯಿಲ್ ತಂದೆ ಉಮರಸಾಬ ನಗರ್ಚಿ ರವರು ಆಗಾಗ ಗ್ಯಾರೇಜಕ್ಕೆ ಬಂದು ಹೋಗುತಿದ್ದರುದಿನಾಂಕ 02-11-2018 ರಂದು ಬೆಳಿಗ್ಗೆ ನಾನು ಹಾಗು ಮಹಿಬೂಬಪಾಶಾ ತಂದೆ ಸೊಂದುಸಾಬ ನಗರ್ಚಿ ಇಬ್ಬರು ನಮ್ಮ ಗ್ಯಾರೇಜದಲ್ಲಿದ್ದಾಗ ನಮ್ಮ ತಂದೆ ನಮ್ಮ ಮೋಟಾರ್ ಸೈಕಲ್ ಬಜಾಜ ಪ್ಲಾಟಿನಾ ನಂ ಕೆಎ-32 ಇಎಸ್-4466 ನೇದ್ದನ್ನು ತಗೆದುಕೊಂಡು ನಮ್ಮ ಗ್ಯಾರಜಗೆ  ಬಂದು ಅಲ್ಲೆ ಸ್ವಲ್ಪ ಸಮಯ ನಿಂತು ನಂತರ ನಮ್ಮ ತಂದೆ ನಮ್ಮ ಗ್ಯಾರೇಜ್ ಮುಂದೆ ರೋಡಿನ ಬಾಜು ನಮ್ಮ ಮೋಟಾರ್ ಸೈಕಲ್ ಮೇಲೆ ಕುಳಿತು ನನಗೆ ಮಡ್ನಳ್ಳಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮೋಟಾರ್ ಸೈಕಲ್ ಚಾಲು ಮಾಡಿದಾಗ ಎದುರಿನಿಂದ ಅಂದರೆ ಬಸವೇಶ್ವರ ವೃತ್ತದ ಕಡೆಯಿಂದ ಮೌಂಟವೇವ್ ಶಾಲೆಯ ವಾಹನದ ಚಾಲಕ ಅತಿವೇಗ ಹಾಗು ನಿಸ್ಕಾಳಜಿತನದಿಂದ ವಾಹನ ಚಲಾಯಿಸಿಕೊಂಡು ಬಂದು ನಮ್ಮ  ತಂದೆ ಕುಳಿತಿದ್ದ ಮೋಟಾರ್ ಸೈಕಲ್ ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಮ್ಮ ಮೋಟಾರ್  ಸೈಕಲದಿಂದ ಕೆಳಗೆ ಬಿದ್ದರು ಸದರಿ ಶಾಲಾ ವಾಹನದ ಚಾಲಕ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು ಆಗ ಅಲ್ಲೆ ಇದ್ದ ನಾನು ಹಾಗು  ಮಹಿಬೂಬಪಾಶಾ ಹಾಗು ಅಲ್ಲೆ ಆಜು ಬಾಜು ಅಂಗಡಿಯ ಜನರು ಓಡಿ ಬಂದು ನಮ್ಮ ತಂದೆಗೆ ನೋಡಲಾಗಿ ತಲೆಗೆ ಭಾರಿ ರಕ್ತಗಾಯವಾಗಿ   ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರುತಿತ್ತು ನಮ್ಮ ತಂದೆಯ ಎಡಗಾಲಿನ ಪಾದಕ್ಕೆ ಭಾರಿ ರಕ್ತಗಾಯವಾಗಿ ನಮ್ಮ ತಂದೆ ಮಾತನಾಡುವ ಸ್ಥೀತಿಯಲ್ಲಿರಲಿಲ್ಲಾ ನಾನು ಹಾಗು ಮಹಿಬೂಬಪಾಶಾ ಅಲ್ಲೆ ಇದ್ದ ಕೆಲವು ಜನರು ಕೂಡಿ ನಮ್ಮ ತಂದೆಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರಗೆ ಬಂದು ಅಲ್ಲಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಗೆ 108 ಅಂಬ್ಯೂಲೆಸ್ನದಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನಮ್ಮ ತಂದೆ ಉಪಚಾರ ಫಲಕಾರಿಯಾಗದೆ ದಿನಾಂಕ 02-11-2018 ರಂದು  ಮೃತಪಟ್ಟಿರುತ್ತಾರೆ  ಮೌಂಟವೇವ್ ಶಾಲಾ ವಾಹನ ನಂ ಕೆಎ32 ಸಿ-6422 ನೇದ್ದರ ಚಾಲಕ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ತಂದೆ ಕುಳಿತಿದ್ದ ಮೋಟಾರ್ ಸೈಕಲ್ ನಂ ಕೆಎ-32 ಇಎಸ್-4466 ನೇದ್ದಕ್ಕೆ ಜೋರಾಗಿ ಡಿಕ್ಕಿ ಪಡಿಸಿ ನಮ್ಮ ತಂದೆಗೆ ತಲೆಗೆ ಭಾರಿ ರಕ್ತಗಾಯ ಪಡಿಸಿದ್ದು ನಮ್ಮ ತಂದೆ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ. ಸದರಿ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆರಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 31/10/18 ರಂದು 10.30 ಪಿ.ಎಮಕ್ಕೆ ಫಹತಾಬಾದ ಗ್ರಾಮದ ನ್ಯೂ ಶಕ್ತಿ ವೈನ ಶಾಪ ಹತ್ತಿರ ಶ್ರೀ ಸಿದ್ದಪ್ಪ ತಂದೆ ಹುಲ್ಲೆಪ್ಪ ಸನಾದಿ ಸಾಃ ಮಾಹೂರ ತಾಝ ಜೇವರಗಿ ಹಾ.ವಃ ಫರಹತಾಬಾದ ಗ್ರಾಮ  ರವರು  ಮಹ್ಮದ ಬಂಕೂರ  ರವರಿಗೆ  ಕುಡಿಯಲು ಸಾರಾಯಿ ಕೇಳಿದ್ದು, ಬಾರ್ ಬಂದ್ ಆಗಿರುತ್ತದೆ ಅಂತಾ ತಿಳಿಸಿದ್ದರಿಂದ, ಸಂಗಡ ಇನ್ನೂ 6 ಜನರು ಕುಡಿಕೊಂಡು  ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಖಾಲಿ ಬೀಯರ ಬಾಟಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದಲ್ಲದೆ ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣಗಳು :
ಮಾಹಾಗಾಂವ ಠಾಣೆ :  ಠಾಣೆ : ಶ್ರೀ ಶರಣಪ್ಪಾ ಹೆಚ್.ಸಿ 74 ಮಹಾಗಾಂವ ಪೊಲೀಸ ಠಾಣೆ ರವರು ದಿನಾಂಕ:01/11/2018 ರಂದು ನಾನು ಮಧ್ಯಾಹ್ನ 12-00 ಗಂಟೆಗ ಮಾನ್ಯ ಪಿಎಸ್ಐ ಸಾಹೇಬರ ಆದೇಶದಂತೆ ಏರಿಯಾದಲ್ಲಿ ಪೆಟ್ರೋಲಿಂಗ್ ಕುರಿತು ಹೊರಟು ಚಂದ್ರನಗರ, ಮಹಾಗಾಂವ ಕ್ರಾಸ ಭೇಟಿ ನೀಡಿ ನಂತರ 2-00 ಪಿಎಂಕ್ಕೆ ಕುರಿಕೋಟಾ ಗ್ರಾಮಕ್ಕೆ ಹೋದಾಗ ಬಾತ್ಮಿ ತಿಳಿದು  ಬಂದಿದ್ದೇನೆಂದರೆ. ಕುರಿಕೋಟಾ ಹೊಸ ಸೇತುವೆ ಸಮೀಪ ಒಬ್ಬ ಅನಾಮಧೇಯ ಹೆಣ್ಣು ಮಗಳು ಯಾವುದೋ ಕಾರಣಕ್ಕಾಗಿ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ ಅಂತಾ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ, ಒಬ್ಬ ಹೆಣ್ಣು ಮಗಳ ಶವವು ನೀರಿನಲ್ಲಿ ಬೋರಲಾಗಿ ಬಿದ್ದು ಕಂಡು ಬಂದಿದ್ದು ನಂತರ ಕುರಿಕೋಟಾ ಗ್ರಾಮದ ಮೀನುಗಾರರ ಸಹಾಯದಿಂದ ನೀರಿನಲ್ಲಿ ಮುಳಗಿ ಮೃತಪಟ್ಟ ಹೆಣ್ಣು ಮಗಳ ಶವವನ್ನು ಹೊರಗೆ ತೆಗೆದು ನೋಡಲಾಗಿ, ಸುಮಾರು 20 ವರ್ಷದ ವಯಸ್ಸಿನ ಹೆಣ್ಣು ಮಗಳಿದ್ದು ಅಂದಾಜು 4' 7 ಎತ್ತರವಿದ್ದು ಸದೃಡ ಮೈಕಟ್ಟು ದುಂಡನೆ ಮುಖ, ಗೋದಿ ಮೈಬಣ್ಣ ಹೊಂದಿದ್ದು, ಕಪ್ಪು & ಕೆಂಪು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ಲೇಗಿನ್ಸ ಮತ್ತು ಕಂದು ಬಣ್ಣದ ಸ್ವಟರ್ ಧರಿಸಿದ್ದು ಕೊರಳಲ್ಲಿ ತಾಳಿ, ಕಿವಿಯಲ್ಲಿ ಬಂಗಾರದ ಝುಮಕಿ ಮತ್ತು ಬೆಳ್ಳಿ ಕಾಲುಂಗುರ ಹಾಗು ಬೆಳ್ಳಿಯ ರಿಂಗ್ ಇರುತ್ತದೆ. ಮೃತಳ ಹೆಸರು & ವಿಳಾಸ ಗೊತ್ತಾಗಿರುವುದಿಲ್ಲಾ. ಮತ್ತು ಯಾವುದೋ ಕಾರಣದಿಂದ ನೀರಿನಲ್ಲಿ ಮುಳಗಿ ಮೃತಪಟ್ಟಿರುತ್ತಾಳೆ. ಇವಳ ಮರಣದಲ್ಲಿ ಸಂಶಯವಿರುತ್ತದೆ ಅಂತಾ ವರದಿ ಹಾಜರು ಪಡಿಸಿದ ಸಾರಾಂಶದ ಮೇಲಿಂದ  ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಬಸವಲಿಂಗ ತಂದೆ ವಾಸುದೇವ ದೇವದುರ್ಗ ಸಾ: ಗಂಗಾ ನಗರ ಕಲಬುರಗಿ ರವರ ತಂದೆಯಾದ ವಾಸುದೇವ ತಂದೆ ಶಶಿಗಿರಿರಾವ ದೇವದುರ್ಗ ಇವರು ಅತಿಯಾಗಿ ಮಧ್ಯ ಸೇವನೆ ಮಾಡುತ್ತಾ ಬಂದಿದ್ದು ಅವರಿಗೆ ನಾನು ಹಾಗೂ ನಮ್ಮ ಮನೆಯವರು ಹೇಳಿ ನಮ್ಮ ತಂದೆಗೆ ಸುಮಾರು ಸಲ ತಿಳಿ ಹೇಳಿದರು ಕೂಡಾ ನಮ್ಮ ತಂದೆಯವರು ಮಧ್ಯ ಸೇವನೆ ಮಾಡುವದನ್ನು ಬಿಟ್ಟಿರುವದಿಲ್ಲ ದಿನಾಂಕ 29.10.2018 ರಂದು ಸಾಯಂಕಾಲ 5: ಗಂಟೆಯ ಸುಮಾರಿಗೆ ನಮ್ಮ ತಂದೆಯವರು ಅತಿಯಾಗಿ ಮಧ್ಯ ಸೇವನೆ ಮಾಡಿ ಮನೆಗೆ ಬಂದಿದ್ದು ಮನೆಯಲ್ಲಿ ವಾಂತಿ ಮಾಡಿಕೊಳ್ಳುವದು ಮಾಡುತ್ತಿದ್ದು ಅವರಿಗೆ ತ್ರಾಸ ಆಗುತ್ತಿದ್ದರಿಂದ ನಾನು, ನಮ್ಮ ತಾಯಿ ರಾಜೇಶ್ವರಿ ಹಾಗೂ ನಮ್ಮ ದೊಡ್ಡಮ್ಮಳಾದ ಯಶೋದಾ ಕೂಡಿಕೊಂಡು ನಮ್ಮ ತಂದೆಯವರಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಇರುತ್ತದೆ. ದಿನಾಂಕ 29.10.2018 ನಮ್ಮ ತಂದೆಯವಗೆ ಜಿಲ್ಲಾ ಸರಕಾರಿ ಆಸ್ಪತ್ರೇಯಲ್ಲಿ ಉಪಚಾರ ನೀಡುತ್ತಿದ್ದು ಇಂದು ದಿನಾಂಕ 01.11.2018 ರಂದು ನಮ್ಮ ತಂದೆಯವರು ಉಪಚಾರ ದಿಂದ ಗುಣ ಮುಖ ಹೊಂದದೆ ಆಸ್ಪತ್ರೇಯಲ್ಲಿ ಮೃತ ಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 November 2018

KALABURAGI DISTRICT REPORTED CRIMES

ಕಿರುಕಳ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಬೇಬಿಬಾಯಿ  ಗಂಡ ದತ್ತು ಪವಾರ ಸಾ|| ಬಳೂರ್ಗಿ ರವರು ಸುಮಾರು 20 ವರ್ಷಗಳ ಹಿಂದೆ ಗೋಬ್ಬುರವಾಡಿ ತಾಂಡಾದ ದತ್ತು ತಂದೆ ಧನಸಿಂಗ ಪವಾರ ಇವರ ಜೋತೆ ಬಳೂರ್ಗಿಯಲ್ಲಿ ಮದುವೆಯಾಗಿದ್ದು ಇರುತ್ತದೆ. ನನ್ನ ಗಂಡನಾದ ದತ್ತು ರವರು ಸೇಡಂ ನಲ್ಲಿ ಪ್ರಾಥಮಿಕ ಶಾಲೆ ಶೀಕ್ಷಕ ಅಂತ ಕೆಲಸ ಮಾಡುತ್ತಾರೆ. ನನ್ನ ಗಂಡ ನಾಲ್ಕು ವರ್ಷ ನನ್ನ ಜೋತೆಗೆ ಸರಿಯಾಗಿ ಸಂಸಾರ ಮಾಡಿ ನಂತರ ಕಿರುಕುಳ ಕೊಡಲಿಕ್ಕೆ ಪ್ರಾರಂಬ ಮಾಡಿರುತ್ತಾರೆ. ಆಗಾಗ್ಗೆ ವರದಕ್ಷೀಣೆ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ನ್ಯಾಯ ಪಂಚಾಯತಿ ಮಾಡಿದರೂ ಕೇಳಿರುವುದಿಲ್ಲ. ನಂತರ ನಾನು ನನ್ನ ತವರು ಮನೆಯಲ್ಲಿ ಮಕ್ಕಳ ಜೋತೆಗೆ ಇದ್ದಿರುತ್ತೆನೆ . ನನ್ನ ಗಂಡನು ಸುಮಾರು 8 ವರ್ಷದ ಹಿಂದೆ ನನ್ನನ್ನು ಬಿಟ್ಟು ಇನ್ನೊಂಧು ಲಗ್ನ ಮಾಡಕೊಂಡಿರುತ್ತಾನೆ. ಇನ್ನೊಂದು ಲಗ್ನ ಮಾಡಿಕೊಂಡ ಬಗ್ಗೆ ಕೋರ್ಟಿನಲ್ಲಿ ಖಾಸಗಿ ದೂರು ಮಾಡಿರುತ್ತೇನೆ. ದಿನಾಂಕ 27-10-2018 ರಂದು ಅಫಜಲಪೂರದ ನ್ಯಾಯಾಲಯದಲ್ಲಿ ಕೇಸಿನ ಹಾಜರಿ ಇದ್ದರಿಂದ ನ್ಯಾಯಾಲಯಕ್ಕೆ ಬಂದಿರುತ್ತೇನೆ. ನಾನು ಹಾಗೂ ನನ್ನ ಮಗನಾದ ಬಸವರಾಜ ಇಬ್ಬರೂ ಕೋರ್ಟಿಗೆ ಹೋಗಿ ಹಾಜರಿ ಕೊಟ್ಟು ಹೊರಗೆ ಬರುತ್ತಿದ್ದಾಗ ಮದ್ಯಾಹ್ನ 2:35 ಗಂಟೆ ಸುಮಾರಿಗೆ ಕೋರ್ಟ ಎದುರುಗಡೆ ಸಿಸಿ ರಸ್ತೆಯ ಮೇಲೆ ನನ್ನ ಗಂಡ ಹಾಗೂ ಸುಬಾಷ ತಂದೆ ಜೋಕಲು, ಅಶೋಕ ತಂದೆ ಗುರುನಾಥ ಪವಾರ, ಲಿಂಬಾಜಿ ತಂದೆ ಧನಸಿಂಗ್ ಪವಾರ, ಗುರುನಾಥ ತಂದೆ ಧನಸಿಂಗ್ ಪವಾರ, ತಾರ್ಯಾ ತಂದೆ ಸೆವ್ಯಾ ರಾಠೋಡ, ಅಂಬ್ರುಬಾಯಿ ಗಂಡ ತಾರ್ಯಾ, ಶಾಂತಾಬಾಯಿ ಗಂಡ ದತ್ತು ದತ್ತು (ಎರಡನೆ ಹೆಂಡತ) ಇವರೆಲ್ಲರೂ ಇದ್ದಾಗ, ಸುಬಾಷ ತಂದೆ ಜೋಕಲು ಇವರು ನನ್ನ ಗಂಡನಿಗೆ ನಿನ್ನ ಹೆಂಡತಿಗೆ ನೀನು ಹೋಡಿತಿ ಇಲ್ಲಾ ನಾನು ಹೊಡಿಲಿ ಅಂತಾ ಹೇಳಿದ್ದರಿಂದ ನನ್ನ ಗಂಡನು ನನ್ನ ತಲೆಯ ಕೂದಲು ಹಿಡಿದು ನೆಲಕ್ಕೆ ತಲೆ ಬಡಿದು ಹಣೆಗೆ ರಕ್ತಗಾಯ ಪಡಿಸಿದ್ದು, ಅಶೋಕನು ನನ್ನ ಮಗನಾದ ಬಸವರಾಜನಿಗೆ ಕೈಯಿಂದ ಕಾಲಿನಿಂದ ದ್ದು ಒಳಪೆಟ್ಟು ಪಡಿಸಿರುತ್ತಾನೆ. ಅಲ್ಲಿ ನೆರೆದ ಜನರು ಜಗಳ ಬಿಡಿಸಿರುತ್ತಾರೆ. ಗುಂಡಾ ವರ್ತನೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಭೀಮು ತಂದೆ ಮಹಾಧೇವ ರಾಠೋಡ ಸಾ|| ಮಾದಾಬಾಳ ತಾಂಡಾ ರವರು ದಿನಾಂಕ 31-10-218 ರಂದು ನಾನು ಮತ್ತು ನನ್ನ ಹೆಂಡತಿ ಮಕ್ಕಳು ನಮ್ಮ ಮನೆಯಲ್ಲಿದ್ದಾಗ, ನಮ್ಮ ತಾಂಡಾದ ಬಾಜು ಹೊಲದಲ್ಲಿ ದುಡಿಯಲಿಕ್ಕೆ ಇದ್ದ ರಮೇಶ ಸಮಗಾರ ಈತನು ನಮ್ಮ ಹತ್ತಿರ ಬಂದು ನನ್ನ ಮಗ ಮಹೇಶನಿಗೆ ರಾತ್ರಿ ಕರೆಂಟ ಬರುತ್ತವೆ. ಕರೆಂಟ ಬಂದಾಗ ನೀರು ಬಿಡುತ್ತಾ ಹೊಲಕ್ಕೆ ಗೊಬ್ಬರ ಹಾಕುವುದಿದೆ ಅಫಜಲಪೂರಕ್ಕೆ ಹೋಗಿ ಗೋಬ್ಬರ ತಗೆದುಕೊಂಡು ಬರೋಣ ನನಗೆ ಮೋಟರ ಸೈಕಲ ನಡೆಸಲು ಬರುವುದಿಲ್ಲ ನೀನು ಬಾ ಎಂದು ಕೇಳಿದ ಮೇರೆಗೆ ನನ್ನ ಮಗ ಅವರ ಹಿರೊ ಹೊಂಡಾ ಪ್ಯಾಶನ್ ಪ್ರೋ ಮೋಟರ ಸೈಕಲ ನಂ ಕೆಎ-32 ವಿ-7599 ನೇದ್ದರ ಮೇಲೆ ರಮೇಶ ಸಮಗಾರ ಈತನನ್ನು ಕೂಡಿಸಿಕೊಂಡು ಅಫಜಲಪೂರಕ್ಕೆ ಹೋಗಿರುತ್ತಾನೆ. ನನ್ನ ಮಗ ಹೋದ 15-20 ನಿಮಿಷಕ್ಕೆ ನಮ್ಮ ತಾಂಡಾದ ಸುರೇಶ ತಂದೆ ಚಂದು ರಾಠೋಡ ಈತನು ನನ್ನ ಮಗ ಪರಶುರಾಮನಿಗೆ ಪೋನ ಮಾಡಿ ನಿನ್ನ ತಮ್ಮನಿಗೆ ಬಸ್ ಡೀಪೊ ಹತ್ತಿರ ಎಕ್ಸಿಡೆಂಟ ಆಗಿದೆ ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಮಕ್ಕಳು ಹಾಗೂ ನಮ್ಮ ತಾಂಡಾದವರಾದ ರಮೇಶ ಜಾಧವ, ಶ್ರೀಧರ ರಾಠೋಡ ಇನ್ನು ಕೆಲವು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲು ನನ್ನ ಮಗನ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದನು. ಮೋಟರ ಸೈಕಲ ಮೇಲೆ ಹಿಂದೆ ಕುಳಿತಿದ್ದ ರಮೇಶ ಸಮಗಾರ ಈತನಿಗೂ ಸಹ ಭಾರಿ ರಕ್ತಗಾಯಗಳು ಹಾಗೂ ಗುಪ್ತಗಾಯಗಳು ಆಗಿದ್ದವು. ಸೇರಿದ ಜನರು ರಮೇಶ ಸಮಗಾರನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ. ನಂತರ ಅಲ್ಲೆ ಇದ್ದ ಸುರೇಶ ರಾಠೋಡನಿಗೆ ವಿಚಾರಿಸಲಾಗಿ ಅವನು ತಿಳಿಸಿದ್ದೆನೆಂದರೆ, ನಾನು ನನ್ನ ಟಂ ಟಂ ನಡೆಸಿಕೊಂಡು ತಾಂಡಾಕ್ಕೆ  ಬರುತ್ತಿದ್ದಾಗ  ನನ್ನ ಟಂ ಟಂ ಗೆ  ಟ್ಯಾಕ್ಟರ ಚಾಲಕನು  ಟ್ಯಾಕ್ಟರನ್ನು ಸೈಡ ಹೊಡೆದುಕೊಂಡು ಹೋಗಿ ಮುಂದೆ ಡೀಪೊ ಹತ್ತಿರ ಟ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮಹೇಶನ ಮೋಟರ ಸೈಕಲಕ್ಕೆ ಡಿಕ್ಕಿ ಪಡಿಸಿರುತ್ತಾನೆ ಎಂದು ತಿಳಿಸಿದನು. ನನ್ನ ಮಗನಿಗೆ ಅಫಘಾತ ಪಡಿಸಿದ ಟ್ಯಾಕ್ಟರ ನಂಬರ ನೋಡಲು ಮಹೇಂದ್ರಾ ಅರ್ಜುನ ಕಂಪನಿಯ ಟ್ಯಾಕ್ಟರ ಇದ್ದು ನಂ ಕೆಎ-32 ಟಿಎ-4630 ಇರುತ್ತದೆ. ಸದರಿ ಟ್ಯಾಕ್ಟರ ಚಾಲಕ ಘಟನೆ ನಂತರ ಟ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಶಂಕರ ತಂದೆ ಶಿವಪುತ್ರ ಕವಲಗಾ ಸಾ||ಹುಲ್ಲುರ ತಾ||ಜೆವರ್ಗಿ ರವರ ಅಣ್ಣನಾದ ಸುರೇಶ ಈತನು ಟ್ರ್ಯಾಕ್ಟರ ಚಾಲಕ ಕೆಲಸ ಮಾಡಿಕೊಂಡಿರುತ್ತಾನೆ. ಇಂದು ದಿನಾಂಕ 31/10/2018 ರಂದು ಮದ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಮನೆಯಲಿದ್ದಾಗ ನಮ್ಮ ಅಣ್ಣ ಸುರೇಶನು ತಿಳಿಸಿದ್ದೆನೆಂದರೆ ನಾನು ಹಾಗು ಮಲ್ಲಿಕಾರ್ಜುನ ಬಾಣಿ ಇಬ್ಬರು ಕಬ್ಬಿನ ಟೋಳಿ ಸಲುವಾಗಿ ಅಫಜಪೂರಕ್ಕೆ ಮಲ್ಲಿಕಾರ್ಜುನ ರವರ ಮೋಟಾರ ಸೈಕಲ್ ನಂ ಕೆಎ-32 ಇಬಿ-7838 ನೇದ್ದರ ಮೇಲೆ ಹೋಗಿ ಬರುತ್ತೇವೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ.     ರಾತ್ರಿ 9.00 ಗಂಟೆ ಸುಮಾರಿಗೆ ನನಗೆ ಪರಿಚಯಸ್ಥರಾದ ಘತ್ತರಗಾ ಗ್ರಾಮದ ಮಲ್ಲಿಕಾರ್ಜುನ ತಂದೆ ಗುರಪ್ಪಾ ಕುರಿ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ನಮ್ಮ ಮೋಟಾರ್ ಸೈಕಲ ಮೇಲೆ 8.30 ಪಿಎಮ್ ಗಂಟೆ ಸುಮಾರಿಗೆ ಅಫಜಲಪೂರದಿಂದ ನಮ್ಮ ಘತ್ತರಗಾ ಗ್ರಾಮಕ್ಕೆ ಹೋಗುತಿದ್ದಾಗ ಇಂಗಳಗಾ(ಕೆ) ಗ್ರಾಮ ದಾಟಿ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಸಮೀಪ ಇದ್ದಾಗ .ನನ್ನ ಮೋಟಾರ್ ಸೈಕಲ ಮುಂದೆ ಒಂದು ಮೋಟಾರ್ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ಘತ್ತರಗಾ ಕಡೆಗೆ ಹಾಗು ಘತ್ತರಗಾ ಕಡೆಯಿಂದ ಅಫಜಲಪೂರ ಕಡೆಗೆ ಒಂದು ಮೋಟಾರ ಸೈಕಲ್ ಮೇಲೆ ಇಬ್ಬರು ಅತಿವೇಗ ಹಾಗು ನಿಸ್ಕಾಳಜಿತನದಿಂದ ತಮ್ಮ ಮೋಟಾರ ಸೈಕಲನ್ನು ಚಲಾಯಿಸಿಕೊಂಡು ಬಂದು  ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಡಿಕ್ಕಿ ಪಡಿಸಿ ರೋಡಿನ ಮೇಲೆ ಬಿದ್ದರು ಆಗ ನಾನು ನನ್ನ ಮೋಟಾರ್ ಸೈಕಲ ನಿಲ್ಲಿಸಿ ಹೋಗಿ ನೋಡಲಾಗಿ ಮೋಟಾರ ಸೈಕಲ ನಂ ಕೆಎ-32 ಇಬಿ-7838 ನೇದ್ದರ ಹಿಂದೆ ಕುಳಿತಿದ್ದವನು ನಿಮ್ಮ ಅಣ್ಣ ಸುರೇಶ ಇರುತ್ತಾನೆ ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮೋಟಾರ್  ಸೈಕಲ  ಸವಾರನ  ಹೆಸರು  ಗೊತ್ತಿರುವುದಿಲ್ಲ  ಅವನಿಗೂ  ತಲೆಗೆ  ಮೈ  ಕೈ ಗೆ ರಕ್ತಗಾಯಗಳಾಗಿರುತ್ತವೆ ಹಾಗು ಎದುರಿನ ಮೋಟಾರ್ ಸೈಕಲ ಸವಾರನಿಗೂ ಹಿಂದೆ ಕುಳಿತಿದ್ದವನಿಗೂ ತಲೆಗೆ ಕಾಲಿಗೆ ಹಾಗು ಮೈ ಕೈಗಳಿಗೆ ಭಾರಿ ಸಾದಾ ರಕ್ತಗಾಯಗಳಾಗಿರುತ್ತವೆ ಸದರಿ ಘಟನೆ ಹವಳಗಾ ಸಕ್ಕರೆ ಕಾರ್ಖಾನೆ ಸಮೀಪ ಇಂಗಳಗಾ (ಕೆ) ಗ್ರಾಮದ ಮಲ್ಲಯ್ಯ ತಂದೆ ಸಿದ್ದಯ್ಯ ಹಿರೇಮಠ ರವರ ಹೊಲ ಹತ್ತಿರ ಜರುಗಿರುತ್ತದೆ ಅಂತ ತಿಳಿಸಿದನು. ನಂತರ ನಾನು ವಿಷಯವನ್ನು  ನಮ್ಮ ಕಾಕನ ಮಗನಾದ ಬಸವಂತ್ರಾಯ ಕವಲಗಾ ಹಾಗು ನಮ್ಮ ಗ್ರಾಮದ ಶ್ರೀಶೈಲ ತಂದೆ ಈರಪ್ಪಾ ಬಾಣಿ, ಭೀಮಾಶಂಕರ ತಂದೆ ಬೈಲಪ್ಪ ಸರಡಗಿ, ಅಣ್ಣರಾಯ ತಂದೆ ಬಸವರಾಜ ಪರಗೊಂಡ, ಮಾಳಪ್ಪ ತಂದೆ ಬಾಗಪ್ಪ ಇಂಗಳಗಿ  ತಿಳಿಸಿ ಎಲ್ಲರು ಕೂಡಿಕೊಂಡು ಹವಳಗಾ ಕಾರ್ಖಾನೆ ಹತ್ತಿರ ಘಟನೆ  ಸ್ಥಳಕ್ಕೆ ಹೋಗಿ ನೋಡಲಾಗಿ  ನಮ್ಮ ಅಣ್ಣ ಸುರೇಶ ಈತನು ಸ್ಥಳದಲ್ಲಿಯೇ ಮೃತಪಟ್ಟಿದ್ದು ತಲೆಗೆ ಭಾರಿ ಒಳಪೆಟ್ಟುಗಳಾಗಿ ಮೂಗಿನಿಂದ  ಮತ್ತು ಕಿವಿಯಿಂದ  ರಕ್ತ ಸೋರಿ ಮೃತ ಪಟ್ಟಿದ್ದು ಇರುತ್ತದೆ. ಮೋಟಾರ್ ಸೈಕಲ್ ಸವಾರನಾದ ನಮ್ಮ ಗ್ರಾಮದ ಮಲ್ಲಿಕಾರ್ಜುನ ತಂದೆ ಸಿದ್ದರಾಮಪ್ಪ ಬಾಣಿ ಇತನಿಗೆ ತಲೆಗೆ ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ನೋಡಲಾಗಿ ಕಪ್ಪು ಬಣ್ಣದ ಪ್ಯಾಶನ್ ಪ್ರೋ ಮೋಟಾರ್ ಸೈಕಲ ಇದ್ದು ಅದರ ಮೇಲೆ ನೊಂದಣಿ ನಂಬರ ಇರುವುದಿಲ್ಲ ಅದರ ಚೆಸ್ಸಿ ನಂ MBLH10EWBGB0460 ಅಂತ ಇರುತ್ತದೆ ಸದರಿ ಮೋಟಾರ ಸೈಕಲ ಸವಾರ ಹಾಗು ಹಿಂದೆ ಕುಳಿತಿದ್ದವರಿಗೆ ಅವರ ಕಡೆಯವರು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಆಸ್ಪತ್ರೆ ಕರೆದುಕೊಂಡು ಹೋಗಿರುತ್ತಾರೆ ಪ್ಯಾಶನ್ ಪ್ರೋ ಮೊಟಾರ ಸೈಕಲ್ ಸವಾರನ ಹೆಸರು ಗೊಲ್ಲಾಳಪ್ಪ ತಂದೆ ಆನಂದ ಬಿರಾದಾರ ಅಂತ ನನಗೆ ಅಲ್ಲಿದ್ದ ಜನರು ಮಾತನಾಡುವದರಿಂದ ಗೊತ್ತಾಗಿರುತ್ತದೆ ಸದರಿ ಮೊಟಾರ ಸೈಕಲ್ ಹಿಂದೆ ಕುಳಿತವನ ಹೆಸರು ಗೊತ್ತಿರುವುದಿಲ್ಲ ನಾವು ಮ್ಮಲ್ಲಿಕಾರ್ಜುನನಿಗೆ ಅಂಬ್ಯೂಲೆನ್ಸ್ ದಲ್ಲಿ ಹಾಕಿ ಚಿಕಿತ್ಸೆ ಕುರಿತು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಗೆ ಕಳುಯಿಸಿ ನಮ್ಮ ಅಣ್ಣನ ಮೃತ ಸುರೇಶನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಅಫಜಲಪೂರ ಸರಕಾರಿ ಆಸ್ಪತ್ರೆ ಬಂದು ಶವಗಾರದಲ್ಲಿ ನಮ್ಮ ಅಣ್ಣನ ಮೃತ ದೇಹವನ್ನು ಹಾಕಿ ಠಾಣೆಗೆ ಬಂದಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.          
ಫರತಾಬಾದ ಠಾಣೆ : ದಿನಾಂಕ 30/10/18 ರಂದು ರಾಷ್ಟ್ರೀಯ ಹೆದ್ದಾರಿ 218ರ ನಂದಿಕುರ ತಾಂಡಾದ ಹತ್ತಿರ ರೋಡಿನ ಮೇಲೆ ಇನ್ನೊವಾ ಕಾರ ನಂ ಕೆಎ-34 ಎನ್-0566 ನೇದ್ದರ ಚಾಲಕ  ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ.ಶ್ರೀಶೈಲ ತಂದೆ ಅಣ್ಣಪ್ಪ ಸಾಃ ಇಕ್ಕಳಕಿ ತಾಃ ಆಳಂದ ರವರ  ಮೋಟಾರ ಸೈಕಲ ನಂ ಕೆಎ-2 ಇ.ಹೆಚ್-3296 ನೇದ್ದಕ್ಕೆ ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ್ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.            
ಅಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ಶ್ರೀ  ಶಿವಾನಂದ ಈತನು ಒಕ್ಕಲುತನ ಕೆಲಸ ಮಾಡಿಕೊಂಡಿದ್ದು,, ಹೊಲದಲ್ಲಿ ಬೆಳೆ ಸರಿಯಾಗಿ ಬೆಳೆಯದ ಕಾರಣ ಬ್ಯಾಂಕಿನಲ್ಲಿ & ವಯಕ್ತಿಕ ಸಾಲ ಮಾಡಿಕೊಂಡಿದ್ದು, ಸಾಲ ಹೇಗೆ ತಿರಿಸಬೇಕು ಅಂತಾ ಚಿಂತಿಸುತ್ತಾ,  ದಿನಾಂಕ 30/10/18 ರಂದು 9.00 ಪಿ.ಎಮ ದಿಂದ ದಿನಾಂಕ 31/10/2018 ರಂದು 6.00 ಎ.ಎಮ ಅವಧಿಯಲ್ಲಿ ಗರೂರು(ಬಿ) ಗ್ರಾಮದ ಸಿಮಾಂತರದ ಹೊಲದಲ್ಲಿನ ಬೇವಿನ ಮರಕ್ಕೆ ತನ್ನ ಲುಂಗಿಯಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು, ಯಾವುದೇ ಸಂಶಯ ಇರುವುದಿಲ್ಲ  ಅಂತಾ ಶ್ರೀಮತಿ ಪಾರ್ವತಿ  ಗಂಡ ಶರಣಪ್ಪಾ ಕಾಂತಾ ಸಾಃ ಹಾವನೂರ ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.