POLICE BHAVAN KALABURAGI

POLICE BHAVAN KALABURAGI

21 February 2017

Kalaburagi District Daily Reported Crimes.

ಸೇಡಂ ಪೊಲೀಸ್ ಠಾಣೆ : ದಿನಾಂಕ:20-02-2017 ರಂದು 1600 ಗಂಟೆಗೆ ಕೊಡ್ಲಾ ಗ್ರಾಮದ ಹತ್ತಿರ ವಾಹನ ಅಪಘಾತದಲ್ಲಿ ರೋಡಿನಲ್ಲಿ ಒಬ್ಬನು ಮೃತಪಟ್ಟಿದ್ದು ಇದೆ ಅಂತ ಮಾಹಿತಿ ಮೇರೆಗೆ ನಾನು ಸ್ಥಳಕ್ಕೆ ಭೇಟಿ ಕೊಟ್ಟು ಅಲ್ಲಿ ರೋಡಿನಲ್ಲಿ ಬಿದ್ದ ಮೃತದೇಹವನ್ನು ಸರ್ಕಾರಿ, ಆಸ್ಪತ್ರೆಗೆ ಶೀಫ್ಟ ಮಾಡಿ ನಂತರ ಫಿರ್ಯಾದಿ, ಶ್ರೀಮತಿ, ಕಾಮಾಕ್ಷಿ ಗಂಡ ದೀಪಕ, ವಯ:30 ವರ್ಷ, ಜಾತಿ:ಕ್ರಿಶ್ಚಿಯನ್, ಉ:ಕೊಡ್ಲಾ P.H.C ಯಲ್ಲಿ ಸ್ಪಾಫ್ ನರ್ಸ ಕೆಲಸ, ಸಾ:ಚಿಟಗುಪ್ಪ, ಜಿ:ಬೀದರ, ಹಾ.ವ:ಕೊಡ್ಲಾ ಗ್ರಾಮ, ತಾ:ಸೇಡಂ ಇವರ ಹೇಳಿಕೆ ಪಡೆದುಕೊಂಡಿದ್ದು ಸಾರಂಶವೇನೆಂದರೆ, ಇಂದು ದಿ:20-02-2017 ರಂದು ಮದ್ಯಾಹ್ನ 1500 ಗಂಟೆಗೆ ನನ್ನ ಗಂಡ ದೀಪಕ ಇತನು ಸೇಡಂಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ತನ್ನ ಮೊಟಾರು ಸೈಕಲ್ ನಂ-KA39-L-3852 ನೇದ್ದನ್ನು ತೆಗೆದುಕೊಂಡು ಹೋದರು ನಂತರ ಸ್ವಲ್ಪ ಸಮಯದಲ್ಲಿ ಮದ್ಯಾಹ್ನ 1515 ಗಂಟೆಯ ಸುಮಾರಿಗೆ ಕೊಡ್ಲಾ ಗ್ರಾಮದ ಜನರು ನಾನು ಕೆಲಸ ಮಾಡುವ ಆಸ್ಪತ್ರೆಗೆ ಬಂದು ಹೇಳಿದ್ದೇನೆಂದರೆ, ನನ್ನ ಗಂಡ ಸೇಡಂಕ್ಕೆ ಹೋಗುವಾಗ ಕೆ.ಇ.ಬಿ ಹತ್ತಿರ ಯಾದಗೀರ ಸೇಡಂ ರೋಡಿನ ಟರ್ನದಲ್ಲಿ ಯಾವುದೋ ವಾಹನ ನನ್ನ ಗಂಡನ ಮೊಟಾರು ಸೈಕಲಗೆ ಅಪಘಾತಪಡಿಸಿ ಹೋಗಿದ್ದು ನನ್ನ ಗಂಡ ರೋಡಿನನ ಮೇಲೆ ಬಿದ್ದು ಸತ್ತಿರುತ್ತಾನೆ ಅಂತ ತಿಳಿಸಿದರು, ಆಗ ನಾನು ಮತ್ತು ನಮ್ಮ ಆಸ್ಪತ್ರೆಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡ ದೀಪಕ ರೋಡಿನ ಎಡಗಡೆ ಬೋರಲಾಗಿ ಬಿದ್ದಿದ್ದು ಅವರ ಮುಖಕ್ಕೆ ಬಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲು ಮುರಿದಿದ್ದು ಭಾರಿ ರಕ್ತಗಾಯಹೊಂದಿ ಸ್ಥಳದ್ಲಲಿಯೇ ಸತ್ತಿದನು. ನನ್ನ ಗಂಡನಿಗೆ ಯಾವುದೋ ವಾಹನದ ಚಾಲಕನು ತನ್ನ ವಾಹನ ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೊಟಾರು ಸೈಕಲಗೆ ಅಪಘಾಥಪಡಿಸಿ ವಾಹನ ನಿಲ್ಲಿಸದೇ ಓಡಿ ಹೋಗಿದ್ದು ಇರುತ್ತದೆ ಕಾರಣ ಅಪಘಾತಪಡಿಸಿ ಓಡಿಹೋದ ಸದರಿ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಹೇಳಿಕೆಯನ್ನು ಠಾಣೆಗೆ 1900 ಗಂಟೆಗೆ ಬಂದು ಸದರಿ ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ 19/2/2017 ರಂದು ರಾತ್ರಿ 2 ಗಂಟೆಯ ವರೆಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಮತ್ತು ನನ್ನ ಮಕ್ಕಳು ಇಬ್ಬರು  ಟಿವಿ ನೊಡಿ ಬೆಡ್ಡ  ರೂಮಿನಲ್ಲಿ ಮಲಗಿಕೊಂಡಿರುತ್ತೆವೆ.  ಬೆಳಿಗ್ಗೆ 9  ಗಂಟೆಯ ಸುಮಾರಿಗೆ   ನಾನು ಎದ್ದು ಹೊರಗೆ ಹೊಗಲು ನಮ್ಮ ಮನೆಯ ಅಡಿಗಿ ಮನೆಯ ಬಾಗಲು ತೆರೆದಿದ್ದು  ಇದ್ದು,   ನಾವು ಮಲಗಿಕೊಂಡಿರುವ ಬೆಡ್ ರೂಮಿನಲ್ಲಿದ್ದ  ಅಲಮಾರಾ ತೆರೆದಿದ್ದು ಇದ್ದು ನಾನು ಮತ್ತು ನನ್ನ ಹೆಂಡತಿ ಸ್ಮೀತಾ ಇಬ್ಬರು ನೊಡಲು ಅಲಮಾರಾದಲ್ಲಿದ್ದ ಬಂಗಾರದ ಆಭರಣಗಳು ಇರಲಿಲ್ಲಾ. ಅಲಮಾರಾದಲ್ಲಿದ್ದ 1) 40 ಗ್ರಾಂ ಬಂಗಾರದ ಒಂದು ಜೊತೆ ಪಾಟ್ಲಿಗಳು. ಅ||ಕಿ|| 110000/ 2)55 ಗ್ರಾಂ ಬಗಾರದ ಮಂಗಳಸೂತ್ರ ಚೈನ್ ಮಾದರಿ  ಅದರಲ್ಲಿ ಕರಿಮಣಿಗಳು ಹವಳ ಮುತ್ತು ಇದ್ದಿದ್ದು  ಅ||ಕಿ|| 151250/ 3)25 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 68750 /ರೂ 4) 20 ಗ್ರಾಂ ಬಂಗಾರದ ಒಂದು ಜೊತೆ ಬಳೆಗಳು ಅ||ಕಿ|| 55000/ರೂ 5) 20 ಗ್ರಾಂದಲ್ಲಿ ಎರಡು ಲಾಕೆಟಗಳು  ಅದರಲ್ಲಿ ಒಂದು ಹಲೊ ಚೈನ್ ಇನ್ನೊಂದು  ರೊಪ್ ಲಾಕೇಟಅ||ಕಿ||55000/ರೂ 6) 5 ಗ್ರಾಂ ಬಂಗಾರದ ಪದಕ ಅ||ಕಿ|| 13750/ 7) 10 ಗ್ರಾಂ ಬಂಗಾರ ಒಂದು ಸುತ್ತಉಂಗುರ ಅ||ಕಿ|| 27500/ರೂ 8) 5 ಗ್ರಾಂ ಬಂಗಾರದ ಲೀಪ್ ( ನವಿಲು ಮಾದರಿ)ಉಂಗುರು ಅ||ಕಿ|| 13750/ರೂ 9) 32 ಗ್ರಾಂದಲ್ಲಿ 4 ಜೊತೆ  ಗುಂಡು ಬೆಂಡೊಲಿಗಳು ಅ||ಕಿ|| 88000/ರೂ 10) 10 ಗ್ರಾಂ ಬಂಗಾರದ ಒಂದು ಮಂಗಳಸೂತ್ರ  ಕಟ್ಟಾಗಿದ್ದು ಅ||ಕಿ|| 27500/ರೂ ಹಾಗು ನಗದು ಹಣ 40 ಸಾವಿರ ರೂಪಾಯಿ  ಇರಲಿಲ್ಲಾ ಯಾರೊ ಕಳ್ಳರು ರಾತ್ರಿ ವೇಳೆಯಲ್ಲಿ ನಮ್ಮ ಮನೆಯ ಕಿಡಕೀಯ ಒಳಗಡೆಯಿಂದ ಕೈ ಹಾಕಿ ಒಳಗಿನ ಕೊಂಡಿ ತೆರೆದು ಒಳಗೆ ಪ್ರವೇಶ ಮಾಡಿ ಅಲಮಾರದಲ್ಲಿ ಇದ್ದ 23 ತೊಲೆಯ ಬಂಗಾರದ ಆಭರಣಗಳು ಒಟ್ಟು ಅ||ಕಿ|| 610500/-  ಹಾಗೂ ನಗದು ಹಣ 40000 ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ನಾನು ಮತ್ತು ನನ್ನ ಹೆಂಡತಿ ಕೂಡಿಕೊಂಡು ನನ್ನ ಅಣ್ಣನಾದ ಸಚೀನ ಸಾ|| ಐರವಾಡಿ ಕಲಬುರಗಿ ಇವರಿಗೆ ತಿಳಿಸಿ ವಿಚಾರ ಮಾಡಿ ಇಂದು ನಾನು ಠಾಣೆಗೆ ಬಂದು ದೂರು ಸಲ್ಲಿಸಿದ್ದು  ಪತ್ತೆ ಹಚ್ಚಿಕೊಡಲು ಹೇಳಿಕೆ ಸಾರಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ. 

ವಾಡಿ ಪೊಲೀಸ ಠಾಣೆ : ದಿನಾಂಕ:19/02/2017 ರಂದು 9.00 ಎಎಮ್ ಸುಮಾರಿಗೆ  ಪಿರ್ಯಾದಿಯ  ಗಂಡನಿಗೆ ದಾದರಾವ ತಂದೆ ಬಾಬುರಾವ , ಭಗವಾನ ತಂದೆ ಬಾಬುರಾವ, ಮಾರುತಿ ತಂದೆ ಬಾಬುರಾವ, ಬಲರಾಮ ತಂದೆ ಬಾಬುರಾವ ಹಾಗೂ ಸುಭಾಷ ತಂದೆ ದಾದರಾವ ರವರು ಕೂಡಿಕೊಂಡು ಏ ರಂಡಿ ಮಗನೇ ನೀನು ನಮಗೆ ಹಣ ಕೊಡು ಅಂತಾ ಊರಲ್ಲಿ ಎಲ್ಲರ ಮುಂದೆ ಹೇಳುತ್ತಾ ತಿರುಗಡುತ್ತಿದ್ದ ನಮ್ಮ ಮರ್ಯಾದೆ ಕಳಿತಾ ಇದ್ದಿ ರಂಡಿ ಮಗನೇ ನೀನು ಇನ್ನೂ ಮುಂದೆ ಊರಲ್ಲಿ ಯಾರ ಮುಂದೆ ನಾವುಹಣ ಕೊಡುವ ಬಗ್ಗೆ ಹೇಳಿದರೆ ನೀನಗೆ ಖಲಾಸ ಮಾಡುತ್ತೇವೆ. ನೀನು ಊರಲ್ಲಿ ಇರಬೇಡ ಸಾಯಿ ಮಗನೇ ಅಂತಾ ಧಮಕಿ ಹಾಕಿ ಹೊರಟು ಹೊದ ನಂತರ ಪಿರ್ಯಾದಿ ಗಂಡನು ಅಂಜಿ ಅದೇ ಮನಸ್ಸಿಗೆ ಬೇಜಾರು ಮಾಡಿಕೊಂಡು ಮನೆಯಲ್ಲಿ ದೇವರ ಕೊಣೆಯಲ್ಲಿ ಬಾಗಿಲು ಮುಚ್ಚಿ ಪ್ಲಾಸ್ಟಿಕ ಹಗ್ಗದಿಂದ ಜಂತಿಗೆ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದು ಇದಕ್ಕೆ ಕಾರಣ ಈ ಮೇಲ್ಕಂಡವರು ಪಿರ್ಯಾದಿ ಗಂಡನಿಗೆ ಬೈದು ಧಮಕಿ ಹಾಕಿದ್ದರಿಂದ ಮೃತ ಪಟ್ಟಿದ್ದು ಇರುತ್ತದೆ. ಪಿರ್ಯಾದಿಯು ಮನೆಯಲ್ಲಿ ಹಿರಿಯರಿಗೆ ಹೇಳಿ ಕೇಳಿ ತಡವಾಗಿ ಠಾಣೆಗೆ ಬಂದು ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ  ಅಂತಾ ಇತ್ಯಾದಿ ವಗೈರೆ ಪಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ  ದಾಖಿಲಾದ ಬಗ್ಗೆ ವರದಿ.

20 February 2017

Kalaburagi District Reported Crimes.


ರೇವೂರ ಠಾಣೆ : ಶಿವಾನಂದ ತಂದೆ ಭಿಮರಾಯ ಬಂಡಾರಿ ವಯಃ 42 ಜಾಃ ಅಗಸರ  ಉಃ ಇಸ್ತ್ರಿ ಹೊಡೆಯುವ ಕೆಲಸ ಸಾಃಸ್ಟೇಷನಗಾಣಗಾಪೂರ ಇವರು ಇಂದು ದಿನಾಂಕಃ 19-02-2017  ರಂದು 11-30  ಎ.ಎಮ್.ಕ್ಕೆ  ಠಾಣೆಗೆ  ಹಾಜರಾಗಿ  ನೀಡಿದ ದೂರೆನೆಂದರೆ ಸ್ಟೇಷನಗಾಣಗಾಪೂರದ ಬಸ್ಸ್  ನಿಲ್ದಾಣದಿಂದ ರೈಲ್ವೆ ಸ್ಟೇಷನ ಕಡೆಗೆ ಹೋಗುವ  ರಸ್ತೆಯ  ಬಲಬದಿ ನನ್ನ  ಜಾಗದಲ್ಲಿ ನಾನು ಇಸ್ತ್ರಿ ಹೊಡೆಯುವ ಅಂಗಡಿ ಹಾಗೂ ಪಕ್ಕದಲ್ಲಿ ನನ್ನ ಹೆಂಡತಿಯು ಲೇಡಿಸ್ ಸ್ಟೋರ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡು ಇಬ್ಬರೂ ಗಂಡು & ಇಬ್ಬರೂ ಹೆಣ್ಣು ಮಕ್ಕಳೊಂದಿಗ ಉಪಜೀವನ ಸಾಗಿಸುತ್ತಿದ್ದೇನೆ.ಎಂದಿನಂತೆ ನಿನ್ನೆ  ದಿನಾಂಕಃ19/02/2017 ರಂದು  ಸಾಯಂಕಾಲ 6-00 ಪಿಎಂ ಕ್ಕೆ ನನ್ನ ಹೆಂಡತಿಯು ಲೇಡಿಸ್ ಸ್ಟೋರನ್ನು ಮುಚ್ಚಿಕೊಂಡು ಮನೆಗೆ ಹೋಗಿರುತ್ತಾಳೆ, ನಾನು ರಾತ್ರಿ 9-30 ಪಿ.ಎಂ ವರೆಗೆ ಬಟ್ಟೆ ಇಸ್ತ್ರಿ ಹೊಡೆದು ಎಲ್ಲಾ  ಬಟ್ಟೆಗಳನ್ನು ಅಂಗಡಿಯಲಿಟ್ಟು  10-00 ಪಿ.ಎಮ್ ಕ್ಕೆ ಅಂಗಡಿ ಮುಚ್ಚಿಕೊಂಡು ಮನೆಗೆ ಹೋಗಿ ಮನೆಯಲ್ಲಿ ಎಲ್ಲರೂ ಊಟ  ಮಾಡಿ ಮಲಗಿರುತ್ತೇವೆ. ಹಿಗಿದ್ದು. ಇಂದು ದಿಃ19/02/2017 ರಂದು 1-30 ಎಎಂ ಕ್ಕೆ ನಮ್ಮ ಅಂಗಡಿ ಪಕ್ಕದ ಮನೆಯವರಾದ ಶ್ರೀ  ಜ್ಯೋತಿಬಾ ತಂದೆ ಸುಭಾಷ ಭೋಸ್ಲೆ ರವರು ನಮ್ಮ ಮನೆಗೆ ಬಂದು ನಮಗೆ ಎಬ್ಬಿಸಿ ನಿಮ್ಮ ಇಸ್ತ್ರಿ ಅಂಗಡಿಗೆ ಬೆಂಕಿ ಬಿದಿದ್ದೆ ಅಂತಾ ಹೇಳಿದಾಗ ನಾನು ನನ್ನ ಹೆಂಡತಿ ಹೋಗಿ ನೋಡಲು ನನ್ನ ಇಸ್ತ್ರಿ ಅಂಗಡಿಗೆ ಬೆಂಕಿ ಬಿದ್ದು ಉರಿಯುತಿತ್ತು. ಆಗ ನಾನು, ನನ್ನ ಹೆಂಡತಿ ಮತ್ತು  ಜ್ಯೋತಿಬಾ ಭೋಸ್ಲೆ, ಹಾಗೂ ಅವರ  ತಂದೆಯವರಾದ ಸುಭಾಷ ಭೋಸ್ಲೆ  ಮತ್ತು ಸಾಗರ ತಂದೆ ಸುಧಾಕರ ಗಲಾಂಡೆ, ಶರಣು ತಂದೆ ವಿಠಲ ಹೂಗಾರ ಎಲ್ಲರೂ ಕೂಡಿಕೊಂಡಿ ಬೆಂಕಿಯನ್ನು ಆರಿಸಿರುತ್ತೇವೆ.  ನಾನು  ಇಂದು ಮುಂಜಾನೆ ಬೆಳಕಿನಲ್ಲಿ ನೋಡಲು ಮೀಟರ ಹತ್ತಿರ ವಿದ್ಯುತ್ ಶಾರ್ಟ ಸೆರ್ಕ್ಯೂಟಾಗಿ  ಅಂಗಡಿಗೆ  ಬೆಂಕಿ ಹತ್ತಿದ್ದು.  ಇದರಿಂದ ನಾನು  ನನ್ನ ಇಸ್ತ್ರಿ ಅಂಗಡಿಯಲ್ಲಿದ್ದ 1) ಇಸ್ತ್ರಿ ಹೊಡೆಯಲು ಜನರು ತಂದು  ಕೊಟ್ಟಿದ್ದ 10 ಮಡಿ ಸೀರೆಗಳು ಅಂ|| ಕಿ|| 30,000 2) ಇಸ್ತ್ರಿ ಹೊಡೆಯಲು ಜನರು ತಂದು ಕೊಟ್ಟಿದ್ದ 280 ಜೊತೆ ಪ್ಯಾಂಟ- ಶರ್ಟಗಳು ಅಂದಾಜು ಕಿ|| 2,00,000 3) ಎರಡು ಸೋಕೆಸ್ ಟೇಬಲ್ ಅಂ||ಕಿ|| 10,000 4) ಎರಡು ಪ್ಲಾಸ್ಟಿಕ  ಕುರ್ಚಿಗಳು ಅಂ||ಕಿ|| 1000 5)  1000 ಮೌಲ್ಯದ  ಹ್ಯಾಂಗರ  ಒಟ್ಟು 2,42,000 ರೂ ಮೌಲ್ಯದ ವಸ್ತುಗಳು ಸುಟ್ಟಿರುತ್ತವೆ. ಹಾಗೂ ಬೆಂಕಿಯೂ ಚಿಕ್ಕ ಕಿಟಕಿಯ ಮೂಲಕ ನನ್ನ ಅಂಗಡಿಯ ಪಕ್ಕದಲ್ಲಿರುವ ನನ್ನ ಹೆಂಡತಿಯ ಲೇಡಿಸ್ ಸ್ಟೋರಗೆ ಬೆಂಕಿ ಹೋಗಿ, ಲೇಡಿಸ್ ಸ್ಟೋರನಲ್ಲಿದ್ದ ಗಿಫ್ಟ್ಸಾಮಗ್ರಿಗಳು, ಊಲನ ಬಾಗಿಲ ಪರದಾ, ವಾಲ್ ಪಿಸ್ಗಳು, ಮೇಹೆಂದಿ ಪಾಕೇಟ ಮುಂತಾದ 30,000 ರೂ ಮೌಲ್ಯ ವಸ್ತುಗಳು ಬೆಂಕಿಯ ಶಾಕಕೆ ಹಾಳಾಗಿರುತ್ತವೆ. ಹೀಗೆ ಒಟ್ಟು 2,72,000 ರೂ ಮೌಲ್ಯದ  ವಸ್ತಗಳು ಸುಟ್ಟು  ನನಗೆ  ನಷ್ಟವಾಗಿರುತ್ತದೆ ಅಂತ ವರದಿ.
 ¥sÀgÀºÀvÁ¨ÁzÀ ಠಾಣೆ : 18/2/17 gÀAzÀÄ ¸ÁAiÀÄAPÁ® 6:30 UÀAmÉUÉ ¦AiÀiÁ𢠺ÁUÀÆ CªÀgÀ ¸ÀA§A ¢PÀgÀÄ vÀªÀÄä ºÉÆ®zÀ PÉ®¸À ªÀÄÄV¹ PÉÆAqÀÄ vÀªÀÄä JwÛ£À §ArAiÀİè HjUÉ J£ïºÉZï 218 £ÉÃzÀÝgÀ ¸ÀgÀqÀV(©) PÁæ¸À ºÀwÛgÀ EgÀĪÀ ¥ÉmÉÆæÃ® ¥ÀA¥À ºÀwÛgÀ §gÀÄwÛgÀĪÁUÀ »A¢¤AzÀ §AzÀ PÁgÀ ZÁ®PÀ£ÀÄ vÀ£Àß PÁgÀ£ÀÄß CwêÉÃUÀªÁV C®PÀëvÀ£À¢AzÀ ZÀ¯Á¬Ä¹ PÉÆAqÀÄ §AzÀÄ rQÌ ¥ÀqɬĹzÀÝjAzÀ JwÛ£À §ArAiÀÄ °èzÀ ¦AiÀiÁ𢠺ÁUÀÆ EvÀgÀgÀÄ gÉÆÃqÀ ªÉÄî ©zÀÄÝ ¸ÁzÁ ºÁUÀÆ ¨ÁjUÁAiÀÄ UÉÆArzÀÄÝ ¸ÀzÀj PÁgÀ ZÁ®PÀ vÀ£Àß PÁgÀ£ÀÄß ¤°è¹zÉ Nr¹PÉÆAqÀÄ ºÉÆÃVzÀÄÝ CAvÁ ಪ್ರಕರ ವರದಿಯಾದ ಬಗ್ಗೆ.
ಅಪಜಲಪೋರ್ ಠಾಣೆ :  ದಿನಾಂಕ 19-02-2017 ರಂದು 4.10 ಪಿಎಮ್ ಕ್ಕೆ ನಮ್ಮ ಠಾಣೆಯ ಚಂದ್ರಕಾಂತ ಸಿಹೆಚ್ ಸಿ-449 ರವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 19-02-2017 ರಂದು 3:30 ಪಿ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯ ಹಾಗೂ ಗುಪ್ತ ಮಾಹಿತಿ ಸಗ್ರಹಿಸಲು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಅಫ್ಜಲಖಾನ್ ಚೌಕ ಹತ್ತಿರ 4.00 ಪಿಎಮ್ ಕ್ಕೆ ಹೋದಾಗ, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲಿಂದ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು – ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದನು. ಹಾಗೂ ಸದರಿಯವನು ಅಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಕೊಟ್ಟು ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಉಂಟು ಮಾಡುತ್ತಿದ್ದನು. ಮತ್ತು ತನ್ನ ಬಟ್ಟೆಗಳನ್ನು ಬಿಚ್ಚಿಕೊಳ್ಳುತ್ತಾ ಅಸಬ್ಯವಾಗಿ ವರ್ತಿಸುತ್ತಿದ್ದನು, ಸದರಿಯವನು ಸಾರ್ವಜನಿಕರ ಶಾಂತಿ ಭಂಗವನ್ನುಂಟು ಮಾಡುತ್ತಿದ್ದರಿಂದ, ಸದರಿಯವನನ್ನು ನಾನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಸಾದಿಕ್ ತಂದೆ ಸೈಯದ ಯುಸುಫ್ ಮಕಂದಾರ ವ||30 ವರ್ಷ ಉ||ಬೇಕರಿ ಕೆಲಸ ಸಾ||ನಿಚೆಗಲ್ಲಿ ಅಫಜಲಪೂರ ಅಂತ ಏರು ಧ್ವನಿಯಲ್ಲಿ ಹೇಳಿದನು. ಸದರಿಯವನನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪು:ನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ಪಟ್ಟಣದ ಜನರಿಗೆ ತೊಂದರೆಯಾಗುತ್ತಿದ್ದರಿಂದ ಮತ್ತು ಸದರಿಯವನಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಸದರಿಯವನನ್ನು ಹಿಡಿದುಕೊಂಡು ಠಾಣೆಗೆ 4.10 ಪಿ.ಎಂ ಕ್ಕೆ ಬಂದು ಸದರಿಯವನ ವಿರುದ್ದ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ್ದ ವರದಿ ಸಾರಂಶದ ಮೇಲಿಂದ ಪ್ರಕಾರ ಪ್ರಕರ ವರದಿಯಾದ ಬಗ್ಗೆ.

19 February 2017

Kalaburagi District Reported Crimes

ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಈರಣ್ಣ ತಂದೆ ಮಹಾದೇವಪ್ಪ ವಿಶ್ವಕರ್ಮ ಸಾ|| ಕುಮ್ಮನಸಿರಸಗಿ ಇವರು, 2007 ನೇ ಸಾಲಿನಲ್ಲಿ ನನ್ನ ಇಬ್ಬರು ತಂಗಿಯಂದಿರಾಗ ಭೀಮಬಾಯಿ ಮತ್ತು ಬೌರಮ್ಮಳಿಗೆ ನಮ್ಮ ಸೋದರ ಅತ್ತೆ ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಸಾ|| ಕಾಚಾಪೂರ ಇವರ ಮಕ್ಕಳಾದ ಹೇಮಂತರಾಜ ಇವನಿಗೆ ಭೀಮಬಾಯಿಗೆ ಹಾಗು ಗಂಗಾಧರ ಈತನಿಗೆ ಬೌರಮ್ಮಳಿಗೆ ಕೊಟ್ಟು ಮದುವೆ ಮಾಡಿರುತ್ತೇವೆ. ಮದುವೆಯಾದ ನಂತರ ನಮ್ಮ ತಂಗಿಯಂದಿರು ತಮ್ಮ ಗಂಡನ ಮನೆಯಲ್ಲಿ ಅನ್ನೊನ್ನೆವಾಗಿದ್ದರು. ಭೀಮಬಾಯಿಗೆ 3 ಜನ ಹೆಣ್ಣು ಮತ್ತು ಒಂದು ಗಂಡು ಮಗನಿದ್ದು, ಬೌರಮ್ಮಳಿಗೆ 2 ಜನ ಹೆಣ್ಣು ಮತ್ತು ಒಂದು ಗಂಡು ಮಗನಿರುತ್ತಾನೆ. ಹೆಮಂತರಾಜ ಮತ್ತು ಗಂಗಾಧರ ಇಬ್ಬರಿಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ನೌಕರಿ ಬಂದ ನಂತರ ನಮ್ಮ ತಂಗಿಯಂದಿರು ಆಗಾಗ ನಮ್ಮ ಮನೆಗೆ ಬಂದು ನಮಗೆ ನಮ್ಮ ಗಂಡಂದಿರು ಮತ್ತು ಅತ್ತೆ ಸರಸ್ವತಿ ಇವರು ನಿಮ್ಮ ತವರು ಮನೆಯಿಂದ ಹಣ ಮತ್ತು ಬಂಗಾರ ತೆಗೆದುಕೊಂಡು ಬನ್ನಿ ಅಂತಾ ಅನ್ನುತ್ತಾ ನಮಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ಕಿರುಕುಳ ಕೊಡುತ್ತಿರುತ್ತಾರೆ ಅಂತಾ ಹೇಳುತ್ತಿದ್ದರು. ನಂತರ ಬಗ್ಗೆ ನಾನು ಮತ್ತು ನಮ್ಮ ತಾಯಿ ಕಾಳಮ್ಮ ಹಾಗು ಊರಿನ ಹಿಯರು  ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ಹೋಗಿ ನಮ್ಮ ಸೋದರ ಅತ್ತೆ ಸರಸ್ವತಿ ಹಾಗು ಅವರ ಮಕ್ಕಳಾದ ಹೇಮಂತರಾಜ ಮತ್ತು ಗಂಗಾಧರ ರವರಿಗೆ ತಿಳವಳಿಕೆ ಹೇಳಿ ಬಂದಿರುತ್ತೇವೆ ಆದರು ಸಹ ಅವರು ಅದೇರೀತಿ ನಮ್ಮ ತಂಗಿಯಂದಿರಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು. ಬೌರಮ್ಮ ಇವಳು ಅವರ ಹಿಂಸೆ ತಾಳಲಾರದೆ ಈಗ 3 ತಿಂಗಳಿಂದ ನಮ್ಮ ಮನೆಯಲ್ಲಿ ಬಂದು ಇದ್ದಿರುತ್ತಾಳೆ. ಭೀಮಬಾಯಿ ಮಾತ್ರ ಅವಳ ಗಂಡನ ಮನೆಯಲ್ಲಿದ್ದಳು. ದಿನಾಂಕ 17-02-2017 ರಂದು ಬೆಳಿಗ್ಗೆ ಯಡ್ರಾಮಿಯಲ್ಲಿ ನಮ್ಮ ಸಂಬಂಧಿಕರ ಮುಂಜಿ ಕಾರ್ಯಕ್ರಮಕ್ಕೆ ಇದ್ದಿದ್ದರಿಂದ ನಾನು ಬಂದಿರುತ್ತೇನೆ. ನಂತರ ನಾನು 11;30 .ಎಂ ಸುಮಾರಿಗೆ ನಮ್ಮ ತಂಗಿ ಭೀಮಬಾಯಿ ರವರ ಮನೆಗೆ ಫೋನ ಮಾಡಿದಾಗ ಯಾರೋ ಫೋನ ಎತ್ತಿ ನಿಮ್ಮ ತಂಗಿ ನೆಣು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ ಅಂತಾ ಹೇಳಿದರು. ನಂತರ ನಾನು ಮತ್ತು ನಮ್ಮ ಅಣ್ಣತಮ್ಮಕಿಯ ಮೌನೇಶ ತಂದೆ ವಿಠೋಬಾ, ಮಲ್ಲಿಕಾರ್ಜುನ ತಂದೆ ಕಾಳಪ್ಪ ವಿಶ್ವಕರ್ಮ ಹಿಗೆಲ್ಲರು ಕೂಡಿಕೊಂಡು ಕಾಚಾಪೂರ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ನಮ್ಮ ತಂಗಿ ಭೀಮಬಾಯಿ ವಯ; 30 ವರ್ಷ ಇವಳ ಶವವು ಅವರ ಮನೆಯ ಮುಂದೆ ಹಾಕಿದರು, ಹೇಮಂತರಾಜ ತಂದೆ ಶ್ರೀಶೈಲ ಇನಾಮದಾರ, ಗಂಗಾಧರ ತಂದೆ ಶ್ರೀಶೈಲ ಇನಾಮದಾರ, ಸರಸ್ವತಿ ಗಂಡ ಶ್ರೀಶೈಲ ಇನಾಮದಾರ ಇವರುಗಳು ನಮ್ಮ ತಂಗಿ ಭೀಮಬಾಯಿಗೆ ಹೊಡೆ ಬಡೆ ಮಾಡಿ ನೇಣು ಹಾಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಗುಂಡಪ್ಪ ತಂದೆ ಭೀಮಣ್ಣಾ ಹೂಗೊಂಡರ್ ಸಾ:ಆಲಗೂಡ ಇತನು ದಿನಾಂಕ:-04/02/2017 ರಂದು ಬೆಳಿಗ್ಗೆ ಸೈಯ್ಯದ ಚಿಂಚೋಳಿ ಕ್ರಾಸ ಕಡೆಯಿಂದ ತಾಜ ಸುಲ್ತಾನಪುರ ಕ್ರಾಸ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಅಂದರೇ ಆಳಂದ ಚೆಕ್ಕ ಪೊಸ್ಟ ಕಡೆಯಿಂದ ಟಂ ಟಂ ನಂ ಕೆಎ-32 ಎ-2934 ನೇದ್ದರ ಚಾಲಕನಾದ ಗೌಸ ಅಹೆಮ್ಮದ ತಂದೆ ಚಾಂದಸಾಬ ಸಾ:ಮುಸ್ಲಿಂ ಸಂಘ ತಾಜ ನಗರ ಕಲಬುರಗಿ ಇತನು ತನ್ನ ವಶದಲ್ಲಿದ್ದ ಟಂ ಟಂನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಗುಂಡಪ್ಪ ಇತನಿಗೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ಆತನ ತಲೆಗೆ ರಕ್ತಗಾಯ, ಎಡ ಭುಜಕ್ಕೆ ಮತ್ತು ಎಡ ತೊಡೆಗೆ ಭಾರಿ ಗುಪ್ತಗಾಯ ಹಾಗು ಇತರೇ ಕಡೆ ಗಾಯಗಳಾಗಿದ್ದು ನಂತರ ಅದೇ ದಿವಸ ಆತನಿಗೆ ಉಪಚಾರ ಉಪಚಾರ ಕುರಿತು ಕಾಮರಡ್ಡಿ ಆಸ್ಪತ್ರೆ ಕಲಬುರಗಿಗೆ ಸೇರಿಕೆ ಮಾಡಿದ್ದು ಸದರಿಯವನು ದಿನಾಂಕ:- 04/02/2017 ರಿಂದ ದಿನಾಂಕ:- 17/02/2017 ರವರೆಗೆ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು ಇಂದು ನಮ್ಮ ಹತ್ತಿರ ಹಣ ಖಾಲಿ ಆಗಿದ್ದರಿಂದ್ದ ಗುಂಡಪ್ಪ ಇತನು ಇಂದು ದಿನಾಂಕ:-17/02/2017 ರಂದು ಬೆಳಿಗ್ಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಡಿಸ್ ಚಾರ್ಜ ಮಾಡಿಸಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ತಂದು ಸೇರಿಕೆ ಮಾಡಿದಾಗ ಸದರಿ ಗುಂಡಪ್ಪ ಇತನಿಗೆ ತನಗಾದ ರಸ್ತೆ ಅಪಘಾತದಲ್ಲಿ ಆದ ಗಾಯಗಳ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಗುಣಮುಖ ಹೊಂದದೇ ಬೆಳಿಗ್ಗೆ ಮೃತಪಟ್ಟಿರುತ್ತಾನೆ. ಅಂತಾ ಮೃತನ ಮಗ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಭಗವಂತ್ರಾಯ ಬಸವಣ್ಣಪ್ಪಾ ಹರಳಯ್ಯ ಸಾ: ಹೊನ್ನಕಿರಣಗಿ ಇವರು ತನ್ನ ನಿತ್ಯದ ಖರ್ಚಿಗಾಗಿ ತನ್ನ ಹೆಂಡತಿಗೆ ಕೆಳುತ್ತಿದ್ದರಿಂದ ಹೆಂಡತಿಯಾದ ವಿಜಯಲಕ್ಷ್ಮಿ ಗಂಡ ಭಗವಂತ್ರಾಯ ಹರಳಯ್ಯ ಇನ್ನೂ ಇಬ್ಬರು ಸಾ: ಎಲ್ಲರು ಹೊನ್ನಕಿರಣಗಿ ಕುಡಿಕೊಂಡು  ನೀನು ದುಂದು ವೆಚ್ಚ ಮಾಡುತ್ತಿ ಅಂತಾ ದಿನ ನಿತ್ಯ ಕಿರಿ ಕಿರಿಮಾಡುತ್ತಾ ಬಂದಿದ್ದು ದಿನಾಂಕ 07/02/17 ರಂದು ಮುಂಜಾನೆ 10 ಗಂಟೆಗೆ ಪಿರ್ಯಾದಿ ತಮ್ಮೂರ ಅಗಸಿ ಹತ್ತಿರ ನಡೆದು ಕೊಂಡು ಹೋಗುತ್ತಿದ್ದಾಗ ಮಗ ಹಾಗೂ ಅವನ ಪತ್ನಿ & ಅತ್ತೆ 3 ಜನರು ಬಂದವರೆ ಇಂದು ಕೂಲಿಕೆಲಸಕ್ಕೆ ಏಕೆ ಹೋಗಿಲ್ಲಾ ರಂಡಿ ಮಗನೇ ಅಂತಾ ತಡೆದು ನಿಲ್ಲಸಿ ಹೊಡೆ ಬಡೆ ಮಾಡಿ ಅವ್ಯಾಚ್ವವಾಗಿ ಬೈದು ಜೀವದ ಭಯ ಹಾಕಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.