POLICE BHAVAN KALABURAGI

POLICE BHAVAN KALABURAGI

21 June 2016

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ತಂದೆ ಅಣ್ಣಪ್ಪ ಕೊಳಿ ಸಾ: ಮಣ್ಣೂರ ರವರು ತಮ್ಮೂರಿನ ಮಹಾದೇವ ತಂ/ಜಟ್ಟೆಪ್ಪ ತಳವಾರ ರವರಲ್ಲಿ ಕೆಲಸಕ್ಕೆ ಇದ್ದು, ನನ್ನ ಹೆಂಡತಿ ಮಕ್ಕಳೊಂದಿಗೆ ಅವರ ಹೊಲದಲ್ಲಿನ ಮೆಟಗಿಯಲ್ಲಿ ವಾಸವಾಗಿರುತ್ತೇನೆ. ನಮ್ಮ ಮಾಲಿಕರು ಮಹಾರಾಷ್ಟ್ರದ ಅಕ್ಲೂಜ್ ನಲ್ಲಿ ವಾಸವಾಗಿದ್ದು ಆಗಾಗ ಬಂದು ಹೊಲದ ಕೆಲಸಗಳನ್ನು ನೋಡಿಕೊಂಡು ಹೋಗುತ್ತಾರೆ. ನಮ್ಮ ಮಾಲಿಕರ ಹೊಲದಲ್ಲಿ ಕಬ್ಬು ಬೆಳೆದಿರುತ್ತೇವೆ. ದಿನಾಂಕ:18-06-2016 ರಂದು ಬೆಳಿಗ್ಗೆ 07-00 ಗಂಟೆ ಸುಮಾರಿಗೆ ನಾನು ಕಬ್ಬಿನ ಗದ್ದೆಯಲ್ಲಿ ಕಬ್ಬಿಗೆ ನೀರುಣಿಸುತ್ತಾ ಹೋದಾಗ ಕಬ್ಬಿನ ಕವಲಿ(ಸಾಲು) ಗಳಲ್ಲಿ ಒಬ್ಬ ಗಂಡು ವ್ಯಕ್ತಿಯ ಶವ ಬೋರಲಾಗಿ ಬಿದ್ದಿದ್ದು ಕಂಡುಬಂದಿರುತ್ತದೆ. ಕೂಡಲೆ ನಾನು ಈ ವಿಷಯವನ್ನು ನಮ್ಮ ಮಾಲಿಕರಾದ ಮಹಾದೇವ ತಳವಾರರವರಿಗೆ ಪೋನ ಮೂಲಕ ತಿಳಿಸಿರುತ್ತೇನೆ. ಅವರು ಈ ವಿಷಯವನ್ನು ಅಫಜಲಪೂರ ಪೊಲೀಸ್ ಠಾಣೆಗೆ ತಿಳಿಸಿದ್ದು, ಪೊಲೀಸನವರು ಬಂದ ನಂತರ ಮೃತ ವ್ಯಕ್ತಿಯ ಶವವನ್ನು ಹೊರಳಿಸಿ ನೋಡಿದ್ದು ಸದರಿಯವನ ಮೈಮೇಲೆ ಒಂದು ಬೂದು ಬಣ್ಣದ ಪ್ಯಾಂಟ ಮತ್ತು ಬಿಳಿ ಬಣ್ಣದ ನೀಲಿ ಹಾಗು ಹಸಿರು ಪಟ್ಟಿಗಳುಳ್ಳ ಚೌಕಡಿ ಶರ್ಟ ಇರುತ್ತದೆ. ಶರ್ಟಿನ ಕಾಲರ್ ಮೇಲೆ LIFE STYLE INDI ಎಂಬ ಲೇಬಲ್ ಇರುತ್ತದೆ. ಸದರಿಯವನ ವಯಸ್ಸು ಅಂದಾಜು 25 ರಿಂದ 30 ವರ್ಷ ಇದ್ದು ಸೊಂಟದಲ್ಲಿ ದಾರದ ಉಡದಾರ ಮತ್ತು ಕೊರಳಲ್ಲಿ ಸಣ್ಣ ರುದ್ರಾಕ್ಷಿ ಇದ್ದುದರಿಂದ ಹಿಂದೂ ಇದ್ದಂತೆ ಕಂಡುಬರುತ್ತದೆ. ಸದರಿಯವನಿಗೆ ಯಾರೋ ದುಷ್ಕರ್ಮಿಗಳು ಯಾವುದೊ ದುರುದ್ದೇಶದಿಂದ ನಮ್ಮ ಮಾಲಿಕರ ಹೊಲದ ಪಕ್ಕದ ಮಲ್ಲಪ್ಪ ಪೂಜಾರಿ ರವರ ಹೊಲದಲ್ಲಿ ಯಾವುದೊ ಹರಿತವಾದ ಆಯುಧಗಳಿಂದ ಕುತ್ತಿಗೆಗೆ, ಗದ್ದಕ್ಕೆ, ಬಾಯಿಗೆ, ಮೂಗಿನ ಮೇಲೆ, ತಲೆಗೆ, ಎರಡೂ ಕೈಗಳ ಮೇಲೆ ಮತ್ತು ಶರೀರದ ಇನ್ನಿತರ ಕಡೆಗಳಲ್ಲಿ ಹೊಡೆದು ಭಾರಿರಕ್ತಗಾಯಗಳು ಪಡಿಸಿ ಕೊಲೆ ಮಾಡಿ ಸಾಕ್ಷಿ ಪುರಾವೆಗಳು ನಾಶಪಡಿಸುವ ಉದ್ದೇಶದಿಂದ ಶವವನ್ನು ನಮ್ಮ ಮಾಲಿಕರ ಕಬ್ಬಿನ ಗದ್ದೆಯಲ್ಲಿ ಎಸೆದಿರುತ್ತಾರೆ. ಸದರಿಯವನಿಗೆ ಕೊಲೆ ಮಾಡಿದ ಸ್ಥಳದಲ್ಲಿ ಹಲ್ಲುಗಳು, ತಲೆಮೇಲಿನ ಕೂದಲು ಮತ್ತು ರಕ್ತ ಬಿದ್ದಿರುತ್ತದೆ. ಸದರಿ ಮೃತನ ಎತ್ತರ ಅಂದಾಜು 05 ಫೀಟ್ 05 ಇಂಚು ಇದ್ದು, ಗೋದಿಗೆಂಪು ಬಣ್ಣ ಇರುತ್ತದೆಸದರಿ ಘಟನೆಯು ದಿನಾಂಕ-17-06-2016 ಮತ್ತು ದಿನಾಂಕ-18-06-2016 ರ ಬೆಳಿಗ್ಗೆ 07-00 ಗಂಟೆಯ ಮದ್ಯದ ಅವಧಿಯಲ್ಲಿ ಸಂಭವಿಸಿರಬಹುದು. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ: 20/06/2016 ರಂದು ಬೆಳ್ಳಿಗೆ ದೇವಿ ನಗರ ಬಡಾವಣೆಯ ಭವಾನಿ ಗುಡಿಯ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ಯುವಕನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟ ನಡೇಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀ ಡಬ್ಲೂ.ಹೆಚ್‌.ಕೊತ್ವಾಲ್‌ ಪಿಎಸ್‌‌ಐ ರಾಘವೇಂದ್ರ ನಗರ ಪೊಲೀಸ ಠಾಣೆರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಾಗಿ ನಿಂತು ನೋಡಿ ಖಚಿತಪಡಿಸಿಕೊಂಡು ದಾಳಿ ಮಾಡಿ ಒಬ್ಬ ಯುವಕನನ್ನು ಹೀಡಿದು ಆತನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಭೀಮಾಶಂಕರ ತಂದೆ ಕಾಶೀನಾಥ ಗೇಣಿ ಸಾ: ದುದನಿ ತಾ: ಅಕ್ಕಲಕೊಟ ಮಹಾರಾಷ್ಟ್ರ ಹಾ:ವ: ಜೆ.ಆರ್ ನಗರ ಕಲಬುರಗಿ ಅಂತಾ ತಿಳಿಸಿದನು . ಆತನ ಅಂಗ ಶೋದನೆ ಮಾಡಲು ಅವನ ಹತ್ತಿರ ಮಟಕಾ ಜೂಜಾಟ ಸಂಬಂಧಿಸಿದ ನಗದು ಹಣ 2770=00 ರೂ ಮತ್ತು 5 ಮಟಕಾ ನಂಬರ ಬರೆದ ಚಿಟಿಗಳು ಮತ್ತು ಒಂದು ಬಾಲ ಪೇನ ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

20 June 2016

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ಮೃತ ಯಲ್ಲಮ್ಮ ಗಂಡ ಕೃಷ್ಣಪ್ಪ ಇವಳು ಸಾರ್ವಜನಿಕರೊಂದಿಗೆ ಅನೈತಿಕ ಸಂಭಂಧ ಇಟ್ಟುಕೊಂಡಿರುವುದರಿಂದ ಯಲ್ಲಮ್ಮಳ ಮಲತಾಯಿಯ ಮಗನಾದ ಮಾಹಾಂತೇಶ ಈತನು ಹಲವಾರು ಬಾರಿ ಯಲ್ಲಮ್ಮಳಿಗೆ ಮತ್ತು ಆತನ ತಂದೆಯಾದ ಕೃಷ್ಣಪ್ಪ ಇವರಿಗೆ ಅನೈತಿಕ ಸಂಭಂಧ ಬಿಡುವಂತೆ ಅದರಿಂದ ಮನೆಯ ಮರ್ಯಾದೆ ಹೋಗುತ್ತಿದೆ ಅಂತಾ ತಂಟೆ ತಕರಾರು ಮಾಡಿಕೊಳ್ಳುತ್ತಾ ಬಂದರೂ ಸಹ ಯಲ್ಲಮ್ಮ ಇವಳು ಅನೈತಿಕ ಸಂಭಂಧ ಮುಂದುವರೆಸಿಕೊಂಡು ಬಂದಿರುವುದರಿಂದ ಅವಳನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ಆರೋಪಿತನಾದ ಅಶೋಕ ತಂದೆ ಶರಣಯ್ಯ ಗುತ್ತೇದಾರ ಈತನ ಪ್ರಚೋದನಯಿಂದ ತನ್ನ ಗೆಳೆಯರಾದ ಗುಡೂಸಾಬ್ ತಂದೆ ಅಜೀಜ್‌ ಮಿಯಾ ಹಾಗೂ ಅಂಬರೀಶ ತಂದೆ ಈರಣ್ಣ ಬಿರಾದಾರ ಇವರೊಂದಿಗೆ ದಿನಾಂಕ: 19/06/2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ದೀನ್‌ ದಯಾಳ್‌ ಕಾಲೋನಿಯ ಮಾಹಾಂತೇಶ ನ ಪಾನ್ ಶಾಪ್‌ ದಲ್ಲಿ ಪ್ಲಾನ್ ಮಾಡಿಕೊಂಡು ಯಲ್ಲಮ್ಮಳ ಮನೆಗೆ ಹೋಗಿ ನಿನ್ನ ಗಂಡ ಕುಡಿದು ರೋಡಿನ ಮೆಲೆ ಬಿದ್ದಿರುತ್ತಾನೆ ಅಂತಾ ಹೇಳಿ ಮನೆಯಿಂದ ಕರೆದುಕೊಂಡು ಎಸ್.ಎಂ ಕೃಷ್ಣಾ ಕಾಲೋನಿಯ ರೋಡಿಗೆ ಕರೆದುಕೊಂಡು ಹೋಗಿ ಯಲ್ಲಮ್ಮಳಿಗೆ ಗುಡೂಸಾಬ್‌ ಮತ್ತು ಅಂಬರೀಶ್ ಇವರು ಕೆಳಗೆ ಕೆಡವಿದ್ದು ಮಾಹಾಂತೇಶನು ಕಲ್ಲುಗಳಿಂದ ತಲೆಯ ಮೇಲೆ ಹಣೆಯ ಮೇಲೆ ಹೊಡೆದು ಕೊಲೆ ಮಾಡಿರುತ್ತಾನೆ ನಂತರ ಬಿಡಿಸಲು ಬಂದಿರುವ ಯಲ್ಲಮ್ಮಳ ಮಗಳು ಆಶಾ ಇವಳಿಗೂ ಸಹ ಸ್ವಲ್ಪ ದೂರ ಎಳೆದುಕೊಂಡು ಹೋಗಿ ಗೂಡೂಸಾಬ್ ಈತನು ಒಂದು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದಿದ್ದು ಅಂಬರೀಶ ಇತನು ಎರಡು ಕೈಗಳು ಹಿಡಿದಿದ್ದು ಮಾಹಾಂತೇಶನು ಚಾಕುವಿನಿಂದ ಆಶಾಳ ಕುತ್ತಿಗೆ ಕೊಯಿದು ಕೊಲೆ ಮಾಡಿರುತ್ತಾರೆ.  ಅಂಥಾ ಶ್ರೀ ಕೃಷ್ಣಪ್ಪ ತಂದೆ ರುಕ್ಮಯ್ಯ ಕಲಾಲ್‌ ಸಾ: ಡಬರಾಬಾದ ಹಾವ: ಪಂಡಿತ್ ದೀನ್‌ ದಯಾಳ್ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು ಮದ್ಯಾಹ್ನ 12-00 ಪಿ.ಎಂಕ್ಕೆ  ಶ್ರೀ. ಸುರೇಶ ತಂದೆ ನಿಂಗಪ್ಪಾ ಕಟ್ಟಿಮನಿ  ಸಾ:  ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆ ಅಶೋಕ ನಗರ ಕಲಬುರಗಿ ರವರು ಮತ್ತು ತನ್ನ ಪತ್ನಿ ಮಕ್ಕಳೊಂದಿಗೆ ಈಗ ಒಂದುವರೆ ವರ್ಷಗಳಿಂದ ಅರುಣ ಗೊಡಬೊಲೆ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆವೆ.  ಅದೇ ಮನೆಯಲ್ಲಿ ಓರಿಸ್ಸಾ ಮೂಲದವರಾದ ಕೃಷ್ಣಾ ಮತ್ತು ಅವರ ಪತ್ನಿ ಮಮತಾ ರವರು ವಾಸವಾಗಿರುತ್ತಾರೆ. ನೀರು ತುಂಬವ ಮೊಟರ ಸಲುವಾಗಿ ಈ ಹಿಂದೆ ನನ್ನ ಪತ್ನಿ ವಾಣಿ ಜೊತೆಯಲ್ಲಿ ಮಮತಾ ರವರು ಜಗಳ ಮಾಡಿದ್ದರು. ಇಂದು ದಿನಾಂಕ 19/06/2016 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಮಳೆ ನೀರು ನಿಂತಿದಕ್ಕೆ ನನ್ನ ಪತ್ನಿ ವಾಣಿ ರವರು ಮನೆ ಮಾಲಿಕರ ಸಂಬಂಧಿಕ ಮನೋಜ ರವರಿಗೆ ಹೇಳಿದಕ್ಕೆ ಅವರು ಒಡ್ಡೆ ಒಡೆದು ನೀರು ತೆಗೆದಿರುತ್ತಾರೆ. ಅದಕ್ಕೆ ಕೃಷ್ಣ ಮತ್ತು ಮಮತಾ  ರವರು ನನ್ನ ಪತ್ನಿ ವಾಣಿ ರವರಿಗೆ ರಂಡಿ ನೀನೆ ಹೇಳಿ ಒಡ್ಡು ಮುರಿಸಿದ್ದಿ ಅಂತಾ ಬೈದ್ದರು. ಆಗ ನಾನು ನನ್ನ ಹೆಂಡತಿಗೆ ಯ್ಯಾಕೆ? ಬೈಯ್ದಿರಿ ಎಂದು ಕೇಳಲು ಹೊದಾಗ ಕೃಷ್ಣ ರವರು  ರಂಡಿ ಮನಗೆ ಭೋಸಡಿ ಮನಗೆ ಎಂದು ಬೈದ್ದು ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಾಯಗೊಳಿಸಿರುತ್ತಾರೆ.  ಮಮತಾ ರವರು ನನ್ನ ಪತ್ನಿ ವಾಣಿರವರ ಜೋತೆ ದಕ್ಕಮಸ್ತಿಗೆ ಬಿದ್ದು ಕೈಯಿಂದ ಹೊಡೆದಿರುತ್ತಾರೆ. ಮತ್ತು ಅವರಿಂದ ನನ್ನ ಜೀವಕ್ಕೆ ಅಪಾಯವಿದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಬಸ್ಸಿಗೆ ಕಲ್ಲು ತೂರಾಟ ಮಾಡಿದ ಪ್ರಕರಣಗಳು :
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13:30  ಪಿ.ಎಮ್.ಕ್ಕೆ ನಾನು & ಕಂಡಕ್ಟರ್ ಅಣ್ಣಪ್ಪಾ ಕಂ. ನಂ. 4992 ರವರೊಂದಿಗೆ ಕೆ.ಎಸ್.ಆರ್.ಟಿ.ಸಿ ನೃಪತುಂಗ ನಗರ ಸಾರಿಗೆ ಸಬ್ ನಂ. ಕೆಎ 32 ಎಪ್‌ 1850 ರಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು ಬಸ್ಟಾಂಡದಿಂದ ರಾಮ ಮಂದಿರ ಕಡೆಗೆ ಹೋಗುತ್ತಿರುವಾಗ ಸಮಯ 13:45 ಪಿಎಮ್ ಕ್ಕೆ ರಾಷ್ಟ್ರಪತಿ ಸರ್ಕಲ ಎದುರುಗಡೆ ಎಕ್ಸಿಸ್ ಬ್ಯಾಂಕ ಎದುರುಗಡೆ ರಸ್ತೆಯ ಮೇಲೆ ಎರಡು ಬೈಕ್ ಮೇಲೆ 3-4 ಜನ ಪ್ರತಿಭಟನಾ ಕಾರರು ಒಮ್ಮೆಲೆ ಬಂದು ಕಲ್ಲು ತೂರಾಟ ಮಾಡಿದ್ದರಿಂದ ನಮ್ಮ ಬಸ್ಸಿನ ಎದುರುಗಡೆ ಗ್ಲಾಸ ಮತ್ತು ಬಲಗಡೆಯ ಎರಡು ಗ್ಲಾಸಗಳು ಜಖಂಗೊಂಡಿದ್ದು ಇದರಿಂದ 15000/-ರೂ. ಹಾನಿ ಆಗಿರುತ್ತದೆ. ಇಂದು ನಗರದಲ್ಲಿ ಖಮರುಲ್ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶಗೊಂದು ಪ್ರತಿಭಟನೆ ಮಾಡಿ ಕಲ್ಲು ತೂರಾಟ ಮಾಡಿರುತ್ತಾರೆ. ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ ಶರ್ಟ ಧರಿಸಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರವಿ ತಂದೆ ಪ್ರಭುಲಿಂಗ ಡ್ರೈವರ ನಂ.972 ಬಸ್ ಡಿಪೋ ನಂ.4 ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಶೋಕ ನಗರ ಠಾಣೆ : ದಿನಾಂಕ 19/06/2016 ರಂದು 13-50 ಪಿಎಂಕ್ಕೆ  ನಾನು ಮತ್ತು ಕಂಡಕ್ಟರ ರೂಪ್ಲಪ್ಪಾ ಡಿ ಕಂ.ಸಿ 195 ರವರೊಂದಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ  ನಿಲ್ದಾಣದಿಂದ ಬಸ ನಂ. ಕೆಎ 36-ಎಫ್‌-1237 ರಲ್ಲಿ ಪ್ರಯಾಣಿಕರೊಂದಿಗೆ ಬಸ  ಸ್ಟ್ಯಾಂಡ ದಿಂದ ಹೊರ ಹೊಗುವಾಗ  13-50 ಪಿಎಂಕ್ಕೆ ರಸ್ತೆಯ ಮೇಲೆ 2 ಬೈಕ ಮೇಲೆ 3-4 ಪ್ರತಿಭಟನಾಕಾರರು ಒಮ್ಮೇಲೆ ಬಂದು ಕಲ್ಲು ತೂರಾಟ ಮಾಡಿದ್ದ ಕಾರಣ ನಮ್ಮ ಬಸ್ಸಿನ ಎದರುಗಡೆಯ ಗ್ಲಾಸ ಜಖಂ ಗೊಂಡಿದ್ದು ಇದರಿಂದ 15000/- ರೂ ಹಾನಿ ಹಾಗಿರುತ್ತದೆ. ಇಂದು ಕಲಬುರಗಿ ನಗರದಲ್ಲಿ  ಖಮರೂಲ ಇಸ್ಲಾಂ ರವರಿಗೆ ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಆಕ್ರೊಶಗೊಂಡು ಪ್ರತಿಭಟನೆ ಮಾಡುತ್ತಾ ಕಲ್ಲು ತೂರಾಟ ಮಾಡಿರುತ್ತಾರೆ.  ಕಲ್ಲು ತೂರಾಟ ಮಾಡಿದವರಲ್ಲಿ ಒಬ್ಬ ಕಪ್ಪು ಟಿ-ಶರ್ಟ ಧರಿಸಿದವನು ಆಗಿದ್ದು ಕಾರಣ ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಬೆಕೆಂದು  ಅಂತಾ ಶ್ರೀ ಇಬ್ರಾಹಿಂ ಬಸ ಚಾಲಕ ನಂ.257 ಸಿಂಧನೂರ ಬಸ ಡಿಪೊ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 19/06/16 ರಂದು ಬೆಳಿಗ್ಗೆ 11-45  ಗಂಟೆ ಸುಮಾರಿಗೆ ಕೆ.ಎಸ್.ಅರ್.ಟಿ.ಸಿ. ಬಸ್ಸು ನಂ ಕೆಎ 32 F 1702 ನೇದ್ದರಲ್ಲಿ ಪ್ರಯಾಣಿಕರನ್ನು  ಉಮರ್ಗಾದಿಂದ ಕೂಡಿಸಿಕೊಂಡು ಬಸ್ಸು ನಡೆಸುತ್ತಾ ಮಧ್ಯಾಹ್ನ 02-30 ಗಂಟೆ ಸುಮಾರಿಗೆ  ಕಲಬುರಗಿ ನಗರದ ಮಿಜಾಬ ರಿಂಗ ರೋಡ ಕ್ರಾಸನಲ್ಲಿ ಬಂದಾಗ ಆಗ ನಾಲ್ಕು ಜನರು ಅಂದಾಜ 30-34 ವರ್ಷ ವಯಸ್ಸಿನವರು ಕೂಡಿಕೊಂಡು ಬಂದು ಖಮರಲ್ಲ ಇಸ್ಲಾಂ ಇವರಿಗೆ ಸಚಿವ ಸಂಪುಟಕ್ಕೆ ಕೈ ಬಿಟ್ಟಿದ್ದಕ್ಕೆ ಅವರ ಬೆಂಬಲಿಗರು ಪ್ರತಿಭಟನೆ ಮಾಡುತ್ತಾ ಮತ್ತು ಕೂಗುತ್ತಾ  ಆಕ್ರೋಶಗೊಂಡು  ನಮ್ಮ ಬಸ್ಸಿನ ಎದುರುಗಡೆ ಬಂದು ನನಗೆ ಬಸ್ಸು ನಿಲ್ಲಿಸುವಂತೆ ಕೈ ಸನ್ನೆ ಮಾಡಿ ಬಸ್ಸು ನಿಲ್ಲಿಸಿ, ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಸ್ಸಿನ ಮುಂದಿನ ಗ್ಲಾಸಿಗೆ ಕಲ್ಲು ತೂರಾಟ ಮಾಡಿ ದೊಡ್ಡ ಗ್ಲಾಸು ಒಡೆದರು. ಮತ್ತು ಅದರಂತೆ ಬಲಗಡೆಯ ಸೈಡ ಗ್ಲಾಸು ಒಟ್ಟು ಆರು ಗ್ಲಾಸುಗಳಿಗೆ ಕಲ್ಲು ತೂರಾಟ ಮಾಡಿ ಒಡೆದು ಅಲ್ಲಿಂದ ಹೋದರು. ಈ ಘಟನೆಯಿಂದಾಗಿ ಬಸ್ಸಿನಲ್ಲಿದ್ದ  ನನಗೆ ಮತ್ತು ಕಂಡಕ್ಟರ ಹಾಗೂ ಪ್ರಯಾಣಿಕರಿಗೆ ಯಾವುದೇ ಗಾಯಗಳು ವಗೈರೇ ಆಗಿರುವುದಿಲ್ಲಾ. ಬಸ್ಸಿನಲ್ಲಿದ್ದ ಪ್ರಯಾಣಿಕರ ಹೆಸರು ವಿಳಾಸ ಗೊತ್ತಿಲ್ಲಾ. ಮುಂದಿನ ಗ್ಲಾಸು ಒಡೆದಿದ್ದರಿಂದ ಅಂದಾಜ 12,000/- ರೂ.  ಮತ್ತು ಬಲಗಡೆ ಸೈಡ ಗ್ಲಾಸು ಒಡೆದಿದ್ದರಿಂದ ಅಂದಾಜ 6000/- ರೂ. ಹೀಗೆ ಒಟ್ಟು 18,000/- ರೂ. ಲುಕ್ಸಾನ ಆಗಿರುತ್ತದೆ. ಕಲ್ಲು ತೂರಾಟ ಮಾಡಿದ ನಾಲ್ಕು ಜನರ ಹೆಸರು ವಿಳಾಸ ಗೊತ್ತಿಲ್ಲಾ. ಅವರಿಗೆ ನೋಡಿದ್ದಲ್ಲಿ ಗುರುತಿಸುತ್ತೇನೆ. ಅಂತಾ ಶ್ರೀ ಕರಬಸಪ್ಪ ತಂದೆ ಶಿವಪ್ಪ ಮೂಕ ವ:34 ವರ್ಷ ಉ:ಕೆ.ಎಸ್.ಅರ್.ಟಿ.ಸಿ. ಬಸ್ಸು ಕೆಎ 32 ಎಫ 1702 ಚಾಲಕ  ಪಿ.ನಂ. 26824 ಆಳಂದ ಡಿಪೋ ಮು:ಕಡಗಂಚಿ ಗ್ರಾಮ ತಾ:ಆಳಂದ ಜಿ:ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 June 2016

Kalaburagi District Reported Crimes

ಕಳವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 14/06/2016 ರಂದು ರಾತ್ರಿ 8-00 ಪಿಎಮ್ ಕ್ಕೆ ನನ್ನ ದಾಲಮಿಲದ ಕೆಲಸ ಮುಗಿಸಿಕೊಂಡು ದಾಲಮಿಲದ ಶೇಟರ ಕೀಲಿ ಹಾಕಿಕೊಂಡು ಮನೆಗೆ ಬಂದಿರುತ್ತೇನೆ. ನಂತರ ದಿನಾಂಕ: 15/06/2016 ರಂದು ಬೆಳೆಗ್ಗೆ ನಮ್ಮ ದಾಲಮಿಲದ ಮುನೀಮ ಶಬ್ಬೀರ ಇತನು ಫೋನ ಮಾಡಿ ದಾಲಮಿಲದ ಕಿಟಕಿ ಹತ್ತಿರ ಮತ್ತು ಕಾಂಪೌಂಡ ಹತ್ತಿರ ಬೆಳೆ ಬಿದ್ದಿದ್ದು ದಾಲಮಿಲದ ಕಿಟಕಿಯ ರಾಡ ಸಹ ಮುರಿದಿದ್ದು ದಾಲಮಿಲ ಕಳ್ಳತನವಾಗಿರಬಹುದು ಬೇಗ ಬನ್ನಿ ಅಂತ ತಿಳಿಸಿದ್ದು ಫಿರ್ಯಾದಿ  ತನ್ನ ಅಣ್ಣನೊಂದಿಗೆ  ಹೋಗಿ ನೋಡಲು ತಮ್ಮ ದಾಲಮಿಲದ ಕಿಟಕಿ ರಾಡ ಮುರಿದಿದ್ದು ಕಿಟಕಿಯಿಂದ ಕಾಂಪೌಂಡವರೆಗೆ ತಮ್ಮ ದಾಲಮಿಲದ ಬೆಳೆ ಬಿದ್ದಿದ್ದು ಗಾಬರಿಯಿಂದ ಒಳಗೆ ಹೋಗಿ ನೋಡಲು ಬೆಂಗಳೂರಿಗೆ ಕಳುಹಿಸಲು ಇಟ್ಟಿದ್ದ ಪ್ರತಿ 100 ಕೆಜಿ ತೂಕವುಳ್ಳ 30 ಚೀಲ ತೋಗರಿ ಅಂದರೆ 30 ಕ್ವಿಂಟಲ್ ತೊಗರಿ ಅ.ಕಿ= 348000/-ರೂ ನೇದ್ದನ್ನು ಯಾರೋ ಕಳ್ಳರು ದಿನಾಂಕ: 14/06/2016 ರಂದು 08-00 ಪಿಎಮ್  ಗಂಟೆಯಿಂದ ದಿನಾಂಕ: 15/06/2016ರ 10-00 ಎಎಮ್ ಗಂಟೆಯ ಮಧ್ಯದ ಅವಧಿಯಲ್ಲಿ ದಾಲಮಿಲದ ಕಿಟಕಿ ರಾಡ  ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಮೊಹಮ್ಮದ್ದ ಇದ್ರೀಸ್ ತಂದೆ ಮೊಹಮ್ಮದ್ ಹನೀಫ್ ಐಸ್ ಫ್ಯಾಕ್ಟರಿವಾಲೇ ಸಾ : ಮಿಜಗುರಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 18-06-2016 ರಂದು ಬೆಳಿಗ್ಗೆ ನಾನು ಹಳೆ ಆರ್.ಜಿ. ನಗರದಲ್ಲಿರುವ ನವಿಲಸರ್ ಇವರ ಮನೆಗೆ ವೇದಾಂತ ಪಾಠ ಕೇಳಲು ನಾನು ಒಬ್ಬನೆ ನಡೆದುಕೊಂಡು ಹೋಗಿ ವೇದಾಂತ ಪಾಠ ಮುಗಿದ ನಂತರ ವಾಪಸ್ಸ ಮನೆಯ ಕಡೆಗೆ ಹೋಗುವ ಸಲುವಾಗಿ ನಡೆದುಕೊಂಡು ಹೋಗುತ್ತಿರುವಾಗ ದಾರಿ ಮದ್ಯ ತಿಳಗುಳ ಆಸ್ಪತ್ರೆಯ ಎದುರು ರೋಡ ಮೇಲೆ ಮೋಟಾರ ಸೈಕಲ ನಂ ಕೆಎ-32-ಎಕ್ಸ-3974 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 18-06-2016 ರಂದು ಮದ್ಯಾಹ್ನ  ನಾನು ಮತ್ತು ನನ್ನ ಗಂಡನಾದ ಶರಣಪ್ಪಾ ಇಬ್ಬರೂ ಕೂಡಿಕೊಂಡು ನನ್ನ ಮಗನಾದ ಶರತ ಇತನಿಗೆ ಕಲಬುರಗಿಯ ಮಕ್ಕಳ ಡಾಕ್ಟರ್ ಅನರುಪ ಶಹಾ ಹತ್ತಿರ ತೊರಸಲಿಕ್ಕೆ ಊರಿನಿಂದ ನನ್ನ ಗಂಡ ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಕೆಎ-32-ಇಎಫ್-9769 ನೇದ್ದರ ಮೇಲೆ ಬಂದು ಆಸ್ಪತ್ರೆಯಲ್ಲಿ ತೋರಿಸಿಕೊಂಡು ವಾಪಸ್ಸ ಕೇಂದ್ರ ಬಸ್ಸ ನಿಲ್ದಾಣ ಹತ್ತಿರ ಬರುವ ಸ್ಕ್ಯಾನಿಂಗ ಸೆಂಟರನಲ್ಲಿ ಸ್ಕ್ಯಾನಿಂಗ ಮಾಡಿಸುವ ಸಲುವಾಗಿ ಸುಪರ ಮಾರ್ಕೆಟನಿಂದ ಕೊರ್ಟ ಕ್ರಾಸ ಮುಖಾಂತರವಾಗಿ ನನ್ನ ಗಂಡನು ಮೋಟಾರ ಸೈಕಲ ಎಸ.ವಿ.ಪಿ. ಸರ್ಕಲ ಕಡೆಗೆ ಸುತ್ತಾಕಿಕೊಂಡು ಕೇಂದ್ರ ಬಸ್ಸ ನಿಲ್ದಾಣ ಕಡೆಗೆ ಹೋಗುವ ಕುರಿತು ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಎಸ.ವಿ.ಪಿ. ಸರ್ಕಲ ಹತ್ತೀರ ರೋಡ ಮೇಲೆ ಕೇಂಧ್ರ ಬಸ್ಸ ನಿಲ್ದಾಣ ರೋಡ ಕಡೆಯಿಂದ ಜಗತ ಸರ್ಕಲ ರೋಡ ಕಡೆಗೆ ಹೋಗುವ ಕುರಿತು ಟಂ ಟಂ ಗೂಡ್ಸನಂಬರ ಕೆಎ-32-ಬಿ-8684 ನೇದ್ದರ ಚಾಲಕನು ತನ್ನ  ಟಂ ಟಂ ವಾಹನವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ತನ್ನ ಟಂ ಟಂ ಗೂಡ್ಸ ವಾಹನ ಅಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮೃತಪಟ್ಟ ಪ್ರಕರಣ :
ರೇವೂರ ಠಾಣೆ : ದಿನಾಂಕ:16-06-2016 ರಂದು ರಾತ್ರಿ ನಾನು ಮತ್ತು ನನ್ನ ಹೆಂಡತಿಯಾದ ನಿಂಗಮ್ಮ ಹಾಗೂ ನನ್ನ ಮೂರು ಜನ ಮಕ್ಕಳು ಎಲ್ಲರೂ ಕೂಡಿಕೊಂಡು ಊಟ ಮಾಡಿ ನಮ್ಮ ಮನೆಯ ಪಡಸಾಲಿಗೆಯಲ್ಲಿ ಮಲಗಿಕೊಂಡಿದ್ದೆವು. ದಿನಾಂಕ:17-06-2016 ರಂದು 5 ಎ.ಎಮ್.ಸುಮಾರಿಗೆ ನನ್ನ ಹಿರಿಯ ಮಗನಾದ ಶ್ರೀಕಾಂತ ಈತನು ನನಗೆ ಎಬ್ಬಿಸಿ ಅಪ್ಪಾ ನನ್ನ ಎಡಗಾಲ ಬೆರಳಿಗೆ ಏನೋ ಕಚ್ಚಿದಂತೆ ಆಗಿದೆ ನನಗೆ ಚರಚರನೆ ಊರಿದಂತಾಗುತ್ತಿದೆ ಅಂತಾ ಹೇಳಿದನು. ನಾನು ಆಗ ನನ್ನ ಹೆಂಡತಿಗೆ ಎಬ್ಬಿಸಿ ಇಬ್ಬರು ಕೂಡಿ ನೋಡಲಾಗಿ ನನ್ನ ಮಗ ಶ್ರೀಕಾಂತನ ಎಡಕಾಲಿನ ಕಿರುಬೆರಳಿನ ಪಕ್ಕದ ಬೆರಳಿನ ಕೆಳಭಾಗದಲ್ಲಿ ಸೂಜಿಯಿಂದ ಚೂರಿದ ಹಾಗೆ ಗಾಯವಾಗಿದ್ದು ಕಂಡು ನಾವು ಇರುವೆ ಕಡಿದಿರಬಹುದೆಂದು ಭಾವಿಸಿ ಹಾಗೆ ಮಲಗಿಸಿ ನಾವು ಮಲಗಿದೇವು. ನಂತರ 6 ಎ,ಎಮ್.ಸುಮಾರಿಗೆ ಶ್ರೀಕಾಂತನು ನನ್ನ  ಕಾಲ ಬೆರಳು ಬಹಳ ಉರಿಯುತ್ತಿದೆ ಅಂತಾ ಅಂದಾಗ ನಮಗೆ ಹಾವು ಕಡಿದಿರಬಹುದೆಂದು ಸಂಶಯ ಬಂದು ನಾನು, ನನ್ನ ಹೆಂಡತಿ ಮತ್ತು  ನನ್ನ ಚಿಕ್ಕಪ್ಪನ ಮಗನಾದ ಸಿದ್ದು ತಂದೆ ಮಹಾಂತಪ್ಪ ಮೂರು ಜನ ಕೂಡಿ ಶ್ರೀಕಾಂತನಿಗೆ ಭೈರಾಮಡಗಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ನಾಟಿ ಔಷದ ಕೋಡಿಸಿರುತ್ತೇವೆ. ಆದರು ನೋವು ಕಡಿಮೆ ಯಾಗದ ಕಾರಣ  ನಾನು ಮತ್ತು ನನ್ನ ಚಿಕ್ಕಪ್ಪನ ಮಗನಾದ ಸಿದ್ದು ತಂದೆ ಮಹಾಂತಪ್ಪ ಹಡಪದ ಇಬ್ಬರು ಕೂಡಿಕೊಂಡು ನಮ್ಮ ಗ್ರಾಮದ ಸಿದ್ದು ತಂದೆ ಮಹಾದೇವಪ್ಪ ಮಾಲಿಪಾಟೀಲ ರವರ ಜೀಪಿನಲ್ಲಿ ನನ್ನ ಮಗ ಶ್ರೀಕಾಂತನಿಗೆ ಕರೆದುಕೊಂಡು ಬಸವೇಶ್ವರ ಆಸ್ಪತ್ರೆಗೆ  ಉಪಚಾರ  ಕುರಿತು ದಾಖಲು ಮಾಡಿರುತ್ತೇವೆ. ನನ್ನ  ಮಗ ಉಪಚಾರ ಫಲಿಸದೆ ಇಂದು ದಿನಾಂಕಃ 18/06/2016 ರಂದು 8-20 ಎ,ಎಮ್ ಕ್ಕೆ  ಆಸ್ಪತ್ರೆಯಲ್ಲಿಯೇ ಮೃತ ಪಟ್ಟಿರುತ್ತಾನೆ. ಅಂತಾ ಶ್ರೀ ಮಲ್ಲಿಕಾರ್ಜುನ ತಂದೆ ಅಂಬಾರಾಯ ಹಡಪದ ಸಾ:ಮದರಾ(ಬಿ) ಗ್ರಾಮ ತಾ:ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ರೇವೂರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 17-06-2016 ರಂದು ಬೆಳಿಗ್ಗೆ ನನ್ನ ಹೊಲವನ್ನು ಬಿತ್ತಲು ಹೊರ ಊರಿನ ಟ್ರಾಕ್ಟರನ್ನು ಕರೆಯಿಸಿ ನಾನು ನನ್ನ ಅಳಿಯ ಸಿದ್ದಪ್ಪ, ನನ್ನ ಹೆಂಡತಿಯಾದ ಚೆಂದ್ರಭಾಗವ್ವ, ಮಗನಾದ ಲಕ್ಷ್ಮಣ ಹಾಗು ನಮ್ಮೂರಿನ ನಿಂಗಪ್ಪ ಮತ್ತು ನನ್ನ ಮಗಳ ಗಂಡನಾದ ನಾಗಪ್ಪ ಹಿಗೆಲ್ಲರೂ ಕೂಡಿಕೊಂಡು ಟ್ರಾಕ್ಟರ್ ತೆಗೆದುಕೊಂಡು ನಮ್ಮ ಹೊಲಕ್ಕೆ ಹೋಗಿ ಅಲ್ಲಿ ಟ್ರಾಕ್ಟರ್ ಮುಖಾಂತರ ಹೊಲವನ್ನು ಬಿತ್ತುತ್ತಿದ್ದೆವು ಆಗ ನಮ್ಮೂರಿನ 1) ಹುಲಕಂಠರಾಯ ತಂದೆ ಬಸವಂತ್ರಾಯ ಹೇರೂರ, 2) ಶಿವಶರಣಪ್ಪ ತಂದೆ ಬಸವಂತ್ರಾಯ ಹೆರೂರ 3) ಸೋಮನಿಂಗಪ್ಪ ತಂದೆ ಬಸವಂತ್ರಾಯ ಹೇರೂರ, 4) ಬಸವಂತ್ರಾಯ ತಂದೆ ಸೊಮನಿಂಗಪ್ಪ ಹೇರೂರ, 5) ಚಂದ್ರಾಮ ತಂದೆ ರಾವುತಪ್ಪ ಚಿರಲಿಂಗ, 6) ಸಿದ್ದವ್ವ ಗಂಡ ಬಸವಂತ್ರಾಯ ಹೆರೂರ, 7) ಲಲಿತಾಬಾಯಿ ಗಂಡ ಸೋಮನಿಂಗಪ್ಪ ಹೆರೂರ 8) ಗುರುಬಾಯಿ ಗಂಡ ಹುಲಕಂಠರಾಯ ಹೆರೂರ ಹಿಗೆಲ್ಲರೂ ಕೂಡಿಕೊಂಡು ಬಂದವರೆ ಅವರೆಲ್ಲರೂ ನನ್ನ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನನಗೆ ಅವರಲ್ಲಿ ಹುಲಕಂಠರಾಯ ಇತನು ಏ ಮಾದಿಗ ಸೂಳೆ ಮಗನೆ, ನಿನಗೆ ಎಷ್ಟು ಸೊಕ್ಕು ನಮಗೆ ಹೊಲ ಖರಿದಿಕೊಟ್ಟು ನಮ್ಮ ಮೇಲೆ ಜೇವರ್ಗಿ ಠಾಣೆಯಲ್ಲಿಯೂ ಕೇಸು ಮಾಡಿಸಿದ್ದಿ ಅಂತಾ ಜಾತಿ ನಿಂದನೆ ಮಾಡಿ ಬೈಯುತ್ತಿದ್ದಾಗ ಸೊಮನಿಂಗಪ್ಪ, ಬಸವಂತ್ರಾಯ ನನಗೆ ತಡೆದು ನಿಲ್ಲಿಸಿ ಕೈಯಿಂದ ಹೊಟ್ಟೆಗೆ, ಬೆನ್ನಿಗೆ, ಮೈ ಕೈಗೆ ಹೊಡೆ ಬಡೆ ಮಾಡಿ ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ನನ್ನ ಹೆಂಡತಿಯ ತಮ್ಮನಾದ ಸಿದ್ದಪ್ಪ ಜಗಳ ಬಿಡಿಸಲು ಬಂದಾಗ ಶಿವಶರಣಪ್ಪ ಇತನು ಕಲ್ಲಿನಿಂದ ಅವನ ತೆಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ಹುಲಕಂಠರಾಯ ಇತನು ಬಡಿಗೆಯಿಂದ ಅವನ ಬೆನ್ನಿಗೆ ಹೊಡೆದನು. ಅಲ್ಲದೆ ಸೊಮನಿಂಗಪ್ಪ, ಬಸವಂತ್ರಾಯ ಇಬ್ಬರು ನನಗೆ ಹೋಡೆಯುವದನ್ನು ಬಿಟ್ಟು ಸಿದ್ದಪ್ಪನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದಿರುತ್ತಾರೆ. ನನ್ನ ಹೆಂಡತಿಯಾದ ಚಂದ್ರಭಾಗವ್ವ ಜಗಳವನ್ನು ಬಿಡಿಸಿಕೊಳ್ಳಲು ಬಂದಾಗ ಅವಳಿಗೆ ಚಂದ್ರಾಮ ಚಿರಲಿಂಗ ಇತನು ಸೀರೆ ಹಿಡಿದು ಎಳೆದಾಡಿ ಕೈ ಹಿಡಿದು ಜೋರಾಗಿ ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ. ನನ್ನ ಹೆಂಡತಿಗೆ ಜಗ್ಗಾಡುವದನ್ನು ನನ್ನ ಮಗ ಬಿಡಿಸಿಕೊಳ್ಳಲು ಹೊದಾಗ ಚಂದ್ರಾಮ ಇತನು ಕೈಯಿಂದ ನನ್ನ ಮಗನ ಹೊಟ್ಟೆಯಲ್ಲಿ ಹೊಡೆದಿರುತ್ತಾನೆ. ಸಿದ್ದವ್ವ ಹೇರೂರ, ಲಲೀತಾಬಾಯಿ ಹೆರೂರು, ಗುರುಬಾಯಿ ಹೆರೂರು ಇವರೆಲ್ಲರೂ ನನ್ನ ಹೆಂಡತಿಗೆ ರಂಡಿ ಬೋಸಡಿ ಹೊಲವು ಮಾರಿ ಮತ್ತೆ ಹೊಲದಲ್ಲಿ ಬಿತ್ತಿಸಲು ಬಂದಿದ್ದಿ ಅಂತಾ ಬೈದು ಅವರೆಲ್ಲರೂ ನೆಲಕ್ಕೆ ಹಾಕಿ ಕೈಯಿಂದ ಮೈ ಕೈಗೆ ಬೆನ್ನಿಗೆ, ಹೊಟ್ಟೆಗೆ ಹೊಡೆ-ಮಾಡಿ ಗುಪ್ತ ಪೆಟ್ಟು ಮಾಡಿರುತ್ತಾರೆ. ಆಗ ನನ್ನ ಅಳಿಯ ನಾಗಪ್ಪ ಹಾಗು ನನ್ನೊಂದಿಗೆ ಇದ್ದ ನಮ್ಮೂರಿನ ನಿಂಗಪ್ಪ ಜಗಳ ಬಿಡಿಸಿಕೊಂಡಿರುತ್ತಾರೆ. ಅವರೆಲ್ಲರೂ ಅಲ್ಲಿಂದ ಹೋಗುವಾಗ ಮಾದಿಗ ಸೂಳೆ ಮಗನೆ ಇನ್ನೊಮ್ಮೆ ಹೊಲದಲ್ಲಿ ಕಾಲು ಇಟ್ಟರೆ ನಿನಗೆ ಖಲಾಸ ಮಾಡಿಯೇ ಬಿಡುತ್ತೆವೆ  ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ  ಶ್ರೀ ಕಾಮಣ್ಣ ತಂದೆ ಸಾಯಬಣ್ಣ ಜಡಗೆ, ಸಾ- ಮುರಗಾನುರ ಗ್ರಾಮ ತಾ|| ಜೇವರ್ಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.