POLICE BHAVAN KALABURAGI

POLICE BHAVAN KALABURAGI

23 February 2014

Gulbarga Dist Reported Crime s

ಅಪಘಾತ ಪ್ರಕರಣಗಳು:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ : ದಿನಾಂಕ 22-02-2014 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಶ್ರೀಮತಿ ಶಕುಂತಲಾ ಗಂಡ ಸುಭಾಕರ ಕಲ್ಯಾಣಿ ಸಾ: ವಿಶ್ವೇಶ್ವರಯ್ಯಾ ನಗರ ಗುಲಬರ್ಗಾ ರವರು ಸುಪರ ಮಾರ್ಕೆಟದಿಂದ ಎಸ್.ವಿ.ಪಿ ಸರ್ಕಲ ಮಧ್ಯದ ರೋಡಿನಲ್ಲಿ ಬರುವ ಟೌನಹಾಲ ಕ್ರಾಸ್ ಹತ್ತಿರ ನಡೆದುಕೊಂಡು ರೋಡ ದಾಟುತ್ತಿರುವಾಗ ಸುಪರ ಮಾರ್ಕೆಟ ಕಡೆಯಿಂದ ಅಟೋರಿಕ್ಷಾ ನಂಬರ ಕೆಎ-32 ಬಿ-2110 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತಪಡಿಸಿ ಭಾರಿಗಾಯಗೊಳಿಸಿ ಅಟೋರಿಕ್ಷಾ ಅಲ್ಲೆ ಬಿಟ್ಟು ಚಾಲಕ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೂಜುಕೋರರ ಬಂಧನ :
ನಿಂಬರ್ಗಾ ಪೊಲೀಸ್ ಠಾಣೆ : ದಿನಾಂಕ 22/02/2014 ರಂದು ನಿಬರ್ಗಾ ಪೊಲೀಸ್ ಠಾಣೆಯ ಶ್ರೀ ಬಾಬುರಾಯ ಸಿಪಿಸಿ, ಶ್ರೀ ಮಡಿವಾಳಪ್ಪ ಸಿಪಿಸಿ, ಶ್ರೀ ಶಿವಶರಣ ಸಿಪಿಸಿ  ರವರು ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಮಾಡಿಯಾಳ ಗ್ರಾಮದ ಮಾಳಿಂಗರಾಯ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಸಿಪಿಐ ಆಳಂದ ರವರ ನೇತೃತ್ವದಲ್ಲಿ ಪಂಚರೊಂದಿಗೆ ಮಾಡಿಯಾಳ ಗ್ರಾಮದ ಮಾಳಿಂಗರಾಯ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  ಜೂಜಾಟದಲ್ಲಿ ತೊಡಗಿದ್ದ 01]ಅಶೋಕ ತಂ. ಶಿವಶರಣಪ್ಪ ಹೊನಗುಂಡ ಸಾ:ಮಾಡಿಯಾಳ 02]ಶ್ರೀಮಂತ ತಂ. ರೇವಣಸಿದ್ದ ಶಿರೂರ ಸಾ:ಮಾಡಿಯಾಳ 03] ಶಿವಶರಣಪ್ಪ ತಂ. ನಾಗಪ್ಪಾ ಶಿರೂರ, ಸಾ:ಮಾಡಿಯಾಳ 04] ಅಮೋಗೆಪ್ಪ ತಂ. ಪ್ರಭುರಾಯ ಪೂಜಾರಿ ಸಾ:ಮಾಡಿಯಾಳ 05] ಮಾಳಪ್ಪ ತಂ. ಭೂತಾಳಿಪೂಜಾರಿ, ಸಾ:ಮಾಡಿಯಾಳ 06] ಮಲ್ಲಿಕಾರ್ಜುನ ತಂ. ಮುತ್ತಣ್ಣ ಪೂಜಾರಿ, ಸಾ:ಮಾಡಿಯಾಳ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪಿಟ ಎಲೆಗಳು ಮತ್ತು ನಗದು ರೂ 6300/- ಜಪ್ತಿ ಮಾಡಿಕೊಂದು ಆಪಾದಿತರ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ :  ದಿನಾಂಕ:20/02/14 ರಂದು ಶ್ರೀ ಅಸ್ಲಾಂ ಕಲ್ಯಾಣಿ ತಂದೆ ಮಹ್ಮದ ರಫೀ ಕಲ್ಯಾಣಿ ಸಾ: ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರು ದೇವರದಾಸಿಮಯ್ಯಾ ನಗರ ಜಫರಾಬಾದ ಮನೆಯಲ್ಲಿದ್ದಾಗ ಮದಿನಾ ಕಾಲೋನಿಯ ಖಯುಮ್ ಪಟೇಲ ತಂದೆ ಸೈಫನ್ ಪಟೇಲ ಮತ್ತು ಅತನ ಮಕ್ಕಳು ಇನ್ನಿತರು 10 12 ಜನರು ಕೂಡಿ ಎರಡು ಜೆ.ಸಿ.ಬಿ (ಬುಲಡೊಜರ್) ಹಾಗೂ ಕಾರ ನಂ ಕೆಎ32ಎನ್3089 ರಲ್ಲಿ ಬಂದು ಮನೆಯ ಒಳಗೆ ಪ್ರವೇಶ ಮಾಡಿ ಖಯುಮ್ ಈತನು ತನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬಗದಗಳಿಂದ ಬಯ್ಯುತ್ತಾ ಜೀವದ ಬೇದರಿಕೆ ಹಾಕಿ ಜೆ.ಸಿ.ಬಿ ಯಂತ್ರಗಳಿಂದ ನಮ್ಮ ಮನೆಗಳ ಕಟ್ಟಡಗಳಿಂದ ನೇಲಸಮ ಮಾಡಿ ಮನೆಯಲ್ಲಿದ್ದ ಹೆಣ್ಣುಗೂ ಸಹ ಕೂದಲು ಹಿಡಿದು ಹೊಡೆದು ಮನೆಗಳು ಕೆಡವಿ ಅಂದಾಜು 15 ಲಕ್ಷ ರೂಪಾಯಿ ಬೆಲೆ ಬಾಳುವ ಮನೆ ನೇಲಸಮ ಮಾಡಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮವಾಗಿ ಮರಳು ಸಾಗಿಸುತ್ತಿದ ಟಿಪ್ಪರ ಜಪ್ತಿ :

ಎಂ.ಬಿ.ನಗರ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ 21/02/2014 ರಂದು ರಾತ್ರಿ 11:00 ಪಿ.ಎಂ. ದಿಂದ ಬೆಳಗ್ಗೆ 05:00 ಎ.ಎಂ. ರವರೆಗೆ ಶ್ರೀ ಗಜಾನನ ಕೆ. ನಾಯ್ಕ ಪಿ.ಎಸ್.ಐ (ಕಾ.ಸೂ) ಎಂ.ಬಿ ನಗರ ಠಾಣೆ ರವರು ಎಂ.ಬಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯ ಮೇಲಿದ್ದಾಗ ಶಹಾಬಾದ್ ರಿಂಗ್ ರೋಡ್ ಕಡೆಯಿಂದ ಒಂದು ಟಿಪ್ಪರ್ ಚಾಲಕನು ಯಾವುದೆ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡಿ ಸಾಗಾಣಿಕೆ ಮಾಡುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಸೇಡಂ ರಿಂಗ್ ರೋಡ್ ಹತ್ತಿರ ಹೋಗಿ ಟಿಪ್ಪರ ಬರುವುದನ್ನು ನೋಡಿ ಕೈಮಾಡಿ ನಿಲ್ಲಿಸುವಂತೆ ಸೂಚಿಸಿದರೊ ಸಹ ಚಾಲಕನು ಟಿಪ್ಪರ್ ನಿಲ್ಲಿಸದೇ ಹಾಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಬೆನ್ನಟ್ಟಿ ಕೆ.ಹೆಚ್.ಬಿ ಕಾಂಪ್ಲೆಕ್ಸ್ ಎದರುಗಡೆ ನಿಲ್ಲಿಸಿ ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ವಿಜಯ ತಂದೆ ಅಭಿಮನ್ಯು ಈಳಿಗೆರ ಸಾಃ ಶಕ್ತಿ ನಗರ ರಾಯಚೂರ ಅಂತಾ ತಿಳಿಸಿದ್ದು ಲಾರಿ ಮಾಲಿಕರ ಹೆಸರು ಅಶೋಕ ತಂದೆ ಅಭಿಮನ್ಯು ಈಳಿಗೆರ ಸಾಃ ಶಕ್ತಿ ನಗರ ರಾಯಚೂರ ಅಂತಾ ತಿಳಿಸಿದ್ದು ಲಾರಿಯಲ್ಲಿ ತುಂಬಲಾದ ಉಸುಕಿನ ಕಾಗದ ಪತ್ರಗಳ ಬಗ್ಗೆ ಹಾಗು ಲಾರಿಯ ಕಾಗದ ಪತ್ರಗಳ ಬಗ್ಗೆ ಕೇಳಲಾಗಿ ಯಾವುದನ್ನು ಹಾಜರು ಪಡಿಸಲಿಲ್ಲಾ. ಆದ್ದರಿಂದ ಉಸುಕು ಎಲ್ಲಿಂದ ತಂದುರುವಿರಿ ಅಂತಾ ಕೇಳಲಾಗಿ ದೇವದುರ್ಗ ತಾಲ್ಲೂಕಿನ ರಾಯಕುಂಪಾ ಗ್ರಾಮದಿಂದ ಗುಲಬರ್ಗಾಕ್ಕೆ ತೆಗೆದುಕೊಂಡು ಬಂದಿರುತ್ತೇನೆ ಅಂತಾ ತಿಳಿಸಿದ್ದು ಸದರಿ ಉಸುಕು ಕಳ್ಳತನ ಮಾಡಿಕೊಂಡು ಬಂದಿರುವುದರಿಂದ ಸ್ಥಳದಲ್ಲಿ ಇಬ್ಬರು ಪಂಚರನ್ನು ಸ್ಥಳಕ್ಕೆ ಬರಮಾಡಿಕೊಂಡು ಸದರಿ ಕಳ್ಳತನ ಮಾಡಿ ಸಾಗಿಸುತ್ತಿದ್ದ ಮರಳು ತುಂಬಿದ್ದ Tipper No. KA 35 9189 ಹಾಗೂ ಕಳ್ಳತನದಿಂದ ಸಾಗಿಸುತ್ತಿದ್ದ ಮರಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಟಿಪ್ಪರ ಚಾಲಕನ ಮತ್ತು ಟಿಪ್ಪರ ಮಾಲಿಕನ ವಿರುದ್ದ ಎಂ.ಬಿ.ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

22 February 2014

Gulbarga Dist Reported Crimes

        ಪತ್ರಿಕಾ ಪ್ರಕಟಣೆ
''ಲಿಂಗ ಸಂವೇದನಾ ಶೀಲತೆ'' ಕಾರ್ಯಾಗಾರ ಪೊಲೀಸ್ ಭವನ ಗುಲಬರ್ಗಾ 

ದಿನಾಂಕ 19/02/2014 ರಂದು ಗುಲಬರ್ಗಾ ಪೊಲೀಸ್ ಭವನದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪೊಲೀಸ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ''ಲಿಂಗ ಸಂವೇದನಾ ಶೀಲತೆ'' ಕಾರ್ಯಾಗಾರವನ್ನು ನಡೆಸಲಾಯಿತು. ಈ ಕಾರ್ಯಾಗಾರವನ್ನು  ಗುಲಬರ್ಗಾ ಜಿಲ್ಲಾ ವರಿಷ್ಠ ಅಧಿಕಾರಿ ಶ್ರೀ ಅಮಿತ ಸಿಂಗ್ ಐ.ಪಿ.ಎಸ್. ರವರು ಉದ್ಘಾಟಿಸಿದರು. ಈ ಕಾರ್ಯಾಗಾರವನ್ನು ನಡೆಸಲು ಬೆಂಗಳೂರಿನಿಂದ ಪ್ರೋಜೇಕ್ಟ ಟೀಮಿನ ಮುಖ್ಯಸ್ಥರಾದ ಶ್ರೀ ಗುರುರಾಜ.ಕೆ. ರವರು, ಅವರ ಇನ್ನೂ ನಾಲ್ಕು ಜನ ಪರಿಣಿತ ತಂಡದೊಂದಿಗೆ ಆಗಮಿಸಿ,ಹೆಣ್ಣು ಗಂಡುಗಳ ಭೇದಗಳ ಪರಿಣಾಮಗಳು ಹಾಗೂ ಸಮಾಜ ನೀಡುತ್ತಿರುವ ಸ್ಥಾನ ಮಾನಗಳ ಬಗ್ಗೆ ಹಾಗೂ ಶೋಷಣೆಗೆ ಒಳಗಾದ ಹಾಗೂ ವಿವಿಧ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದ ಹೆಣ್ಣುಮಕ್ಕಳ, ಹಾಗೂ ಮಕ್ಕಳಿಗೆ ಕಾನೂನಿನ ಅನ್ವಯ ಪರಿಹಾರ, ರಕ್ಷಣೆ, ಮತ್ತು ಆಪಾದಿತರಿಗೆ ಕಾನೂನು ಕ್ರಮಗಳ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿ,ಗಂಡಹೆಂಡರಲ್ಲಿ ಉಂಟಾದ ಜಗಳಗಳ ಪರಿಹಾರ ಕುರಿತು ಕೊರ್ಟ, ಸಂಘ ಸಂಸ್ಥೆಗಳ, ಮೋರೆ ಹೋಗುವ ಬಗ್ಗೆ ವಿವರಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಸೂಚಿಸಿ, ಸಾರ್ವಜನಿಕರಿಗೆ ತಿಳುವಳಿಕೆ ನೀಡುವಂತೆ  ಕಾರ್ಯಾಗಾರದಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿ ಐಪಿಸಿ ಕಾನೂನುಗಳಲ್ಲಿ ಬದಲಾವಣೆಗೊಂಡ ಕಲಂಗಳ ಬಗ್ಗೆ ಮಾಹಿತಿ ನೀಡಿ ಮುಂಬರುವ ದಿನಗಳಲ್ಲಿ ಬದಲಾವಣೆಗೊಂಡ ಕಾನೂನುಗಳ ಅಡಿಯಲ್ಲಿ ಪರಿಣಾಮಕಾರಿ ಕ್ರಮ ಜರುಗಿಸಲು ಸೂಚಿಸಿದರು. ಈ ಕಾಯರ್ಾಗಾರ  ದಿನಾಂಕ 19/02/2014 ರಿಂದ 21/02/2014 ರ ವರೆಗೆ ಯಶಸ್ವಿಯಾಗಿ ನಡೆಸಿ ಮುಕ್ತಾಯಗೊಳಿಸಲಾಯಿತು.      
ಅಫಘಾತ ಪ್ರಕರಣಗಳು
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ:    ದಿನಾಂಕ 21-02-2014 ರಂದು ಬೆಳಿಗ್ಗೆ ಶ್ರೀ ಶಿವಕುಮಾರ ತಂದೆ ಹಣಮಂತ ಮುಗಳಿ ಸಾ: ಸಾಯಿ ಮಂದಿರ ಹತ್ತಿರ   ಗುಲಬರ್ಗಾ  ಮತ್ತು ನಮ್ಮ ಬಡಾವಣೆಯ ಸುರ್ಯಕಾಂತ ಇಬ್ಬರೊ ಬಂಜಾರ ಕ್ರಾಸ ಸಮೀಪವಿರುವ ಜವಾಹರ ಖಾಸಗಿ ಕಾಲೇಜಕ್ಕೆ ಮೋಟಾರ ಸೈಕಲ ನಂಬರ ಕೆಎ-32 ವಾಯಿ-1976ನೇದ್ದರ ಮೇಲೆ ರಾಮಮಂದಿರ ಕ್ರಾಸ ಮುಖಾಂತರವಾಗಿ ಹೋಗುವಾಗ ಭಾಗ್ಯವಂತಿ ನಗರ ಕ್ರಾಸ ಹತ್ತಿರ ಹಿಂದಿನಿಂದ ಬರುತ್ತಿದ್ದ ಟಿಪ್ಪರ ನಂಬರ ಎಮ್.ಹೆಚ್-12 ಡಿಜೆ-5845 ನೇದ್ದರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಮೇಲೆ ಮತ್ತು ನನ್ನ ಮೋಟಾರ ಸೈಕಲ ಮೇಲೆ ಟಿಪ್ಪರ ಚಲಾಯಿಸಿ ಭಾರಿಗಾಯಗೊಳಿಸಿ ಟಿಪ್ಪರ ಸ್ಥಳದಲ್ಲಿ ಬಿಟ್ಟು ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣಗಳು:
ಫರಹತಾಬಾದ ಪೊಲೀಸ್ ಠಾಣೆ :ದಿನಾಂಕ: 21-2-2014 ರಂದು ಫೀರೋಜಾಬಾದ  ಗ್ರಾಮದ ರಾಮಲಿಂಗೇಶ್ವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದೈವಲಿಲೆಯ ಮಟಕಾ ಜೂಜಾಟದ ಅಂಕಿಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಶ್ರೀ ಜಾಲಿಂದರ ಸಿಹೆಚ್‌‌ಸಿ 195 ಫರಹತಾಬಾದ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿ ಮತ್ತು ಇಬ್ಬರು ಪಂಚರನ್ನು ಕರೆಯಿಸಿ ಫೀರೋಜಾಬಾದ ಗ್ರಾಮದ ರಾಮಲಿಂಗೇಶ್ವರ ಗುಡಿಯ ಮುಂದಿನ ಕಟ್ಟೆಯ ಮೇಲೆ ಒಬ್ಬ ಮನುಷ್ಯನು ಕುಳಿತು ಜನರಿಂದ ಹಣವನ್ನು ಪಡೆದುಕೊಂಡು ದೈವಲೀಲೆಯ ಮಟಕಾ ಜೂಜಾಟದ ನಂಬರಗಳನ್ನು ಬರೆದುಕೊಳ್ಳುತ್ತಿರುವದನ್ನು ನೋಡಿ ದಾಳಿ ಮಾಡಿ ಮಟಕಾ ಅಂಕಿಗಳನ್ನು ಬರೆದು ಕೊಳ್ಳುತ್ತಿದ್ದ ಮನುಷ್ಯನನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ವೀರಣ್ಣಾ ತಂದೆ ದೇವಿಂದ್ರಪ್ಪಾ ಮಾಮನಿ ಸಾ: ಫೀರೋಜಾಬಾದ  ಅಂತಾ ತಿಳಿಸಿದ್ದು, ಆತನಿಗೆ ಚೆಕ್ಕ ಮಾಡಿದಾಗ ಆತನ ಹತ್ತಿರ 1) ಒಂದು ಮಟಕಾ ಚೀಟಿ, 2) ಒಂದು ಬಾಲ್‌ ಪೆನ್‌ 3) ಮಟಕಾ ಅಂಕಿಯನ್ನು ಬರೆದುಕೊಂಡಿದ್ದರ ನಗದು ಹಣ 1760/- 4) ಒಂದು ಮೊಬೈಯಲ್ ಫೊನ್ ವಶಪಡಿಸಿಕೊಂಡು ಸದರಿಯವನ ಮೇಲೆ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 22-02-2014 ರಂದು ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಶ್ರೀ ಶ್ರೀನಿವಾಸ ರೂಗಿ ಎ.ಎಸ್.ಐ ಅಫಜಲಪೂರ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೊರಟು, ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ರೇವಪ್ಪ ಕಂಬಾರ ಸಾ: ಅಫಜಲಪೂರ ಎಂದು ತಿಳಿಸಿದ್ದು, ಆತನಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2100/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶ ಪಡಿಸಿಕೊಂಡು ಆತನ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸುಲಿಗೆಕೋರರ ಬಂಧನ: 

ವಾಡಿ ಪೊಲೀಸ್ ಠಾಣೆ: ದಿನಾಂಕ 03-02-2014 ರಂದು ಶ್ರೀ ಮಹ್ಮದ ಇಸ್ಮಾಯಿಲ್ ತಂದೆ ಹಸನಸಾಬ ಹೊಸೂರ ಇವರು ಎಸ್.ಬಿ.ಎಹಚ್ ಬ್ಯಾಂಕ ವಾಡಿಯಿಂದ 6,50000/- ರೂ ಡ್ರಾಮಾಡಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಯಾರೋ ಇಬ್ಬರು ಆಪರಿಚಿತರು ಮೋಟರ್ ಸೈಕಲ ಮೇಲೆ ಬಂದು 6,50,000/- ರೂಪಾಯಿ ಇರುವ ಹಣದ ಬ್ಯಾಗನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿದ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು . ದಿನಾಂಕ 03-02-2014 ರಂದು 6,50,000/- ರೂ ಸುಲಿಗೆಯಾದ ನಂತರ ಫಿರ್ಯಾದಿ ಮತ್ತು ಸಾರ್ವಜನಿಕರ ಮಾಹಿತಿ ಅನುಸರಿಸಿ ಆರೋಪಿಗಳ ಚಹರೆ ಅವರ ಧರಿಸಿದ ಬಟ್ಟೆಗಳು ಬೈಕಿನ ನಂ ಎಮ್.ಎಚ್-24 ಸುಳಿವಿನ ಮೇಲೆ ಶಹಾಬಾದ ಡಿವೈಎಸಪಿ ರವರು 3 ತಂಡಗಳನ್ನು ರಚಿಸಿ  ಯಾದಗೀರಿ, ಗುಲಬರ್ಗಾ, ಚಿತ್ತಾಪೂರ, ಸೇಡಂ, ತಾಂಡೂರ ಕಡೆಗೆ ತಕ್ಷಣ ಆರೋಪಿಗಳನ್ನು ಹಿಡಿಯಲು ಜಾಲ ಬಿಸಿ ಗುಲಬರ್ಗಾಧ ಸ್ಟೇಷನ ರಸ್ತೆಯಲ್ಲಿ ಸಿ.ಪಿ.ಐ ಚಿತ್ತಾಪೂರ , ಪಿ,ಎಸ್,ಐ ವಾಡಿ ಮತ್ತು ಸಿಬ್ಬಂದಿ ದಾಳಿಮಾಡಿ ಆರೋಪಿತರಾದ 1) ಬಾಬು @ ಗೂಗಲ್ ಬಾಬು ತಂ. ಮೋರಿಷ್ ಸಾ: ಕಪರಾಳ ತಿಪ್ಪ ಗ್ರಾಮ ಜಿ: ನೆಲ್ಲೂರ 2) ವಿಕ್ಟರ್ ತಂ. ರಾಮ ಬಾಬು ಸಾ: ಕಪರಾಳ ತಿಪ್ಪ ಗ್ರಾಮ ಜಿ: ನೆಲ್ಲೂರ  ಇವರನ್ನು ದಸ್ತಗೀರ ಮಾಡಿದ್ದು  ಅವರಿಂದ ರೂ  6,42,000/-ರೂ ನಗದು ಹಣ ಮತ್ತು ಬೈಕನ್ನು  ವಶಕ್ಕೆ ಪಡಿಸಿಕೊಂಡಿದ್ದು ವಿಚಾರಣೆ ನಂತರ ಸದರಿಯವರು ಈ ಹಿಂದೆ ಸಹ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಒಪ್ಪಿಕೊಂಡಿದ್ದು .
        ಕಪ್ಪರಾಳ ತಿಪ್ಪಾ ಗ್ಯಾಂಗ್ ಎನ್ನುವ ಹೆಸರಿನಲ್ಲಿ ಬಹಳಷ್ಟು ಬ್ಯಾಂಕುಗಳ ಹತ್ತಿರ ಹಳ್ಳಿಯ ಮುಗ್ದ ಜನರ ಹಣವನ್ನು ದೋಚಿದ ಪ್ರಕರಣಗಳನ್ನು ಈ ಪ್ರಕರಣದಿಂದ ಬೇದಿಸಿದಂತಾಗಿದೆ. ಇದರಿಂದ ಪೊಲೀಸರಿಗೂ ತೆಲೆನೋವಾಗಿ ಪರಿಣಮಿಸಿದ್ದ ಈ ಹೊರ ರಾಜ್ಯದ ಗ್ಯಾಂಗನ್ನು ಹಿಡಿಯುವವಲ್ಲಿ ವಾಡಿ ಠಾಣೆಯ ಅಧೀಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.ಹಿರಿಯ ಅಧಿಕಾಗಳು ವಾಡಿ ಪೊಲೀಸರ ಕಾರ್ಯವನ್ನು  ಶ್ಲಾಘೀಸಿ ಪ್ರಶಂಸೆ ಮಾಡಿರುತ್ತಾರೆ. ಮತ್ತು ಸಾರ್ವಜನಿಕರು ಸಹ ಈ ಒಳ್ಳೆಯ ಕಾರ್ಯವನ್ನು ಶ್ಲಾಘೀಸಿ ಕೃತಜ್ಞತೆ ಹೇಳಿರುತ್ತಾರೆ.
ಹಲ್ಲೆ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ :ದಿನಾಂಕ 21-02-2014 ರಂದು ಶ್ರೀ ಮಲ್ಲಪ್ಪ ತಂ. ಮಾಳಪ್ಪ ಸಾ: ಗೌರ (ಕೆ) ಮತ್ತು ಅವರ ಹೆಂಡತಿ ಶರಣಮ್ಮ ಹಾಗು ಅಣ್ಣನ ಹೆಂಡತಿ ಕವಿತಾಬಾಯಿ ಗಂಡ ಭೀಮಣ್ಣ ಹೊಸಮನಿ ಎಲ್ಲರು ತಮ್ಮ ಹೊಲದಲ್ಲಿನ ಮನೆಯ ಮುಂದೆ ಮಾತಾಡುತ್ತಾ ಕುಳತಿದ್ದೇವು. ಅದೇ ಸಮಯಕ್ಕೆ ರಮೇಶ ರೂಗಿ ಮತ್ತು ಅವರೊಂದಿಗೆ ಇನ್ನು ಇಬ್ಬರು ಕೂಡಿ ನಮ್ಮ ಹತ್ತಿರ ಬಂದು ರಮೇಶನು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಬಡಿಗೆ ತೆಗೆದುಕೊಂಡು ನನಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ರಮೇಶನೊಂದಿಗೆ ಬಂದಿದ್ದ ಇಬ್ಬರು ಸಹ ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪರಿಚಿತ ವ್ಯಕ್ತಿಯ ಶವ ಪತ್ತೆ  
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ|| 20/02/14 ರಂದು ಶ್ರೀ ಶಿವರಾಜ ತಂದೆ ಗೋಪಾಲರಾವ ಗದಲೆಗಾಂವ ಸಾ|| ಆರ್.ಎಸ್. ಕಾಲೋನಿ, ಟಿ.ವಿ. ಸ್ಟೇಶನ ಹತ್ತಿರ , ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಇಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ಕಲ್ಯಾಣ ಮಂಟಪದ ಪಕ್ಕದಲ್ಲಿ ಒಬ್ಬ ಅಪರಿಚಿತ ಮನುಷ್ಯ ಮೃತಪಟ್ಟಿರುತ್ತಾನೆ ಅಂತಾ ಅಂದಾಡುವುದು ಕೇಳಿ ಹೋಗಿ ನೋಡಲು ಕಲ್ಯಾಣ ಮಂಟಪದ ಪಕ್ಕದಲ್ಲಿ 40-45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತ ಪಟ್ಟಿದ್ದು ಈತನು ಬಿಕ್ಷೆ ಬೇಡುತ್ತ ಬಂದು ಕಲ್ಯಾಣ ಮಂಟಪದ ಪಕ್ಕದಲ್ಲಿ ಕುಳಿತಾಗ ಯಾವುದೆ ಒಂದೊ ಕಾಯಿಲೆಯಿಂದ ಸ್ಥಳದಲ್ಲಿಯೇ ಅಕಸ್ಮಿಕವಾಗಿ ಅಪರಿಚಿತ ವ್ಯಕ್ತಿ ಮೃತ ಪಟ್ಟಿರುವಂತೆ ಕಂಡು ಬರುತ್ತದೆ ಕಾರಣ  ಮುಂದಿನ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ್ದು.
ಮೃತ ಅಪರಿಚಿತ ವ್ಯಕ್ತಿಯ ಚಹರಾ ಪಟ್ಟಿ ಈ ಕೆಳಗಿನಂತಿರುತ್ತದೆ.
 ವಯಸ್ಸುಅಂದಾಜು 40 ರಿಂದ 45 ವರ್ಷ, ಎತ್ತರ-  5.5 ಫೀಟ್ , ಕಪ್ಪು ಮಿಸ್ರಿತ ಬಿಳಿ ಕೂದಲು, ಸಾದಾಕೆಂಪು ಗೋದಿ ಬಣ್ಣ, ದುಂಡು  ಮುಖ, ಸಾದಾರಣ ಮೈಕಟ್ಟು ಹೊಂದಿದ್ದು ಮೈಮೇಲೆ ಶರ್ಟ & ಪ್ಯಾಂಟು ಧರಿಸಿದ್ದು.  ಸದರಿ ಅಪರಿಒಚಿತ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುಲಬರ್ಗಾ ಅಥವಾ ಪೊಲೀಸ್ ನಿಯಂತ್ರಣ ಕೋಣೆಗೆ ತಿಳಿಸಲು ಕೋರಲಾಗಿದೆ.

21 February 2014

Gulbarga Dist Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ 19-02-2014 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಶ್ರೀ ಬಸವರಾಜಶಾಂತಾಬಾಯಿಸುಗಲಾಬಾಯಿ ಇವರು ಘಾಟಗೇ ಲೇಔಟದಿಂದ ಸಿದ್ದಾರ್ಥ ನಗರಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಸಿದ್ದಾರ್ಥ ನಗರ ರೋಡ ಮೇಲೆ ಹಾಗು ಅಶೋಕನು ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಎ-6059 ನೇದ್ದನ್ನು ಕಣ್ಣಿ ಮಾರ್ಕೆಟ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಶ್ರೀ ಬಸವರಾಜಗೆ ಮತ್ತು ಶಾಂತಾಬಾಯಿಸುಗಲಾಬಾಯಿ ರವರಿಗೆ ಅಪಘಾತಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಗ್ರಾಮೀಣ ಠಾಣೆ ಗುಲಬರ್ಗಾ : ದಿನಾಂಕ. 20-2-2014ರಂದು  ಶರಣಸಿರಸಗಿ ತಾಂಡಾ ಹತ್ತಿರ ನೀರಿನ ಟ್ಯಾಂಕ ಸಮೀಪ ಶ್ರೀ ಶಿವಶರಣಪ್ಪಾ ತಂದೆ  ಶ್ರೀಮಂತ ಉಪಳಾಂವ ಸಾ;ಶರಣಸಿರಸಗಿ ರವರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಅಫಜಲಪೂರ ಕಡೆಯಿಂದ ಬರುತ್ತಿದ್ದ ಹೀರೋ ಹೊಂಡಾ ಮೋಟಾರ ಸೈಕಲ ನಂ.ಕೆ.ಎ.32 ಇ.ಬಿ7603 ನೆದ್ದರ ಚಾಲಕನು  ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಶಿವಶರಣಪ್ಪನಿಗೆ  ಅಪಘಾತಪಡಿಸಿ ಮೋಟಾರ ಸೈಕಲನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದು ಅಪಘಾತದಲ್ಲಿ ಶಿವಶರಣಪ್ಪರವರಿಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ  ಮೃತ ಪಟ್ಟ ಬಗ್ಗೆ ಶ್ರೀ. ಶ್ರೀಮಂತ ತಂದೆ ಶಿವಶರಣಪ್ಪಾ ಉಪಳಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮೋಟಾರ ಸೈಕಲ ನಂ.ಕೆಎ.32 ಇ.ಬಿ 7603 ನೆದ್ದರ ಚಾಲಕನ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಸ್ಟೇಷನ ಬಜಾರ ಠಾಣೆ : ದಿನಾಂಕ. 04.01.2014 ರಂದು ಸಾಯಾಂಕಾಲ 5.00 ಗಂಟೆ ಸುಮಾರಿಗೆ ಶ್ರೀ ರಾಘವೇಂದ್ರ ರೆಡ್ಡಿ ತಂದೆ ಪುಂಡಲಿಕ ರೆಡ್ಡಿ ಸಾ: ಪಿಡಬ್ಲೂಡಿ ಕ್ವಾಟ್ರಸ್ಸ ಹಳೇ ಜೇವರ್ಗಿ ರಸ್ತೆ ಗುಲಬರ್ಗಾ ರವರು ತಿಮ್ಮಾಪೂರಿ ಸರ್ಕಲದಲ್ಲಿರುವಾಗ ಹಿಂದಿನಿಂದ ಯಾರೋ ಕಳ್ಳರು ಅವರ ಶರ್ಟಿನ ಜೇಬಿನಿಂದ ಅವರ ಐಫೋನ್-5 [IMEI NO. 013550002847712]  ಅ.ಕಿ. ರೂ 45,904/-  ನೇದ್ದನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಪಜಲಪೂರ ಠಾಣೆ: ದಿನಾಂಕ-20/02/2014 ರಂದು ರಾತ್ರಿ 8:30 ಗಂಟೆಗೆ ಬಾಬು ತಂದೆ. ದುಂಡಪ್ಪ ಮೂಲಿಮನಿ ರವರು ಅವರ ತಂದೆಯವವೊಂದಿಗೆ ಮನೆಯ ಹತ್ತಿರ ಮಾತಾಡುತ್ತಾ ಕುಳಿತುಕೊಂಡಿರುವಾಗ ಕಲ್ಯಾಣಿ ತಂದೆ ಪರಸಪ್ಪ ಕುಡಕಿ ಈತನು ಕುಡಿದ ಅಮಲಿನಲ್ಲಿ ತನ್ನ ಕೈಯಲ್ಲಿದ್ದ ಬಡಿಗೆ ತಿರುಗಿಸುತ್ತಾ ಅವಾಚ್ಯವಾಗಿ ಬೈಯುತ್ತಿರುವಾಗ ಕಲ್ಯಾಣಿಗೆ  ಯಾಕ ಸುಮ್ಮ್ ಸುಮ್ಮನೆ ಬೈಯುತ್ತಿ ಮನೆಗೆ ಹೋಗು ಅಂತಾ ಅಂದಿದ್ದಕ್ಕೆ ವಿನಾಕಾರಣ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆದು ರಕ್ತಗಾಯ ಪಡಿಸಿ ತನ್ನ ಹಲ್ಲಿನಿಂದ ಕಚ್ಚಿದ ಕಲ್ಯಾಣಿ ತಂದೆ ಪರಸಪ್ಪ ಕುಡಕಿ ಇವನ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ: 20-02-14 ರಂದು ಶ್ರೀ.ಅಪ್ಪಾರಾಯ ತಂದೆ ಗುರಪ್ಪಾ ಮೇತ್ರೆ ಸಾ: ಮಾದನ ಹಿಪ್ಪರಗಾ ಇವರು ಠಾಣೆಗೆ ಹಾಜರಾಗಿ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ತಾನು ಹಾಗು ತನ್ನ ಮಕ್ಕಳಾದ ಯಲ್ಲಪ್ಪ ತಂದೆ ಅಪ್ಪಾರಾಯ ಮೇತ್ರೆ, ಬೀರಪ್ಪ ತಂದೆ ಅಪ್ಪಾರಾಯ ಮೇತ್ರೆ, ಲಕ್ಷ್ಮಿಬಾಯಿ ಗಂಡ ಅಪ್ಪಾರಾಯ ಮೇತ್ರೆ, ಹಾಗು ತಮ್ಮನಾದ ಶಾಂತಮಲ್ಲ ತಂದೆ ಗುರಪ್ಪ ಮೇತ್ರೆ, ಮತ್ತು ತಮ್ಮನ ಹೆಂಡತಿ  ಸುಗಲಾಬಾಯಿ ಗಂಡ ಶಾಂತಮಲ್ಲ ಮೇತ್ರೆ ಎಲ್ಲರೂ ತಮ್ಮ ಹೊಲದ ಮನೆಯ ಮುಂದೆ ಮಾತನಾಡುತ್ತಾ ಕುಳಿತುಕೊಂಡಾಗ 1] ಶಿವಲಿಂಗಪ್ಪ ತಂದೆ ಗುರಪ್ಪ ಮೇತ್ರೆ 2] ಸಿದ್ದಲಿಂಗ ತಂದೆ ಶಿವಲಿಂಗಪ್ಪ ಮೇತ್ರೆ  3] ರಾಮಣ್ಣ ತಂದೆ ಅಪ್ಪಾರಾಯ ಮೇತ್ರೆ 4] ಆನಂದ ತಂದೆ ಲಾಡಪ್ಪ ಸಾವಳೇಶ್ವರ 5] ಮಹಾದೇವಿ ಗಂಡ ಶೀವಲಿಂಗಪ್ಪ ಮೇತ್ರೆ 6] ಪೀರವ್ವ ಗಂಡ ಶಿವಲಿಂಗಪ್ಪ ಮೇತ್ರೆ 7] ಶಿವಮ್ಮ ಗಂಡ ಅಪ್ಪಾರಾಯ ಮೇತ್ರೆ 8] ಸಿಕಂದರ ತಂದೆ ಇಸ್ಮಾಯಿಲ್ ಹಾರಕೂಡ ಎಲ್ಲರೂ ಕೂಡಿಕೊಂಡು ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಈ ಮಕ್ಕಳಿಗೆ ಜೀವ ಸಹಿತ ಬಿಡಬ್ಯಾಡರಿ ಖಲಾಸ ಮಾಡಿರಿ ಅಂತಾ ಚೀರಾಡುತ್ತಾ ಬಡಿಗೆ, ಕೊಡಲಿಗಳಿಂದ ಹೊಡೆದು ಭಾರಿ ಗಾಗಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.  
ಸುಲಿಗೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 20/02/2014 ರಂದು ಶ್ರೀ.ಮಹಾಂತೇಶ ತಂದೆ ಶಿವಪುತ್ರಪ್ಪ ಮಹಾಂತಪೂರ ಸಾ|| ಶರಣ ನಗರ ಗುಲಬರ್ಗಾ ರವರು ಚನ್ನವೀರ ನಗರದಲ್ಲಿರುವ ತನ್ನ ಗೆಳೆಯನ ಮನೆಗೆ ಓದಲು ನಡೆದುಕೊಂಡು ಕರೆ ಗಾರ್ಡನ ಪಕ್ಕದ ಎಸ್.ಬಿ ಟೆಂಪಲ ರೋಡಿನಿಂದ ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 2-45 ಗಂಟೆ ಸುಮಾರಿಗೆ ಟೆಕಬುರಾನ ದರ್ಗಾದ ಕ್ರಾಸ ಹತ್ತಿರ ಎದರುನಿಂದ ಇಬ್ಬರೂ ಅಪರಿಚಿತರು ಬಂದವರೆ ತಡೆದು ನಿಲ್ಲಿಸಿ ಏ ಮಗನೆ ನಿನ್ನ ಹತ್ತಿರ ಏನುನು ಇದೆ ತಗೆದುಕೊಡು ಇಲ್ಲದಿದ್ದರೆ ನಿನ್ನನ್ನೂ ತಲಾವರದಿಂದ ಹೋಡೆದು ಖಲಾಸ ಮಾಡುತ್ತೇವೆ ಅಂತಾ ಅವರ ಹತ್ತಿರ ಇದ್ದ ತಲವಾರ ತಗೆದು ನನ್ನ ಎದೆಗೆ ಹಚ್ಚಿ ತನ್ನ ಹತ್ತಿರ ಇದ್ದ ಒಂದು ಬಿಳಿಯ ಬಣ್ಣದ ಕಾರಬನ್  ಕಂಪನಿಯ ಮೋಬಾಯಿಲ ಅ.ಕಿ. ರೂ 2000/- ಜೇಬಿಗೆ ಕೈ ಹಾಕಿ ಪರ್ಸ ನಲ್ಲಿಯ 50/- ರೂ ಕಸಿದುಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೆಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.