POLICE BHAVAN KALABURAGI

POLICE BHAVAN KALABURAGI

06 January 2014

Gulbarga District Reported Crimes

ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ :  ಶ್ರೀ ಫಿರೋಜ ತಂ ಮಸ್ತಾನಸಾಬ ಲದಾಫ ಸಾ|| ಕುರಿಕೋಟ ರವರು ದಿನಾಂಕ 05-01-2014 ರಂದು ತಮ್ಮ ಪಂಚರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ಬಾಲಪ್ಪ ಕೂಡಾ ಆತನ ಹೋಟಲದಲ್ಲಿ ಇದ್ದ ಮದ್ಯಾನ 3.45 ಪಿ,ಎಮ್,ಕ್ಕೆ ನಾವು ನಮ್ಮ ಅಂಗಡಿಯಲ್ಲಿ ಕೆಲಸಮಾಡುತ್ತಿದ್ದಾಗ ಅದೆ ವೇಳೆಗೆ ಕಮಲಾಪೂರ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ವಶದಲ್ಲಿದ್ದ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನೇರವಾಗಿ ನಮ್ಮ ಪಂಚರ ಅಂಗಡಿ ಮತ್ತು ಹೋಟಲದಲ್ಲಿ ನುಗ್ಗಿಸಿ ಅಪಘಾತ ಪಡಿಸಿದ್ದರಿಂದ ಹೋಟಲ ಮತ್ತು ಪಂಚರ ಅಂಗಡಿ ಬಿದ್ದು ಹೋಗಿದ್ದು ತನಗೆ ಎದೆಗೆ ಮತ್ತು ಎಡಬುಜಕ್ಕೆ ಬಲಗಾಲಿಗೆ ಭಾರಿ ಒಳಪೆಟ್ಟು ಆಗಿರುತ್ತದೆ ಬಾಲಪ್ಪನಿಗೆ ನೋಡಲಾಗಿ ಹಣೆಯ ಮೇಲೆ ,ಎಡಗೈ, ಎಡಗಾಲಿಗೆ ಪಾದದ ಹತ್ತಿರ ರಕ್ತಗಾಯ ಗಳಾಗಿದ್ದು ಎದೆ ಮತ್ತು ಹೊಟ್ಟೆಗೆ ಭಾರಿ ಒಳಪೆಟ್ಟಾ ಗಿದ್ದು ನಂತರ ಕಾರಿನಲ್ಲಿದ್ದವರಿಗೆ ನೋಡಲಾಗಿ ಒಬ್ಬ ಹೆಣ್ಣುಮಗಳಿಗೆ ಹಣೆಯ ಮೇಲೆ ಬಾರಿ ರಕ್ತಗಾಯವಾಗಿ ರಕ್ತ ಸೊರುತ್ತಿತ್ತು ಕಾರ ಚಾಲಕ ಹಾಗೂ ಉಳಿದ ಇನ್ನೂ ಇಬ್ಬರಿಗೆ ಯಾವುದೆ ಗಾಯಗಳಾಗಿರುವುದಿಲ್ಲಾ ಕಾರ ನಂ ನೋಡಲಾಗಿ ಕೆ,, 39 ಎಮ್, 1610 ಪೋರ್ಡಪೀಗೋ ಕಂಪನಿಯ ಕಾರು ಇದ್ದು ಚಾಲಕನ ಹೆಸರು ತಿಳಿದುಕೊಳ್ಳಲಾಗಿ ಆತ ತನ್ನ ಹೆಸರು ಶಿವಸಾಗರ ತಂ ಶಂಕ್ರೆಪ್ಪ ಮಳಶೇಟ್ಟಿ ಸಾ|| ಹುಮನಾಬಾದ ಅಂತಾ ತಿಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಂಘಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ  02-01-14 ರಂದು ಸಂಜೆ 6-00 ಗಂಟೆಗೆ ಆರೋಪಿತರಾದ 1. ಹುಸೇನ ತಂದೆ ಮಹೆಬೂಬಸಾಬ ಶೇಕ 2. ಆಶ್ಮತ ಬೀ ಗಂಡ ಸಿದ್ಧಿಕಿಮಿಯ್ಯಾ 3. ಚಾಂದತಾರಾ  4. ಉಸ್ಮಾನ ತಂದೆ ಮಹಿಬೂಬ ಶೇಕ 5. ಮಾಲಾನ ಬೀ ಇವರೆಲ್ಲರೂ ಕೂಡಿಕೊಂಡು ಆಟೋ ಕೆಎ 39 3773 ತೆಗೆದುಕೊಂಡು ಅದರಲ್ಲಿ ಶ್ರೀಮತಿ ಮಸ್ತಾನ ಬೀ ಗಂಡ ಹುಸೇನ ಸಾ: ಮಿಸಬಾ ನಗರ ರಿಂಗ ರೋಡ ಗುಲಬರ್ಗಾ ಇವರನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಹಾಕಿಕೊಂಡು ಬಸವ ಕಲ್ಯಾಣ  ತಾಲೂಕಿನ ಧನ್ನೂರ ವಾಡಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ನೀರು, ಕೊಡದೇ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ.  ತಾವು ಕೇಳಿದರೆ ಮಾತ್ರ ಬಿಡುತ್ತೇವೆ ಇಲ್ಲದಿದ್ದರೆ ಖಲಾಷ ಮಾಡುತ್ತೇವೆ ಎಂದು ಜೀವ ಭಯ ಹಾಕಿ  ಕೈಯಿಂದ ಕಾಲಿನಿಂದ ಹೊಡೆ ಬಡಿ ಮಾಡಿ ಮನೆಯ ಹೊರಗಡೆಯಿಂದ ಒಳಗೆ ದಬ್ಬಿರುತ್ತಾರೆ. ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಪಂಡರಿನಾಥ ತಂದೆ ಕಾಶಿನಾಥ ಬೂಟೆ ಸಾ|| ಪಾಪನಾಶ ಗೇಟ್ ಒಳಗಡೆ ಶಿವನಗರ ಬೀದರ ಹಾ.ವ|| ಮನೆ ನಂ.10-2-105 ಗುಡ್ ಲಕ್ ಹಿಂದುಗಡೆ ಆನಂದ ನಗರ ಗುಲಬರ್ಗಾ ರವರು. ದಿನಾಂಕ. 04.01.2014 ರಂದು ಸಾಯಾಂಕಾಲ 7.00 ಗಂಟೆ ಸುಮಾರಿಗೆ ತಮ್ಮ ರೂಮ ಕೀಲಿ ಹಾಕಿಕೊಂಡು ವಿಜಯ ಕರ್ನಾಟಕ ಆಫಿಸಗೆ ಹೋಗಿ ರಾತ್ರಿ 11.00 ಗಂಟೆಗೆ ವಾಪಸ್ಸುರೂಮಿಗೆ ಬಂದು ನೋಡಲಾಗಿ ಬಾಗಿಲ ಕೀಲಿ ಮುರದಿದ್ದುಮತ್ತು ರೂಮಿನಲ್ಲಿ ಬ್ಯಾಗನಲ್ಲಿಟ್ಟಿದ್ದ ನಮ್ಮ ವಿಜಯ ಕರ್ನಾಟಕ ಸಂಪಾದಕರ ಹೆಸರಿನಲ್ಲಿ ಹೊಸದಾಗಿ ಖರಿದಿಸಿ ಛಾಯಾಚಿತ್ರ ತಗೆಯಲು ನನಗೆ ಒದಗಿಸಿದ 1) ಒಂದು ನಿಕಾನ್ ಕಂಪನಿಯ D300ಕ್ಯಾಮರ್ ಅ.ಕಿ|| 85,000/- 2) ಕ್ಯಾಮರಾದ ಫ್ಲ್ಯಾಶ ಅ.ಕಿ|| 18,000/- 3) ಕ್ಯಾಮರಾದ ಒಂದು ಲೆನ್ಸ್ 300 MM ಅ.ಕಿ|| 15,000/- 4) ಕ್ಯಾಮರಾದ ಲೆನ್ಸ್ 18*105 MM  ಅ.ಕಿ|| 18,000/- 5) 15 ಡಿ.ವಿ.ಡಿ ಕ್ಯಾಸೆಟಗಳು ಹೀಗೆ ಒಟ್ಟು ಅ.ಕಿ|| 1,36,000/- ರೂ ಬೆಲೆಬಾಳುವ ವಸ್ತುಗಳು ಮತ್ತು ನನ್ನ ಎಸ್.ಎಸ್.ಎಲ.ಸಿ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣ ಪತ್ರ ಹೀಗೆ ಬ್ಯಾಗ ಸಮೇತ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 January 2014

Gulbarga District Reported Crimes

ಅಪಘಾತ ಪ್ರಕಣಗಳು
ಮಾದನಹಿಪ್ಪರಗಾ ಠಾಣೆ : ಶ್ರೀ  ಶೇಖ ಮಹ್ಮದ ಅಯಾಬ್ ತಂದೆ ಇಸ್ಮಾಯಿಲ್ ಶೇಖ ಇವರು ದಿನಾಂಕ 03-01-2014 ರಂದು ಮದ್ಯಾಹ್ನ 02:00 ಗಂಟೆಯ ಸುಮಾರಿಗೆ ಹಿರೋಳ್ಳಿ ಕ್ರಾಸ ಸಾಗರ ದಾಬಾದ ಹತ್ತಿರ ರಸ್ತೆಯ ಬದಿಯಲ್ಲಿ ನಿಂತ ನನ್ನ ಲಾರಿ ನಂ: AP:02 W-4758 ನೇದ್ದಕ್ಕೆ ಹಿಂದಿನಿಂದ ಬಂದ ಲಾರಿ ನಂ:  MH:12 HD-5980 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ರಸ್ತೆಯ ಪಕ್ಕದಲ್ಲಿ ನಿಂತ ನನಗೂ ಡಿಕ್ಕಿ ಪಡಿಸಿ ಅಫಘಾತ ಮಾಡಿದರಿಂದ ನನ್ನ ಭುಜದ ಎರಡು ಕಡೆ,ಹಿಂದುಗಡೆ ಸೊಂಟದ ಕೇಳಭಾಗದಲ್ಲಿ ಎಡಗಾಲಿನ ತೊಡೆಯ ಮೇಲೆ, ಎಡಗಡೆಯ ಕಿವಿಯ ಮೇಲ್ಬಾಗ ತಲೆಯಲ್ಲಿ ಬಾರಿ ರಕ್ತಗಾಯವಾಗಿರುತ್ತದೆ. ಅಪಘಾತ ಮಾಡಿ ತನ್ನ ಲಾರಿಯನ್ನು  ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಕುಮಾರ ತಂದೆ ಪರೀಕ್ಷಿತ ರವರು ದಿನಾಂಕ 04-01-2014 ರಂದು ಮದ್ಯಾಹ್ನ 3-00 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಂಬರ ಕೆಎ-32 ವಿ-4319 ರ ಮೇಲೆ ಕೆಬಿಎನ್ ಆಸ್ಪತ್ರೆಯಿಂದ ಜಗತ ಸರ್ಕಲ ಮುಖಾಂತರ ಸುಪರ ಮಾರ್ಕೆಟ ಕಡೆಗೆ ಹೋಗುತ್ತಿರುವಾಗ ನ್ಯೂ ವ್ಯಾದಿರಾಜ ಲಾಡ್ಜ ಎದುರಿನ ರೋಡಿನ ಮೇಲೆ ಗಾಜಿಪೂರ ರೋಡ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ-32 ಇಸಿ-6396 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸುಪರ ಮಾರ್ಕೆಟ ಕಡೆಗೆ ಹೋಗಲು ತಿರುಗಿಸುತ್ತಿದ್ದಾಗ ಫಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗೆ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಈರಣ್ಣಾ ತಂದೆ ತಿಮ್ಮದಾಸಪ್ಪ ಪೂಜಾರ  ಸಾ: ಪೊಲಾಯಾಪಲ್ಲಿ ತಾ: ಕಲ್ಲೆನದುರ್ಗಾ ಜಿ: ಅನಂತಪೂರ ಆಂದ್ರಪ್ರದೇಶ ಹಾ:ವ: ರಾಮಮಂದಿರ ರಿಂಗ ರೋಡ ಹತ್ತಿರ ಗುಲಬರ್ಗಾ  ರವರು ದಿನಾಂಕ 04-01-2014 ರಂದು ಬೆಳಿಗ್ಗೆ 8-15 ಗಂಟೆ ಸುಮಾರಿಗೆ ತನ್ನ ಮೋಟಾರ ಸೈಕಲ ನಂಬರ ಕೆಎ-43 ಕೆ-3628 ರ ಮೇಲೆ ತಿಮ್ಮರಾಯಪ್ಪ ತಂದೆ ತಿಮ್ಮರಾಯಪ್ಪ ಇತನನ್ನು ತನ್ನ ಮೊಟಾರ ಸೈಕಲ ಹಿಂದುಗಡೆ ಕೂಡಿಸಿಕೊಂಡು ಆರ್.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ರಾಮ ಮಂದಿರ ರಿಂಗ ರೋಡ ಹತ್ತಿರ ಮೋಟಾರ ಸೈಕಲ ಮೇಲೆ ರೋಡ ಕ್ರಾಸ್ ಮಾಡುತ್ತಿದ್ದಾಗ ಹೈಕೋರ್ಟ ರೋಡ ಕಡೆಯಿಂದ ಕಾರ ನಂಬರ ಎಮ್.ಹೆಚ್-12 ಬಿಜಿ-4859 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಫಿರ್ಯಾದಿ ಕುಳಿತು ಹೋಗುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಫಿರ್ಯಾದಿಗು ಮತ್ತು ತಿಮ್ಮರಾಯನಿಗೆ ಗಾಯಗೊಳಿಸಿ ಕಾರ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸಂಗೀತಾ ಗಂಡ ಅರುಣಕುಮಾರ ಗೌನಳ್ಳಿ ಸಾ:ಸಂತೋಷ ಕಾಳೆ ಮೈಲ್ಲಾರಲಿಂಗೇಶ್ವರ ಗುಡಿ ಹತ್ತಿರ ಜಗತ ಗುಲಬರ್ಗಾ. ಇವರ ಗಂಡನಾದ ಅರುಣ ಕುಮಾರ ಇತನು ಮದುವೆಯಾದಾಗಿನಿಂದಲೂ ತವರು ಮನೆಯಿಂದ 3 ಲಕ್ಷ ರೂ. ಹಣ  ತೆಗೆದುಕೊಂಡು ಬರುವಂತೆ ಹಾಗೂ ನೀನು ಬೇರೆಯವರೊಂದಿಗೆ ಅನೈತಿಕ ಸಂಬಂದ ಹೊಂದಿರುವೆ ಅಂತಾ ದಿನಾಲೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುವದಲ್ಲದೇ ಇದಕ್ಕೆ ನನ್ನ ಅತ್ತೆಯಾದ ಪಾರ್ವತಿ ಮಾವ ಧರ್ಮರಾಜ ಮೈದುನರಾದ ವಿಜಯಕುಮಾರ, ಉದಯಕುಮಾರ, ಸಂಜೀವ ಕುಮಾರ ಹಾಗೂ ನಾದಿನಿಯಾದ ಕನ್ಯಾ ಕುಮಾರಿ ಹಾಗೂ ಶಿವರಾಯ , ನಾಗಮ್ಮ ,ವಿಶ್ವನಾಥ, ಮಲ್ಲಿಕಾರ್ಜುನ  ಸುಭಾಷ , ಕನ್ಯಾಕುಮಾರಿ ಇವರೆಲ್ಲರೂ ನನ್ನ ಗಂಡನಿಗೆ ಪ್ರೊತ್ಸಾಹ ಕೊಟ್ಟಿದ್ದಲ್ಲದೇ ನನಗೆ ಕಿರುಕುಳ ಕೊಟ್ಟಿರುತ್ತಾರೆ. ದಿನಾಂಕ: 04.01.2014 ರಂದು 10.00 ಎ.ಎಮ್ ಕ್ಕೆ ಮೇಲೆ ನಮೂದಿಸಿದವರೆಲ್ಲರೂ ನಮ್ಮ ಮನೆಗೆ ಬಂದು ಅವಾಚ್ಯಶಬ್ದಗಳಿಂದ ಬೈದು ಎಷ್ಟು ಸಲ ಹೇಳಬೇಕು ತವರು ಮನೆಯಿಂದ ಹಣ ತೆಗೆದುಕೊಂಡು ಬಾ ಅಂದರೆ ನಮ್ಮ ಮಾತಿಗೆ ಬೆಲೆ ಕೊಡದೇ ಸುಮ್ಮನೇ ಕುಳಿತಿರುವಿ ಅಂತಾ ಕೈಯಿಂದ ಹೊಡೆ ಬಡೆ ಮಾಡಿ ನನ್ನ ಮಗನಾದ ಪ್ರಜ್ವಲ ಕುಮಾರನಿಗೆ ಜಬರದಸ್ತಿಯಿಂದ ತೆಗೆದುಕೊಂಡು ಹೋಗಿರುತ್ತಾರೆ. ಈ ವಿಷಯ ಯಾರಿಗಾದರೂ ತಿಳಿಸಿದ್ದಲ್ಲಿ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

04 January 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 02-01-2014 ರಂದು 08-30 ಪಿ.ಎಮ್ ಕ್ಕೆ ದತ್ತಾತ್ರಾಯ ತಂದೆ ಶರಣಪ್ಪಾ ಹೊನಗುಂಟಿ, ಸಾಃ ಗಂಗಾ ನಗರ ಗುಲಬರ್ಗಾ ರವರು ಮತ್ತು  ತನ್ನ ಗೆಳೆಯ ಮಹಾದೇವ ಇಬ್ಬರು ಕೂಡಿ ಮೋಟಾರು ಸೈಕಲ ನಂ. ಕೆ.ಎ 32 ಕೆ 4636 ನೇದ್ದರ ಮೇಲೆ ಶಹಾಬಜಾರ ನಾಕಾ ರೋಡಿಗೆ ಇರುವ ಖರ್ಗೆ ಕಾಲೇಜ ಹತ್ತಿರ ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32 ಎ 2805 ನೇದ್ದರ ಚಾಲಕನು ತನ್ನ ಅಟೋರಿಕ್ಷಾ ಪ್ರಕಾಶ ಟಾಕೀಸ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ಪಾದಕ್ಕೆ ಮತ್ತು ಕಪಗಂಡಿ ಕೆಳಗಡೆ ಬಲಗೈ ಮೊಳಕೈ ಮತ್ತು ಬೆರಳುಗಳಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಆಸೀಫ ರಹೆಮಾನ ತಂದೆ ರುಕ್ನೊದ್ದಿನ ಇವರು ಹುಟ್ಟಿನಿಂದಲೆ ಮೂಕನಾಗಿರುತ್ತಾನೆ ಮಾತನಾಡಲಿಕೆ ಬರುವದಿಲ್ಲಾ ಅಂತಾ ಗೊತ್ತಾಗಿ ಅವರ ಹತ್ತಿರವಿದ ಅವರ ತಾಯಿ ಖುರ್ಷಿದ ಬಾನು ಗಂಡ ರುಕ್ನೊದಿನ ಇವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದರೆ. ದಿನಾಂಕ 03-01-2014 ರಂದು ಬೆಳಿಗ್ಗೆ 9-30 ಗಂಟೆಗೆ ಫಿರ್ಯಾದಿ ಮಗನಾದ ಆಸೀಫ ರಹೆಮಾನ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-33 ಹೆಚ್-4738 ನೇದ್ದನ್ನು ರೇಲ್ವೆ ಸ್ಟೇಶನ ಕಡೆಯಿಂದ ಐವಾನ ಈ ಷಾಯಿ ರೋಡ ಕಡೆಗೆ ತಮ್ಮ ಕಾಲೇಜಕ್ಕೆ ಹೋಗುತ್ತಿದ್ದಾಗ ಹೊಸ ಐವಾನ ಈ ಷಾಯಿ ಎದುರು ರೋಡಿನ ಮೇಲೆ ಸ್ಟೇಶನ ರೋಡ ಕಡೆಯಿಂದ ಲಾರಿ ನಂಬರ ಎಮ್.ಹೆಚ್.-15 ಬಿಜೆ-3645 ರ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಲಾರಿ ಅಲ್ಲೆ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ತಾ ಬಸವೇಶ್ವರ ನಗರ ಠಾಣೆ : ಶ್ರೀಮತಿ ಬಸಮ್ಮ ಗಂಡ ಬಸವರಾಜ ಸಾಃ ಎಂ.ಬಿ ನಗರ ಗುಲಬರ್ಗಾ ರವರು ದಿನಾಂಕ 03-01-2014 ರಂದು ಮುಂಜಾನೆ 09:00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಶ್ರೀದೇವಿ, ನಾಗಮ್ಮ ಇವರು ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈದು  ಎಲ್ಲಾ ಮಂದಿ ಮುಂದ ಬಿ.ಸಿ ಹಣ ಕೇಳಿ ನನ್ನ ಮರ್ಯಾದೆ ತೆಗೆದಿದಿ ಅಂತಾ ಚಿರುಡುತ್ತಿದ್ದಾಗ ಮನೆಯ ಹೊರಗೆ ಬಂದು ಏಕೆ ಅಂತಾ ಕೇಳುತ್ತಿರುವಾಗ ಶ್ರೀದೇವಿ ಇವಳು ನನ್ನನ್ನು ತಡೆದು ನಿಲ್ಲಿ ನನ್ನ ತಲೆಯ ಕೂದಲನ್ನು ಹಿಡಿದು ಜಗ್ಗಿ ನನ್ನ ಮುಖದ ಮೇಲೆ ಕೈಯಿಂದ ಹೊಡೆದು ದು:ಖಾಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ತಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.