POLICE BHAVAN KALABURAGI

POLICE BHAVAN KALABURAGI

28 November 2013

Gulbarga District Reported Crimes

ಸುಲಿಗೆ ಪ್ರಕರಣ : 
ಬ್ರಹ್ಮಪೂರ ಠಾಣೆ : ಶ್ರೀ. ರಘುರಾಜ ತಂದೆ ನಾಗಪ್ಪ ಮಡಿವಾಳ ಸಾ|| ಗಣೇಶ ನಗರ ಜಿ.ಡಿ.ಎ ಕಾಲೋನಿ ಬಾರೆಹಿಲ್ಸ್ ಗುಲಬರ್ಗಾ ರವರು ದಿನಾಂಕ: 26-11-2013 ರಂದು 4:00 ಪಿ.ಎಮ್.ಸುಮಾರಿಗೆ ತಹಸೀಲ ಕಾರ್ಯಾಲಯದಿಂದ ಹೊರಗಡೆ ಬರುತ್ತಿರುವಾಗ ಎದರುನಿಂದ ಇಬ್ಬರೂ ಹಿರೋ ಹೊಂಡಾ ಸೈಕಲ್ ಮೋಟರ ಸೈಕಲ ಮೇಲೆ ಬಂದವರೆ ಏ ಭೋಸಡಿ ಮಗನೆ ನಿಲ್ಲು ಅಂತಾ ಬೈದಾಗ ಅವರಿಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದಾಗ ಅವರಿಬ್ಬರೂ ನನಗೆ ಗಟ್ಟಿಯಾಗಿ ಹಿಡಿದು ಒಬ್ಬನು ಚಾಕು ತೋರಿಸಿ ನನ್ನ ಪ್ಯಾಟಿನ ಜೇಬಿನಲ್ಲಿದ್ದ ಹಣ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಚಿರಾಡಲು ಅಲ್ಲಿಯ ತಸೀಲ ಕಾರ್ಯಾಲಯದ ಹತ್ತಿರ ನಿಂತ ಮೈನೋದ್ದೀನ ಮತ್ತು ಧನರಾಜ ಅನ್ನುವವರು ಬರುವದನ್ನು ನೋಡಿ ಬಿಟ್ಟು ಓಡಿ ಹೊಗಿರುತ್ತಾರೆ. ಅವರನ್ನು ನಾವು 3 ಜನ ಕೂಡಿಕೊಂಡು ಹುಡಕಾಡಿದರು ಸಿಕ್ಕಿರುವದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ : ಶ್ರೀಮತಿ. ಚೆನ್ನಮ್ಮ ಗಂಡ ಸಂತೋಷ ಕಿಣ್ಣಿ ಸಾ:ರಾಜಾಪೂರ ತಾ:ಚಿತ್ತಾಪೂರ, ಹಾ.ವ:ಬಟಗೆರಾ(ಕೆ) ಗ್ರಾಮ, ತಾ:ಸೇಡಂ ಇವರನ್ನು 10 ವರ್ಷಗಳ ಹಿಂದೆ ರಾಜಾಪೂರ ಗ್ರಾಮದ ಸಂತೋಷ ಕಿಣ್ಣಿ ಇವರಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಬಳಿಕ ಒಂದು ವರ್ಷ ಅಲ್ಲಿಯೇ ಇದ್ದು ನಂತರ ತವರು ಮನೆ ಬಟಗೆರಾ(ಕೆ) ಗೇಟಗೆ ಬಂದು ವಾಸವಾಗಿದ್ದು ಇರುತ್ತದೆ. ಇಲ್ಲಿ ನನ್ನ ಗಂಡ ಕುಡಿತ ಚಟ ಹಚ್ಚಿಕೊಂಡು, ವಾಸವದತ್ತಾ ಸಿಮೆಂಟ್ ಕಂಪನಿಯಲ್ಲಿ ಕೆಲಸದಿಂದಲೂ ತೆಗಿಸಲ್ಪಟ್ಟು ನಿರುದ್ಯೋಗಿಯಾಗಿ, ವಿಪರೀತ ಸಾಲ ಮಾಡಿಕೊಂಡಿದ್ದರು, ನಮ್ಮ ತಂದೆಯವರು ಸಾಲ ತೀರಿಸಿದ್ದರು, ನನ್ನ ಗಂಡ, ನನಗೆ ಕೆಲಸ ಇಲ್ಲ ನಾನು ನಿರುದ್ಯೋಗಿ ಇದ್ದೇನೆ ಅಂತ ಅಂದಾಡುತ್ತಿದ್ದರು. ಹೀಗಿದ್ದು ದಿನಾಂಕ :27-11-2013 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ನಾನು ನನ್ನ ಅಣ್ಣ ತಮ್ಮಕ್ಕಿಯವರ ಮನೆಗೆ ಹೋದಾಗ ನನ್ನ ಗಂಡ ಒಬ್ಬನೇ ಮನೆಯಲ್ಲಿ ಇದ್ದರು. ಮರಳಿ ಸಾಯಂಕಾಲ 05-30 ಕ್ಕೆ ಮನೆಗೆ ಬಂದಾಗ ನನ್ನ ಗಂಡ ಮನೆಯ ಬಾಗಿಲು ಮುಚ್ಚಿಕೊಂಡಿದ್ದರು, ನಾನು ಎಷ್ಟು ಕೂಗಿದರೂ ಬಾಗಿಲು ತೆರೆಯಲಿಲ್ಲ ನಂತರ ನಮ್ಮ ಅಣ್ಣಂದಿರಾದ ನಾಗೇಶ ಮತ್ತು ಶಂಕರ ಇವರಿಗೆ ಕರೆಯಿಸಿ ಬಾಗಿಲು, ಕಿಡಕಿ ಮುರಿದು ಒಳಗೆ ನೋಡಲು ನನ್ನ ಗಂಡ ಸಂತೋXಷ ಇವರು ಕೆಲಸವಿಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ಸೀರೆಯಿಂದ ಫ್ಯಾನಿಗೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ರೇಣುಕಾ ಗಂಡ ಶಿವಪುತ್ರ ಸಾಮನೆ ನಂ 161 ಎ ಗ್ರಾಮೀಣ ಲೈನ ರವರು ಪತಿಯಾದ ಶಿವಪುತ್ರ ರವರು ದಿನಾಂಕ 27-11-2013 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆಎ-37 ಹೆಚ್-8167 ರ ಮೇಲೆ ಹೋಗುವಾಗ ಸರಕಾರಿ ಕನ್ಯಾ ಕಾಲೇಜು ಮತ್ತು ಹಳೆ ಡಿ.ಪಿ.ಓ ಮಧ್ಯದ ರೋಡಿನಲ್ಲಿ ಹಿಂದಿನಿಂದ ಮೋಟಾರ ಸೈಕಲ ನಂ ಕೆಎ-32 ಆರ್-3872 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಪೆಟ್ಟುಗೊಳಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 November 2013

Gulbarga District Reported Crimes

ಕೊಲೆ ಪ್ರಕರಣ :
ಮಾದನ ಹಿಪ್ಪರಗಾ ಠಾಣೆ : ಶ್ರೀ.ಸಿದ್ದಾರಾಮ ತಂದೆ ಶಿವಲಿಂಗಪ್ಪಾ ಕಲಶಟ್ಟಿ ಸಾ: ನಾಗಲೇಗಾಂವ ಇವರ ಅಣ್ಣ-ತಮ್ಮಕೀಯ ಹಾಗೂ ನಮ್ಮೂರಿನ ನಾಮದೇವ ತಂದೆ ಸಿದ್ರಾಮ ಗೋಡಕೆ ಇವರ ಮದ್ಯ ಹಿರೋಳ್ಳಿ ಸೀಮಾಂತರ ಹೊಲ ಸರವೆ ನಂ: 133,144 ರ ಸಂಬಂಧವಾಗಿ ತಕರಾರು ಇದ್ದು ಇಬ್ಬರಲ್ಲಿ ವೈಮನಸ್ಸು ಇರುತ್ತದೆ. ಹೀಗಿದ್ದು ಇಂದು ದಿನಾಂಕ 26-11-2013 ರಂದು ಮದ್ಯಾಹ್ನ 12 ಗಂಟೆಗೆ ನಾನು ಮತ್ತು ನನ್ನ ಅಣ್ಣ-ತಮ್ಮಕೀಯವರು ಕೂಡಿ ನಾಮದೇವ ಗೋಡಕೆ ರವರ ಕೊಂಪೀ ಮನೆ ಹತ್ತಿರ ಹೊಲದ ಸಮಸ್ಯೆ ಬಗೆಹರಿಸಿಕೊಳ್ಳಲು ಹೋಗಿದ್ದಾಗ ನಮ್ಮಿಬ್ಬರಲ್ಲಿ ವಿವಾದವಾಗಿದ್ದು  1) ಸಿದ್ದಾರಾಮ ತಂದೆ ನಾಮದೇವ ಗೋಡಕೆ 2) ನಾಮದೇವ ತಂದೆ ಸಿದ್ದಾರಾಮ ಗೋಡಕೆ 3) ದತ್ತಾತ್ರೇಯ ತಂದೆ ಸಿದ್ದಾರಾಮ ಗೋಡಕೆ 4) ಸುವರ್ಣ ತಂದೆ ನಾಮದೇವ ಗೋಡಕೆ 5) ಶಾರದಾಬಾಯಿ ಗಂಡ ನಾಮದೇವ ಗೋಡಕೆ 6) ರಮಾಬಾಯಿ ಗಂಡ ದತ್ತಾತ್ತೇಯ ಗೋಡಕೆ ಮತ್ತು ಸರುಬಾಯಿ ಗಂಡ ದತ್ತಾತ್ತೇಯ ಗೋಡಕೆ ಎಲ್ಲರೂ ಸಾ: ನಾಗಲೇಗಾಂವ ಇವರು ಕೂಡಿಕೊಂಡು ನಾಮದೇವ ಇತನು ಕೊಡಲಿಯಿಂದ ಶರಣಪ್ಪನ ತಲೆಗೆ ಜೋರಾಗಿ ಹೊಡೆದು ರಕ್ತಗಾಯ ಮಾಡಿರುತ್ತಾನೆ ಮತ್ತು ಸಿದ್ದಾರಾಮ ಗೋಡಕೆ ಇತನು ಸಿದ್ರಾಮಪ್ಪಾ ತಂದೆ ಮಾರುತಿ ಕಲಶಟ್ಟಿ ಇವನ ತಲೆಗೆ ಜೋರಾಗಿ ಹೊಡೆದಿದ್ದರಿಂದ ಹೆಚ್ಚಾಗಿ ರಕ್ತಸ್ರಾವವಾಗಿ ಸ್ಥಳದಲ್ಲಿಯೆ ಮೃತ ಪಟ್ಟಿರುತ್ತಾನೆ. ದತ್ತಾತ್ರೇಯ ಇತನು ಚಂದ್ರಕಾಂತನ ತಲೆಗೆ ಮೂಗಿಗೆ ತೊಡೆಗೆ ಕೊಡಲಿಯಿಂದ ಹೊಡೆದು ಗಾಯ ಮಾಡಿರುತ್ತಾನೆ. ಸಿದ್ದಾರಾಮ ಗೋಡಕೆ ತನ್ನ ಕೈಯಲ್ಲಿದ ಕೊಡಲಿಯಿಂದ ಚಂದ್ರಮನ ತಲೆಗೆ ಹೊಡೆದಿರುತ್ತಾನೆ. ಆಗ ನಾನು ಬಿಡಿಸಲು ಹೋದಾಗ ನನಗೂ ಸಹ ದತ್ತಾತ್ರೇಯನು ಕೊಡಲಿಯಿಂದ ನನ್ನ ಬಲಗೈ ಅಂಗೈಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಶಾರದಾಬಾಯಿ ಕೊಯಿತಾದಿಂದ ಶರಣಪ್ಪನಿಗೆ ಹೊಡೆದಿರುತ್ತಾಳೆ.ರಮಾಬಾಯಿ ಮತ್ತು ಸರುಬಾಯಿ ಖರದಪುಡಿ ನಮ್ಮ ಕಣ್ಣಿಗೆ ಎರೆಚ್ಚಿರುತ್ತಾಳೆ. ನಾಮದೇವ ಮತ್ತು ಅವನ ಸಂಗಡ ಇದ್ದವರು ಕೂಡಿ ಸಿದ್ರಾಮಪ್ಪಾ ಇವರಿಗೆ ಕೊಲೆ ಮಾಡಿ ನಮ್ಮ ಮೇಲೆ ಮಾರಣಾಂತೀಕ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸೇಡಂ ಠಾಣೆ : ಶ್ರೀ ಶಿವರಾಯ ತಂದೆ ಸಿದ್ರಾಮಪ್ಪ ಕೆಳಗಿನಮನಿ. ಸಾ:ಹಣಮನಳ್ಳಿ. ತಾ: ಸೇಡಂ ದಿನಾಂಕ: 26-11-2013 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ತಮ್ಮನಾದ ರಾಜು ತಂದೆ ಸಿದ್ರಾಮಪ್ಪ ಈತನು ಬಂದು ತಿಳಿಸಿದ್ದೆನೆಂದರೆ ನನಗೂ ಹಾಗೂ ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಹೂಗಾರ ಈತನಿಗೂ ಇಂದು ಸೇಡಂ ಪಟ್ಟಣದಲ್ಲಿ ಟಂಟಂ ಪಾಳೆ ನಿಲ್ಲಿಸುವ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರಿಂದ ನಾನು ಊರಿಗೆ ಬಂದ ಬಳಿಕ ಊರಲ್ಲಿಯೂ ಸಹ ನನಗೆ ಮಲ್ಲಿಕಾರ್ಜುನ ಹೂಗಾರ ಹಾಗೂ ಅವರ ಮನೆಯವರು ಕೂಡಿಕೊಂಡು ಹೊಡಿಬಡಿ ಮಾಡಿರುತ್ತಾರೆ ಅಂತಾ ತಿಳಿಸಿದನು. ಆಗ ನಾನು ಈ ವಿಷಯದ ಬಗ್ಗೆ ಮಲ್ಲಿಕಾರ್ಜುನ ಇವರ ಮನೆಯವರಿಗೆ ವಿಚಾರಿಸೋಣ ಅಂತಾ ಮನೆಯಿಂದ ಹೊರಟಾಗ ನಮ್ಮೂರ ಅಗಸಿ ಹತ್ತಿರ ಕುಳಿತಿದ್ದ 1)ನಾಗೇಂದ್ರಪ್ಪ ತಂದೆ ಮಹಾದೇವಪ್ಪ ಹೂಗಾರ, 2)ಶಿವಕುಮಾರ ತಂದೆ ಮಹಾದೇವಪ್ಪ ಹೂಗಾರ, 3)ತಿಪ್ಪಣ್ಣ ತಂದೆ ಮಹಾದೇವಪ್ಪ ಹೂಗಾರ ಮತ್ತು 4) ಮಹಾದೇವಪ್ಪ ತಂದೆ ಮಲ್ಲಪ್ಪ ಕೊಟ್ರಕಿ 5) ಮಲ್ಲಿಕಾರ್ಜುನ ತಂದೆ ತಿಪ್ಪಣ್ಣ ಹೂಗಾರ ಇವರುಗಳ ಪೈಕಿ ನಾಗೇಂದ್ರಪ್ಪ ಹೂಗಾರ ಈತನಿಗೆ ನಮ್ಮ ತಮ್ಮನಿಗೆ ಏಕೆ ಹೊಡೆದಿರುವಿರಿ ಏನು ತಪ್ಪು ಮಾಡಿದ್ದಾನೆ ಅಂತಾ ಕೇಳಿದ್ದಕ್ಕೆ ಆಗ ಅವರೆಲ್ಲರೂ ಕೂಡಿಕೊಂಡು ಅವಾಚ್ಯ ಶ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ ಹಾಕಿ ಹೊಡೆಬಡೆ ಮಾಡಿ ಛಾಜುವಿನಿಂದ ಹೊಡೆದು ರಕ್ತಗಾಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 22-11-2013  ರಂದು 02-00 ಪಿ.ಎಮ್ ಕ್ಕೆ ಶ್ರೀ ಕಪಿಲದೇವ ತಂದೆ  ಚಂದ್ರಕಾಂತ ಚಕ್ರವರ್ತಿ, ಸಾಃ ನಿಂಬರ್ಗಾ, ತಾಃ ಆಳಂದ ರವರು ಸೇಡಂ ರೋಡಿಗೆ ಇರುವ ವಾತ್ಸಲ್ಯ ಆಸ್ಪತ್ರೆಯ ಎದರುಗಡೆ ರೋಡಿನ ಮೇಲೆ ತನ್ನ ಹೊಂಡಾ ಎಕ್ಟೀವಾ ನಂ. ಕೆ.ಎ 32 ಇ.ಡಿ 3922 ನೇದ್ದನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕಡೆಯಿಂದ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32  3434 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿಯ ಮೋಟಾರ ಸೈಕಲಕ್ಕೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 November 2013

Gulbarga District Reported Crimes

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಬಿದರಿ ಮಹ್ಮದ ಅಕ್ತರ ಸಾ|| ಮನೆ ನಂ: 1-1165/5ಸಿ ಅಕ್ತರ ಕಾಟೇಜ ಗಾಲಿಬ ಬಲ್ಡಿಂಗ್ ಐ-ವಾನ-ಶಾಹಿ ಏರಿಯಾ ಗುಲಬರ್ಗಾ ರವರು ದಿನಾಂಕ  26-11-2013 ರಂದು ಮದ್ಯಾಹ್ನ 1213 ಗಂಟೆಯ ಸುಮಾರಿಗೆ ತಾವು ಸೂಪರ್ ಮಾರ್ಕೆಟನಲ್ಲಿ ಇರುವ ಕೆನರಾ ಬ್ಯಾಂಕನಲ್ಲಿ ಹೊಗಿ ಹಣ ಡ್ರಾ ಮಾಡಿಕೊಂಡು ಬ್ಯಾಂಕಿನಲ್ಲಿಯೆ ಕುಳಿತು ಹಣ ಎಣಿಸುವಾಗ ಯಾರೋ ಇಬ್ಬರೂ ಅಪರಿಚಿತರು ಬಂದು ಅಕ್ಕ ಪಕ್ಕದಲ್ಲಿ ಕುಳಿತು ಹಣ ಎಣಸಿಕೊಡುವ ನೇಪದಲ್ಲಿ ನೋಟಿನ ಕಟ್ಟಿನಲ್ಲಿಯ 37,000/- ಸಾವಿರ ರೂಪಾಯಿ ಮರವು ಮಾಡಿ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.