POLICE BHAVAN KALABURAGI

POLICE BHAVAN KALABURAGI

23 September 2013

ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀಮತಿ ಸಂಪೂರ್ಣ ಗಂ ಸಂಜೀವಕುಮಾರ ಗುಡೂರ ಸಾ : ಬಕ್ಕಚೌಡಿ ತಾ:ಜಿ: ಬೀದರ ಇವರ 6 ವರ್ಷದ ಮಗಳು  ತಮ್ಮೂರಿನ ಸರಕಾರಿ ಶಾಲೆಯಲ್ಲಿ 1 ನೇ ತರಗತಿಯಲ್ಲಿ ವಿದ್ಯಾ ಅಭ್ಯಾಸ ಮಾಡುತ್ತಿದ್ದು ಸುಮಾರು 3 ತಿಂಗಳ ಹಿಂದೆ ಮಹಾಗಾಂವ ಕ್ರಾಸದಲ್ಲಿರುವ ಚಾಣಕ್ಯಾ ಕಾಂಪಿಟೇಟ್ವಿ ವಸತಿ ಶಾಲೆಯಲ್ಲಿ ಕೋಚಿಂಗ ಕ್ಲಾಸ ಸಲುವಾಗಿ ಪ್ರವೇಶ ಪಡೆದಿದ್ದು ಇರುತ್ತದೆ ಈಗ ಸೂಮಾರು 12-13 ದಿವಸಗಳಿಂದ ಪಲ್ಲವಿ ಇವಳು ತನಗೆ ಹೊಟ್ಟೆ ಬೇನೆಯಾಗುತ್ತಿದೆ ಅಂತಾ ತಿಳಿಸಿದ್ದರಿಂದ ಅವಳಿಗೆ ಅಲ್ಲಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡಿಸಿದ್ದು ಇರುತ್ತದೆ ಈಗ ಶಾಲೆಯಲ್ಲಿ ಅರ್ದ ವಾರ್ಷಿಕ ಪರೀಕ್ಷೆ ಇರುತ್ತವೆ ಅಂತಾ ತಮ್ಮೂರಿನ ಶಾಲೆಯ ಶಿಕ್ಷಕರು ತಿಳಿಸಿದ್ದರಿಂದ ನಿನ್ನೆ ದಿನಾಂಕ 21-09-2013  ರಂದು ತಾನು ಮಹಾಗಾಂವ ಕ್ರಾಸಗೆ ಬಂದು ಚಾಣಕ್ಯಾ ವಸತಿ ಶಾಲೆಯಿಂದ ತನ್ನ ಮಗಳಿಗೆ ಊರಿಗೆ ತೆಗೆದುಕೊಂಡು ಹೋಗಿದ್ದು ನಿನ್ನೆ ತನ್ನ ಮಗಳು ತನಗೆ ತಿಳಿಸಿದ್ದೇನಂದರೆ ತಮ್ಮ ಶಾಲೆಯ ರಾಜಶೇಖರ ಕಲಕೋರಿ ಎಂಬುವ ಶಿಕ್ಷಕನು ದಿನಾಂಕ 06-09-2013 ರಂದು ರಾತ್ರಿ ತಾನು ಮಲಗಿದ್ದ ಸ್ಥಳದಿಂದ ಎಬ್ಬಿಸಿಕೊಂಡು ಹೋಗಿ ಎಚ್, ಎಮ್ , ಕೋಣೆಯಲ್ಲಿ ತೆಗೆದುಕೊಂಡು ಹೋಗಿ ತನ್ನ ಮೈಮೇಲಿನ ಬಟ್ಟೆಗಳನ್ನು ತೆಗೆದು ಹಾಕಿ ನಗ್ನ ಮಾಡಿ ತನ್ನ ಮೇಲೆ ಅತ್ಯಾಚಾರ ಮಾಡಿರತ್ತಾನೆ ಹಾಗೂ ತಾನು ಅಳುತ್ತಿದ್ದಾಗ ಈ ವಿಷಯವು ಯಾರಿಗಾದರು ತಿಳಿಸಿದ್ದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅದ್ದರಿಂದ ಅಂಜಿಕೊಂಡು ತಾನು ಈ ವಿಷಯ ಇಷ್ಟು ದಿವಸ ಹೆಳಿರಲಿಲ್ಲಾ ಅಂತಾ ತಿಳಿಸಿದ್ದು ಚಾಣುಕ್ಯ ಶಾಲೆಯ ಶಿಕ್ಷಕನಾದ ರಾಜಶೇಖರ ಕಲಕೊರಿ ಇತನ ವಿರೂದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಈಶ್ವರಪ್ಪ ನೀರಡಗಿ ಸಾ: ಲಕ್ಷ್ಮಿನಾಯಾರಣ ನಗರ ಪಿ &ಟಿ ಕ್ವಾಟರ್ಸ ಹಿಂದೆ ಗುಲಬರ್ಗಾ ಇವರು ದಿನಾಂಕ 21-09-2013 ರಂದು 4-30 ಪಿ.ಎಂ.ಕ್ಕೆ ಸಾಯಂಕಾಲ 5-25 ನಿಮಿಷಕ್ಕೆ ಬೆಂಗಳೂರು ಬೇಕರಿ, ಆಶ್ರಯ ಬಾರ ಪಕ್ಕದಲ್ಲಿ ಕೇಕ್ ಹಾಗು ಬ್ರೇಡ್ ಖರೀಧಿಸುತ್ತಿದ್ದಾಗ ನನ್ನ ಸ್ನೇಹಿತ ಜೊತೆ ಮಾತನಾಡುತ್ತಾ 20 ನಿಮಿಷ ತಡವಾಯಿತು. ತದನಂತರ ನಾನು ನನ್ನ ಹಿರೋ ಹೊಂಡಾ ಪ್ಯಾಷನ್  ನನ್ನ ಗಾಡಿ ನಂ. ಕೆ.ಎ-36 ಆರ್- 1186 ನೇದ್ದನ್ನು ಹಚ್ಚಿದ ಸ್ಥಳಕ್ಕೆ ಹೋಗಿ ನೋಡಲಾಗಿ ಗಾಡಿ ಕಾಣಿಸಲಿಲ್ಲಾ ಅಕ್ಕಪಕ್ಕದ ವರೆಗೆ ವಿಚಾರಿಸಿದಾಗ ನನಗೆ ಗೊತ್ತಿಲ್ಲಾವೆಂದು ತಿಳಿದರು ನಾನು ಗಾಡಿ ಹಚ್ಚಿದ ಸ್ಥಳದ ಪಕ್ಕದಲ್ಲಿ ಸಿ.ಸಿ. ಕ್ಯಾಮೇರಾ ಅಳವಡಿಸಿಲಾಗಿತ್ತು. ತದನಂತರ ಆಶ್ರಯ ಬಾರ ಮಾಲಿಕರಿಗೆ ವಿಚಾರಿಸಿದೆ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ನೋಡಲು ಬನ್ನಿವೆಂದು ಒಳಗಡೆ ಕರೆದುಕೊಂಡು ಹೋಗಿ ಕ್ಯಾಮೇರಾ ವಿಕ್ಷಿಸಿದಾಗ ಗಾಡಿ ತೆಗೆದಕೊಂಡು ಹೋಗುವ ವ್ಯಕ್ತಿ ಬಾರನಿಂದ ಹೊರಗಡೆ ಬಂದು 2 ನಿಮಿಷ ಗಾಡಿಯ ಪಕ್ಕದಲ್ಲಿ ನಿಂತು ತದನಂತರ ನೇರವಾಗಿ ಗಾಡಿಯ ಹತ್ತಿರ ಬಂದು ಚಾವಿ ಹಚ್ಚಿ ತೆಗೆದುಕೊಂಡು ಹೋಗಿದ್ದು ನೋಡಲಾಯಿತು. ವ್ಯಕ್ತಿಯ ಎತ್ತರವಾಗಿದ್ದು ದಪ್ಪವಿದ್ದು ಕಾಲಲ್ಲಿ ಕರಿ ಬೂಟು, ಹಾಗು ಟಿ. ಶರ್ಟ, ಹಳದಿ, ಬಿಳಿ ಹಾಗು ಕರಿ ಬಣ್ಣದ ಟೀಶರ್ಟ, ದರಿಸಿದ್ದು ತಿಳಿದು ಬಂದಿದೆ. ಆ ವ್ಯಕ್ತಿಯ ಪತ್ತೆಹಚ್ಚಿ ನನ್ನ ಮೋಟಾರ ಸೈಕಲ್ ಹುಡುಕಿ ಕೊಡಲು ವಿನಂತಿ ಅದರ ಕಿಮ್ಮತ್ತು 30,000/- ರೂ ಇರುತ್ತದೆ.  ಪತ್ತೆ ಹಚ್ಚಿಕೊಡಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶಿವಕುಮಾರ ಎಂ. ಮಡ್ಡಿ ನಗರ ಅಧ್ಯಕ್ಷರು ದಲಿತ ಸೇನೆ ಗುಲಬರ್ಗಾ ಇವರು ದಿನಾಂಕ 22-09-2013 ರಂದು ಮದ್ಯಾಹ್ನ 12:00 ಗಂಟೆ ಸುಮಾರಿಗೆ ನರ್ಸಿಂಗ್ ವಿದ್ಯಾರ್ಥಿ ರವಿ ಎಂಬುವವರು ಮೊಬೈಲ್ ಗೆ ಕರೆ ಮಾಡಿ ತಿಳಿಸಿದ್ದೆನೆಂದರೇ, ನಾನು ಅಲ್ ಕರೀಮ್ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿದ್ದು ನಾಳೆ ಪರೀಕ್ಷೆ ಸುಮಾರು 40 ಜನ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಕೇಳಿದರೆ ನೀವು ಒಬ್ಬಬ್ಬರೂ 70 ರಿಂದ 01 ಲಕ್ಷ ರೂ ರವರೆಗೆ ಕಟ್ಟಬೇಕು ಹಾಲ್ ಟಿಕೆಟ್ ಕೊಡುವುದಿಲ್ಲಾ. ನಿಮ್ಮ ಸಮಾಜ ಕಲ್ಯಾಣ ಇಲಾಖೆಯವರು ಫೀಸು ಕಟ್ಟಿರುವುದಿಲ್ಲ ಅಂತಾ ತಕರಾರು ಮಾಡುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿ ಸಂಗಡ ಶಶೀಲ, ರಾಜು, ನಾಗೇಂದ್ರ ಜವಳಿ ಇವರೆಲ್ಲರೂ ಕೂಡಿಕೊಂಡು ಕಾಲೇಜಿ ಹೋಗಿ ವಿಚಾರಿಸುತ್ತಿರುವಾಗ ಇಮ್ತಿಯಾಜ್ ಇವನು ನಮ್ಮ ಜೊತೆ ತಕರಾರು ಮಾಡಿ ಜಾತಿ ಎತ್ತಿ ಬೈಯುತ್ತಿದ್ದರಿಂದ  ಏಕೆ ಬೈಯುತ್ತೀರಿ ಅಂತಾ ಕೇಳಿದಾಗ ಇಮ್ತಿಯಾಜ್ ಇತನು ನಮ್ಮ ಕಾಲೇಜಿನ ಮುಖ್ಯಸ್ಥರು & ಪ್ರಾಚರ್ಯರು ನಿಮ್ಮನ್ನು ಒದ್ದು ಕಳುಹಿಸಲು ಹೇಳಿದ್ದಾರೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಜೀವ ಭಯ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ಶ್ರೀಮತಿ  ತಿಪ್ಪಮ್ಮ ಗಂಡ ರಾಮಲಿಂಗಪ್ಪ ಮುಖ್ಯ ಅಡುಗೆಯವರು ಅಕ್ಷರ ದಾಸೋಹ ಮುಷ್ಠಳ್ಳಿ, ತಾ:ಸೇಡಂ ರವರು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಷ್ಠಳ್ಳಿಯ ಅಕ್ಷರ ದಾಸೋಹದ ಮುಖ್ಯ ಅಡುಗೆಯವಳಿದ್ದು, ದಿ:21-09-2013 ರಂದು ಬೆಳಗ್ಗೆ 0915 ಗಂಟೆ ಸುಮಾರಿಗೆ ಶಾಲೆಯ ಬಿಸಿ ಊಟ ಕೋಣೆಯಲ್ಲಿ ನಾನು ಮತ್ತು ಅಡುಗೆ ಸಹಾಯಕಿಯಾದ ಶ್ರೀಮತಿ. ಶಂಕ್ರಮ್ಮ ಗಂಡ ಬಸಯ್ಯಸ್ವಾಮಿ ಎಂಬುವವರು ಅಡುಗೆ ಸಂಭಂದ ತಯಾರಿ ಮಾಡಿಕೊಳ್ಳುತ್ತಿದ್ದೇವು. ಈ ಸಮಯದಲ್ಲಿ ಬಿಸಿ ಊಟ ಕೋಣೆಗೆ ಬಂದ ಮುಖ್ಯ ಗುರುಗಳಾದ ಓಂಕಾರ ಸರ್ ಮತ್ತು ಶರಣಪ್ಪ ಸರ್ ಸಿಟ್ಟಿನಿಂದ ಅಡುಗೆ ಕೋಣೆಗೆ ಬಂದು, ಶರಣಪ್ಪ ಸರ್ ಇವರು ನನಗೆ ಹೊಲೆ ರಂಡಿ, ಜಂಗಮ ಸೂಳೆ ಶಾಲೆಗೆ ಬರುವದು ಬಿಟ್ಟು ಮೀಟಿಂಗ್ ಅಂತ ತಿರುಗಾಡಿದರೆ ಅಡುಗೆ ಯಾರು ಮಾಡಬೇಕು? ನಿನ್ನದು ಹೇಳಿ ಕೇಳಿ ಹೊಲೆಯ ಜಾತಿ, ಈ ಹೊಲಸು ಜಾತಿ ಹೊಲಸು ಗುಣ ನಿನಗೆ ಹುಟ್ಟಿನಿಂದ ಬಂದಿದೆ ಅದಕ್ಕೆ ರಂಡಿ ನಿನಗೆ ಅಡುಗೆ ಮಾಡಲು ಬ್ಯಾಡ ಅಂತ ಹೇಳಿದ್ದು ನೀನು ಮುಟ್ಟಿದ ತಿಂಡಿ ಹೊಲಸಾಗಿರುತ್ತದೆ. ಎಂದು ಬೈದು ಕೈಯಿಂದ ಹೊಡೆದು ದೈಹಿಕ ಹಲ್ಲೆ ಮಾಡಿರುತ್ತಾರೆ. ಜೊತೆಯಲ್ಲಿದ್ದ ಓಂಕಾರ ಸರ್ ಕೂಡಾ ನನಗೆ ರಂಡಿ ಭೋಸಡಿ ಅಂತ ಬೈದು, ಸರಿಯಾಗಿ ಕೆಲಸಕ್ಕೆ ಬರುವದಿಲ್ಲ ಅಂದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಚಿತಂಬರಾಯ ತಂದೆ ಕಾಶಿನಾಥ ಕಮ್ಮನ್ ಸಾ : ಪಟ್ಟಣ ರವರು ದಿನಾಂಕ 29-09-13 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ  ತಮ್ಮ ಎದುರು ಪ್ಲಾಟನ ಪಕ್ಕದಲ್ಲಿ ನಮ್ಮ ಕಾಕಾ ಮನೆ ಕಟ್ಟುಲು ಅಳತೆ ಮಾಡುತ್ತಿದ್ದಾಗ 4 ಫೀಟ ಸಂದಿ ಬಿಡಲು ಹೇಳಿದ್ದಕ್ಕೆ 1. ಕಲ್ಯಾಣಿ ತಂದೆ ಭೀಮಶ್ಯಾ ಕಮ್ಮನ 2. ರುಕ್ಕವ್ವ ಗಂಡ ಭೀಮಶ್ಯಾ ಕಮ್ಮನ 3. ಶಿವಪ್ಪ ಕಮ್ಮನ 4. ರಾಘಪ್ಪ ಕಮ್ಮನ ಸಾ: ಎಲ್ಲರೂ ಪಟ್ಟಣ ಗ್ರಾಮ ಎಲ್ಲರು ಕೂಡಿಕೊಂಡು ಬಂದು ನಮ್ಮ ಜಾಗೆಯಲ್ಲಿ ಸಂದಿ ಬಿಡಲು ಹೇಳುವವನು ನಿವ್ಯಾರು ಅಂತಾ ಜಗಳಾ ತೆಗದು ಅವಾಚ್ಯ ಬೈದು ಕೈಯಿಂದ ಬಡಿಗೆಯಿಂದ ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 September 2013

ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಅವಿನಾಶ ತಂದೆ ಬಾಬುರಾವ ಶಿವಕೇರಿ, , ಸಾಃ ಮ. ನಂ. 260-261, ಆದರ್ಶ ನಗರ ಗುಲಬರ್ಗಾ  ರವರು ದಿನಾಂಕ 15-09-2013 ರಂದು ರಾತ್ರಿ  ಆದರ್ಶ ನಗರ ಫ್ಯಾನ್ಸಿಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಬಸವೇಶ್ವರ ಕಾಲೂನಿ ಕಡೆಯಿಂದ ಒಂದು ಸಿಲವರ ಬಣ್ಣದ ಮೋಟಾರ ಸೈಕಲ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಎದರುನಿಂದ ಡಿಕ್ಕಿ ಹೊಡೆದು ಅಪಘಾಥ ಪಡಿಸಿ ಭಾರಿ ಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಶ್ರೀಶೈಲ ರೆಡ್ಡಿ ತಂದೆ ನೀಲಕಂಠಪ ರೆಡ್ಡಿ ಸಾಃ ಸುಭಾಷ ಚೌಕ್ ಬ್ರಹ್ಮಪೂರ ಗುಲಬರ್ಗಾ ರವರು  ದಿನಾಂಕಃ 21-09-2013 ಮುಂಜಾನೆ 07:45 ಗಂಟೆ ಸುಮಾರಿಗೆ ಸುಭಾಷ ಚೌಕ್ ಬ್ರಹ್ಮಪೂರ ದಿಂದ ಹೊರಟು ಓಂ ನಗರ ಗೇಟಿಗೆ ಒಂದು ಆಟೋದಲ್ಲಿ ಬಂದು ಇಳಿದು ತನ್ನ ಗೆಳೆಯನಾದ ರೇವಣಯ್ಯ ಸ್ವಾಮಿ ಇವನೊಂದಿಗೆ ಇ.ಎಸ್.ಐ ಆಸ್ಪತ್ರೆಯ ಕಟ್ಟಡದ ಕಾಮಾಗಾರಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಓಂ ನಗರ ಗೇಟ್ ದಿಂದ ಮುಂದೆ ಇರುವ ಹೊಟೆಲ್ ಹತ್ತಿರ ಬಂದಾಗ ಒಬ್ಬ ಆಟೋ ಚಾಲಕ ನಂ. ಕೆ.ಎ. 32 ಎ 9744 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಡಿಕ್ಕಿ ಹೊಡೆದು ಭಾರಿಗಾಯಪಡಿಸಿಆಟೋ ಚಾಲಕನು ತನ್ನ ಆಟೋವನ್ನು ನಿಲ್ಲಿಸಿದಂತೆ ಮಾಡಿ ಹಾಗೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆಕಸ್ಮಿಕ ಬೆಂಕಿ ಅಪಘಾತ :
ಫರತಾಬಾದ ಠಾಣೆ : ಶ್ರೀ ಅನೀಲಕುಮಾರ ತಂದೆ ಅಲಿಸಾಬ ಪವಾರ ಸಾ:ಮನೆ ನಂ: 117 ವಿಧ್ಯಾ ನಗರ ಕಾಲೋನಿ ಎಮ್.ಎಸ್.ಕೆ.ಮಿಲ್ಲ ರಸ್ತೆ ಗುಲಬರ್ಗಾ ಇವರು ದಿನಾಂಕ 20-09-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಶಹಾಬಾದದಲ್ಲಿ ನ್ನ ಖಾಸಗಿ ಕೆಲಸ ಇರುವದರಿಂದ ನಮ್ಮ ಮಾವರಾದ ಮಧುಕರರಾವ ಇವರು ಖರೀಧಿಸಿದ ಹೊಸ ಕಾರನ್ನು ತಗೆದುಕೊಂಡು ಶಹಾಬಾದಕ್ಕೆ ಹೋಗಿ ಮರಳಿ ಗುಲಬರ್ಗಾಕ್ಕೆ ಬರುವ ಸಲುವಾಗಿ ರಾತ್ರಿ 11.00 ಗಂಟೆಗೆ ನಾನು ಸದರ ಹೊಸ ಕಾರನಲ್ಲಿ ಕುಳಿತು ಶಾಹಾಬಾದ ಜೇವರ್ಗಿ ರೋಡಿನ ಮೂಲಕ ಹೊರಟಿದ್ದು, ರಾತ್ರಿ 11-30 ಗಂಟೆಯ ಸುಮಾರಿಗೆ ಶಾಹಾಬಾದ ಕ್ರಾಸ ಇನ್ನೂ 1 ಕಿ.ಮಿ ಇರುವಾಗಲೇ ನಮ್ಮ ಕಾರಿನಲ್ಲಿ ವಾಯರ್ ಸುಟ್ಟ ವಾಸನೆ ಬರುತ್ತಿದ್ದಾಗ ನಮ್ಮ ಕಾರ ಚಾಲಕನು ಕಾರು ನಿಲ್ಲಿಸಿ ನೋಡಿದಾಗ ಕಾರಿನ ಇಂಜೀನ ಹತ್ತಿರ ಹೊಗೆ ಬರುತ್ತಿದ್ದನ್ನು ನೋಡಿ ಕಾರನಿಂದ ಹೊರಗಡೆ ಬಂದು ನೋಡುತ್ತಿದ್ದಂತೆ ಕಾರಿನ ಒಳಗಡೆ ಶಿಟಿಗೆ ಬೆಂಕಿ ಹತ್ತಿಕೊಂಡಿತ್ತು. ರಾತ್ರಿ ಇರುವದರಿಂದ ನಮಗೆ ಏನು ಮಾಡಬೇಕು ಅಂತಾ ತಿಳಿಯದೆ ಫಾಯರ್ ಸ್ಟೆಷನಕ್ಕೆ ಫೊನ ಮಾಡಿ ತಿಳಿಸಿದೇವು. ಫಾಯರ್ ವಾಹನ ಬರುವಾಗಲೇ ನಮ್ಮ ಕಾರಿಗೆ  ಸಂಪೂರ್ಣ ಬೆಂಕಿ ಹತ್ತಿಕೊಂಡಿದ್ದು ಇರುತ್ತದೆ. ಫಾಯರ್ ವಾಹನ ಬಂದು ಸದರಿ ಬೆಂಕಿಯನ್ನು ಆರಿಸಿದರು. ನಂತರ ನಮ್ಮ ಕಾರ ನೋಡಲು ಸಂಪೂರ್ಣವಾಗಿ ಸುಟ್ಟಿದ್ದು ಇರುತ್ತದೆ, ಸದರಿ ಕಾರಿನ ವಾಯರ ಸಕೀರ್ಟಿನಿಂದ ಹೊಗೆ ಎದ್ದು ಬೆಂಕಿ ಹತ್ತಿದ್ದು ಇರುತ್ತದೆ. ಬೆಂಕಿಯಿಂದ ನಮ್ಮ ಹೊಸ ಕಾರ ಇಂಜಿನ ನಂ 1 ಎನ್ ಡಿ 1215477 ಚೆಸ್ಸಿ ನಂ MBJ53NEE004009030~0112 ನೇದ್ದು ವಾಯರ ಶಾಕ ಸಕೀರ್ಟದಿಂದ ಆಕ್ಮಸಿಕವಾಗಿ ಬೆಂಕಿ ಹತ್ತಿ ಸಂಪೂರ್ಣವಾಗಿ ಸುಟ್ಟು ಹಾಳಾಗಿರುತ್ತದೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಶಿವಕುಮಾರ ತಂ ವೀರಭದ್ರಪ್ಪ ಮಾಗಾ ಸಾ|| ಹರಸೂರ ತಾ|| ಜಿ|| ಗುಲಬರ್ಗಾ  ರವರ ಹೆಂಡತಿಯಾದ ಮಹಾದೇವಿ ಇವಳು ತನ್ನ ಮಕ್ಕಳಾದ ಅಪೂರ್ವ, 04 ವರ್ಷ ಹಾಗೂ ಮಹೇಶ 3 ವರ್ಷದ ಗಂಡು ಮಗುವಿನೊಂದಿಗೆ ದಿನಾಂಕ 15-09-13 ರಂದು ಮದ್ಯಾಹ್ನ  12.00 ಗಂಟೆಯ ಸೂಮಾರಿಗೆ ತಮ್ಮೂರ ಸರಡಗಿ ಎಂಬುವ ಹೆಣ್ಣು ಮಗಳ ಹತ್ತಿರ ಬಟ್ಟೆ ಹೋಲೆಯವುದು ಕಲೆಯುವ ಸಂಬಂದ ಹೋಗಿ ಬರುತ್ತೇನೆ ಅಂತಾ ಹೇಳಿ ತನ್ನ ಗಂಡನ ಮನೆಯಿಂದ ಹೋದವಳು ಇಲ್ಲಿಯವರೆಗೆ ಬಂದಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆಗೆ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಸಂಬಂದಿಕರ ಊರುಗಳಿಗೆ ಹಾಗು ಇತರೆ ಕಡೆ ತಿರುಗಾಡಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 September 2013

ಜಾತಿ ನಿಂದನೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ಮತ್ತು ಮಾಲಗತ್ತಿ ಗ್ರಾಮದ ಮನೊಹರ ಹಾಗೂ ವಿಠ್ಠಲ ರವರ ಹೆಣ್ಣು ಮಕ್ಕಳು ಕೂಡಿ ಕೊಂಡು ಮಾಲಗತ್ತಿ ದಿಂದ ರಾವೂರ ಕ್ಕೆ ಶಾಲೆಗೆ ಹೋಗಿದ್ದು ರಾವೂರದವರಾದ ಶರಣು ತಂದೆ ಮಲ್ಲೇಶಿ ಮತ್ತು ಅಶೋಕ ತಂದೆ ಮಲ್ಲೇಶಿ ರವರು ಸದರಿ ಹುಡಗಿಯರಿಗೆ ಚುಡಾಯಿಸಿದ ಸಂಬಂದವಾಗಿ ದಿನಾಂಕ: 20/09/2013 ರಂದು 12.30 ಪಿಎಮ್ ಕ್ಕೆ ಶ್ರೀ ಗುಂಡಪ್ಪಾ ತಂದೆ  ಯಲ್ಲಪ್ಪಾ ಕಟ್ಟಿ ಮತ್ತು ಶ್ರೀಶೈಲ ಹಾಗೂ ಮಲ್ಲಿಕಾರ್ಜುನ ಕೂಡಿ ಹೊಲಕ್ಕೆ ಹೋಗುವಾಗ 1] ಶರಣು ತಂದೆ ಮಲ್ಲೇಶಿ, ಮತ್ತು ಇತರೆ 5 ಜನರು ಹಾಗೂ ಇತರರು ಕೂಡಿಕೊಂಡು ಸದರಿಯವರಿಗೆ  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ  ನೀನು ನಿನ್ನ ಅಣ್ಣ ಮಗಳಿಗೆ ಚುಡಾಯಿಸಿದ್ದಿ ಅಂಥಾ ನಮ್ಮನ್ನು ಅಪಮಾನ ಮಾಡುತ್ತಿ ಅಂತಾ ಅವ್ಯಾಚ ಶಬ್ದುಗಳಿಂದ ಬೈದು ಜಾತಿ ನಿಂದನೆ ಮಾಡಿ ಅಲ್ಲಿಯೇ ಬಿದ್ದ ಬಡಿಗೆಯಿಂದ ತಲೆಗೆ ಹೊಡೆದು  ರಕ್ತಗಾಯ ಮಾಡಿದ್ದು ಇರುತ್ತದೆ. ಸೂಳಿ ಮಕ್ಕಳದ್ದು ಹೊಲೆಯರದ್ದು ಬಹಳ ಆಗಿದೆ ಇವರನ್ನು ಮುಗಿಸಿಯೇ ಬಿಡರಿ ಅಂತಾ ಜೀವದ ಬೇದರಿಕೆ ಹಾಕಿರುತ್ಥಾರೆ. ಸದರಿಯವರೆಲ್ಲರೂ 3 ಮೊಟಾರ ಸೈಕಲ ಮೇಲೆ ಬಂದು ಹೊಡೆದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.