POLICE BHAVAN KALABURAGI

POLICE BHAVAN KALABURAGI

03 March 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ 28/02/2013 ರಂದು 0130 ಗಂಟೆಯಿಂದ 0400 ಗಂಟೆಯ ಮಧ್ಯದ ಅವಧಿಯಲ್ಲಿ ಭೂಸನೂರ ತಾಂಡಾದಲ್ಲಿ ನಿರ್ಮಿಸಿರುವ ವಡಾಫೋನ ಟಾವರ UGUL 919 INDUS 1115049 ದಕ್ಕೆ ಅಳವಡಿಸಿದ ಬ್ಯಾಟರಿ ಬ್ಯಾಂಕಿನಿಂದ 24 ಬ್ಯಾಟರಿಗಳನ್ನು ಅಂದಾಜ ಕಿಮ್ಮತ್ತು 24,000/- ರೂಪಾಯಿಗಳು  ನೇದ್ದನ್ನು ಸ್ಟೋರ ರೂಮ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಶ್ರೀ ಮಲ್ಲಿಕಾರ್ಜುನ ತಂದೆ ಶಿವಶರಣಪ್ಪ ಕಲಬುರ್ಗಿ ಸಾ|| ಕಾವೇರಿ ನಗರ ಗುಲಬರ್ಗಾರವರು  ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಪ್ರಭು ತಂದೆ ಸಂಗಣ್ಣ ಪಾಣೆಗಾಂವ ಸಾ:ಡಬರಾಬಾದ ಕ್ರಾಸ ರಿಂಗ ರೋಡ ಗುಲಬರ್ಗಾರವರು ದಿನಾಂಕ:02/03/2013  ರಂದು ಬೆಳಿಗ್ಗೆ 10-00 ಗಂಟೆಗೆ ಹೀರಾಪೂರ ಗೌಟಾಣ ಜಮೀನ ಪ್ಲಾಟ್ ನಂ:32 ನೇದ್ದರ ಹತ್ತಿರ ಪ್ಲಾಟ ಅಳತೆ ಮಾಡುವ ಸಮಯದಲ್ಲಿ ಬಸೀರ ತಂದೆ ಖಾಜಾಸಾಬ  ವಡ್ಡಳ್ಳಿ ಸಾ: ಹೀರಾಪೂರ ಇತನು ನನಗೆ ಪ್ಲಾಟ್ ನಂ:32 ನೇದ್ದರ ಅಳತೆ 30X40 ಕಿಂತ ಕಡಿಮೆ ಇರುತ್ತದೆ, ಇನ್ನೊಂದು ಸಾರಿ ಅಳತೆ ಮಾಡಿಕೊಡು ಅಂತ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಸಲಿಕೆಯಿಂದ ತಲೆಗೆ ಹೊಡೆದು ರಕ್ತ ಗಾಯ ಪಡೆಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 118/2013 ಕಲಂ, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02-03-2013 ರಂದು 7-00 ಪಿ.ಎಮ ಕ್ಕೆ ಶ್ರೀ ರಘು ಎನ್‌, ಪಿಎಸ್‌ಐ ಶಹಾಬಾದ ನಗರ ಠಾಣೆ ರವರು ಹೊನಗುಂಟಾ ಗ್ರಾಮದ ಜಾವೀದ ಪಟೇಲ ರವರ ಮನೆಯ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಜೂಜಾಡುತ್ತಿರುವವರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ಮಹ್ಮದ ತೌಫೀಕ ತಂದೆ ಬಸೀರ ಅಹ್ಮದ ಸಾ:ಹೊನಗುಂಟಾ,ಮಹ್ಮದ ಇಸ್ಮಾಯಿಲ ಶಾ ತಂದೆ ಮದಾರಶಾ ಸಾ:ಹೊನಗುಂಟಾ,  ನಬಿಸಾಬ ತಂದೆ ಬದನಸಾಬ ಸಾ:ಹೊನಗುಂಟಾ, ಮೈತಾಬ ಶಾ ತಂದೆ ಬಂದೇಲಿ ಶಾ ಸಾ:ಹೊನಗುಂಟಾ, ಮಹ್ಮದ ಸೈಯದ ತಂದೆ ಮಹ್ಮದ ಅಮ್ಜದ ಸಾಬ ಸಾ:ಇಜೇರಿ ಹಾ:ವ:ಹೊನಗುಂಟಾ, ಮಲ್ಲಪ್ಪಾ ತಂದೆ ನಾಗಪ್ಪಾ ಬಂಡೆಪ್ಪನೂರ ಸಾ:ಹೊನಗುಂಟಾ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ  ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆ ಗುನ್ನೆ ನಂ: 28/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:02/03/2013 ರಂದು ಠಾಣಾ ಹದ್ದಿಯಲ್ಲಿ ಬರುವ ಆಶ್ರಯ ಕಾಲೋನಿಯ ನೀರಿನ ಟ್ಯಾಂಕ ಹತ್ತಿರ  ಸಾರ್ವಜನಿಕ  ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶರಣಪ್ಪಾ ಹಿಪ್ಪರಗಿ ಪಿಐ ಶಹಾಬಾದ ನಗರ ಠಾಣೆರವರ ನೇತೃತ್ವದಲ್ಲಿ ಪಿ.ಎಸ.ಐ  ಶ್ರೀ ರಘು ಎನ್. ಹಾಗೂ ಸಿಬ್ಬಂದಿಯವರಾದ ಯಾದವ, ರಾಜು  ವೀರಭದ್ರ, ಸುಭಾಷ ರವರು ಕೂಡಿಕೊಂಡು  ಜೂಜಾಟದಲ್ಲಿ ನಿರತರಾದ ಮೊಹ್ಮದ ಮಹಿಬೂಬ ತಂದೆ ಮೊಹ್ಮದ ಹುಸೈನ ವೈನಿವಾಲೆ ವ:51 ಜಾ: ಮುಸ್ಲಿಂ ಉ: ಬಡಿಗೇರ್ ಸಾ: ಸುಭಾಷ ಚೌಕ ಶಹಾಬಾದ  2. ಶೇಖ ಮಲಂಗ್ ತಂದೆ ನಬಿಸಾಬ ಶೇಖ  ವ: 49 ಜಾ: ಮುಸ್ಲಿಂ ಉ:ಟೇಲರ್ ಸಾ: ರಾಮ ಮೊಹಲ್ಲಾ ಶಹಾಬಾದ 3. ಚಂದು ತಂದೆ ಶಂಕರ ಮೇತ್ರೆ ವ:21 ಜಾ: ಮಾದಿಗ ಉ:ಗೌಂಡಿ ಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ  4. ಸದಾಂ ಹುಸೇನ್ ತಂದೆ ರುಕ್ಮೊದ್ದಿನ್ ಕಲಗುರ್ತಿ ವ: 20 ಜಾ:ಮುಸ್ಲಿಂ ಉ: ಕೂಲಿಕೆಲಸ ಸಾ: ಆಶ್ರಯ ಕಾಲೋನಿ ಶಹಾಬಾದ ರವರಿಂದ ಜೂಜಾಟಕ್ಕೆ ಬಳಸಿದ ಹಣ ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ:29/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ ರಾಮು ತಂದೆ ನಾಗಪ್ಪ ಮಂಗಾ ವಯ:23 ವರ್ಷ, ಜಾತಿ: ಮಾದಿಗ  (ಎಸ್.ಸಿ) ಉ: ಜೀಪ್ ಚಾಲಕ, ಸಾ:ಮಳಖೇಡ ತಾ:ಸೇಡಂ ರವರು ನಾನು ಮತ್ತು ನಮ್ಮ ಕ್ರೂಜರ ಚಾಲಕ ಸಿದ್ದು ಸಿಂಪಗೇರ ಇಬ್ಬರೂ ಕೂಡಿ ದಿನಾಂಕ:02-03-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಐಬಿ ಎದುರುಗಡೆಯ ತರಕಾರಿ ಮಾರ್ಕೆಟ ಹತ್ತಿರ ಜೀಪ್ ನಿಲ್ಲಿಸಿ ಮಾತಾನಾಡುತ್ತಾ ನಿಂತಾಗ ಸಂಜು  ತಂದೆ ಗುಂಡಪ್ಪ  ಸಾ:ಅಗ್ಗಿ ಬಸವೇಶ್ವರ ಕಾಲೋನಿ ಸೇಡಂ ಇತನು ಬಂದವನೇ ನನಗೆ   ಅವಾಚ್ಯವಾಗಿ ಜಾತಿ ನಿಂದನೆ ಮಾಡಿ ಮಳಖೇಡದಿಂದ ಪ್ಯಾಸಿಂಜರ ಕೂಡಿಸಿಕೊಂಡು ಹೋಗುವ ವಿಷಯದಲ್ಲಿ ಜಗಳ ತೆಗೆದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಎಳೆದಾಡಿ ತನ್ನ ಕೈಯಲ್ಲಿದ್ದ ಖಾಲಿ ಬೀಯರ್ ಬಾಟಲಿಯಿಂದ ನನ್ನ  ಹಿಂದುಗಡ ತಲೆಗೆ ಹೊಡೆದು ರಕ್ತ ಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:48/2013 ಕಲಂ-324, 504, 506 ಐಪಿಸಿ ಮತ್ತು 3(I)(X) SC/ST PA Act 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:02-03-2013 ರಂದು ರಾತ್ರಿ 8-45  ಗಂಟೆಗೆ ನಾನು ಮತ್ತು ನಮ್ಮಲ್ಲಿ ಮುನಿಮ ಕೆಲಸ ಮಾಡುವ ಚಂದ್ರಪ್ಪ ತಂದೆ ಹಣಮಂತಪ್ಪ ಮಡಿವಾಳ ವಯ:52 ವರ್ಷ, ಇಬ್ಬರೂ ಕೂಡಿ ಮೋಟಾರ ಸೈಕಲ್ ನಂ: ಕೆಎ:32-ಯು-9805 ನೇದ್ದರ ಮೇಲೆ ಸೇಡಂದಿಂದ ರಂಜೋಳಕ್ಕೆ ಹೋಗುತ್ತಿದ್ದೇವು, ಮೋಟಾರು ಸೈಕಲ್ ನಾನು ಚಲಾಯಿಸುತ್ತಿದ್ದೆ. ಮೋಟಾರು ಸೈಕಲನ್ನು ಸವಾಕಾಶವಾಗಿ ಎಡಭಾಗಕ್ಕೆ ಚಲಾಯಿಸುತ್ತಾ ಬಟಗೆರಾ (ಬಿ) ಕ್ರಾಸ್ ದಾಟಿ, ಕಾಗಿಣಾ ದಾಬಾ ಹತ್ತಿರ ಎದುರುಗಡೆಯಿಂದ ಟ್ರಾಕ್ಟರ್ ಚಾಲಕನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರಾಂಗ ರೂಟದಲ್ಲಿ ನೇರವಾಗಿ ಬಂದು ನನ್ನ ಮೋಟಾರು ಸೈಕಲಗೆ ಡಿಕ್ಕಿಪಡಿಸಿದನು. ನಾನು ರೋಡಿನ ಮೇಲೆ ಬಲಭಾಗಕ್ಕೆ ಬಿದ್ದೇನು, ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪ ಮಡಿವಾಳ ಇತನು ರೋಡಿನ ಎಡಭಾಗಕ್ಕೆ ಬಿದ್ದಾಗ ಆಗ ಟ್ರಾಕ್ಟರ ಟೈಯರ್ ಚಂದ್ರಪ್ಪ ಇತನ ಮೇಲಿಂದ ಹೋಗಿ ರೋಡಿನ ಎಡಭಾಗಕ್ಕೆ ಟ್ರಾಕ್ಟರ್ ಪಲ್ಟಿಯಾಗಿ ಬಿತ್ತು ಆಗ ಟ್ರಾಕ್ಟರ್ ಚಾಲಕ ಅಲ್ಲಿಂದ ಓಡಿ ಹೋದನು ನನಗೆ ರಕ್ತಗಾಯ ಹಾಗೂ ಗುಪ್ತಗಾಯಗಳಾದವು. ನನ್ನ ಹಿಂದುಗಡೆ ಕುಳಿತ್ತಿದ್ದ ಚಂದ್ರಪ್ಪಾ ಇತನಿಗೆ ನೋಡಲು ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಲ್ಲಿಯೇ ನಿಂತಿದ್ದ ಟ್ರಾಕ್ಟರ್ ನೋಡಲು ಕೆಎ-38 ಟಿ-2135-36 ನೇದ್ದು ಇರುತ್ತದೆ. ಟ್ರಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮಹ್ಮದ್ ಮೌಲಾನಾ ತಂದೆ ಅಬ್ದುಲ್ ರಶೀದ ರಂಜೋಳ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:49/2013 ಕಲಂ-279,337, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

02 March 2013

GULBARGA DISTRICT REPORTED CRIME


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ನಾಗಮ್ಮ ಗಂಡ ಚಂದ್ರಕಾಂತ ಸಾ:ತಾರಪೈಲ ಗುಲಬರ್ಗಾ ರವರು ನನಗೆ 6 ವರ್ಷಗಳ ಹಿಂದೆ ಶಹಾಪೂರ ತಾಲ್ಲೂಕಿನ  ಕಾಡಮಗೇರಿ ಗ್ರಾಮದ  ಚಂದ್ರಕಾಂತ ತಂದೆ ಶಿವಬಸಪ್ಪ ಹುಡೆದವರ ಜೋತೆ ಮದುವೆ ಮಾಡಿದ್ದು, ಮದುವೆಯಲ್ಲಿ ವರದಕ್ಷಿಣೆ  ಅಂತಾ 25,000/- ರೂಪಾಯಿಗಳು, 2 1/2 ತೊಲೆ ಬಂಗಾರ  ಮತ್ತು ಇತರೆ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಇನ್ನೂ 50.000/- ರೂಪಾಯಿಗಳು ತರುವಂತೆ ಗಂಡ ಮತ್ತು ಗಂಡನ ಮನೆಯವರು ಪಿಡಿಸುತ್ತಿದ್ದರು. ನನ್ನ ತಂದೆ ತಾಯಿ ಬಡವರಾಗಿದ್ದರಿಂದ ತವರಿನಿಂದ ಹಣ ತರಲು ಆಗುತ್ತಿಲ್ಲ ಗಂಡ ಚಂದ್ರಕಾಂತ, ಅತ್ತೆ ಶಿವಲಿಂಗಮ್ಮ, ಮಾವ ಶಿವಬಸಪ್ಪ ಮೈದುನ ಮರಿಲಿಂಗಪ್ಪ ಮತ್ತು ನಾದಿನಿ ನಾಗಮ್ಮ  ನನಗೆ ಬೈಯುವುದು ಅವಮಾನಿಸುವದು ಮಾಡುತ್ತಿದ್ದಾರೆ. ನನ್ನ ಎರಡೂವರೆ ವರ್ಷದ ಮಗನ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೆ, ನೀನು  50.000/- ರೂಪಾಯಿಗಳು ನಿನ್ನ ತವರು ಮನೆಯಿಂದ ತಂದರೆ ಮಾತ್ರ ಮನೆಯಲ್ಲಿ ಇರಬೇಕು ಇಲ್ಲವಾದರೆ ಬೇರೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇದರಿಸಿ ಮನೆಯಿಂದ ಹೋರ ಹಾಕಿರುತ್ತಾರೆ. ದಿನಾಂಕ:17-1-2013 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಗಂಡ ಅತ್ತೆ ನಾದಿನಿ  ಮಾವ  ಮೈದುನ ಎಲ್ಲರೂ ದುಡ್ಡು ತರದೆ ಇರುವದಕ್ಕೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜಬರದಸ್ತಿಯಿಂದ ನನ್ನ 2 ವರ್ಷದ ಮಗನನ್ನು ತೆಗೆದುಕೊಂಡು ಹೋಗಿರುತ್ತಾರೆ. ಇವತ್ತಲ್ಲ ನಾಳೆ ನನ್ನ ಗಂಡ ತಿದ್ದುಕೊಳ್ಳಬಹುದು ಅಂತಾ ಸಹಕರಿಸಿಕೊಂಡು ಬಂದಿರುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ  ಗುನ್ನೆ ನಂ:12/2013 ಕಲಂ 498(ಎ),323,504,506,363 ಸಂಗಡ 34 ಐಪಿಸಿ ಮತ್ತು 3 &4 ಡಿಪಿ ಆಕ್ಟ್ಯ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಶೇಖ್ ಖಾಜಾಮೀಯಾ ಹುಸೇನ ತಂದೆ ಶೇಖ್ ಮಗ್ದುಮ್ ಹುಸೆನ ಮೀಣಜಗಿ ಸಾಮದಿನಾ ಕಾಲೊನಿ ಎಮ್‌ಎಸ್‌ಕೆ ಮಿಲ್  ಜಿಲಾನಾಬಾದ ಗುಲಬರ್ಗಾರವರು ನನ್ನ ಮೂರನೆಯ ಮಗನಾದ ಶೇಖ್‌ ವಾಸೀಂ ಹುಸೇನ್‌ ಇತನು ಫಿರೋಜಾಬಾದದಲ್ಲಿರುವ ಮಹಿಬೂಬ ಪಾಷಾ ತಂದೆ ಸುಲೈಮಾನಸಾಬ ಹೆರವಾಲೆ ಸಾ|| ಫಿರೋಜಾಬಾದ ಇವರ ಹತ್ತಿರ ಹೋಗಿ ಬಹಳ ದಿವಸವಾಯಿತು ನಾನು ಹೋಗಿ ಬರುತ್ತೆನೆ ಅಂತಾ ದಿನಾಂಕ:25-02-2013 ರಂದು 7-00 ಪಿ.ಎಮ ಸುಮಾರಿಗೆ ತನ್ನ ಹೀರೋ ಹೊಂಡಾ ಸಿಡಿ-100 ಮೋಟರ ಸೈಕಲ್‌ ನಂ. ಕೆಎ-32 ಆರ್-2942 ನೇದ್ದರ ಮೇಲೆ ಹೋಗಿದ್ದು, ರಾತ್ರಿ 9-00  ಗಂಟೆಯ ನನ್ನ ಎರಡನೆಯ ಮಗನಾದ ಶೇಖ್‌ ಹಾಬಿದ ಹುಸೇನ್‌ ಇತನು ಅಣ್ಣನಾದ ಶೇಖ್ ವಾಸೀಂ ಹುಸೇನ ಇತನ ಮೋಬೈಲ್‌ ಫೊನ್‌ನಿಂದ ಯಾರೋ ಪೊನ್ ಮಾಡಿ ಸರಡಗಿ ಕ್ರಾಸ್‌ ಸಮೀಪ ಯಾವೂದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಮೋಟರ್‌ ಸೈಕಲ್‌ ನಂ:ಕೆಎ-32 ಆರ್- 2942 ನೇದ್ದಕ್ಕೆ ಡಿಕ್ಕಿ ಪಡಿಸಿ ನಿಲ್ಲಿದೆ ಹಾಗೆಯೆ ಓಡಿಸಿಕೊಂಡು ಹೋಗಿರುತ್ತಾರೆ. ಆತನಿಗೆ ಭಾರಿಗಾಯಗಳಾಗಿದ್ದರಿಂದ ಉಪಚಾರ ಕುರಿತು 108 ಅಂಬ್ಯುಲೆನ್ಸನಲ್ಲಿ  ಗುಲಬರ್ಗಾಕ್ಕೆ ಕಳಿಸುತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನಾವು ಹೋಗಿ ನೋಡಲಾಗಿ ದೇಹದ ಹಲವು ಕಡೆ ಭಾರಿ ರಕ್ತಗಾಯವಾಗಿ ಮಾತನಾಡುತ್ತಿಲ್ಲ. ನನ್ನ ಮಗ ಶೇಖ್‌ ವಾಸೀಂ ಹುಸೇನ್‌ ಇತನ ಮೋಟರ ಸೈಕಲ್‌ ಕ್ಕೆ ಡಿಕ್ಕಿ ಪಡಿಸಿದ ಚಾಲಕ ಮತ್ತು ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶೇಖ್ ಖಾಜಾಮೀಯಾ ಹುಸೇನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2013 ಕಲಂ,279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.