POLICE BHAVAN KALABURAGI

POLICE BHAVAN KALABURAGI

20 May 2011

GULBARGA DISTRICT REPORTED CRIMES

ಜಾತಿ ನಿಂದನೆ ಪ್ರಕರಣ :

ಶಹಾಬಾದ ನಗರ ಠಾಣೆ : ಶ್ರೀ ಚಂದ್ರಮಾ ತಂದೆ ಪೀರಪ್ಪಾ ಕಾಂಬಳೆ ಸಾ:ದೇವನ ತೆಗನೂರ ರವರು ನಾನು ದೇವನ ತೆಗನೂರ
ಗ್ರಾಮದಲ್ಲಿ ಜಮೀನು ಹೊಂದಿದ್ದು ನನ್ನ ಅಣ್ಣನ ಮಗ ಶಿವಯೋಗಿ ಕಾಂಬಳೆ ಇವರಿಗೆ ಸೇರಿದ ಜಮೀನಿನಲ್ಲಿ ಬೆಳೆದ ತೊಗರಿ ಬೆಳೆಯನ್ನು ನಮ್ಮ ಹೊಲದಲ್ಲಿ ರಾಸಿ ಮಾಡಿ ಅದರ ಹೊಟ್ಟನ್ನು ನಮ್ಮ ಹೊಲದಲ್ಲಿ ಖಣೆ ಹಾಕಿ ಬಿಟ್ಟಿದ್ದೇವು ನಮ್ಮ ಹೊಲದ ಪಾಲುದಾರನಾದ ಶಿವಲಿಂಗಪ್ಪಾ ಪೂಜಾರಿ ಇತನು ನಮ್ಮ ಹೊಟ್ಟಿನ ಭಣಮಿಗೆ ಉರಿ ಹಚ್ಚಿ ಸುಟ್ಟು ಸುಮಾರು 50,000/- ರೂ ಲೂಕ್ಸಾನ ಮಾಡಿರುತ್ತಾನೆ. ನಮಗೆ ಆದ ಲುಕ್ಸಾನಾದ ಹಣ ಕೊಡುವದು ಬಾಕಿ ಇದ್ದ ಕಾರಣ ದುರುದ್ದೇಶದಿಂದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಜಾತಿ ಎತ್ತಿ ಬೈದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಸದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀ. ಫತ್ರುಸಾಬ ತಂದೆ ಗುಡುಸಾಬ ಲಧಾಫ್ ಸಾ; ಡೊರ ಜಮಗಾ ತಾ:ಜಿ: ಗುಲಬರ್ಗಾ ರವರು ನನ್ನ ಮಗ ಖಾಸೀಮ್ ಅಲಿ ಈತನು ತಮ್ಮೂರ ರಿಯಾಜ ಪಟೇಲ್ ಕಾಂಟ್ರಾಕ್ಟರ್ ಅವರೊಂದಿಗೆ ಕಲ್ಮೂಡ ಗ್ರಾಮಕ್ಕೆ ಹೋಗಿದ್ದು, ಕಲ್ಮೂಡ ಗ್ರಾಮದ ಹೊಲದಲ್ಲಿ ಒಡ್ಡು ಹಾಕುವ ಕೆಲಸ ಮಾಡುತ್ತಿದ್ದಾಗ ಟಿಪ್ಪರ್ ನಂ: ಕೆಎ-39- 1165 ನೇದ್ದರ ಕ್ಯಾಬೀನ್ ಮೇಲೆ ಇಟ್ಟಿದ್ದ ಡಿಜೇಲ್ ಡಬ್ಬಿಯನ್ನು ಮೇಲಿಂದ ಕೆಳಗೆ ಇಳಿಸಿಕೊಟ್ಟು ಟಿಪ್ಪರ್ ಹಿಂದಿನ ಭಾಗದಿಂದ ಇಳಿಯತ್ತಿದ್ದಾಗ ಚಾಲಕನಾದ ದತ್ತಾತ್ರೇಯ ಈತನು ಹಿಂಬದಿಗೆ (ರಿವರ್ಸ) ಚಲಾಯಿಸುತ್ತಿದ್ದಾಗ ಖಾಸೀಂ ಈತನು ಟಿಪ್ಪರದ ಹಿಂದಿನ ಭಾಗ ತೆಲೆಗೆ ಬಡಿದು ನೆಲಕ್ಕೆ ಬಿದ್ದಾಗ ಟಿಪ್ಪರ್ ಹಿಂದಿನ ಟೈರ ಆತನ ಹೊಟ್ಟೆಯ ಭಾಗಕ್ಕೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಮದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ದೇವಲ ಗಾಣಗಾಪೂರ ಠಾಣೆ : ಶ್ರೀ. ಪುಂಡಲಿಕ ತಂದೆ ದತ್ತಪ್ಪ ದೊಡ್ಡಮನಿ ಸಾ|| ಕೆರಕನಳ್ಳಿ ತಾ: ಅಫಜಲಪುರ ರವರು ನನ್ನ ತಮ್ಮ ರಾಜಶೇಖರ ಇತನು ತೆಲ್ಲೂರ ಗ್ರಾಮದ ದತ್ತಪ್ಪ ಜಮದಾರ ರವರ ಟ್ಯಾಕ್ಟರ ಮೇಲೆ ಅವರ ಮಗ ರಾಘವೇಂದ್ರ ನೊಂದಿಗೆ ರಾಮಣ್ಣ ಗೌಡ ರವರ ಹೊಲಕ್ಕೆ ನೇಗಿಲು ಹೊಡೆಯಲು ಹೋಗಿದ್ದು ರಾಘವೇಂಧ್ರ ಇತನು ಹೊಸ ಟ್ಯಾಕ್ಟರ ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಸುತ್ತ ತಿರುಗಿಸಿದ್ದರಿಂದ ರಾಜಶೇಖರ ಇತನು ಮೇಲಿಂದ ಕೆಳಗೆ ಬಿದ್ದು ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 May 2011

GULBARGA DISTRICT REPORTED CRIMES

ಕಳವು ಪ್ರಕರಣ :

ಚೌಕ ಠಾಣೆ : ಶ್ರೀ ಯೋಗೇಶ ರಸಾಳಕರ ಸಾ|| ಸ್ವಸ್ತಿಕ ನಗರ ಗುಲಬರ್ಗಾ ರವರು ದಿನಾಂಕ: 16-17-05-2011 ರಂದು ರಾತ್ರಿ ವೇಳೆಯಲ್ಲಿ ತನ್ನ ಎಸ.ಅರ್. ಹೋಟೆಲ ಹತ್ತಿರವಿರುವ ಪಾನ ಶಾಪದಲ್ಲಿ ಇಟ್ಟಿರುವ ಸಾಮಾನುಗಳು ಮತ್ತು ನಗದು ಹಣ ಒಟ್ಟು 23500-00 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಚೌಕ ಠಾಣೆ : ಅ ಶ್ರೀ ದೀಪಕಸಿಂಗ್ ತಂದೆ ಹಿರಾಸಿಂಗ ಠಾಕೂರ ಸಾ|| ಮಹದಾದೇವ ನಗರ ಗುಲಬರ್ಗಾ ರವರು ದಿನಾಂಕ: 30-04-2011 ರಂದು ಮನೆಯ ಮುಂಎದೆ ನಿಲ್ಲಿಸಿದ ಅಟೋ ಕೆಎ 32 6342 ಅಕಿ|| 47,000=00 ನೇದ್ದು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರುನಾಗರಾಜ ತಂದೆ ಹಣಮಂತಪ್ಪ ಆಲಗೂಡಕರ್‌ ಸಾ: ಆಲಗೂಡ ಹಾ: ವ:ಸಂತ್ರಾಸ ವಾಡಿ ಚೌದರಿ ಮನೆಯ ಹತ್ತಿರ ಗುಲಬರ್ಗಾ ರವರು ದಿ: 25/5/2011 ರಂದು ಮದುವೆ ಪೂರ್ವದ ಕಾರ್ಯಕ್ರಮದ ನಿಮಿತ್ಯವಾಗಿ ನಾನು ಹಾಗು ನನ್ನ ತಂದೆ ತಾಯಿ ಹಾಗೂ ಹೆಂಡತತಿಯೊಂದಿಗೆ ತುಳಜಾಪೂರಕ್ಕೆ ದೇವಿಯ ದರ್ಶನಕ್ಕೆ ತಮ್ಮ ಪರಿಚಯದವರ ಇಂಡಿಕಾ ಕಾರ ನಂ ಎಮ್‌ಹೆಚ್‌ 01 ಡಿಎ- 6422 ನೇದ್ದರ ಕಾರ ಚಾಲಕ ಶರಣು ತಂದೆ ಗುಂಡಪ್ಪ ಜಡಕೆ ಇವನೊಂದಿಗೆ ಹೋಗಿ ದರ್ಶನ ಮಾಡಿಕೊಂಡು ಮರಳಿ ಗುಲಬರ್ಗಾಕ್ಕೆ ಬರುವಾಗ ಕಾರ ಚಾಲಕ ಶರಣು ಇತನು ಕಾರನ್ನು ಅತೀವೇಗವಾಗಿ ನಡೆಸುತ್ತಿದ್ದಾಗ ಅವನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೇಯೇ ವೇಗವಾಗಿ ಕಾರನ್ನು ಚಾಲಾಯಿಸು ಸ್ವಾಮಿ ಸಮರ್ಥ ಗುಡ್ಡದ ಹತ್ತಿರ ಅವರಾದ(ಬಿ) ಸೀಮಾದಲ್ಲಿ ಓವರ ಟೇಕ ಮಾಡಲು ರೋಡಿನ ಬಲಬದಿಗೆ ತೆಗೆದುಕೊಂಡಿದ್ದರಿಂದ ರೋಡಿನ ಬಲಭಾಗದ ಗುಟದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ತಂದೆಯವರು ಕಾರಲಿನಲ್ಲಿಯೇ ಸ್ಥಳದಲ್ಲಿ ಮೃತಪಟ್ಟಿದ್ದು ತಾಯಿಯ ತಲೆಗೆ ಬಾರಿ ರಕ್ತಗಾಯವಾಗಿ ನಮ್ಮಗೆ ಸಣ್ಣಪುಟ್ಟ ಗಾಯಗಳು ಆಗಿದ್ದು ಅಂತಾ ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಈರಫನ್‌ ತಂದೆ ಚಾಂದಪಟೇಲ ಸಾ: ಮದೀನಾ ಕಾಲನಿ ಗುಲಬರ್ಗಾ ರವರು ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ 32 ವ್ಹಿ 5723 ನೇದ್ದನ್ನು ನಿನ್ನೆ ದಿನಾಂಕ; 17/5/2011 ರಂದು ಸಾಯಂಕಾಲ ನನ್ನ ದ್ವೀ ಚಕ್ರ ವಾಹನಗಳ ಗ್ಯಾರೇಜ ರಿಪೇರಿ ಅಂಗಡಿ ಮುಂದೆ ನಿಲ್ಲಿಸಿದ ಮೋಟಾರ ಸೈಕಲನ್ನು ಯಾರೋ ಅಪರಿಚಿತ ವ್ಯಕ್ತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 May 2011

GULBARGA DISTRICT REPORTED CRIMES

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀಮತಿ. ಕವಿತಾ ಗಂಡ ಜ್ಞಾನೇಶ್ವರ ಅನಂತಯ್ಯ ಸಾ|| ಗೋಸಾ ಮಹಾಲ ಬಾಲಯ್ಯ ಬಾಡಾ ಹೈದ್ರಾಬಾದ ರವರು, ನಾನು ದಿನಾಂಕ: 17-05-2011 ರಂದು ಅಕ್ಕ ಗನಕಮ್ಮ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ಅಕ್ಕಳಾದ ಗನಕಮ್ಮಳ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 2 ತೊಲೆ ಅಂದಾಜು ಕಿಮ್ಮತ್ತು 40,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀ, ಪಿ.ರಾಮಕೃಷ್ಣ ತಂದೆ ಪೋಚಯ್ಯ ಪಂಪರಿ ಸಾ|| ಟೆಂಪಲ್‌ ಅಲ್ವಾಲ್‌ ಸಿಕಿಂದ್ರಾಬಾದ ರವರು, ನಾನು ದಿನಾಂಕ: 18-04-2011 ರಂದು ಹೆಂಡತಿ ಪಿ.ಶಕುಂತಲಾ ಹಾಗೂ ಅವಳ ತಂಗಿ ಭುಜಮ್ಮಾ ಕೂಡಿಕೊಂಡು ದೇವಲಗಾಣಗಾಪುರ ಗ್ರಾಮಕ್ಕೆ ಬಂದು ಶ್ರೀ ದತ್ತಾತ್ರೇಯ ದೇವರ ದರ್ಶನ ಪಡೆದು ಮಂದಿರ ಹತ್ತಿರ ಪ್ರಸಾದ ತೆಗೆದುಕೊಳ್ಳುವಾಗ ನನ್ನ ಹೆಂಡತಿಯ ಕೊರಳಲ್ಲಿನ ಮಂಗಳ ಸೂತ್ರ ಹಾಗೂ ಬಂಗಾರದ ಚೈನ್‌ ಒಟ್ಟು 4 ತೊಲೆ ಅಂದಾಜು ಕಿಮ್ಮತ್ತು 80,000=00 ರೂ. ಯಾರೂ ಅಪರಚಿತ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ್ದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾಥ ಪ್ರಕರಣ:

ಅಪಜಲಪೂರ ಠಾಣೆ :
ಲಕ್ಷ್ಮಿಪುತ್ರ ತಂದೆ ಮಲ್ಲಣ್ಣ ಕಲಶೇ್ಟಿ ಸಾ|| ನಿಗಡಿ ಏರಿಯಾ ಪುಣೆ ಮಹಾರಾಷ್ಟ್ರ ರಾಜ್ಯ ರವರು ನಾನು ಮತ್ತು ನನ್ನ ಅಣ್ಣ ಸಂತೋಷ ಇತನು ಕೂಡಿಕೊಂಡು ಮಣ್ಣೂರ ಗ್ರಾಮದ ದೇವರ ದರ್ಶನಕ್ಕೆ ಬಂದು ದೇವರ ದರ್ಶನ ಪಡೆದು ಊಟಕ್ಕೆ ಕುಳಿತಾಗ 407 ವಾನಹ ಕೆಎ 32- 5900 ನೇದ್ದರೆ ಚಾಲಕ ತನ್ನ ವಾಹನವನ್ನು ಅಲಕ್ಷತನದಿಂದ ನಡೆಯಿಸಿ ಸಂತೋಷ ಇತನ ತಲೆಗೆ ಟಾಯರ ಹರಿದು ಸ್ಥಳದಲ್ಲಿಯೇ ಮರಣ ಹೊಂದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ