POLICE BHAVAN KALABURAGI

POLICE BHAVAN KALABURAGI

13 January 2019

KALABURAGI DISTRICT REPORTED CRIMES

ಅಧಿಕಾರ ದುರುಪಯೊಗಪಡಿಸಿಕೊಂಡು ಸರಕಾರಕ್ಕೆ ಮೊಸ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಬಸಣ್ಣ ಕೂಡಿ ಉ; ಕಾರ್ಯದರ್ಶಿ ಗ್ರೇಡ 1, ಪ್ರಭಾರ ಪಿ.ಡಿ.ಓ ಕರಕಿಹಳ್ಳಿ ಗ್ರಾಮ ಪಂಚಾಯತ ರವರು ದಿನಾಂಕ 01-10-2018 ರಿಂದ ಕರಕಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಪಿ.ಡಿ.ಓ ಅಂತಾ ಕರ್ತವ್ಯನಿರ್ವಹಿಸುತ್ತಿರುತ್ತೇನೆ, ಈ ಪಂಚಾಯತಿಯಲ್ಲಿ ವೈಜನಾಥ ತಂದೆ ದುಂಡಪ್ಪ ಮೊರಟಗಿ ಸಾ|| ಹರನಾಳ(ಬಿ) ಎಂಬುವರು ಕಂಪ್ಯೂಟರ ಆಪರೇಟರ್ ಅಂತಾ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ, ಈ ಮೊದಲು ಇದ್ದ ಪಿ.ಡಿ.ಓ ರವರು ತಮ್ಮ ಹೆಚ್ಚಿನ ಕರ್ತವ್ಯದ ಒತ್ತಡದಿಂದ ಪ್ರಧಾನ ಮಂತ್ರಿ ಅವಾಸ ಯೋಜನೆ, ಬಸವ ವಸತಿ ಯೋಜನೆ, ಡಾ|| ಬಿ.ಆರ್ ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಮನೆಗಳ ಜಿ.ಪಿ.ಎಸ್ ಮಾಡಲು ಕಂಪ್ಯೂಟರ ಆಪರೇಟರಾದ ವೈಜನಾಥ ರವರಿಗೆ ಆದೇಶಿಸಿದ್ದು ಇರುತ್ತದೆ. ಅದರಂತೆ ವೈಜನಾಥ ರವರು 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಯಾವುದೇ ಗ್ರಾಮ ಸಭೆ ಮಾಡದೆ ಮತ್ತು ಯಾವುದೇ ದಾಖಲಾತಿಗಳನ್ನು ತಯ್ಯಾರಿಸದೇ ಈ ಕೆಳಕಂಡ ಫಲಾನುಭವಗಳ ಹೆಸರಿಗೆ ಮನೆಗಳು ಮಂಜುರು ಮಾಡಿದಂತೆ ಮಾಡಿ ಅವರ ಹೆಸರಿನಿಂದ ಹಣ ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಹೀಗೆ ಒಟು 09 ಮನೆಗಳನ್ನು ಯಾರ ಗಮನಕ್ಕು ತರದೇ ಯಾವುದೋ ಖೋಟ್ಟಿ ಜಿಪಿಎಸ್ ಮಾಡಿ ಒಟ್ಟು 7,48,800/- ರೂ ಗಳನ್ನು ತನ್ನ ಸ್ವಂತಕ್ಕೆ ದುರುಪಯೋಗಿ ಪಡಿಸಿಕೊಂಡಿರುತ್ತಾನೆ, ಅದರಂತೆ 2016-17 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಅವಾಸ ಯೋಜನೆ ಅಡಿಯಲ್ಲಿ ಇನ್ನು ಕೆಲವು ಮಂಜುರಾದ ಮನೆಗಳ ಪೈಕಿ 03 ಮನೆಗಳು ಒಂದೆ ಕುಟುಂಬದವರಿಗೆ ಮಂಜುರು ಮಾಡಿರುತ್ತಾರೆ, ಮತ್ತು ಒಂದು ಮನೆಯನ್ನು ತಮ್ಮ ತಾಯಿ ರಾಯಮ್ಮ ಗಂಡ ದುಂಡಪ್ಪ ಮೋರಟಗಿ ರವರ ಹೆಸರಿಗೆ ಮತ್ತು ಇನ್ನೊಂದು ಮನೆಯನ್ನು ತನ್ನ ತಂಗಿ ಮಹಾಲಕ್ಷ್ಮೀ ತಂದೆ ದುಂಡಪ್ಪ ಮೋರಟಗಿ ಇವರ ಹೆಸರಿಗೆ ಹಾಕಿದ್ದು ಇರುತ್ತದೆ, ಈ ಮೊದಲು ಮಹಾಲಕ್ಷ್ಮೀ ರವರಿಗೆ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಅಮೋಘ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಅವರ ಗಂಡ ಕೆ.ಎಸ್.ಅರ್.ಟಿ.ಸಿ ಯಲ್ಲಿ ನಿರ್ವಾಹಕನಾಗಿರುತ್ತಾರೆ, ಕಮಲಾಕ್ಷಿ ಗಂಡ ಭೀಮರಾಯ ಇವರು ಗಾಣಿಗ ಸಮಾಜಕ್ಕೆ ಸೇರಿದವರಿದ್ದು, ಅವರಿಗೆ ಪರಿಶೀಷ್ಟ್ ಜಾತಿ ಅಂತಾ ನಮೂದಿಸಿ ಅವರಿಗೆ ಒಂದು ಮನೆ ಮಂಜುರು ಮಾಡಿರುತ್ತಾರೆ ಅದರಂತೆ ಮೇಲ್ಕಂಡವರ ಹೆಸರಗಳು ಈ ಕೆಳಗಿನಂತರ ಇರುತ್ತವೆ. 06 ಜನರಿಗೆ ಮಂಜುರಾದ ಮನೆಗಳನ್ನು ಕಟ್ಟಡ ಮಾಡದೇ ವೈಜನಾಥ ಈತನು ಸುಳ್ಳು ಜಿಪಿಎಸ್ ಮಾಡಿ ಸುಮಾರು 11,54,997/- ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡಿರುತ್ತಾನೆ, ವೈಜನಾಥ ಈತನು ನಮ್ಮ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ ಆಪರೇಟರ ಇದ್ದು, ದಿನಾಂಕ 19-05-2016 ರಿಂದ 25-05-2016 ರವರೆಗೆ ಗ್ರಾಮ ಪಂಚಾಯತ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಕಂಪ್ಯೂಟರ ಕೆಲಸ ಮಾಡಿರುತ್ತಾರೆ, ಆದರೆ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಾಂಕ 19-05-2016 ರಿಂದ 25-05-2016 ರವರೆಗೆ ಒಟ್ಟು 6 ದಿನ ತಾನು ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿರುವುದಾಗಿ ನಮೂದಿಸಿಕೊಂಡು ಒಟ್ಟು 1,344/- ರೂ ಹಣವನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೋಂಡಿರುತ್ತಾನೆ, ಈ ರೀತಿಯಾಗಿ ವೈಜನಾಥ ರವರು ಕಂಪ್ಯೂಟರನಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿಸಿ ಸರಕಾರಕ್ಕೆ ನಂಬಿಕೆ ದ್ರೋಹ ಮಾಡಿ ಒಟ್ಟು 19,05,141/- ರೂ ಗಳನ್ನು ತನ್ನ ಸ್ವಂತಕ್ಕೆ ದುರೂಪಯೋಗ ಪಡಿಸಿಕೊಂಡು ವಂಚನೆ ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಆದೇಶದಂತೆ, ಮತ್ತು ಅವರ ಸೂಚನೆಯ ಮೇರೆಗೆ ದೂರು ಸಲ್ಲಿಸಲು ತಡವಾಗಿರುತ್ತದೆ, ಆದ್ದರಿಂದ ವೈಜನಾಥನ ವಿರುದ್ದ ಕಾನೂನ ರೀತಿ ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶರಣಪ್ಪ ತಂದೆ ಮಲ್ಲಪ್ಪ ಹರಿಜನ ಸಾ|| ಹಂಗರಗಾ(ಬಿ) ತಾ|| ಜೇವರ್ಗಿ ಜಿಲ್ಲಾ|| ಕಲಬುರಗಿ ರವರು ತಮ್ಮದೊಂದು ಹೊರಿ ಕರವನ್ನು ತಮ್ಮ ಸಂಸಾರದ ಅಡಚಣೆ ಸಲುವಾಗಿ ಯಾಳಗಿ ಗ್ರಾಮದ ಮಹಿಬೂಬ ತಂದೆ ಖಾಸಿಮಸಾಬ ಚೌಧರಿ ಎಂಬುವರಿಗೆ ಮಾರಾಟ ಮಾಡಿದ್ದು ಇರುತ್ತದೆ, ಅದರಂತೆ ನಮ್ಮ  ಅಣ್ಣತಮ್ಮಕಿಯ ಚಂದ್ರಶಾ ತಂದೆ ಯಲ್ಲಪ್ಪ ಹರಿಜನ ರವರದೊಂದು ಹೊರಿ ಇದ್ದು, ಅದನ್ನು ಸಹ ತನ್ನ ಸಂಸಾರದ ಅಡಚಣೆ ಸಲುವಾಗಿ ಮೇಲ್ಕಂಡ ಚೌಧರಿಗೆ ಮಾರಾಟ ಮಾಡಿರುತ್ತಾರೆ, ಅದರಂತೆ ನಮ್ಮೂರಿನ ಕೆಲವುರು ಸಹ ತಮ್ಮ ದನಗಳನ್ನು ಮಾರಾಟ ಮಾಡಿರುತ್ತಾರೆ, ದಿನಾಂಕ 12-01-2019 ರಂದು ಯಾಳಗಿ ಗ್ರಾಮದ 1] ಮಹಿಬೂಬ ತಂದೆ ಖಾಸಿಮಸಾಬ ಚೌಧರಿ, ಮತ್ತು ಅವರ ಅಣ್ಣ 2] ಚಾಮದಸಾಬ ತಂದೆ ಖಾಸಿಮಸಾಬ ಚೌಧರಿ ರವರಿಬ್ಬರೂ ಕೂಡಿಕೊಂಡು ಒಂದು ಗೂಡ್ಸ್ ವಾಹನ ತೆಗೆದುಕೊಂಡು ನಮ್ಮೂರಿಗೆ ಬಂದು ನಮ್ಮ ಮತ್ತು ಇತರರ ಒಟ್ಟು 05 ಹೋರಿ ಕರಗಳನ್ನು ತನ್ನ ವಾಹನದಲ್ಲಿ ತುಂಬಿಕೊಂಡು ಹೋಗಿರುತ್ತಾನೆ, ನಂತರ ಬೆಳಿಗ್ಗೆ 10;00 ಗಂಟೆ ಸುಮಾರಿಗೆ ಮಹಿಬೂಬ ಚೌಧರಿ ಈತನು ನಮಗೆ ಫೋನ ಮಾಡಿ ನಿಮ್ಮೂರಿನ ಕೆಲವರು ಬಂದು ನಮ್ಮ ವಾಹನವನ್ನು ನಿಲ್ಲಿಸಿದ್ದಾರೆ ಅಂತಾ ಹೇಳಿದ್ದರಿಂದ ನಾನು ಮತ್ತು ನಮ್ಮ ತಮ್ಮನ ಮಗ ಸುಧೀರ ತಂದೆ ಚಂದ್ರಶಾ ಹರಿಜನ, ಪರಶುರಾಮ ತಂದೆ ಭಾಗಪ್ಪ ಹರಿಜನ, ಶ್ರೀಮಂತ ತಂದೆ ಸಿದ್ದಪ್ಪ ಹರಿಜನ ರವರ ಕೂಡಿಕೊಂಡು ಟಂಟಂ ತೆಗೆದುಕೊಂಡು ಯಲಗೋಡ ಸೀಮೆಯ ಜೆ.ಬಿ.ಸಿ 32 ನಂ ಕೇನಾಲ ಬ್ರಿಡ್ಜ್ ಹತ್ತಿರ ಹೋಗಿ ನೋಡಿದಾಗ ಅಲ್ಲಿ ನಮ್ಮೂರ 1] ಸಿದ್ರಾಮಪ್ಪ ತಂದೆ ಮಲ್ಲಪ್ಪ ನಾಯ್ಕೋಡಿ, 2] ಬಸಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಜವಳಗಿ ರವರು ಕೂಡಿ ದನಗಳ ವಾಹನವನ್ನು ನಿಲ್ಲಿಸಿದ್ದರು, ನಂತರ ನಾವು ಅವರ ಹತ್ತಿರ ಹೋಗಿ ಯಾಕ ವಾಹನ ನಿಲ್ಲಿಸಿದ್ದಿರಿ, ನಾವು ನಮ್ಮ ಸಂಸಾರದ ಅಡಚಣೆ ಸಲುವಾಗಿ ಮಾರಾಟ ಮಾಡಿರುತ್ತೇವೆ, ಬೇಕಾದರೇ, ನೀವೆ ದನಗಳನ್ನು ತೆಗೆದುಕೊಂಡು ನಮಗೆ ಹಣ ಕೊಡರಿ ಅಂತಾ ಹೇಳಿದೇನು, ಆಗ ಸಿದ್ರಾಮಪ್ಪ ಈತನು ನಮಗೆ ಏ ಹೊಲೆ ಸುಳಿಮಕ್ಕಳ್ಯಾ ನೀವು ಇಲ್ಲಿಗಿ ಯಾಕ ಬಂದಿರಿ,  ನಿಮ್ಮಿಂದೆ ಇದು ಬೆಂಕಿ ಹತ್ತಿದ್ದು ಅಂತಾ ಕಾಲಿನಿಂದ ನನ್ನ  ಹೊಟ್ಟೆಗೆ ಒದ್ದನು, ಆಗ ನಾನು ನೆಲದ ಮೇಲೆ ಬಿದ್ದಾಗ ಬಸಪ್ಪಗೌಡ ಇವನು ಕಾಲಿನಿಂದ ನನ್ನ ಬೆನ್ನಿನ ಮೇಲೆ ಒದ್ದನು, ಅಷ್ಟರಲ್ಲಿ ನಮ್ಮೊಂದಿಗೆ ಇದ್ದವರು ಬಿಡಿಸಿಕೊಂಡಿರುತ್ತಾರೆ, ಇನ್ನೊಮ್ಮೆ ನಿವು, ಚೌದ್ರಿಗಳಿಗೆ ದನ ಮಾರಿದರೆ ನಿಮಗ ಜೀವ ಸಹಿತ ಬಿಡುವುದಿಲ್ಲಾ ಅಂತಾ ಅಂದು ಅಲ್ಲಿಂದ ಹೋಗಿರುತ್ತಾರೆ,  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಪಾರ್ವತಿ ಗಂಡ ಶ್ರೀಕಾಂತ ಚವ್ಹಾಣ ಸಾ|| ಯಡ್ರಾಮಿ ತಾಂಡಾ ರವರಿಗೆ ಸಿಂದಗಿ ತಾಲೂಕಿನ ಮೋಸಳಗಿ ತಾಂಡಾದ ಶ್ರೀಕಾಂತ ತಂದೆ ಸಾಜು ಚವ್ಹಾಣ ರವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಸದ್ಯ ನನಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ, ನನ್ನ ಗಂಡ ಈಗ 1 ವರ್ಷದ ಹಿಂದೆ ಬೇರೆ ಮದುವೆ ಮಾಡಿಕೊಂಡಿದ್ದರಿಂದ ನಾನು ಯಡ್ರಾಮಿ ತಾಂಡಾದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ನನ್ನ ಮಕ್ಕಳ ಸಮೇತ ವಾಸವವಾಗಿರುತ್ತೇನೆ, ಈ ಮೊದಲು ನಮ್ಮೂರಿನ  ಹಿರಿಯರಾದ, ಚಂದ್ರಶೇಖರ ಪುರಾಣಿಕ, ರಜಾಕ ಮನಿಯಾರ ರವರ ಸಮಕ್ಷಮದಲ್ಲಿ ನನ್ನ ಉಪಜೀವನ ಸಲುವಾಗಿ ನನ್ನ ಗಂಡನಿಂದ 3 ಲಕ್ಷ ರೂಪಾಯಿ ಕೊಡಿಸುವುದಾಗಿ ಮಾತನಾಡಿದ್ದು ಇರುತ್ತದೆ, ಆದರೆ ನನ್ನ ಗಂಡನಿಗೆ ಆ ಹಣವನ್ನು ಕೇಳಿದರೇ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲಾ, ದಿನಾಂಕ 10-01-2019 ರಂದು 7;30 ಪಿ.ಎಂ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ಮತ್ತು ನಮ್ಮ ತಂದೆ ಮೋತು, ನಮ್ಮ ತಾಯಿ ಬನಕಿಬಾಯಿ ರವರು ಕೂಡಿಕೊಂಡು ಲೈಟಿನ ಬೆಳಕಿನಲ್ಲಿ ಮಾತಾಡುತ್ತಾ ಕುಳಿತಾಗ ನನ್ನ ಗಂಡ ಮೋಟರ ಸೈಕಲ ಮೇಲೆ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಈ ಮೊದಲು ನನ್ನ ಮೇಲೆ ಕೇಸು ಮಾಡಿಸಿದ್ದಲ್ಲದೆ ಈಗ ನನಗೆ ಹಣ ಕೇಳತಿಯಾ, ನಾನು ಹಣ ಕೊಡುವುದಿಲ್ಲಾ, ಇವತ್ತ ನಿನಗ ಖಲಾಸೇ ಮಾಡುತ್ತೇನೆ ಅಂತಾ ಅಂದು ನನಗೆ ಕೈ ಹಿಡಿದು ಎಳೆದಾಡಿ ಕೈಯಿಂದ ನನ್ನ ಬೆನ್ನಿನ ಮೇಲೆ ಹೊಡೆ ಬಡೆ ಮಾಡುತ್ತಿದ್ದಾಗ ನಮ್ಮ ತಂದೆಯವರು ಬಿಡಿಸಲು ಬಂದರು, ಆಗ ನನ್ನ ಗಂಡ, ನಮ್ಮ ತಂದೆಗೆ ಇದಕ್ಕೆಲ್ಲಾ ನೀನೆ ಕಾರಣ ಇದಿ ರಂಡಿ ಮಗನೆ, ಇವತ್ತ ನಿನಗ ಸಾಯಿಸೆಬಿಡತಿನಿ ಅಂತಾ ಅಂದು ನಮ್ಮ ತಂದೆಗೆ ನೆಲಕ್ಕೆ ಕೆಡವಿ ಕುತ್ತಿಗೆ ಹಿಡಿದು ಕೊಲೆ ಮಾಡುವ ಉದ್ದೇಶದಿಂದ ಅವರ ತೊರಡುಹಿಸುಕಲು ಮುಂದಾದಾಗ ನಮ್ಮ ಅಣ್ಣ ವಿಲ್ಲಾಸ, ಹಾಗು ನಮ್ಮ ತಾಂಡಾದ ವಿನೋದ ತಂದೆ ವಿಠ್ಠಲ ರಾಠೋಡ, ಆನಂದ ತಂದೆ ತಿಪ್ಪು ಪವಾರ, ದಿಲೀಪ ತಂದೆ ಶಂಕ್ರು ಪವಾರ ರವರು ಬಂದು ಬಿಡಿಸಿಕೋಂಡಿರುತ್ತಾರೆ, ಇಲ್ಲದಿದ್ದರೆ ನಮ್ಮ ತಂದೆಗೆ ಸಾಯಿಸಿ ಬಿಡುತ್ತಿದ್ದ, ಆಗ ಅಲ್ಲಿ ಹೆಚ್ಚಿನ ಜನರು ಸೇರುತ್ತಿದ್ದರಿಂದ ನನ್ನ ಗಂಡ ಅಂಜಿ ತನ್ನ ಮೋಟರ ಸೈಕಲ ನಂ ಕೆ.-28/.ಕ್ಯೂ-1377 ನೇದ್ದನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 January 2019

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಫರತಾಬಾದ ಠಾಣೆ : ದಿನಾಂಕ 10/01/19 ರಂದು ಜೋಗುರ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ  ಸಾರ್ವ ಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮ ಬಂದ ಮೇರೆಗೆ ಪಿ.ಎಸ್.ಐ. ಫರತಾಬಾದ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೋಗುರು ಗ್ರಾಮಕ್ಕೆ ಹೋಗಿ ಬಾತ್ಮ ಸ್ತಳದ ಮರೆಯಲ್ಲಿ ನಿಂತು ನೋಡಲು ಒಬ್ಬ ವ್ಯಕ್ತಿ ಒಂದು ರೂಪಾಯಿಗೆ 80/- ರೂಪಾಯಿ ಕೊಡುವ ಕರಾರಿನಲ್ಲಿ ಮಟಕಾ ಜೂಜಾಟ ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನ ಹೆಸರಿ ವಿಳಾಸ ವಿಚಾರಿಸಲು ಶಿವಶರಣಪ್ಪ ತಂದೆ ಕರಿವೀರಪ್ಪಾ ಮಾಲಿಪಾಟೀಲ ಸಾ; ಜೋಗುರ  ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಜೂಜಾಕ್ಕೆ ಬಳಸಿದ ನಗದು ಹಣ 520/-ರೂ,  ಒಂದು ಬಾಲ ಪೇನ್ನ್ ಅ.ಕಿಃ 00=0, ಎರಡು ಮಟಕಾ ಚೀಟಿಗಳು ಅ.ಕಿ 00=00 ಜಪ್ತಿ ಪಡಿಸಿ ಕೊಂಡು ಸದರಿಯವನೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ  ಅತ್ತರ ಪಾಶಾ ತಂದೆ ಸೈಯ್ಯದ ಗುಲಾಮ ಹುಸೇನ್ ಸಾ|| ಕಲಬುರಗಿ ರವರದು  ಕಮಲಾಪೂರದಲ್ಲಿನ ಸರ್ವೆ ನಂ: 393, 394 ಆಗಿದ್ದು ಇದರಲ್ಲಿ ನಮ್ಮ ಮನೆಗಳಿದ್ದು ಮತ್ತು ಸದರಿ ಹೊಲಗಳು ಸುಮಾರು 50 ವರ್ಷಗಳ ಮೇಲ್ಪಟ್ಟು ಕಬ್ಜೆದಾರರಿದ್ದು ಅದರ ಪಟ್ಟೆದಾರರು ನಮ್ಮ ತಂದೆಯವರಿದ್ದು , ಅವರ ನಿಧನದ ನಂತರ ನಾವೂ 06 ಜನ ಅಣ್ಣ-ತಮ್ಮಂದಿರ ಹೆಸರಿಗೆ ಪಟ್ಟಾ ಆಗಿರುತ್ತದೆ.  ದಿನಾಂಕ: 09/01/2019 ರಂದು ಸಾಯಂಕಾಲ 06:00 ಗಂಟೆಯ ಸುಮಾರಿಗೆ ಕಮಲಾಪೂರದಲ್ಲಿ ದಿನದಂತೆ ನಮ್ಮ ಹೊಲಕ್ಕೆ ನಮ್ಮ ಕಾರ್ ನಂ: ಎಮ್ ಹೆಚ್ 02 ಎ ವಾಯ್ 6359 ಇದರಲ್ಲಿ ಹೋಗಿ ನಮ್ಮ ಹೊಲದಲ್ಲಿ ನಿಲ್ಲಿಸಿ ನಾನು ನಮ್ಮ ತಮ್ಮಂದಿರಾದ 1) ತಾಹೇರ್ ಪಾಷಾ , 2) ಅಮೀರ ಖೂಸ್ರೂ 3) ಅಮೀರ ಪಾಷಾ ಮತ್ತು ನನ್ನ ಮಗ ತಾಲಿಬ ಖತೀಬ ತಂದೆ ಅಥರಪಾಶಾ ಎಲ್ಲರೂ ಹೊಲದಲ್ಲಿ ಹೋಗಿ ಒಂದು ಬೋರ್ಡ ನೋಡುತ್ತಾ ನಿಂತಾಗ ಒಮ್ಮೇಲೆ 15 ರಿಂದ 20 ಜನರು ತಮ್ಮ ಕೈಗಳಲ್ಲಿ , ರಾಡು ತಲ್ವಾರುಗಳು & ಬಡಿಗೆಗಳನ್ನು ಹಿಡಿದುಕೊಂಡು ನಮಗೆ ಬೈಯುತ್ತಾ ಅದರಲ್ಲಿದ್ದ 1) ಮೈನೋದ್ದಿನ್ ಗೂಳಿ ಎಂಬುವವನು ರಾಡಿನಿಂದ ನಮ್ಮ ತಮ್ಮ ಅಮೀರ ಖೂಸ್ರೂನ ತಲೆಯ ಹಿಂಭಾಗಕ್ಕೆ ಜೋರಾಗಿ ಹೊಡೆದನು, 2) ಸತ್ತಾರ ಇವನು ತಲ್ವಾರದಿಂದ ಅಮೀರ ಖೂಸ್ರೂ ಇವನ ಕುತ್ತಿಗೆಗೆ ಖಲ್ಲಾಸ್ ಮಾಡುವ ಉದ್ದೇಶದಿಂದ ಹೊಡೆಯುವಾಗ ತಪ್ಪಿಸಿಕೊಂಡಿರುವುದರಿಂದ ಅವನ ಬೆನ್ನಿಗೆ ತಲ್ವಾರ ಹಿಂದಿನ ಭಾಗದಿಂದ ಗಾಯಗೊಂಡಿರುತ್ತಾನೆ. 3) ಲತೀಫ್ ಎಂಬುವವನು ಅಮೀರ ಖೂಸ್ರೋಗೆ , ನನಗೆ & ತಾಹೇರ ಪಾಷಾನಿಗೆ ಕೈಯಿಂದ ಮುಷ್ಠಿ ಮಾಡಿ ಮತ್ತು ಕಾಲಿನಿಂದ ಹೊಡೆದಿರುತ್ತಾನೆ, 4) ರಶೀದ ಎಂಬುವವನು ತಾಹೇರ ಪಾಷಾನಿಗೆ ರಾಡಿನಿಂದ & ಬಡಿಗೆಯಿಂದ ಮತ್ತು 5) ಸಲೀಮ & 6) ಖಾಜಿ ಎಂಬುವ ಇವರೀಬ್ಬರೂ  ತಾಹೇರ್ ಪಾಷಾನಿಗೆ ತಲೆಗೆ, ಎದೆಗೆ, ಕಾಲಿಗೆ & ಹೊಟ್ಟೆಗೆ ಹೊಡೆದಿರುತ್ತಾರೆ. 7) ಇಬ್ರಾಹೀಮ್ 8) ಮುನ್ನಾ ಸೌದಾಗರ್ 9) ಮಸ್ತಾನ ಟೀಚರ್ 10) ಮುಕ್ರಂ ಧಾಬಾ & ಇನ್ನು 8-10 ಜನರು ಸದರಿಯವರ ಜೊತೆಗೆ ಇದ್ದು ಇವರನ್ನು ಇವತ್ತು ಖಲ್ಲಾಸ್ ಮಾಡಿರಿ ಎಂದು ಮೇಲಿನವರಿಗೆ ಚೀರುತ್ತಾ ಹೇಳಿ ಅವರು ಕೂಡ ನಾವೂ ಕೆಳಗೆ ಬಿದ್ದಾಗ ಕಾಲಿನಿಂದ ಮತ್ತು ರಾಡಿನಿಂದ ಹೊಡೆದಿರುತ್ತಾರೆ. ಮತ್ತು 11) ಖದೀರ ಚೊಂಗೆ ಇವರು , ಇವರಿಗೆ ಖಲ್ಲಾಸ್ ಮಾಡಿರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ ಎಂದು ಚಿರಾಡುತ್ತಿದ್ದರು , ಸದರಿ ಇದರಲ್ಲಿ ನನ್ನ ತಮ್ಮ ತಾಹೇರ್ ಪಾಶಾ ಇವರ ಮೊ.ನಂ: 9739748728 & ಕಿಶೆಯಲ್ಲಿನ 50,000/- ರೂ ಜಗಳದಲ್ಲಿ ಬಿದ್ದು ಕಳೆದು ಹೋಗಿರುತ್ತವೆ, ಅಷ್ಟರಲ್ಲಿಯೆ ಕಮಲಾಪೂರ ಗ್ರಾಮದವರಾದ 1) ಈರಣ್ಣ 2) ಡಾ|| ಫಾರುಖ ಬೇಗ ಮತ್ತು ಇತರರು ಜಗಳ ಬಿಡಿಸಲು ಬಂದಾಗ ನಾನು ನನ್ನ ಮಕ್ಕಳು ಅಲ್ಲಿಂದ ತಪ್ಪಿಸಿಕೊಂಡು ಕಾರಿನಲ್ಲಿ ಪೊಲೀಸ್ ಠಾಣೆಗೆ ಹೋಗುವಷ್ಟರಲ್ಲಿ ಆ ಗುಂಪಿನ 5-6 ಜನರು ನಮ್ಮ ಕಾರ್ ತಡೆದು ನನಗೆ ಕುತ್ತಿಗೆಗೆ ಹಿಡಿದು ಎಳೆದಾಡಿ  ಕಾರು ಕಸಿದುಕೊಂಡಿರುತ್ತಾರೆ.  ನಾವು ಪೊಲೀಸ್ ಠಾಣೆಗೆ ಹೋದರು ಇವರೇಲ್ಲರೂ ಠಾಣೆಯಲ್ಲಿ ಬಂದು ನಮಗೆ ಖಲ್ಲಾಸ್ ಮಾಡುತ್ತೇವೆ , ಮತ್ತು ನೀವು ಇಲ್ಲಿಂದ ಹೇಗೆ ಹೋಗುತ್ತಿರಿ ಮಕ್ಕಳೆ ಎಂದು ಹೇಳಿ ಠಾಣೆಯಲ್ಲಿ ನಮಗೆ ಬೆದರಿಕೆ ಹಾಕಿ ಮುಂದೆ ಕೇಸ್ ಮಾಡಬಾರದೆಂದು ಅಂಜಿಸಿ ಬಿಳಿ ಹಾಳೆಯ ಮೇಲೆ ಸಹಿಯನ್ನು ಒತ್ತಾಯ ಪೂರ್ವಕವಾಗಿ ಪಡೆದಿರುತ್ತಾರೆ. ಆದುದರಿಂದ ದಯಾಳುಗಳಾದ ತಾವೂ ನಮ್ಮ ಪ್ರಾಣಗಳಿಗೆ ರಕ್ಷಣೆ ನೀಡಿ ಸದರಿಯವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಕೊಳ್ಳಲು ವಿನಂತಿ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

10 January 2019

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಬೆಳೆಸಿದವನ ಬಂಧನ :
ಯಡ್ರಾಮಿ ಠಾಣೆ : ದಿನಾಂಕ 09-01-2019 ರಂದು ಮಾಗಣಗೇರಿ ಗ್ರಾಮದ ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ  ಇತನು ತನ್ನ ಹೊಲ ಸರ್ವೆ ನಂ 214 ನೇದ್ದರಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುತ್ತಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ನಾಗಪ್ಪ ಪಿ.ಎಸ್.. ಯಡ್ರಾಮಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಎಸ್.ಎಸ್.ಹುಲ್ಲೂರ ಡಿ.ವ್ಹಾಯ್.ಎಸ್.ಪಿ. ಸಾಹೇಬರು ಗ್ರಾಮಾಂತರ ಉಪ ವಿಭಾಗ ಕಲುಬರಗಿ ರವರಿಗೆ ಬರಮಾಡಿಕೊಂಡು ಪತ್ರಾಂಕಿತ ಅಧಿಕಾರಿಗಳಾದ ಶ್ರೀ ರಾಜಕುಮಾರ ಜಾಧವ ತಹಸೀಲ್ದಾರರು ಯಡ್ರಾಮಿ ರವರಿಗೆ ಮಾಗಣಗೇರಿ ಗ್ರಾಮಕ್ಕೆ ಬರಮಾಡಿಕೊಂಡು ವಿಷಯ ತಿಳಿಸಿ ದಾಳಿ ಕಾಲಕ್ಕೆ ಹಾಜರಿದ್ದು ಪಂಚನಾಮೆಯನ್ನು ಜರುಗಿಸಿ ಕೊಡಲು ಕೋರಿಕೋಂಡೆನು, ನಂತರ ನಾನು ಮತ್ತು ಡಿ.ವ್ಹಾಯ್.ಎಸ್.ಪಿ. ಸಾಹೇಬರು,ತಹಸೀಲ್ದಾರ ಸಾಹೇಬರು ಯಡ್ರಾಮಿ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಇಲಾಖಾ ವಾಹನದಲ್ಲಿ ಹೊರಟು ನಂತರ ಪಂಚರ ಸಹಾಯದಿಂದ ಆರೋಪಿತರ ಹೊಲಕ್ಕೆ ಹೋಗಿ ನೋಡಿದಾಗ ಆ ಹೊಲದಲ್ಲಿ ಒಬ್ಬ ವ್ಯಕ್ತಿ ಕೆಲಸ ಮಾಡುತ್ತಿದ್ದನು, ಅವನು ನಮ್ಮನ್ನು ನೋಡಿ ಓಡಲು ಪ್ರಾರಂಭಿಸಿದರು, ನಂತರ ಸಿಬ್ಬಂದಿಯವರೊಂದಿಗೆ ಆ ವ್ಯಕ್ತಿಯನ್ನು ಹಿಡಿದು ವಿಚಾರಿಸಲಾಗಿ ತನ್ನ ಹೆಸರು ಮಲ್ಲಪ್ಪ ತಂದೆ ಸಿದ್ದಪ್ಪ ದನಶೇಟ್ಟಿ ಸಾ|| ಮಾಗಣಗೇರಿ ಅಂತಾ ತಿಳಿಸಿದನು ಆಗ ನಾವು ಯಾಕೆ ನಮ್ಮನ್ನು ನೋಡಿ ಓಡುತ್ತಿದ್ದಿಯಾ ಅಂತಾ ಕೇಳಲಾಗಿ ಅವನು  ನಾನು ನನ್ನ ತಮ್ಮನಾದ ಜಗ್ಗು ಇವನ ಹೊಲವನ್ನು ಗುತ್ತಿಗೆಗೆ ಹಾಕಿಕೊಂಡಿದ್ದು ಸದರಿ  ಹೊಲದಲ್ಲಿ ನಾನು ಯಾವುದೆ ಪರವಾನಿಗೆ ಇಲ್ಲದೆ ಗಾಂಜಾ ಗಿಡಗಳನ್ನು ಬೆಳೆದಿರುತ್ತೇನೆ, ಇದರಿಂದ ಭಯಗೊಂಡು ನಾನು ಓಡುತ್ತಿದ್ದೆನು ಅಂತಾ ಹೇಳಿ ಹೊಲದಲ್ಲಿಯೇ ಬೆಳೆದ ಗಾಂಜಾ ಗಿಡಗಳನ್ನು ತೋರಿಸಿದನು, ನಂತರ ಪಂಚರು ಹಾಗು ತಹಸೀಲ್ದಾರ ಸಾಹೇಬರ ಸಮಕ್ಷಮ ನೋಡಲಾಗಿ ಅಂದಾಜು 100 ಆಸು ಪಾಸು ಹಸಿ ಗಾಂಜಾ ಗಿಡಗಳು ಇದ್ದವು, ಅಲ್ಲದೆ ಅಲ್ಲಿಯೇ ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾವನ್ನು ಸಂಗ್ರಹಿಸಿ ಇಟ್ಟಿದ್ದನು. ನಂತರ ಮಾಗಣಗೇರಿ ಗ್ರಾಮದ ವ್ಯಾಪಾರಿಯಾದ ಚನ್ನಪ್ಪ ತಂದೆ ಮೇಲಪ್ಪಗೌಡ ಮಾಲಿಪಾಟೀಲ ರವರಿಗೆ ಸದರಿ ವಿಷಯವನ್ನು ತಿಳಿಸಿ ಪಂಚನಾಮೆ ಜರುಗಿಸಲು ಸ್ಥಳಕ್ಕೆ ಬರಮಾಡಿಕೊಂಡೆನು, ನಂತರ ಪಂಚರ ಸಮಕ್ಷಮ 1] ಹಸೀ ಗಾಂಜಾ ಗಿಡಗಳನ್ನು ಬುಡ ಸಮೇತ ಕಿತ್ತಿ ಎಣಿಸಿದಾಗ 100 ಗಿಡಗಳಾಗಿದ್ದು, ಅದನ್ನು ಬುಡ ಸಮೇತ ತೂಕ ಮಾಡಿಸಲಾಗಿ 154 ಕೇ.ಜಿ  ಅದರ ಕಿಮ್ಮತ್ತು 6,16,000/- ಸಾವಿರ ರೂ 2] ಒಂದು ಬಿಳಿ ಪ್ಲಾಸ್ಟಿಕ ಚೀಲದಲ್ಲಿ ಹಸಿ ಗಾಂಜಾ ಅದರ  ಅಂದಾಜು ತೂಕ 4 ಕೇ.ಜಿ ಅದರ ಅ.ಕಿ 16000/- ರೂ ಹೀಗೆ ಒಟ್ಟು ಮೊತ್ತ 6,32,000/- ರೂ, ನೇದ್ದನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು, ಆರೋಪಿತನೊಂದಿಗೆ ಯಡ್ರಾಮಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿ ಬಾವಿಯಲ್ಲಿ ಬಿದ್ದು ಸಾವು ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಶಿವಯ್ಯ ಗುತ್ತೇದಾರ ಸಾ|| ಚಿಂಚೋಳಿ ಗ್ರಾಮ ರವರದು ಚಿಂಚೋಳಿ ಸೀಮಾಂತರದಲ್ಲಿ ಹೊಲ ಸರ್ವೆ ನಂಬರ 206 ರಲ್ಲಿ 4 ಎಕರೆ 9 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದಲ್ಲಿ ಅಂದಾಜು 65 ರಿಂದ 70 ಪೀಟ್ ಆಳವಾದ ಬಾವಿ ಇದ್ದು, ಭಾವಿಯಲ್ಲಿ ಸದ್ಯ ಅಂದಾಜು 3 ಪೀಟದಷ್ಟು ನೀರು ಇರುತ್ತವೆ, ನಾನು ಆಗಾಗ ಹೊಲಕ್ಕೆ ಹೋಗಿ ಬರುವುದು ಮಾಡುತ್ತೇನೆ. ದಿನಾಂಕ 08-01-2019 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಪ್ರಕಾಶ ತಂದೆ ಹಣಮಂತ ಭಜಂತ್ರಿ ಈತನು ನಮ್ಮ ಮನೆಗೆ ಬಂದು ನಿಮ್ಮ ಹೊಲದಲ್ಲಿನ ಭಾವಿಯಲ್ಲಿ ಮುಖ ಕೆಳಗೆ ಮಾಡಿ ಒಬ್ಬ ವ್ಯೆಕ್ತಿಯ ಶವ ಬಿದ್ದಿದೆ ನಾನು ಸಾಯಂಕಾಲ 4:30 ಗಂಟೆ ಸುಮಾರಿಗೆ ಕುರಿ ಮೇಯಿಸುತ್ತಾ ನಿಮ್ಮ ಭಾವಿಯ ಕಡೆಗೆ ಹೋದಾಗ ನೋಡಿರುತ್ತೇನೆ ಎಂದು ತಿಳಿಸಿದ ಮೇರೆಗೆ. ನಾನು ಮತ್ತು ನಮ್ಮೂರಿನವರಾದ ಮಡಿವಾಳ ಲೋಣಿ, ಶ್ರೀಶೈಲ ಗುತ್ತೇದಾರ, ಸಂತೋಷ ಯಳಸಂಗಿ, ನಾಗಯ್ಯ ಗುತ್ತೇದಾರ, ಅಪ್ಪಾಶಾ ಜಗದಿ ಇನ್ನಿತರರೂ ಕೂಡಿ ನಮ್ಮ ಹೊಲಕ್ಕೆ ಹೋಗಿ ಬಾವಿಯಲ್ಲಿ ನೋಡಲು, ನಮ್ಮ ಭಾವಿಯಲ್ಲಿ ಒಬ್ಬ ಗಂಡು ವ್ಯೆಕ್ತಿಯ ಶವ ಬೋರಲಾಗಿ ಬಿದ್ದಿದ್ದು ಇತ್ತು. ನಮ್ಮ ಭಾವಿಯಲ್ಲಿ ಕೆಳಗೆ ಇಳಿಯಲು ಸರಿಯಾದ ಸಿಡಿಗಳು ಇಲ್ಲದೆ ಇರುವುದರಿಂದ ಹಾಗೂ ಕತ್ತಲಾಗಿದ್ದರಿಂದ, ಬಾವಿಯಿಂದ ಶವವನ್ನು ತಗೆಯಲು ದಿನಾಂಕ 09-01-2019 ರಂದು ಬೆಳಿಗ್ಗೆ 08:00 ಗಂಟೆಗೆ ಮೇಲೆ ತಿಳಿಸಿದವರೆಲ್ಲರೂ ಕೂಡಿ ಅಫಜಲಪೂರದ ಅಗ್ನಿ ಶಾಮಕ ಇಲಾಖೆಯವರಿಂದ ಹಾಗೂ ನಮ್ಮೂರಿನ ಮಲ್ಲಿಕಾರ್ಜುನ ತಡಲಗಿ, ಗುಂಡಯ್ಯ ಹಿರೇಮಠ, ಶ್ರೀಮಂತ ಗೌರ, ಬಾಬು ಕಾಳೆ ರವರಿಂದ ಬಾವಿಯಲ್ಲಿದ್ದ ಶವವನ್ನು ಮೇಲೆ ತಗೆಸಿ ನೋಡಲಾಗಿ ಅಂದಾಜು 35-40 ವಯಸ್ಸಿನ ಗಂಡು ವ್ಯೆಕ್ತಿಯ ಶವ ಇದ್ದು, ಶವದ ಮೈ ಮೇಲಿನ ಬಟ್ಟೆಗಳನ್ನು ನೋಡಲಾಗಿ ಬಿಳಿಯ ಬಣ್ಣದ ಕಪ್ಪು ಗೆರೆ ಗಳಿರುವ ಹಾಪ್ ಶರ್ಟ್, ನೀಲಿ ಬಣ್ಣದ ಜೀನ್ಸ ಪ್ಯಾಂಟ್, ಚಾಕಲೇಟ್ ಬಣ್ಣಾದ ಅಂಡರವೇರ್ ಇರುತ್ತದೆ. ಶವವನ್ನು ಪರಿಶೀಲಿಸಿ ನೋಡಲಾಗಿ ತಲೆಯ ಹಿಂದೆ ರಕ್ತಗಾಯ ಹಾಗೂ ಬಲ ಹುಬ್ಬಿನ ಮೇಲೆ ರಕ್ತಗಾಯ, ಹಾಗೂ ಎಡಗೈ ಮುಂಗೈಗೆ ರಕ್ತಗಾಯ ಮೈಮೇಲೆ ಅಲ್ಲಲ್ಲಿ ತರಚಿದ ಗಾಯಗಳು ಇದ್ದಿರುತ್ತವೆ. ಸದರಿ ವ್ಯೆಕ್ತಿ ಅಂದಾಜು ದಿನಾಂಕ 07-01-2019 ರಿಂದ ದಿನಾಂಕ 08-1-2019 ರ ಸಾಯಂಕಾಲ 4:30 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಹೋಲದಲ್ಲಿನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ. ಸದರಿ ವ್ಯೆಕ್ತಿಯ ಮೈ ಮೇಲೆ ಇದ್ದ ಗಾಯಗಳು, ಸದರಿ ಮೃತ ವ್ಯೆಕ್ತಿ ಬಾವಿಯಲ್ಲಿ ಬೀಳುವಾಗ ಆದ ಗಾಯಗಳೊ ಅಥವಾ ಅದಕ್ಕಿಂತಲು ಮುಂಚೆ ಆದ ಗಾಯಗಳು ಎಂಬ ಬಗ್ಗೆ ಗೊತ್ತಿರುವುದಿಲ್ಲ. ಆದ್ದರಿಂದ ಸದರಿ ವ್ಯೆಕ್ತಿಯ ಸಾವಿನಲ್ಲಿ ನಮಗೆ ಅನುಮಾನ ಇರುತ್ತದೆ. ಕಾರಣ ಸದರಿ ಅಪರಿಚತ ವ್ಯೆಕ್ತಿ ಮೃತಪಟ್ಟ ಬಗ್ಗೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಚನ್ನಬಸಪ್ಪ ತಂದೆ ವೀರಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ರವರ ಮಗನಾದ ಪರಶುರಾಮನು ಕಲಬುರಗಿ ಜಿಲ್ಲೆಯ ಅಫಜಲಪೂರ ತಹಹಸಿಲ ಕಾರ್ಯಾಲಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಅಂತಾ ಸುಮಾರು 9 ವರ್ಷಗಳಿಂದ ಸರ್ಕಾರಿ ನೌಕರಿ ಮಾಡಿಕೊಂಡಿದ್ದು, ಸದ್ಯ ರೇವೂರ (ಬಿ) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಂತ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾನೆ. ದಿನಾಂಕ 09-01-2019 ರಂದು ರಾತ್ರಿ 10:00 ಗಂಟೆಗೆ ಅಫಜಲಪೂರದಲ್ಲಿ ನನ್ನ ಮಗನಾದ ಪರಶುರಾಮನ ಜೋತೆಗೆ ಕೆಲಸ ಮಾಡುವ ಶರಣಪ್ಪ ನಡಗಟ್ಟಿ (ವಿಎ) ಇವರು ನನಗೆ ಪೋನ್ ಮಾಡಿ ನಿಮ್ಮ ಮಗನಾದ ಪರಶುರಾಮನಿಗೆ ಎಕ್ಸಿಡೆಂಟ್ ಆಗಿದೆ ನೀವು ಅಫಜಲಪೂರಕ್ಕೆ ಬನ್ನಿ ಎಂದು ತಿಳಿಸಿದ ಮೇರೆಗೆ  ನಾನು ಮತ್ತು ನನ್ನ ಹಿರಿಯ ಮಗನಾದ ಶರಣಪ್ಪ ಹಾಗೂ ನಮ್ಮೂರಿನವರಾದ ಶೋಕತ್ತಅಲಿ ಮುಲ್ಲಾ, ಮಾರುತಿ ಕಲ್ಲೂರ, ಮಾಹಾದೇವಪ್ಪ ಮಾಡಳ್ಳಿ ಇನ್ನಿತರರೂ ಕೂಡಿ ಒಂದು ಖಾಸಗಿ ವಾಹನ ಮಾಡಿಕೊಂಡು ಬೆಳಗಿನ ಜಾವ ಅಫಜಲಪೂರಕ್ಕೆ ಬಂದು ಅಫಜಲಪೂರದ ಶವಗಾರದಲ್ಲಿದ್ದ ನನ್ನ ಮಗನ ಮೃತ ದೇಹವನ್ನು ನೋಡಲಾಗಿ ನನ್ನ ಮಗನ ಎದೆಗೆ ಭಾರಿ ಗುಪ್ತಗಾಯವಾಗಿ ಕಂದುಗಟ್ಟಿರುತ್ತದೆ ಹಾಗೂ ಮುಖಕ್ಕೆ ಭಾರಿ ಗುಪ್ತಗಾಯ ಹಾಗೂ ತರಚಿದ ಗಾಯಗಳು ಆಗಿರುತ್ತವೆ. ನಂತರ ಅಲ್ಲೆ ಇದ್ದ ನನ್ನ ಮಗನ ಸಹದ್ದೋಗಿಗಳಿಗೆ ವಿಚಾರಿಸಿದಾಗ, ನನ್ನ ಮಗನ ಜೋತೆಗೆ ಕೆಲಸ ಮಾಡುವ ಸಿದ್ರಾಮ ಕುಂಬಾರ ಗ್ರಾಮ ಲೆಕ್ಕಾಧಿಕಾರಿ ಇವರು ತಿಳಿಸಿದ್ದೆನೆಂದರೆ, ನಿಮ್ಮ ಮಗನಾದ ಪರಶುರಾಮ ಹಾಗೂ ನಾನು ಮತ್ತು ಗಿರೀಶ ಸರ್ಕಾರಿ ಕೆಲಸದ ಮೇಲೆ ನಾವು ಮೂರು ಜನರು ನಮ್ಮ ನಮ್ಮ ಗ್ರಾಮಗಳ ಸಾಲ ಮನ್ನಾದ ಸರ್ವೆ ಮಾಡಿಕೊಂಡು ಮರಳಿ ಎಲ್ಲರೂ ಮಲ್ಲಾಬಾದ ಗ್ರಾಮಕ್ಕೆ ಬಂದು ರಾತ್ರಿ 8:30 ಗಂಟೆಗೆ ಚಹಾ ಕುಡಿದು ಮಲ್ಲಾಬಾದ ಗ್ರಾಮದಿಂದ ನಾನು ಮತ್ತು ಗಿರೀಶ ಇಬ್ಬರು ನನ್ನ ಮೋಟರ ಸೈಕಲ ಮೇಲೆ ಹಾಗೂ ನಿಮ್ಮ ಮಗ ಅವನ ಮೋಟರ ಸೈಕಲ ಮೇಲೆ ಕುಳಿತು ಅಫಜಲಪೂರಕ್ಕೆ ಹೊರಟಿರುತ್ತೇವೆ. ರಾತ್ರಿ 8:45 ಗಂಟೆ ಸುಮಾರಿಗೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನಿರಾವರಿ ಆಫೀಸ್ ಹತ್ತಿರ ನಿಮ್ಮ ಮಗ ಮೋಟರ ಸೈಕಲ ಮೇಲೆ ನಮ್ಮ ಮುಂದೆ ಹೋಗುತ್ತಿದ್ದನು. ಅವನ ಮುಂದೆ ಒಂದು ಕಬ್ಬಿನ ಟ್ಯಾಕ್ಟರ ಹೋಗುತ್ತಿತ್ತು. ಆಗ ಸದರಿ ಕಬ್ಬಿನ ಟ್ಯಾಕ್ಟರ ಚಾಲಕ ಯಾವುದೆ ಸೂಚನೆಗಳನ್ನು ನೀಡದೆ ಹಾಗೂ ಟ್ಯಾಕ್ಟರ ನಿಲ್ಲಿಸುವಂತಹ ಸೂಚನೆಗಳನ್ನು ಸಹ ಇಂಡಿಕೇಟರ ಲೈಟಗಳನ್ನು ಸಹ ಹಾಕದೆ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಒಮ್ಮೆಲೆ ಬ್ರೇಕ್ ಹಾಕಿದಾಗ ನಿಮ್ಮ ಮಗನ ಮೋಟರ ಸೈಕಲ ಟ್ಯಾಕ್ಟರ ಹಿಂದಿನ ಟ್ರೈಲಿಗೆ ಡಿಕ್ಕಿಯಾಗಿ ನಿಮ್ಮ ಮಗನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯಗಳು ಆಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ. ಟ್ಯಾಕ್ಟರ ಚಾಲಕ ಟ್ಯಾಕ್ಟರಗೆ ಯಾವುದೆ ರೀತಿ ಗುರುತು ಪಟ್ಟಿಗಳು ಹಾಗೂ ಸಿಗ್ನಲ್ ಲೈಟಗಳು ಹಾಕಿರುವುದಿಲ್ಲ, ಘಟನೆಯ ನಂತರ ಸದರಿ ಟ್ಯಾಕ್ಟರ ಚಾಲಕ ಟ್ಯಾಕ್ಟರ ನಿಲ್ಲಿಸಿ ಓಡಿ ಹೋಗಿರುತ್ತಾನೆ ಎಂದು ತಿಳಿಸಿದರು. ನಂತರ ನಾವು ಅಪಘಾತವಾದ ಸ್ಥಳಕ್ಕೆ ಹೋಗಿ ಟ್ಯಾಕ್ಟರ ನೋಡಲಾಗಿ ಸೋನಾಲಿಕಾ ಕಂಪನಿಯ ಟ್ಯಾಕ್ಟರ ಇದ್ದು ಪಾಸಿಂಗ್ ನಂಬರ ಇರುವುದಿಲ್ಲ ಹಾಗೂ ಟ್ರೈಲಿಗಳಿಗೂ ಸಹ ನಂಬರ ಇರುವುದಿಲ್ಲ. ನನ್ನ ಮಗನ ಮೋಟರ ಸೈಕಲ ನೋಡಲು ಹೊಂಡಾ ಶೈನ್ ಕಂಪನಿಯ ಹೊಸ ಮೋಟರ ಸೈಕಲ ಇದ್ದು ಅದರ ನಂ CH NO:- ME4JC65VCJT026174   ENG NO:- JC65E-T-2070143 ಅಂತಾ ಇರುತ್ತದೆ. ದಿನಾಂಕ 09-01-2019 ರಂದು 8:45 ಪಿ ಎಮ್ ಕ್ಕೆ ನನ್ನ ಮಗನಾದ ಪರಶುರಾಮ ತಂದೆ ಚನ್ನಬಸಪ್ಪ ಬಟಗೇರಿ ಸಾ|| ಬರದ್ವಾಡ ತಾ|| ಕುಂದಗೋಳ ಜಿ|| ಧಾರವಾಡ ಹಾ|| ವ|| ಅಫಜಲಪೂರ ಈತನು ಸರ್ಕಾರಿ ಕೆಲಸದ ಮೇಲೆ ಕಲಬುರಗಿ – ಅಫಜಲಪೂರ ರೋಡಿಗೆ ಇರುವ ನೀರಾವರಿ ಆಫೀಸ್ ಹತ್ತಿರ ಮೋಟರ ಸೈಕಲ ಮೇಲೆ ಅಫಜಲಪೂರಕ್ಕೆ ಬರುತ್ತಿದ್ದಾಗ, ಕಬ್ಬು ಸಾಗಾಟ ಮಾಡುವ ಸೋನಾಲಿಕಾ ಕಂಪನಿಯ ಟ್ಯಾಕ್ಟರ ನೇದ್ದರ ಚಾಲಕ ಟ್ಯಾಕ್ಟರನ್ನು ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹೊಡೆದರಿಂದ ನನ್ನ ಮಗನ ಮೋಟರ ಸೈಕಲ ಟ್ಯಾಕ್ಟರಕ್ಕೆ ಡಿಕ್ಕಿಯಾಗಿ ಅವನ ಮುಖಕ್ಕೆ ಹಾಗೂ ಎದೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯವಾಗಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾನೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.