POLICE BHAVAN KALABURAGI

POLICE BHAVAN KALABURAGI

27 July 2018

KALABURAGI DISTRICT REPORTED CRIMES

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.07.2018 ರಂದು 23;15 ಗಂಟೆಯಿಂದ ಪಿ>ಎದ್.ಐ. ರಾಘವೇಂದ್ರ ನಗರ ಠಾಣೆ  ಮತ್ತು  ಸಿಬ್ಬಂದಿಯವರಾದ ನಾನು ಹಾಗು ಶ್ರೀ ಶಿವಯೋಗಿ ಎಎಸ್ಐ ಶ್ರೀ ಶಿವಲಿಂಗಪ್ಪ ಹೆಚ್.ಸಿ 06, ಶ್ರೀ ಶಿವಲಿಂಗ ಪಿಸಿ 1241 ಮತ್ತು ಶ್ರೀ ಗಂಗಾಧರ ಪಿಸಿ 642 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ  ಸ್ವತ್ತಿನ ಗುನ್ನೆಗಳನ್ನು ತಡೆಗಟ್ಟು ಸಂಬಂದ ರಾತ್ರಿ ವೇಳೆಯಲ್ಲಿ ವಿಶೇಷ ಗಸ್ತು ಚೆಕ್ಕಿಂಗ್ ಕರ್ತವ್ಯ ನಿರ್ವಹಿಸುತ್ತಾ ದಿನಾಂಕ; 26/07/2018 ರಂದು ಬೆಳ್ಳಿಗ್ಗೆ 3:30 ಗಂಟೆಗೆ ಠಾಣಾ ವ್ಯಾಪ್ತಿಯ ಬಾಳೆ ಲೇಔಟದಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ  ಪ್ರಭುದೇವ್ ನಗರದ ಹತ್ತಿರ ರಸ್ತೆಯ ಪಕ್ಕದಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ನಿಧಾನವಾಗಿ ನಡೆಯುತ್ತಾ ಇದಗಾ ಮೈದಾನದ ಪಕ್ಕದಲ್ಲಿ ಇರುವ ರಸ್ತೆಯ ಮೇಲೆ ಬೆಳ್ಳಿಗ್ಗೆ 4:00 ಗಂಟೆಗೆ ಹೋಗುತ್ತಿದ್ದಂತೆ ನಮ್ಮಿಂದ ಸ್ವಲ್ಪ ದೂರದ ರಸ್ತೆಯ ಪಕ್ಕದಲ್ಲಿ ಕೆಲವು ಜನರು ಗುಸು ಗುಸು ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ಅವರಿಗೆ ಗೊತ್ತಾಗದ ಹಾಗೆ ನಾವು ಅವರ ಹತ್ತಿರ ಹೋಗಿ ನೋಡಲು 6 ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿದಾಗ ಸದರಿಯವರು ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು 6 ಜನರಿಗೆ ಹಿಡಿದುಕೊಂಡಿದ್ದು ನಂತರ ಹಿಡಿದುಕೊಂಡ 6 ಜನರಿಗೆ ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಸಾಗರ ತಂದೆ ಪ್ರಕಾಶ ಸಿರಮನೂರ ಸಾ:ಆಶ್ರಯ ಕಾಲೋನಿ ಶಹಾಬಜಾರ ಅಂಬೇಡ್ಕರ ಹಾಸ್ಟೇಲ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ಒಂದು ಚಾಕು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೋರೆತಿದ್ದು 2. ಪರಮೇಶ್ವರ ತಂದೆ ದೇವೇಂದ್ರಪ್ಪಾ ಹೊನಗುಂಟಾ ಸಾ: ಬಸವಲಿಂಗ ನಗರ ಶಹಾಬಜಾರ  ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬಡಿಗೆ ದೋರೆತಿದ್ದು 3. ಸತೀಶ ತಂದೆ  ಟಿಪ್ಪು ರಾಠೋಡ  ಸಾ: ಶಹಾಬಜಾರ  ಕಲಬುರಗಿ. ಇವನ ಹತ್ತಿರ ಕಾಗದದಲ್ಲಿ ಖಾರದ ಪುಡಿ ಚೀಟ .ಮುಖಕ್ಕೆ ಕಟ್ಟಿಕೊಳ್ಳು ದಸ್ತಿ ದೊರೆತಿದ್ದು ಇರುತ್ತದೆ. 4. ಶರಣಬಸಪ್ಪಾ ತಂದೆ ಯಲ್ಲಪ್ಪಾ ಕಾಂಬಳೆ ಸಾ: ನಿರಗುಡಿ ತಾ;ಆಳಂದ  ಇವನ ಹತ್ತಿರ ಒಂದು ದಸ್ತಿ 5. ಜೈ ಭೀಮ ತಂದೆ ಲಾಲಪ್ಪಾ ಕಮಲಾಪೂರ ಸಾ: ಬಸವಲಿಂಗ ನಗರ ಹರಿಜನ ವಾಡ ಶಹಾಬಜಾರ ಕಲಬುರಗಿ ಇವನ ಹತ್ತಿರ ಒಂದು ದಸ್ತಿ,ಮತ್ತು ಒಂದು ಹಗ್ಗ ದೋರೆತ್ತಿದ್ದು 6. ನಿತೀನ ತಂದೆ ಶಿವಾಜಿ ಸೂರ್ಯವಂಶಿ ಸಾ:ಬಸವಲಿಂಗ ನಗರ ಹರಿಜನ ವಾಡಿ ಶಹಾಬಜಾರ ಇವನ ಹತ್ತಿರ ಒಂದು ದಸ್ತಿ ದೊರೆತ್ತಿದ್ದು. ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ಒಂಟಿಯಾಗಿ ಬರುವ ಜನರ ಮೇಲೆ ದಾಳಿ ಮಾಡಿ ಅವರಿಗೆ ಹೆದರಿಸಿ ಬೇದರಿಸಿ ಅವರಲ್ಲಿದ್ದ ಹಣ, ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳುವ ಸಂಬಂದ ಹೊಂಚ್ಚುಹಾಕಿ ಕುಳಿತಿರುತ್ತೆವೆ ಅಂತ ತಮ್ಮ ಸ್ವ-ಖುಷಿ ಹೇಳಿಕೆ ನೀಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ದೇವಿಂದ್ರಪ್ಪ ಮೆಲ್ಕೇರಿ ಸಾ:ಬಸವನಸಂಗೋಳಗಿ ರವರು ಈಗ 3-4 ದಿವಸಗಳ ಹಿಂದೆ ನಮ್ಮೂರಿನ ಪಮ್ಮಾಲಿ ತಂದೆ ನಾಗಮೂರ್ತಿ ಸುತ್ತಾರ ಈತನು ಸರಾಯಿ ಕುಡಿದ ಅಮಲಿನಲ್ಲಿ ನನ್ನೊಂದಿಗೆ ತಕರಾರು ಮಾಡಿದ್ದು ಅದೇ ವಿಷಯದ ಬಗ್ಗೆ ನಿನ್ನೆ ದಿನಾಂಕ:25/07/2018 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಶಾಂತಯ್ಯ ಸ್ವಾಮಿ ಇವರ ಹಿಟ್ಟಿನ ಗಿರಣಿಯ ಹತ್ತಿರ ಸದರಿ ಪಮ್ಮಾಲಿ ಈತನಿಗೆ ವಿಚಾರಿಸುವಾಗ ಸದರಿಯವನು ನನಗೆ ಏ ಹೊಲೆಯಾ ಸೂಳೆಮಗನೆ ಆವತ್ತ ಆಗಿದ್ದ ತಕರಾರು ಬಗ್ಗೆ ಇವತ್ತೇನು ಕೇಳ್ತಿ ಅಲೇ ಎಂದು ನನಗೆ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಲ್ಲಿಯೇ ಬಿದಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಯ ಎಡಗಡೆಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಅಲ್ಲದೇ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮೂರಿನ ವಿಠಲ್ ಅಯ್ಯಪ್ಪಗೋಳ ಹಾಗೂ ಇನ್ನು 3-4 ಜನ ಅಲ್ಲಿದ್ದ ಹೆಣ್ಣುಮಕ್ಕಳು ಸೇರಿ ಜಗಳ ಬಿಡಿಸಿರುತ್ತಾರೆ. ಅಷ್ಟೊತ್ತಿಗೆ ನಾನು ನಿಶಕ್ತಿಗಾಗಿ ಕೆಳಗೆ ಬಿದ್ದಿದ್ದು ನನ್ನ ಹೆಂಡಿತಿಯಾದ ಅನುಸೂಯಾ ಇವಳಿಗೆ ವಿಷಯ ಗೊತ್ತಾಗಿ ಬಂದು ಒಂದು ಖಾಸಗಿ ಜೀಪಿ ತರಿಸಿ ಅದರಲ್ಲಿ ನನ್ನನ್ನು ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 22/07/2018 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲಿದ್ದಾಗ ಮರೇಪ್ಪ ಗುಡಮಿ ಈತನು ನಮ್ಮ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ನಾವು ಮಾಶಾಳ ದಾಟಿ ನಾನು ಹಾಗು ಪ್ರಕಾಶ ಇಬ್ಬರು ಮೋಟಾರ ಸೈಕಲ ಮೇಲೆ ಹೋಗುತಿದ್ದಾಗ ಸದರಿ ಮೋಟಾರ್ ಸೈಕಲ ನಾನೇ ಚಲಾಯಿಸುತಿದ್ದೆ ಮೋಟಾರ್ ಸೈಕಲ್ ಸ್ಕೀಡ್ ಆಗಿ ಮೋಟಾರ್ ಸೈಕಲ್ ಸಮೇತ ಬಿದ್ದಿರುತೇವೆ.ಸದರಿ ಘಟನೆಯಲ್ಲಿ ಪ್ರಕಾಶನಿಗೆ ತಲೆಗೆ ಭಾರಿ ಗುಪ್ತಗಾಯ ಹಾಗು ಎಡಗಾಲಿಗೆ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ನನಗೆ ಯಾವುದೇ ಗಾಯಗಳಾಗಿರುವುದಿಲ್ಲ  ನೀವು ಬನ್ನಿ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ಹಾಗು ರೋಹಿತ ತಂದೆ ಬಸವರಾಜ ಬಿರುಣಗಿ, ಮಹೇಶ ತಂದೆ ಭಿರಣ್ಣ ಅಗರಖೇಡ ದತ್ತಾತ್ರೇಯ ತಂದೆ ಪರಸಪ್ಪ ಹಡಲಸಂಗ ರವರೇಲ್ಲರು ಕೂಡಿ ಒಂದು ಖಾಸಗಿ ವಾಹನದಲ್ಲಿ ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ನನ್ನ ಗಂಡನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಎಡಗಾಲಿಗೆ ಭಾರಿ ಗುಪ್ತಗಾಯವಾಗಿ  ಕಾಲು ಮುರಿದಿರುತ್ತದೆ ನಾವು ತಗೆದುಕೊಂಡು ಹೋಗಿದ್ದ ವಾಹನದಲ್ಲಿ ನನ್ನ ಗಂಡನಿಗೆ ಕರೆದುಕೊಂಡು ವಿಜಯಪೂರ ಯಶೋಧರಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇವೆ ದಿನಾಂಕ 22/07/2018 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಮಾಶಾಳ ದಾಟಿ 2 ಕೀ ಮೀಟರ್ ಅಂತರದಲ್ಲಿ ರೋಡಿನ  ಮೇಲೆ  ಮೋಟಾರ್ ಸೈಕಲ್ ನಂ ಕೆಎ-28 ಯು-0573 ನೇದ್ದರ ಸವಾರನಾದ ಮರೇಪ್ಪ ತಂದೆ ರಾಚಪ್ಪ ಗುಡಮಿ ಈತನು ಸದರಿ ಮೋಟಾರ ಸೈಕಲನ್ನು  ಅತಿವೇಗವಾಗಿ  ಮತ್ತು ನಿಸ್ಕಾಳಜಿತನದಿಂದ ನಡೆಸಿದ್ದರಿಂದ ಸದರಿ ಮೋಟಾರ್ ಸೈಕಲ್ ಸ್ಕೀಟ್ ಆಗಿ ಬಿದಿದ್ದರಿಂದ ಹಿಂದೆ ಕುಳಿತಿದ್ದ ನನ್ನ ಗಂಡನ ತಲೆಗೆ ಭಾರಿ ಗುಪ್ತಗಾಯ ಹಾಗು ಎಡಗಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು ಸದರಿ ಮೋಟಾರ ಸೈಲಕ ಸವಾರನಾದ ಮರೇಪ್ಪನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಜಗದೇವಿ ಗಂಡ ಪ್ರಕಾಶ ಭಕ್ತೆ ಸಾ||ಡಾ|| ಬಾಬಾ ಸಾಹೇಬ ಅಂಬೇಡ್ಕರ ನಗರ ಇಂಡಿರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಅವಿನಾಶ ತಂದೆ ಅಂಬಾದಾಸ ಸೂರ್ಯವಂಶಿ ಸಾ||ದೇವಣಗಾಂವ ಹಾ||||ಸಮತಾ ನಗರ ಕಲಬುರಗಿ ರವರ ತಂದೆಯವರು ನಮ್ಮ ಮೋಟಾರ್ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ದೇವಣಗಾಂವಕ್ಕೆ  ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿದ್ದು  ದಿನಾಂಕ 25/07/2018 ರಂದು ಮದ್ಯಾಹ್ನ 3.50 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲಿದ್ದಾಗ ಮಾತೋಳಿ ಗ್ರಾಮದ ನಮ್ಮ ಸಂಬಂಧಿಕರಾದ ಅವಿನಾಶ ತಂದೆ ಮಾರುತಿ ಮೋರೆ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ನಾನು ನಮ್ಮ ಮೋಟಾರ್ ಸೈಕಲ್ ಮೇಲೆ ಚವಡಾಪೂರದಿಂದ ಮಾತೋಳಿಗೆ ಹೋಗುತಿದ್ದಾಗ ನನ್ನ ಮುಂದೆ ನಿಮ್ಮ ತಂದೆ ಅಂಬಾದಾಸ ರವರು ಮೋಟಾರ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ಅಫಜಲಪೂರ ಕಡೆ ಹೋಗುತಿದ್ದರು ಮಲ್ಲಾಬಾದ ಸಿಮಾಂತರ ಮಲ್ಲಾಬಾದ ಗ್ರಾಮದ ಶರಣಪ್ಪ ತಂದೆ ಸಿದ್ರಾಮಪ್ಪ ಕಲ್ಲೂರ ರವರ ಹೊಲದ ಹತ್ತಿರ ಮುಖ್ಯ ರಸ್ತೆ  ಮೇಲೆ ಹಿಂದಿನಿಂದ Mahindra TUV 300 ನೇದ್ದರ ಚಾಲಕ  ಸದರಿ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ತಂದೆಯ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ತಲೆಗೆ ಭಾರಿ ರಕ್ತ ಗಾಯ ವಾಗಿರುತ್ತದೆ. ಸದರಿ ವಾಹನ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ ಪಲ್ಟಿ ಮಾಡಿ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ನಾನು 108 ಅಂಬ್ಯೂಲೆನ್ಸಕ್ಕೆ ಕಾಲ್ ಮಾಡಿ ಅಲ್ಲಿಂದ ಹೋಗುತಿದ್ದ ಪ್ರಯಾಣಿಕರ ಸಹಾಯದಿಂದ ನಿಮ್ಮ ತಂದೆಗೆ 108 ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವೇಶ್ಚರ ಆಸ್ಪತ್ರೆ ಕಲಬುರಗಿಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಮಾವನಾದ ಹುಲಿರಾಯ ತಂದೆ ಶಂಕರರಾವ ಕಾಜಲೆ ಇಬ್ಬರು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ  ಎರಡು ಕಾಲುಗಳಿಗೆ ಎರಡು ಕೈಗಳಿಗೆ ಬೆನ್ನಿನ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ  ಕಾರಣ Mahindra TUV 300 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ  ಚಲಾಯಿಸಿ ನಮ್ಮ ತಂದೆ ಚಲಾಯಿಸುತಿದ್ದ  ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ಭಾರಿ ರಕ್ತಗಾಯ ಪಡಿಸಿದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 July 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ: 25-07-2018 ರಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ನಮ್ಮೂರ ನಮ್ಮ ಮನೆಯ ಹತ್ತಿರ ರುವ ಖಾಸೀಮ್ ಸಾಬ ತಂದೆ ಹಸೇನಸಾಬ ಪಿಂಜಾರ ಇತನು ನಮ್ಮ ಮನೆಗೆ ಬಂದು ನನ್ನ ಮಗವಾಸಿಮ್ ಇತನಿಗೆ ಆರಾಮ ಇರುವದಿಲ್ಲಾ ಇತನಿಗೆ ನಮ್ಮ ಮೊ/ಸೈ ಮೇಲೆ ಗುರುಮಠಕಲಗೆ ಕರೆದುಕೊಂಡು ಹೋಗಿ ದಾವಾಖಾನೆಗೆ ಹೋಗಿ ತೊರಿಸಿಕೊಂಡು ಬರೋಣಾ ಬಾ ಅಂತಾ ಹೇಳಿ ತನ್ನ ಸಂಗಡ ನನ್ನ ಮಗ ರಾಜಶೇಖರ ಇತನಿಗೆ ಮನೆಯಿಂದ ಕರೆದುಕೊಂಡು ಹೋದನು. ನಂತರ ಬೆಳಗ್ಗೆ 1140 ಗಂಟೆ ಸುಮಾರಿಗೆ ನಾನು ಹಾಗು ನನ್ನ ಗಂಡ ಸಿದ್ದಲಿಂಗಪ್ಪ ಇಬ್ಬರು ಮನೆಯಲ್ಲಿದ್ಧಾಗ ನಮ್ಮೂರ ವೆಂಕಟರೆಡ್ಡಿಯ ಮಗನಾದ ಚಿನ್ನಾ ಇತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ, ಈಗ 1130 ಗಂಟೆ ಸುಮಾರಿಗೆ ನಿಮ್ಮ ಮಗ ರಾಜಶೇಖರ ಇತನು ಖಾಸಿಮ ಸಾಬ ಇತನ ಮೊ/ಸೈ ಮೇಲೆ ಕುಳಿತು ಗುರುಮಠಕಲದಿಂದ ಊರಿಗೆ ಬರುವಾಗ ಇಟ್ಕಲ್ ಕ್ರಾಸ ಹತ್ತಿರ ರಸ್ತೆಯಲ್ಲಿ ಒಬ್ಬ ಬಸ್ಸನ ಚಾಕಲನು ಮೊ/ಸೈಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ರಾಜಶೇಖರ ಮತ್ತು ಖಾಸಿಂ ಸಾಬ ಇಬ್ಬರು ಸ್ಥಳದಲ್ಲಿಯೇ ಸತ್ತಿರುತ್ತಾರೆ ಅಂತಾ ನನಗೆ ಗೊತ್ತಾಗಿದೆ ಅಂತಾ ತಿಳಿಸಿದ್ದು, ತಕ್ಷಣ ನಾನು ನನ್ನ ಗಂಡ ಸಿದ್ದಲಿಂಗಪ್ಪ ಹಾಗು ನಮ್ಮ ಮನೆಯ ಹತ್ತಿರದ ಖಾಸಿಂ ಸಾಬ ಇತನ ಹೆಂಡತಿಯಾದ ಶಬನಾಬೇಗಂ ಇತರರು ಕೂಡಿಕೊಂಡು ಇಂದು ಮದ್ಯಾಹ್ನ ಗುರುಮಠಕಲ ದಿಂದ ಇಟ್ಕಲ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಭೀಮರೆಡ್ಡಿ ಇವರ ಹೊಲದ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಮೇಲೆ ನನ್ನ ಮಗ ರಾಜಶೇಖರ @ ಶೇಖರ ಹಾಗು ಸದರಿ ಮೊ/ಸೈ ಚಾಲಕ ಖಾಸಿಂ ಸಾಬ ತಂದೆ ಹಸನ ಸಾಬ ಪಿಂಜಾರ ಇಬ್ಬರು ಸ್ಥಳದಲ್ಲಿಯೇ ಸತ್ತುಬಿದಿದ್ದು, ನನ್ನ ಮಗನ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಹಾಗು ಕೈಕಾಲುಗಳಿಗೆ ತರುಚಿದ ರಕ್ತಗಾಯಗಳಾಗಿದ್ದು ಹಾಗು ಸದರಿ ಖಾಸಿಂಸಾಬ ಇತನಿಗೆ ತಲೆಗೆ ಹಾಗು ಇತರೆ ಕಡೆಗೆ ಭಾರಿರಕ್ತಗಾಯಗಳಾಗಿದ್ದು, ಸದರಿ ಖಾಸಿಂ ಸಾಬ ಇತನ ತಲೆಗೆ ಹಾಗು ಇತರೆ ಕಡೆ ಭಾರಿರಕ್ತಗಾಯಗಳಾಗಿದ್ದು ಸದರಿ ಖಾಸಿಂ ಸಾಬ ಇತನ ಮಗನಾದ ವಾಸಿಮ್ 04 ವರ್ಷ ಇತನಿಗೆ ಭಾರಿರಕ್ತಗಾಯಗಳಾಗಿದ್ದರಿಂದ ಅವನಿಗೆ ಉಪಚಾರಕುರಿತು ಗುರುಮಠಕಲ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಅಲ್ಲಿ ರಸ್ತೆಯ ಪಕ್ಕದಲ್ಲಿ ಸದರಿ ಖಾಸಿಂ ಸಾಬ ಇತನ ಮೊ/ಸೈ ನಂ ಕೆಎ32ಈಸಿ5279 ನೇದ್ದು ಬಿದಿದ್ದು ಹಾಗು ಸ್ವಲ್ಪ ಮುಂದುಗಡೆ ಗುರುಮಠಕಲ್ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಂದು ಕೆ.ಎಸ್.ಆರ್ ಟಿ.ಸಿ ಬಸ್ಸ ನಂ ಕೆಎ33/ಎಫ-0186 ನೇದ್ದು ನಿಂತಿದ್ದು ಇರುತ್ತದೆ. ಅಂತಾ ಶ್ರೀಮತಿ ಪಾರ್ವತಮ್ಮ ಗಂಡ ಸಿದ್ದಲಿಂಗಪ್ಪ ನಕ್ಕಲಗಡ್ಡಾ ಸಾ: ಗಾಡದಾನ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ. ಶ್ರೀಮಂತ ತಂದೆ ಬಸವಣ್ಣ ಬೇಲಸೂರೇ ಸಾ:ಮುನ್ನೋಳ್ಳಿ ತಾ:ಆಳಂದ ಜಿ:ಕಲಬುರಗಿ ಹಾವ: ಇಂಡಸ್ರ್ಟೀಯಲ್ ಏರಿಯಾ ಕಪನೂರ ರವರ ಮಗ ವಿಜಯಕುಮಾರ  ಬೆಲಸೂರೆ ಇತನು ದಿನಾಂಕ. 24-7-2018 ರಂದು 4-30 ಪಿ.ಎಂ.ಕ್ಕೆ. ತನ್ನ ಬಜಾಜ ಪಲ್ಸರ ಮೋಟಾರ ಸೈಕಲ್ ನಂ KA-37 W-6001 ಮೋಟಾರ ಸೈಕಲ್ ನ್ನು ತೆಗೆದುಕೊಂಡು ತನ್ನ ಯಾವುದೋ ಕೆಲಸ ಆಳಂದ ರೋಡಿನ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ ಬರುತ್ತಿರುವಾಗ ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ತನ್ನ ಮುಂದುಗಡೆ ಹೋಗುತ್ತಿದ್ದ ಕೆ.ಎಸ್.ಆರ್.ಟಿಸಿ ಬಸಗೆ ಓವರ ಟೇಕ್ ಮಾಡಲು ಹೋಗಿ ಮೋಟಾರ ಸೈಕಲ ವೇಗದ ನಿಯಂತ್ರಣ ತಪ್ಪಿ ರೇಲ್ವೆ ಬ್ರಿಜಗೆ ಇರುವ ಕಬ್ಬಿಣದ ಪಟ್ಟಿಗೆ  ಅಪಘಾತಪಡಿಸಿದ್ದರಿಂದ್ದ ಆತನ ತಲೆಗೆ ಹಾಗು ಇತರೇ ಭಾಗಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ವಾಲು ತಂದೆ ಚೋಕಲು ರಾಠೋಡ ಸಾ|| ಕೊಣ್ಣೂರ ತಾಂಡಾ ತಾ|| ಜೇವರ್ಗಿ ರವರು ತಮ್ಮೂರ ಸೀಮಾಂತರದಲ್ಲಿ ಸರ್ವೆ ನಂ 1 ನೇದ್ದರಲ್ಲಿ  2 ಎಕರೆ 38 ಗುಂಟೆ, ಮತ್ತು ಸರ್ವೆ ನಂ 2 ನೇದ್ದರಲ್ಲಿ 7 ಎಕರೆ 33 ಗುಂಟೆ ಜಮೀನು ನಾವು ಸುಮಾರು 60 ವರ್ಷಗಳಿಂದ ಕಬ್ಜೆಯಲ್ಲಿದ್ದು, ಇಲ್ಲಿಯವರೆಗೆ ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಈ ಹೊಲಗಳ ಬಗ್ಗೆ ಸುರಪುರ ತಾಲೂಕಿನ ಪರಸನಳ್ಳಿ ಗ್ರಾಮದ ಶಿವರಾಜ ತಂದೆ ರಾಯಪ್ಪ ದೊಡಮನಿ ಇವರು ಸುಮಾರು ವರ್ಷಗಳಿಂದ ತಕರಾರು ಮಾಡಿಕೊಂಳ್ಳುತ್ತಾ ಬಂದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೇ ಹುಡಿದ್ದು ದಿನಾಂಕ 23-07-2018 ರಂದು 2;00 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗ ಬದ್ದು, ನನ್ನ ಸೊಸೆ ಸೋನಾಬಾಯಿ, ರಾಣಿಬಾಯಿ ರವರು ಕೂಡಿ ನಮ್ಮ ಹೊಲ ಸರ್ವೆ ನಂ 1 ನೇದ್ದರಲ್ಲಿ ಕೆಲಸ ಮಾಡುತ್ತಿದ್ದೇವು, ಅದೇ ಸಮಯಕ್ಕೆ 1] ಶಿವರಾಜ ತಂದೆ ರಾಯಪ್ಪ ದೊಡಮನಿ ಮತ್ತು ಅವರ ಸಂಬಂಧಿಕರಾದ 2] ಶರಣಪ್ಪ ತಂದೆ ಶಂಕ್ರೆಪ್ಪ ಪೂಜಾರಿ ಸಾ|| ಪರಸನಳ್ಳಿ, 3] ಮಾನಯ್ಯಾ ತಂದೆ ಮಲ್ಲಯ್ಯಾ ಗೊಟ್ರಾಳ ಸಾ|| ವಶಿಕೇರಾ ತಾ|| ಸುರಪೂರ  ಹಾಗು ಅವರೊಂದಿಗೆ 15 ರಿಂದ 20 ಜನರು ಕೂಡಿಕೊಂಡು ನಮ್ಮ ಹತ್ತಿರ ಬಂದರು, ಅವರಲ್ಲಿ ಶಿವರಾಜ ಇವನು  ನಮಗೆ ಏ ಸುಳಿ ಮಕ್ಕಳ್ಯಾ ಲಾಮಾಣ್ಯಾರ್ಯಾ, ನಿಮಗ ಬಹಳ ಸೊಕ್ಕು ಬಂದಿದೆ, ನಮ್ಮ ಹೊಲ ನಮಗೆ ಬಿಟ್ಟು ಕೊಡುವುದು ಬಿಟ್ಟು, ಹೊಲ ಸಾಗುವಳಿ ಮಾಡುತ್ತಿದ್ದಿರಿ ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾನು ಈ ಬಗ್ಗೆ  ಕೋರ್ಟಲ್ಲಿ ಕೇಸ ನಡೆದಿದೆ, ಕೋರ್ಟ ಆದೇಶ ಆದರೆ ನಿಮ್ಮ ಹೊಲ ನಿಮಗ ಬಿಟ್ಟು ಕೊಡುತ್ತೇನೆ ಅಂತಾ ಅಂದಾಗ ಶಿವರಾಜ ಇವನು ಈ ಸೂಳಿ ಮಗನಿಗೆ ಬಿಡಲ್ಲಾ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನನ್ನ ಮಗ ಬಿಡಿಸಲು ಬಂದಾಗ ಶರಣಪ್ಪ ಇವನು ಕಲ್ಲಿನಿಂದ ನನ್ನ ಮಗನ  ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ಮಾನಯ್ಯ ಈತನು ನನ್ನ ಸೊಸೆಯಂದಿರಾದ ಸೋನಾಬಾಯಿ, ರಾಣಿಬಾಯಿಗೆ ಕೈಯಿಂದ ಮೈಕೈಗೆ ತಲೆಗೆ ಹೊಡೆದಿರುತ್ತಾನೆ, ನಂತರ ಶಿವರಾಜನೊಂದಿಗೆ ಬಂದವರೆಲ್ಲರೂ ಈ ಸುಳಿ ಮಕ್ಕಳಿಗೆ ಹೊಡದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ಹೊಡೆಯಲು ಬಂದಾಗ ಅಲ್ಲೆ ಬಾಜು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಾಂಡಾದ ಲಕ್ಷ್ಮೀಬಾಯಿ ಗಂಡ ಧನಸಿಂಗ್ ರಾಠೊಡ, ಶಾಂತಿಲಾಲ ತಂದೆ ರತ್ನು ರಾಠೋಡ ರವರು ಬಂದು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಉಸ್ಮಾನಸಾಬ ತಂದೆ ಮಹೇಬೂಬಸಾಬ ಮುಲ್ಲಾ ಸಾ:ಕೊಟ್ಟರಗಾ ರವರದು ಚಿಂಚನಸೂರ ಗ್ರಾಮದ ಸೀಮಾಂತರ ಸರ್ವೆೇ ನಂ 327 ರಲ್ಲಿ ನನಗೆ 5ಎಕರೆ ಜಮೀನು ಇದ್ದು, ಸದರಿ ಜಮೀನಿಗೆ ಹೋಗಿ ಬರಲು ನಮ್ಮೂರಿನ ವಿಜಯಕುಮಾರ ತಂದೆ ಸೋಮಶೇಖರ ಪಾಟೀಲ್ ಇವರು ಹೊಲದಾಗಿನಿಂದಲೆ ಬಹಳ ವರ್ಷಗಳಿಂದ ರಸ್ತೆ ಇರುತ್ತದೆ. ಆದರೆ ಇತ್ತಿತ್ತಲಾಗಿ ಸದರಿ ವಿಜಯಕುಮಾರ ಇವರು ನನಗೆ ಮತ್ತು ಮೆಲಿನ ಹೊಲದವರಿಗೆ ಅವರ ಹೊಲದಾಗಿನಿಂದ ಹೋಗಬಾರದು ಮತ್ತು ಎತ್ತು ಹಾಗೂ ಬಂಡಿ ಹೊಡೆದುಕೊಂಡು ಹೊಗಬಾರದೆಂದು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾನೆ.  ದಿನಾಂಕ:24/07/2018 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು ಪ್ರತಿದಿನದಂತೆ ನಮ್ಮ ಚಿಂಚನಸೂರ ಸೀಮೆಯ ಹೊಲಕ್ಕೆ ಎತ್ತಿನ ಬಂಡಿ ಹೊಡದುಕೊಂಡು ಸದರಿ ವಿಜಯಕುಮಾರ ಇವರ ಹೊಲದಾಗಿನಿಂದ ಇರುವ ಬಂಡಿ ದಾರಿಯ ಮೇಲಿಂದಾ ಹೋಗುತ್ತಿರುವಾಗ 1)ವಿಜಯಕುಮಾರ ತಂದೆ ಸೋಮಶೇಖ ಪಾಟೀಲ್, 2)ಜಗನ್ನಾಥ ತಂದೆ ಸೋಮಶೇಕರ ಪಾಟೀಲ್, 3)ಶೆಸುಬಾಯಿ ಗಂಡ ಸೋಮಶೇಖರ ಪಾಟೀಲ್, 4)ತಾರಾಬಾಯಿ ಗಂಡ ಸೋಮಶೇಖರ ಪಾಟೀಲ್ ರವರುಗಳು ಕೂಡಿ ನನಗೆ ತಡೆದು ನಿಲ್ಲಿಸಿ ವಿಜಯಕುಮಾರನು ಏ ಭೋಸಡಿ ಮಗನೆ ನಮ್ಮ ಹೊಲದಾಗಿನಿಂದ ಹೋಗಬೇಡವೆಂದರೂ ಕೂಡ ಏಕೆ ಇಲ್ಲಿಂದ ಹೊಗುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಬದ್ದ್ಡಿಯಿಂದ ನನ್ನ ಹಣೆಯ ಮೇಲೆ ಹೊಡೆದ್ದರಿಂದ ಕಂದುಗಟ್ಟಿದಂತೆ ಆಗಿ ಬಾವು ಬಂದಿರುತ್ತದೆ. ಅಸ್ಟರಲ್ಲಿಯೇ ಅವರ ತಮ್ಮನಾದ ಜಗನ್ನಾಥ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಮೇಲಿಂದ ಮೇಲೆ ಹೊಡೆದಿದ್ದರಿಂದ ಧರಿ ಬಂದಂತೆ ಆಗಿ ಉಬ್ಬಿದ್ದು ಅಲ್ಲದೇ ಭಾರಿ ಒಳಪೆಟ್ಟಾಗಿ ನನಗೆ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೆ ಶೇಸುಬಾಯಿ ಮತ್ತು ತಾರಾಬಾಯಿ ಇವರುಗಳು ಸಹ ಬಡಿಗೆಗಳಿಂದ ನನ್ನ ಕಾಲುಗಳ ಮೇಲ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರಿನ ಶಾಂತಪ್ಪಾ ತಂದೆ ಈರಣ್ಣಾ ಜಮಾದಾರ ಅಂಬಾರಾಯ ತಂದೆ ದೇವಿಂದ್ರಪ್ಪಾ ಮಾವಿನೂರ ಹಾಗೂ ಶಿವಕುಮಾರ ತಂದೆ ಪೀರಪ್ಪಾ ಜಮಾದಾರ ರವರುಗಳು ಜಗಳಾ ನೋಡಿ ಬಿಡಿಸಿರುತ್ತಾರೆ. ನಂತರ 4ಜನರು ಸೇರಿ ನನಗೆ ಇನ್ನು ಮುಂದೆ ನಿನೇದಾರು ಈ ಹೊಲದಾಗಿನಿಂದ ಹೊದರೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

22 July 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ಸೋಮಶೇಖರ ಅತ್ತಾರ  ಸಾ|| ಭಗವತಿ ನಗರ ಕಲಬುರಗಿ ರವರು  ದಿನಾಂಕ 14-07-2018 ರಂದು 06-00 ಪಿ.ಎಂದಿಂದ 15-07-201809-00 ಎ.ಎಂ ಅವಧಿಯಲ್ಲಿ ಯಾರೋ ಕಳ್ಳರು ಕಲಬುರಗಿಯ ಭಗವತಿ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 1,20,000/-ರೂ ಹಾಗೂ 300 ಗ್ರಾಂ ಬಂಗಾರದ ಆಭರಣಗಳು ಅ.ಕಿ 7,60,000/-ರೂ ಹೀಗೆ ಒಟ್ಟು 8,80,000/-ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಸೂರ್ಯಾಕಾಂತ ಅಡಕಿ ಸಾ : ಚಿಂಚೋಳಿ ಗ್ರಾಮ ತಾ/ಅಫಜಲಪೂರ ಜಿ- ಕಲಬುರಗಿ ಹಾವ- ರಾಮನಗರ ಕಲಬುರಗಿ ರವರ ಮಗಳು ಭಾಗ್ಯಶ್ರೀ ಇವಳಿಗೆ ನಮ್ಮ ಎದರು ಮನೆಯ ಸುಧಾಕರ ತಂದೆ ಶ್ರೀಶೈಲ್ ಜಮದಾರ ಎಂಬುವ ಹುಡುಗನು ಆಗಾಗ ನಮ್ಮ ಹುಡುಗಿಗೆ ಚುಡಾಯಿಸುವದು, ಸಲುಗೆಯಿಂದ ಮಾತಾಡುತಿದ್ದಾಗ ನಮ್ಮ ಮಗಳು ಸುಧಾರಕರ ಚುಡಾಯಿಸುವ ಬಗ್ಗೆ ತಿಳಿಸಿದಾಗ ನಾನು ಮತ್ತು ನನ್ನ ಗಂಡ ಸೂರ್ಯಾಕಾಂತ ಹಾಗೂ ನಮ್ಮ ಭಾವ ನಾಗೇಂದ್ರ ಚಿಂಚೋಳಿ ಕೂಡಿಕೊಂಡು ಸುಧಾಕರನಿಗೆ ಮತ್ತು ಆತನ ತಂದೆ ಶ್ರೀಶೈಲನಿಗೆ ತಿಳುವಳಿಕೆ ಹೇಳಿದ್ದಾಗ ಕೆಲವು ದಿವಸಗಳ ವರೆಗೆ ಚನ್ನಾಗಿದ್ದರು. ಆದಾಗ್ಯೂ ಕೂಡಾ ಸದರಿ ಹುಡಗನು ನಮ್ಮ ಹುಡುಗಿಯನ್ನು ನೋಡುವದು ಬಿಡುತಿರಲಿಲ್ಲಾ , ಕೆಲವು ದಿವಸಗಳ ನಂತರ ಸುಧಾಕರನು ಪುನಾ ನನ್ನ ಮಗಳು ಭಾಗ್ಯಶ್ರೀ ಇವಳೊಂದಿಗೆ ಸಲುಗೆಯಿಂದ ವರ್ತಿಸುವದು ನಾನು ಮನೆಯಿಂದ ಹೊರಗಡೆ ಹೋದಾಗ ನಮ್ಮ ಮನೆಯ ಎದರುಗಡೆ ನಿಂತು ನಮ್ಮ ಮಗಳಿಗೆ ಭೇಟಿ ಮಾಡುವದು  ಇಲ್ಲದೊಂದು ಆಮಿಸೆಯೊಡ್ಡುತಿದ್ದ ದಿನಾಂಕ. 6-7-2018 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳೆಲ್ಲರೂ ಊಟಾ ಮಾಡಿ ಮಲಗಿ ಕೊಂಡಿದ್ದೇವು ನನ್ನಗೆ ಜ್ವರ ಬಂದಿದ್ದ ಕಾರಣ ಔಷಧ ತೆಗೆದುಕೊಂಡು ಮಲಗಿಕೊಂಡಿದೇನು. ಮದ್ಯ ರಾತ್ರಿ ಅಂದರೆ ದಿನಾಂಕ.7-7-2018 ರಂದು 00-30 ಗಂಟೆಯ ಸುಮಾರಿಗೆ ನಾನು  ಎದ್ದು  ಮೂತ್ರ ವಿಸರ್ಜನೆಗೆ ಹೋಗಿ ನೀರು ಕುಡಿದು ಮಲಗುವಾಗ ನನ್ನ 5 ಜನ ಮಕ್ಕಳು ಮಲಗಿಕೊಂಡಿದ್ದರು. ದಿನಾಂಕ.7-7-2018 ರಂದು ಬೆಳಗ್ಗೆ  5-30 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನನ್ನ ಹಿರಿಯ ಮಗಳು ಭಾಗ್ಯಶ್ರೀ. ವಯ/ 17 ವರ್ಷ ಇವಳು ಕಾಣಲಿಲ್ಲಾ  ನಂತರ ಮನೆಯ ತುಂಬೆಲ್ಲಾ ಮತ್ತು ಹಿಂದುಗಡೆ ಹೋಗಿ ಹುಡುಕಾಡಲಾಗಿ ಸಿಗಲಿಲ್ಲಾ. ನಂತರ ಕಾಲೂನಿಯಲ್ಲಿ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಗಲಿಲ್ಲಾ  ಕಲಬುರಗಿಯ ಎಲ್ಲ ಕಡೆಗೂ  ಮತ್ತು ನಮ್ಮ ಸಮ್ಮಂದಿಕರು ಇರುವ  ಊರುಗಳಿಗೆ ಫೋನ ಮಾಡಿ ವಿಚಾರಿಸಿದರೂ ಕೂಡಾ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ. ನಂತರ ನಮ್ಮ ಮನೆಯ ಎದುರಿನ ಹುಡುಗ ಸುಧಾಕರ ಜಮದಾರ ಇತನು ಕೂಡಾ ರಾತ್ರಿಯಿಂದ ಮನೆಯಲ್ಲಿರುವದಿಲ್ಲಾ ಅಂತಾ ಆತನ ತಂದೆ ಹೇಳಿದರು ಕೇಳಿದೆರೆ ಎಲ್ಲಿ ಹೋಗಿರುತ್ತಾನೆ ನಮಗೆನು ಗೊತ್ತು ಅಂತ ನಮ್ಮೊಂದಿಗೆ ವ್ಯಂಗ್ಯವಾಗಿ ಮಾತಾಡಿರುತ್ತಾರೆ. ಆದುದರಿಂದ ಈ ಮೇಲೆ ನಮೂದ ಮಾಡಿದ್ದ ಸುಧಾಕರ ತಂದೆ ಶ್ರೀಶೈಲ್ ಜಮದಾರ ಇತನು ನನ್ನ ಅಪ್ರಾಪ್ತ ಮಗಳು ಭಾಗ್ಯಶ್ರೀ. ಇವಳಿಗೆ ಮದುವೆ ಮಾಡಕೊಳ್ಳುತ್ತೇನೆ ಅಂತಾ ಇಲ್ಲ ಸಲ್ಲದ ಆಮಿಸ್ಯಯೊಡ್ಡಿ ಪುಸಲಾಯಿಸಿ ಜಬದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.