POLICE BHAVAN KALABURAGI

POLICE BHAVAN KALABURAGI

11 July 2018

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 09-07-2018 ರಂದು  ಸೋನ್ನ ಗ್ರಾಮದ ಅಂಭಿಗರ ಚೌಡಯ್ಯ ಸರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸೋನ್ನ ಗ್ರಾಮಕ್ಕೆ ಹೋಗಿ, ಅಂಬಿಗರ ಚೌಡಯ್ಯ ಸರ್ಕಲದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಅಂಬೀಗರ ಚೌಡಯ್ಯ ಕರ್ಕಲ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಆಗ ನಾವು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ರಾಜಶೇಖರ ತಂದೆ ಗುಂಡಪ್ಪ ಕುದರಿ ಸಾ|| ಸೋನ್ನ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1300/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಕೈಲಾಸ್ ತಂದೆ ರಾಮಪ್ರಕಾಶ  ಸಾಃ ಇಂದಲಾಪೂರ ಪೊಷ್ಟಃ ಬಾವಟಮಾಂವೋ ಥಾನಾಃ ಮಾದವಗಂಜ್ ಜಿಲ್ಲಾ ಹರದೋಯಿ ರಾಜ್ಯ; ಉತ್ತರಪ್ರದೇಶ ರವರು ತಮ್ಮೂರಿನಿಂದ ನಾನು ಮತ್ತು ನಮ್ಮೂರ ಇತರರು ಕೂಡಿಕೊಂಡು ನಮ್ಮೂರ ಮಾನಸಿಂಗ್ ಯಾದವ ಇವರ ಸಂಗಡ ಒಂದು ತಿಂಗಳ ಹಿಂದೆ ಕೂಲಿ ಕೆಲಸಕ್ಕೆಂದು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಗೆ ಬಂದು ಕಲಬುರಗಿ ನಂದಿಕೂರ ಗ್ರಾಮದ ಹತ್ತಿರ ವಾಸವಾಗಿದ್ದೆವು. ಮಾನಸಿಂಗ್ ಯಾದವ ಇತನು ಭಾರತ್ ಸ್ವಚ್ಚ ಅಭಿಯಾನ ಯೋಜನೆಯಡಿಯಲ್ಲಿ ಗುತ್ತಿಗೆ ಹಿಡಿದು ರೆಡಿಮೇಡ್ ಸಂಡಾಸ ರೂಮಗಳು ಕಟ್ಟುವುದಕ್ಕೆ ನಾವು ಗೂಡ್ಸ ವಾಹನದಲ್ಲಿ ಹೋಗಿ ಕೆಲಸ ಮಾಡಿಕೊಂಡು ಮರಳಿ ಕಲಬುರಗಿ ನಂದಿಕೂರ ಪಾಟೀ ಹತ್ತಿರ ಬಂದು ವಸತಿ ಮಾಡುತ್ತಿದ್ದು ದಿನಾಂಕ 09.07.2018 ರಂದು ಮುಂಜಾನೆ ನಾನು ಮತ್ತು ನಮ್ಮ ಜೊತೆ ಕೆಲಸ ಮಾಡುವ 1) ಕೌಶಲ್ ತಂದೆ ಭದ್ರೀ  2) ಉಸ್ಮಾನ ತಂದೆ ಮುನೀಮ್ 3) ರಾಜಕೀಶೋರ ತಂದೆ ಶ್ಯಾಮಲಾಲ 4) ರಾಜೇಶ ತಂದೆ ಶ್ಯಾಮಲಾಲ 5) ಮೊಹನಲಾಲ ತಂದೆ  ಗಾಸಿರಾಮ್ ಪಾಲ್ 6) ಅವುದೇಶ ತಂದೆ ಮನ್ಸಾ ಮತ್ತು 7) ರಾಮಸಚ್ಚಿ ಮಂಗಲಿ ರಾಠೋಡ್  ಇವರೆಲ್ಲರೂ ಕೂಡಿಕೊಂಡು 407 ಗೂಡ್ಸ ವಾಹನ ನಂ; ಕೆಎ-32-ಬಿ-9230 ನೇದ್ದರಲ್ಲಿ ಕೆಲಸ ಮಾಡುವ ಸಾಮಾನುಗಳು ಹಾಕಿಕೊಂಡು ಅದರಲ್ಲಿಯೇ ಕುಳಿತುಕೊಂಡು ಸೂರಪೂರ ತಾಲೂಕಿನ ಯಾಳಗಿ ಗ್ರಾಮಕ್ಕೆ ಸಂಡಾಸ ರೂಮ ಕಟ್ಟಲು ಹೋಗಿದ್ದೆವು. ಅಲ್ಲಿ ಕೆಲಸ ಮಾಡಿಕೊಂಡು ಮತ್ತೆ ಕೆಂಬಾವಿ ಗ್ರಾಮಕ್ಕೆ ಹೋಗಿ ಅಲ್ಲಿ ಸಂಡಾಸ ರೂಮಗಳು ಕಟ್ಟಿ ಕೆಲಸ ಮಾಡಿ, ನಂತರ ನಾವೆಲ್ಲರೂ ಕೂಡಿ ಅದೇ ಗೂಡ್ಸ ವಾಹನದಲ್ಲಿ ಕುಳಿತುಕೊಂಡು ಕೆಂಬಾವಿಯಿಂದ ಮರಳಿ ಕಲಬುರಗಿಗೆ ಹೋಗುತ್ತಿದ್ದೇವು. ಗೂಡ್ಸ ವಾಹನವನ್ನು ವಿಜಯಕುಮಾರ ತಂದೆ ಸೈಬಣ್ಣ ರಾಂಪೂರ ಈತನು ನಡೆಯಿಸುತ್ತಿದ್ದನು. ರಾತ್ರಿ 8-30 ಗಂಟೆಯ ಸುಮಾರಿಗೆ ಜೇವರಗಿ-ಕಲಬುರಗಿ ರೋಡ ಕೃಷಿ ಕೆಂದ್ರದ ಹತ್ತಿರ ರೋಡಿನಲ್ಲಿ ನಮ್ಮ ಗೂಡ್ಸ್ ವಾಹನ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಒಮ್ಮಲೆ ಕಟ್ ಹೊಡೆದ ಪರಿಣಾಮವಾಗಿ ಗೂಡ್ಸ ವಾಹನ ರೋಡಿನಲ್ಲಿ ಪಲ್ಟಿಯಾಗಿ ಬಿದ್ದಿರುತ್ತದೆ. ಇದರಿಂದ ವಾಹನದಲ್ಲಿ ಇದ್ದ ಕೌಶಲ್ ತಂದೆ ಭದ್ರೀ ಈತನ ತಲೆಗೆ, ಕಾಲಿಗೆ, ಮುಖಕ್ಕೆ ಭಾರಿ ರಕ್ತಗಾಯವಾಗಿ ಕಿವಿಯಿಂದ ರಕ್ತ ಸ್ರಾವವಾಗಿ ಅವನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತು ಉಸ್ಮಾನ ತಂದೆ ಮುನೀಮ್ ಈತನ ತಲೆಗೆ, ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ರಾಜಕೀಶೋರ ತಂದೆ ಶ್ಯಾಮಲಾಲ ಈತನಿಗೆ ಎಡ ಕಿವಿ ಕಟ್ಟಾಗಿ ರಕ್ತಗಾಯವಾಗಿದ್ದು ಬೆನ್ನಿಗೆ ಗುಪ್ತ ಗಾಯವಾಗಿರುತ್ತದೆ. ರಾಜೇಶ ತಂದೆ ಶ್ಯಾಮಲಾಲ, ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಎಡ ಭುಜಕ್ಕೆ ಭಾರಿ ಗುಪ್ತ ಗಾಯ ಮತ್ತು ರಕ್ತ ಗಾಯವಾಗಿರುತ್ತದೆ. ಮೊಹನಲಾಲ ತಂದೆ ಗಾಸಿರಾಮ್ ಪಾಲ್ ಈತನಿಗೆ ತಲೆಗೆ ಎಡ ಕಾಲಿನ ಮೊಳಕಾಲಿಗೆ ಬೆನ್ನಿಗೆ ರಕ್ತಗಾಯ ಮತ್ತು ಗುಪ್ತ ಗಾಯವಾಗಿರುತ್ತದೆ. ಅವುದೇಶ ತಂದೆ ಮನ್ಸಾರಾಮ ಇವನಿಗು ಕೂಡ ಎಡ ಕಾಲಿನ ಹಿಮ್ಮಡಿ ಹತ್ತಿರ ರಕ್ತ ಗಾಯವಾಗಿರುತ್ತದೆ.ರಾಮಸಚ್ಚಿ ಇತನಿಗೆ ಸೊಂಟಕ್ಕೆ ಎಡ ಬುಜಕ್ಕೆ ಬೇರಳಿಗೆ ಮತ್ತು ಎಡಕಿವಿಗೆ ರಕ್ತ ಗಾಯವಾಗಿರುತ್ತದೆ.ನಂತರ ಯಾರೋ 108 ಅಂಬುಲೆನ್ಸ್ ಕ್ಕೆ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಗಿ ಸ್ಥಳಕ್ಕೆ ಬಂದ ಅಂಬುಲೇನ್ಸ್ ವಾಹನದಲ್ಲಿ ಗಾಯವಾದರಿಗೆ ಮತ್ತು ಮೃತ ಕೌಶಲ್ ಈತನಿಗೆ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ. ನಂತರ ಹೆಚ್ಚಿಗೆ ಗಾಯವಾದ ಕೆಲವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಹೋಗಿರುತ್ತಾರೆ. ನನಗೆ ಯಾವುದೇ ಗಾಯವಾಗಿರುವುದಿಲ್ಲಾ. ಚಾಲಕ ವಿಜಯಕುಮಾರ ಈತನು ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 1-1-2018 ರಿಂದ 9-1-2018 ರವರೆಗೆ ನಮ್ಮ ಮಾವನಾದ ಶಿವಾ ತಂದೆ ತುಕರಾಮ ರಾಠೋಡ ಇತನು ತನಗೆ ಆರೋಗ್ಯ ಸರಿಯಾಗಿಲ್ಲಾ ಅಂತಾ ಆಸ್ಪತ್ರೆಗೆ ತೋರಿಸಿಕೊಳ್ಳುವ ಕುರಿತು ನಮ್ಮ ಊರಿಗೆ ಬಂದಿದ್ದು ನಮ್ಮ ಮನೆಯಲ್ಲಿದ್ದನ್ನು ಆ ಸಮಯದಲ್ಲಿ ಶಿವಾ ರಾಠೋಡ ಇತನು ನನ್ನೊಂದಿಗೆ ತುಂಬಾ ಸಲಿಗೆಯಿಂದ ನಡೆದುಕೊಳ್ಳುವದು ,ಕೈ ಹಿಡಿದು ಎಳೆದಾಡುವದು ಚುಡಾಯಿಸುವದು ಮಾಡುತಿದ್ದನು ನಮ್ಮ ಮಾವನಾಗಬೇಕೆಂದು ಸುಮ್ಮನಾಗಿದ್ದು ದಿನಾಂಕ 4-1-2018 ರಂದು ರಾತ್ರಿ 12-00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದಾಗ  ನಮ್ಮ ಮಾವ ಶಿವಾ ರಾಠೋಡ ಇತನು ನಾನು ಮಲಗಿದಲ್ಲಿಗೆ ಬಂದು ನನ್ನ ಪಕ್ಕದಲ್ಲಿ ಮಲಗಿಕೊಂಡಾಗ ನಾನು ಬೇರೆಕಡೆಗೆ ಹೋಗು ಅಂತಾ ಅನ್ನುವಷ್ಟರಲ್ಲಿ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿದನು, ನಾನು ಒದ್ದಾಡುತ್ತಾ ಬಿಡಿಸಿಕೊಳ್ಲಲು ಪ್ರಯತ್ನಿಸುತಿದ್ದಾಗ ನನಗೆ ಕಾಲಲ್ಲಿ ಒತ್ತಿ ಹಿಡಿದು ಆಗ ನನಗೆ ಹೆದರಿಸಿ ಜಬರದಸ್ತಿಯಿಂದ ನಾನು ಧರಿಸಿದ್ದ  ಬಟ್ಟೆಗಳನ್ನು ತೆಗೆದು ನನಗೆ ಹಟ ಸಂಭೋಗ ಮಾಡಿರುತ್ತಾನೆ. ಬೆಳಗ್ಗೆ ಎದ್ದು ನನಗೆ ಮನೆ ಹಿಂದುಗಡೆ ಕರೆದುಕೊಂಡು ಹೋಗಿದ್ದು ಆಗ ನಾನು ಈ ವಿಷಯ ನನ್ನ ತಂದೆ ತಾಯಿಗೆ ಹೇಳುತ್ತೇನೆ ಅಂತಾ ಅಂದುದಕ್ಕೆ ಆತನು ಈ ವಿಷಯ ನಿಮ್ಮ ತಂದೆ ತಾಯಿಗೆ ಹೇಳಿದರೆ ಜೀವ ಸಹಿತ ಬಿಡುವದಿಲ್ಲಾ ಅಂತಾ ಹೆದರಿಸಿದ್ದರಿಂದ ನಾನು  ನಮ್ಮ ತಂದೆ ತಾಯಿವರಿಗೆ ಈ ವಿಷಯ ಹೇಳದೆ ಮಾನಕ್ಕೆ ಹೀಗೆ ನನಗ 4 ದಿವಸಗಳವರೆಗೆ ಸತತವಾಗಿ ರಾತ್ರಿವೇಳೆಯಲ್ಲಿ ನನಗೆ ಜಬರದಸ್ತಿಯಿಂದ ಹಟ ಸಂಭೋಗ ಮಾಡಿರುತ್ತಾನೆ. ದಿನಾಂಕ. 9-01-2018 ರಂದು ಮರಳಿ ತನ್ನ ಊರಾದ ವಾಡಿ ತಾಂಡಾಕ್ಕೆ ಹೋದನು. ನಂತರ ಪುನಾ 15 ದಿವಸಗಳ ನಂತರ ಪುನಾ  ನಮ್ಮ ಮಾವ ಶಿವರಾಠೋಡ ನಮ್ಮ ಮನೆಗೆ ಬಂದಿದ್ದು  ಅಂದು ರಾತ್ರಿ ಕೂಡಾ ನಮ್ಮ ಮಾವ ಶಿವ ರಾಠೋಡ ಇತನು ರಾತ್ರಿಯಾದ ಮೇಲೆ ನನ್ನ ಮಗ್ಗುಲಲ್ಲಿ ಬಂದು ಮಲಗಿ ನನ್ನ ಬಾಯಿ ಒತ್ತಿ ಹಿಡಿದು ಹೆದರಿಸಿ  ಜಬರದಸ್ತಿಯಿಂದ ಸಂಭೋಗ ಮಾಡಿರುತ್ತೇನೆ. ಮರುದಿವಸ ಬೆಳಗ್ಗೆ  ನಾನು ಒಬ್ಬಳೆ ಮನೆಯ ಮುಂದೆ ಕಸ ಗೂಡಿಸುವಾಗ ನನ್ನ ಹತ್ತಿರ ಬಂದಾಗ ನಾನು ನನ್ನ ತಂದೆ ಈ ವಿಷಯ ತಿಳಿಸುತ್ತೇನೆ ಅಂತಾ ಅಂದುದಕ್ಕೆ  ರಂಡೀ ನಾನು ಜಬರದಸ್ತಿಯಿಂದ ಹಟ ಸಂಭೋಗ ಮಾಡಿದ್ದ ಬಗ್ಗೆ ನಿಮ್ಮ ತಂದೆ ತಾಯಿಗೆ ಹೇಳಿದರೆ ನಿನಗೂ ಮತ್ತು ನಿನ್ನ ಅಣ್ಣ  ಮೇಘನಾಥನಿಗೆ ಖಲಾಸ ಮಾಡುತ್ತೇನೆ  ಅಂತಾ ಹೇದರಿಸಿದ್ದನು  ಹೀಗಾಗಿ ನನಗೂ ಮತ್ತು ನನ್ನ ಅಣ್ಣ ಮೇಘನಾಥನ ಜೀವಕ್ಕೆ ತೊಂದರೆ ಮಾಡಬಹುದೆಂದು ನಾನು ಹೆದರಿ ಈ ವಿಷಯವನ್ನು ನನ್ನ ತಂದೆ ತಾಯಿಯವರಿಗೆ ತಿಳಿಸಿರುವದಿಲ್ಲಾ. ದಿನಾಂಕ. 4-01-2018 ದಿಂದ ರಾತ್ರಿ 12-00 ಗಂಟೆಯ ಸುಮಾರಿಗೆ ಅಪ್ರಾಪ್ತ ಬಾಲಕಿಯಾದ ನನಗೆ ಸತತವಾಗಿ 4 ದಿವಸಗಳ ವರೆಗೆ ಮನೆಯಲ್ಲಿ ಮಲಗಿದಾಗ ನನ್ನ ಬಾಯಿ ಒತ್ತಿ ಹಿಡಿದು ಸುಮ್ಮನಿರುವಂತೆ ಹೆದರಿಸಿ ಜಬರದಸ್ತಿಯಿಂದ ಸತತವಾಗಿ ನನಗೆ ಹಟ ಸಂಭೋಗ ಮಾಡಿರುತ್ತಾನೆ ಈಗ ನಾನು ಗರ್ಭಿಣಿಯಾಗಿರುತ್ತೇನೆ. ಆದುದರಿಂದ ನನ್ನ ಮೇಲೆ ಅತ್ಯಾಚಾರ ವೆಸಗಿ ಜಬರದಸ್ತಿಯಿಂದ ಹಟಸಂಭೋಗ ಮಾಡಿದ ಶಿವಾ ತಂದೆ ತುಕರಾಮ ರಾಠೋಡ ಸಾ/ ಲಕ್ಷ್ಮಪೂರ ವಾಡಿ ತಾ/ಚಿತ್ತಾಪೂರ ಜಿ/ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಕುಮಾರಿಯವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 9/07/18 ರಂದು ಶ್ರೀ ಹಣಮಂತ ತಂದೆ ಕನಕಪ್ಪ ಜಾಧವ  ಸಾಸಿರನೂರ ತಾ: ಜಿ: ಕಲಬುರಗಿ ರವರು ಬರ್ಹಿದೆಸೆ ಮುಗಿಸಿಕೊಂಡು ಎನ್ ಹೆಚ್ 218 ರಸ್ತೆಯನ್ನು ಆ ಕಡೆಯಿಂದ ರಸ್ತೆ ದಾಟುತ್ತಿದ್ದಾಗ ಜೇವಗರಗಿ ಕಡೆಯಿಂದ  ಮೋ ಸೈಕಲ ನಂ ಕೆಎ 32 ಇಕ್ಯೂ 8053 ನೇದ್ದನ್ನು ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಡಿಕ್ಕಿ ಪಡೆಯಿಸಿದ್ದರಿಂದ ರಸ್ತೆ ದಾಟುತ್ತಿದ್ದ ಪಿರ್ಯಾದಿಗೆ ಬಾರಿ ಗಾಯವಾಗಿ ಎಡಗೈ ಮೊಳಕೈಎಡಕಾಲಿನ  ಹತ್ತಿರ ಬಾರಿ ಹಾಗೂ ಸಾದಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ:- 03/07/2018 ರಂದು ಸಾಯಂಕಾಲ 1) ಸಾಜೀದ ತಂದೆ ಖಾಸಿಂ ಅಲಿ 2) ಉಮರ ತಂದೆ ಖಾಸಿಂ ಅಲಿ 3) ಶೇರು @ ಸದ್ದಾಂ ತಂದೆ ಇಸ್ಮಾಯಿಲಸಾಬ 4) ಮಟಕಾ ಮಾಜೀದ ತಂದೆ ಖಾಸಿಂ ಅಲಿ 5) ನಯೀಮ್ ತಂದೆ ಗಪೂರಸಾಬ, 6) ತಾಹೇರ ತಂದೆ ಅಲಿಸಾಬ 7) ಖಾಜಾಮಿಯ್ಯಾ ನಾಜವಾಲೇ ಸಾ:ಬಾಂಬೆ ಹೊಟೇಲ ಹತ್ತಿರ ಬಿಲಾಲಾಬಾದ ಕಲಬುರಗಿ 8) ಸೊಹೇಬ ಸಾ:ಬ್ಯಾಂಕ ಕಾಲೋನಿ ಕಲಬುರಗಿ 9) ಯೂನೀಷ ಸಾ:ಆಜಾದಪುರ ರೋಡ ಕಲಬುರಗಿ ನೇದ್ದವರು ಏರೆಲೆನ್ಸ ದಾಬಾದಲ್ಲಿ ಊಟ ಮಾಡಿದ್ದು ಆಗ ಫಿರ್ಯಾದಿದಾರನು ಸದರಿಯವರಿಗೆ ಊಟ ಮಾಡಿದ ಬಿಲ್ಲು ಕೇಳಿದರೇ ಏ ಭೋಸಡಿ ಮಗನೇ ದಾಬಾ ಮಾಲಿಕನಾಗಿ ಊಟ ಸರಿಯಾಗಿ ಕೊಡಲು ಬರುವುದಿಲ್ಲಾ ಮತ್ತು ಸಪ್ಲಾಯಿ ಕೂಡಾ ಸರಿಯಾಗಿ ಮಾಡಿಲ್ಲಾ ಅದಕ್ಕೆ ನಾವು ನಿಮಗೆ ಬಿಲ್ಲು ಕೊಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ಆಗ ಬಿಲ್ಲು ಯಾಕೇ ಕೊಡುವುದಿಲ್ಲಾ ಅಂತಾ ಕೇಳಿದ್ದಕ್ಕೆ ಫಿರ್ಯಾದಿಗೆ ಕೊಲೆ ಮಾಡುವ ಉದ್ದೇಶದಿಂದ ಈ ಮೇಲ್ಕಂಡ ಎಲ್ಲಾ ಜನರು ಅಕ್ರಮಕೂಟ ರಚಿಸಿಕೊಂಡು ಬಂದು ಅದರಲ್ಲಿ ಉಮರ ಇತನು ಫಿರ್ಯಾದಿದಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಆತನ ಹಿಂದುಗಡೆಯಿಂದ ಓಡುತ್ತಾ ಬಂದು ಬಿಯರ್ ಬಾಟಲಿಯಿಂದ ತಲೆಗೆ ಹೊಡೆದನು ಆಗ ಅವನು ಒಮ್ಮಲೇ ತಿರುಗಿದಾಗ ಸದರಿ ಒಡೆದ ಬಿಯರ್ ಬಾಟಲಿಯಿಂದ ಆತನ ಎಡಗಡೆ ಹೊಟ್ಟೆಗೆ ಚುಚ್ಚಲು ಬಂದಾಗ ಆಗ ಆತನು ತನ್ನ ಎಡಗೈ ರಕ್ಷಣೆಗಾಗಿ ತಂದಾಗ ಬಿಯರ್ ಬಾಟಲಿಯ ಏಟು ಆತನ ಎಡಗೈ ರಟ್ಟೆಗೆ ಹತ್ತಿ ಭಾರಿ ರಕ್ತಗಾಯವಾಯಿತು. ಆತನು ಎಡಗೈ ಅಡ್ಡ ತರದೇ ಇದ್ದರೇ ಕೊಲೆ ಮಾಡುತ್ತಿದ್ದನು ಅಂತಾ ಶ್ರೀ ಅಬ್ದುಲ್ ಲತೀಫ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಸುಲೇಮಾನ ಪಟೇಲ ಸಂಗಡ ಇನ್ನೂ ಮೂರು ಜನರು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಶ್ರೀ ಅಲ್ಲಾಪಟೇಲ ತಂದೆ ಮಹಿಬಬೂಬ ಪಟೇಲ ವಾಡಿ ಸಾಃ ಕೊಳ್ಳೂರ ಗ್ರಾಮ ರವರ ಹೊಲದಲ್ಲಿ ಅತೀ ಕ್ರಮ ಪ್ರವೇಶ ಮಾಡಿ ಹೊಲದ ಬಂದಾರಿ ಸಲುವಾಗಿ ಜಗಳ ತೆಗೆದು ಬಡಿಗೆಯಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಫರತಾಬಾದ ಠಾಣೆ : ದಿನಾಂಕ 8/07/18 ರಂದು ಅಲ್ಲಾ ಪಟೇಲ ಹಾಗೂ ಆತನ ಮಕ್ಕಳು ಸಾಃ ಎಲ್ಲರೂ ಕೊಳ್ಳೂರ ಗ್ರಾಮ ದವರು ಹೊಲದ ಬಂದಾರಿ ವಿಷಯದಲ್ಲಿ ಶ್ರೀಮತಿ ಹಾಜಿಬೇಗಂ ಗಂಡ ಬಾವಾ ಪಟೇಲ ಸಾಃ ಕೊಳ್ಳುರ ಗ್ರಾಮ ತಾ.ಜಿಃ ಕಲಬುರಗಿ ರವರೊಂದಿಗೆ ಜಗಳ ತೆಗೆದುಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ, ಅವಮಾನ ಮಾಡಿ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

09 July 2018

KALABURAGI DISTRICT REPORTED CRIMES

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಶ್ರೀಮಂತ ತ್ರೀಲಾಪುರ ಸಾ:ಕರಕಮುಕಳಿ(ಕನಕಪುರ) ತಾ:ಚಿಂಚೋಳಿ ಹಾ::ಮನೆ.ನಂ.9/528 ಸಮೀಕ್ಷಾ ನಿಲಯ 3 ನೇ ಕ್ರಾಸ ಕೈಲಾಸ ನಗರ ಕಲಬುರಗಿ ರವರು  ದಿನಾಂಕ:06/07/2018 ರಂದು ರಾತ್ರಿ 9.00 ಗಂಟೆಗೆ ಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ನನ್ನ ಹೆಂಡತಿ ಅಶ್ವಿನಿ ಇವರ ಹೇರಿಗೆ ಮದರಕೇರ ಆಸ್ಪತ್ರೆಯಲ್ಲಿ ಯಾಗಿದ್ದು ನಾನು ಆಸ್ಪತ್ರೆಗೆ ಹೋಗಿದ್ದು ದಿನಾಂಕ:07/07/2018 ರಂದು 7.50 .ಎಂಕ್ಕೆ ಮರಳಿ ನಮ್ಮ ಮನೆಗೆ ಬಂದಾಗ ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಗೊಂಡು ಮನೆಯಲ್ಲಿ ಹೋಗಿ ನೋಡಲಾಗಿ ಮನೆಯಲ್ಲಿಯ ಆಲಮರಿ ಮುರಿದಿದ್ದು ಅಲಮಾರಿಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು ನಾನು ಪರಿಶೀಲಿಸಿ ನೋಡಲಾಗಿ ಮನೆಯಲ್ಲಿಯ ಬಂಗಾರದ ಆಭರಣಗಳು ಮತ್ತು ನಗದು ಹಣ ಒಟ್ಟು 1,68,000/-ರೂ ಬೆಲೆಬಾಳುವ ಬಂಗಾರದ ಒಡವೆಗಳು ಹಾಗೂ ನಗದು ಹಣ ಯಾರೋ ಕಳ್ಳರು ರಾತ್ರಿ ವೇಳೆ ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಅಫಜಲಪೂರ ಠಾಣೆ : ದಿನಾಂಕ 06-07-2018 ರಂದು ದಿಕ್ಸಂಗಾ (ಕೆ) ಗ್ರಾಮದ ಹನುಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಿಕ್ಸಂಗಾ (ಕೆ) ಗ್ರಾಮಕ್ಕೆ ಹೋಗಿ, ಹನುಮಂತ ದೇವರ ಗುಡಿಯಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಗುಡಿಯ ಮುಂದೆ ಇರುವ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಾರಾಮ ತಂದೆ ಶಿವಪ್ಪ ನಾಗಣಸೂರ ಸಾ|| ದಿಕ್ಸಂಗಾ (ಕೆ) ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 500/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಹರಣ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಹಣಮಂತರಾಯ ತಂದೆ ಶರಣಪ್ಪಾ ಗೌಡಪ್ಪಗೋಳ ಸಾ:ಜವಳಿ (ಡಿ) ತಾ:ಆಳಂದ ಹಾ::ಜೆ.ಆರ್‌‌ ನಗರ ಆಳಂದ ರೋಡ ಕಲಬುರಗಿ  ರವರ ಮಗನಾದ  ಸಿದ್ರಾಮ ತಂದೆ ಹಣಮಂತರಾಯ ಗೌಡಪ್ಪಗೋಳ :16 :ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಇತನು ದಿನಾಂಕ:04/07/2018 ರಂದು ಬೆಳಗ್ಗೆ 11.30 ಗಂಟೆ ಸುಮಾರಿಗೆ ಸ್ಟಡಿ ಮಟೇರಿಯಲ್ಸ್‌‌ ಝೇರಾಕ್ಸ್‌‌ ಮಾಡಿಸಿಕೊಂಡು ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದು ನಮ್ಮ ಮಗ ಮರಳಿ ಇಂದಿನವರೆಗೂ ಮನೆಗೆ ಬಂದಿರುವದಿಲ್ಲಾ ನನ್ನ ಮಗನ ಚಹರೆ ಪಟ್ಟಿ ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಎತ್ತರ 5’6’’ ಮೈಮೇಲೆ ಉದ್ದ ತೋಳಿನ ಕೆಂಪು ಟಿ-ಶರ್ಟ, ನೀಲಿ ಬಣ್ಣದ ಜೀನ್ಸ್ ಪ್ಯಾಂಟ, ಬಿಳಿ ಬನಿಯಾನ, ಬಾಟಾ ಕಂಪನಿಯ ಚಾಕಲೇಟ್‌‌ ಬಣ್ಣದ ಚಪ್ಪಲ್ ಧರಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಭವಾನಿ ತಂದೆ ಗುಂಡಪ್ಪಾ ಗರಡಕರ ಸಾ:ಮಾಕಾ ಲೇಔಟ ಜೇವರ್ಗಿ ಕಾಲೋನಿ ಕಲಬುರಗಿ ರವರು ದಿನಾಂಕ:04/07/18 ರಂದು ನನ್ನ ಹೆಂಡತಿಗೆ ಹೇರಿಗೆಯಾಗಿದ್ದು ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಮತ್ತು ಮಗುವಿನ ಉಪಚಾರ ನೋಡಿಕೊಳ್ಳಲು ಯಾರು ಹೆಣ್ಣು ಮಕ್ಕಳು ಇಲ್ಲದ ಕಾರಣ ನಾನು ನಮ್ಮ ಮಾವನಾದ ಶಂಕರ ಚವ್ಹಾಣ ಇವರಿಗೆ ಪೋನ ಮಾಡಿ ಅತ್ತಿಯಾದ ಇಂಧುಬಾಯಿಗೆ ಆಸ್ಪತ್ರೆಗೆ ಕಳುಹಿಸಿ ಕೊಡಲು ಕೇಳಿದಾಗ ಮನೆಗೆ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದರು ಆಗ ನಾನು ಗಂಗಾನಗರದಲ್ಲಿರುವ ನನ್ನ ಮಾವನ ಮನೆಗೆ ಹೋದಾಗ ಮನೆಯಲ್ಲಿ ನಮ್ಮ ಮಾವನವರಾದ ಶಂಕರ ತಂದೆ ತುಳಸಿರಾಮ ಚವ್ಹಾಣ ಹಾಗೂ ನಮ್ಮ ಅಳಿಯ ದೇವಿದಾಸ ಚವ್ಹಾಣ ಇಬ್ಬರೂ ಕೂಡಿಕೊಂಡು 5.00 ಪಿ.ಎಂ ಸುಮಾರಿಗೆ ನನಗೆ ಬೈಯ ಹತ್ತಿದರು ಆಗ ನಾನು ಯಾಕೆ ಬೈಯುತ್ತಿರಿ ನನ್ನ ಹೆಂಡತಿ ಆಸ್ಪತ್ರೆಯಲ್ಲಿ ಇದ್ದಾಳೆ ಅತ್ತೆಗೆ ಕಳುಹಿಸಿ ಕೋಡಿರಿ ಎಂದಾಗ ನಮ್ಮ ಮಾವ ಶಂಕರ ಇತನು ನಾನು ಕಳುಹಿಸಿ ಕೊಡುವದಿಲ್ಲಾ ನಿನ್ನ ಸೊಕ್ಕ ಬಹಳ ಆದ ಮಗನಾ ಅಂತಾ ಕಟ್ಟಿಗೆ ತೆಗೆದುಕೊಂಡು ನನ್ನ ತಲೆಯ ಮೇಲೆ ಎಡಭಾಗಕ್ಕೆ ಹೊಡೆದಿದ್ದು ನಮ್ಮ ಅಳಿಯ ದೇವಿದಾಸ ಇತನು ಕೈಯಿಂದ ಮೈ ಕೈಗೆ ಹೊಡೆಯಹತ್ತಿದನು ಆಗ ನಮ್ಮ ಅತ್ತೆ ಇಂದುಬಾಯಿ ಇವಳು ಬಿಡಿಸಿಕೊಂಡಳು ನನ್ನ ತಲೆಯಿಂದ ರಕ್ತ ಬರ ಹತ್ತಿತ್ತು ನಂತರ ನಾನು ಜಿಲ್ಲಾ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿದ್ದು ವೈದ್ಯರು ನನ್ನ ತಲೆಯ ಗಾಯಕ್ಕೆ ಉಪಚಾರ ಮಾಡಿ ವಾರ್ಡನಲ್ಲಿ ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ
ಫರತಾಬಾದ ಠಾಣೆ : ಶ್ರೀಮತಿ ಜ್ಯೋತಿ ಗಂಡ ವಿಶ್ವರಾಜ ಧರಿಗೊಂಡ ಸಾ ತೆಲೂರ ಹಾ.ವ. ಜೈಲ ಕ್ವಾಟರ್ಸ ಖನದಾಳ ರೋಡ ಕಲಬುರಗಿ  ರವರು ಸುಮಾರು 4 ವರ್ಷಗಳ ಹಿಂದೆ ವಿಶ್ವರಾಜ ಇತನೊಂದಿಗೆ ಮದುವೆಯಾಗಿದ್ದು ಮದುವೆ ಕಾಲಕ್ಕೆ ವರೋಪಚಾರ ಅಂತಾ ನಗದು ಹಣ ಬಂಗಾರ ಗೃಹ ಉಪಯೋಗಿ ಸಾಮಾನುಗಳನ್ನು ಕೊಟ್ಟಿದ್ದು ಮದುವೆಯಾದ ನಂತರ  ಸ್ವಲಪ್ಪ ದಿನಗಳ ನಂತರ ನನ್ನ ಗಂಡ ಅತ್ತೆ ಮಾವ, ಮೈದುನರು ಮತ್ತು  ನೆಗೆಣಿ ಎಲ್ಲರು ಕೂಡಿಕೊಂಡು  ತವರುಮನೆಯಿಂದ ಇನ್ನು ಹೆಚ್ಚಿನ ವರದಕ್ಷಣೆ ತರುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕಳ ಕೊಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

05 July 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸೈಯದ ಮಹೇಬೂಬ ತಂದೆ ಸೈಯದ ಸೈನೋದ್ದಿನ್‌ ಸಾ:ಮನೆ.ನಂ.15ಎ ಎ.ಎಸ್‌‌.ಐ ಲೈನ್‌ ಪೊಲೀಸ್‌ ಹೇಡ್‌‌ ಕ್ವಾಟರ್ಸ್ ಕಲಬುರಗಿ ರವರು  ದಿನಾಂಕ:04/07/2018 ರಂದು ಮನೆಯಲ್ಲಿರುವಾಗ ಬೆಳಗ್ಗಿನ ಜಾವ 5.30 ಗಂಟೆಯ ಸುಮಾರಿಗೆ  ನನ್ನ ಕಾಕನ ಮಗಳಿನ ಮಗಳಾದ ಮಾಸುಮಾ ಇವಳು ತನ್ನ ಮೊಬೈಲ್‌ ದಿಂದ ದೂರವಾಣಿ ಕರೆಮಾಡಿ ತಿಳಿಸಿದ್ದೆನೆಂದರೆ, ಮಾಮಾ ಅಕ್ಬರ್‌‌ ಮಾವನ ಮನೆಗೆ ಬೆಂಕಿ ಹಚ್ಚಿದ್ದಾರೆ ಅಕ್ಬರ್‌ ಮಾಮಾ ಮತ್ತು ಮಾಮೀ ಶಹನಾಜ ಬೇಗಂ ಹಾಗೂ ಅವರ ಇಬ್ಬರೂ ಮಕ್ಕಳಾದ ಸೈಯದ ಯಾಸೀನ್‌ ಹಾಗೂ ಮಗಳಾದ ಸಾನಿಯಾಬೇಗಂ ಇವರೆಲ್ಲರೂ ಸುಟ್ಟಿದ ಗಾಯಗಳಿಂದ ತುಂಬಾ ಬಳಲುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ನಾನು ಸರಿ ತಕ್ಷಣವೇ ಅಂಬುಲೇನ್ಸ್ ಗೆ ಕರೆಮಾಡು ನಾನು ಕೂಡಾ ಕರೆಮಾಡಿ ಹೇಳುತ್ತೇನೆ ಅಂತಾ ತಿಳಿಸಿದ್ದೆನು ನಂತರ ನಾನು ತಕ್ಷಣವೆ ಬಟ್ಟೆಯನ್ನು ಹಾಕಿಕೊಂಡು ಎಂ.ಎಸ್‌‌.ಕೆ.ಮೀಲ್‌ ಕಡೆಗೆ ಹೊರಟ್ಟಿದ್ದಾಗ ಮತ್ತೆ ಮಾಸುಮಾ ಇವಳು ಕರೆ ಮಾಡಿ ಮಾಮಾ ನಾವು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಮುಟ್ಟಿದ್ದೇವೆ ಈ ಕಡೆಗೆ ಬನ್ನಿ ಅಂತಾ ತಿಳಿಸಿದ ಮೇರೆಗೆ ನಾನು ಬೆಳಗಿನ ಜಾವ 6.30 ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಧಾವಿಸಿ ಬಂದು ನೋಡಲಾಗಿ ಅಲ್ಲಿ ನನ್ನ ಕಾಕನ ಮಗನಾದ ಸೈಯದ ಅಕ್ಬರ ಮತ್ತು ಆತನ ಹೆಂಡತಿ ಶಹನಾಜ ಬೇಗಂ ಮಕ್ಕಳಾದ ಸೈಯದ ಯಾಸೀನ ಮತ್ತು ಮಗಳಾದ ಸಾನೀಯಾ ಬೇಗಂ ಇವರೆಲ್ಲರೂ ಸುಟ್ಟ ಗಾಯಗಳಿಂದ ಬಳಲುತ್ತಿದ್ದರು ಅವರಿಗೆ 3-4 ವೈದ್ಯಾಧಿಕಾರಿಗಳು ಸೇರಿ ಚಿಕಿತ್ಸೆಯನ್ನು ನೀಡುತ್ತಿದ್ದರು ನಾನು ಮಾನ್ಯ ವೈದ್ಯಾಧಿಕಾರಿಗೆ ಭೇಟಿ ಮಾಡಿದ್ದು ಅವರು ನನಗೆ ಅಡಮೀಟ್‌ ಕಾರ್ಡ ಮಾಡಿ ತರಲು ತಿಳಿಸಿದ್ದು ನಾನು ಅಡಮೀಟ್‌ ಕಾರ್ಡ ಮಾಡಿ ತಂದೆನು. ನಂತರ ನಾನು ಮತ್ತೆ ವೈದ್ಯಾಧಿಕಾರಿಯವರನ್ನು ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಕುಟುಂಬಸ್ಥರ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದ್ದು ಕರ್ತವ್ಯದಲ್ಲಿದ್ದ ವೈದ್ಯರು ನಾಲ್ಕು ಜನರ ಸ್ಥಿತಿ ತುಂಬಾ ಚಿಂತಾಜನಕವಾಗಿದೆ 80 ರಿಂದ 90% ಸುಟ್ಟ ಗಾಯಗಳಾಗಿವೆ ನಮ್ಮ ಪ್ರಯತ್ನ ಮಾಡುತ್ತೇವೆ ಅಂತಾ ತಿಳಿಸಿದ ನಂತರ ನಾನು ಹೆಚ್ಚಿನ ಚಿಕಿತ್ಸೆಗಾಗಿ ಈ ಮೇಲೆ ತಿಳಿಸಿದ ನಾಲ್ಕು ಜನರನ್ನು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ನಾನು ನನ್ನ ತಮ್ಮನಾದ ಅಕ್ಬರ ಇತನಿಗೆ ನಡೆದ ಘಟನೆ ಬಗ್ಗೆ ವಿಚಾರಿಸಲಾಗಿ ನನ್ನ ತಮ್ಮನು ತಿಳಿಸಿದ್ದೆನೆಂದರೆ, ರಾತ್ರಿ 3.00 ಘಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿ ಮಲಗಿದ್ದಾಗ ಮನೆಯ ಮುಖ್ಯ ಬಾಗಿಲಿಗೆ ಮುಸ್ತಫಾ ತಂದೆ ಮಹ್ಮದ ಸಲೀಂ ಅಂತಾ ತಿಳಿಸಿದ ನಂತರ ಮುಸ್ತಫಾ ಯಾರು ಅಂತಾ ನಾನು ವಿಚಾರಿಸಿದಾಗ ತನ್ನ ತಂಗಿ ಹೀನಾ ಕೌಸರ ಇವಳ ಗಂಡ ಅಂತಾ ತಿಳಿಸಿದನು. ಯಾಕೆ ಬೆಂಕಿ ಹಚ್ಚಿದನು ಅಂತಾ ವಿಚಾರಿಸಿದಾಗ ಮುಸ್ತಫಾ ಇತನು ಹೀನಾ ಕೌಸರ ಇವಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರಿಂದ ನಾನು ಅವನಿಗೆ ಯಾವಾಗಲು ಬುದ್ದಿವಾದ ಹೇಳುತ್ತಾ ಬಂದಿದ್ದು ಮತ್ತು ಈ ರೀತಿ ಮುಂದೆ ಮಾಡಬೇಡ ಅಂತಾ ತಿಳುವಳಿಕೆ ನೀಡುತ್ತಾ ಬಂದಿದ್ದರಿಂದ ಮುಸ್ತಫಾ ಇತನು ಸಾಲೇ ಏ ಮರತಾಬಾ ದೇಕ ಲೇ ತು ಅಂತಾ ಹೇಳಿದನು ಕಾರಣ ನನ್ನ ತಮ್ಮನಾದ ಅಕ್ಬರ ಹಾಗೂ ಅವನ ಹೆಂಡತಿ ಯಾದ ಶಹನಾಜಬೇಗಂ ಮಗನಾದ ಸೈಯದ ಯಾಸೀನ ಮತ್ತು ಮಗಳಾದ ಸೈಯ್ಯದಾ ಸಾನಿಯಾ ಇವರೆಲ್ಲರೂ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಇವರೆಲ್ಲರನ್ನೂ ಕೊಲೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಮನೆಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿ ಗಾಯ ಪಡಿಸಿಸ್ಸು  ದಿನಾಂಕ:04/07/2018 ರಂದು ಸಾಯಂಕಾಲ 5.45 ಪಿ.ಎಂಕ್ಕೆ ಬಸವೇಶ್ವರ ಆಸ್ಪತ್ರೆಯಿಂದ ಶ್ರೀಮತಿ ಶಹಜಾನ ಬೇಗಂ ಗಂಡ ಸೈಯದ ಅಕ್ಬರ ಇವಳು ಉಪಚಾರ ದಿಂದ ಗುಣಮುಖ ಹೊಂದದೆ ಮೃತ ಪಟ್ಟಿರಿತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ :
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ) ಟ್ರ್ಯಾಕ್ಟರ ಇಂಜಿನ ನಂಬರ RGE2KGA2926 2) ಟ್ರ್ಯಾಕ್ಟರ ಇಂಜಿನ ನಂಬರ 43-1024/ sya02736  ªÀÄvÀÄÛ  3) ಟ್ರ್ಯಾಕ್ಟರ ನಂಬರ ಕೆಎ – 32 ಟಿಎ-6237 ನೇದ್ದರ  ಚಾಲಕ ಮತ್ತು ಮಾಲೀಕರು ಲೇಬರಗಳ ಸಹಾಯದಿಂದ ಮದರಿ ,ಜಿಲ್ಲಾಡಪಲ್ಲಿ ಮತ್ತು ಎಲೆ ರಾಜೋಳ ಗ್ರಾಮದ ಹಳ್ಳದಲ್ಲಿ ಅಕ್ರಮವಾಗಿ ಸರಕಾರಕ್ಕೆ  ರಾಜ್ಯ ಧನವನ್ನು ಬರಿಸದೇ ಮರಳನ್ನು ತುಂಬುತ್ತಿದ್ದಾಗ ಶ್ರೀ ಉಮಾಕಾಂತ ಕಂದಾಯ ನಿರೀಕ್ಷಕರು ಅಡಕಿ ಹೋಬಳಿ ತಾ||ಸೇಡಂ  ಮತ್ತು ಸಿಬ್ಬಂದಿಯವರ  ಸಹಾಯದಿಂದ ದಾಳಿ ಮಾಡಿ ಹಿಡಿದು ಠಾಣೆಗೆ ತಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ 04-07-2018 ರಂದು ಮುಧೋಳ ಠಾಣಾ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರಗಳಲ್ಲಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಐ. ಮುಧೋಳ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ 1) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 5015  2) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 3637 3) ಟ್ರ್ಯಾಕ್ಟರ ನಂಬರ  ಕೆಎ – 33 ಟಿಎ – 8121 4) ಟ್ರ್ಯಾಕ್ಟರ ಇಂಜಿನ ನಂಬರ S325 IG95877 5)  ಟ್ರ್ಯಾಕ್ಟರ ಇಂಜಿನ ನಂಬರ NGH2KBE0265 5 ಟ್ರ್ಯಾಕ್ಟರಗಳನ್ನು ಜಪ್ತಿಪಡಿಸಿಕೊಂಡು ಮುದೋಳ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.