POLICE BHAVAN KALABURAGI

POLICE BHAVAN KALABURAGI

26 September 2017

KALABURAGI DISTRICT REPORTED CRIMES

                                                                             
ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶೇಖ ಜಾವೀದ ತಂದೆ ನೂರ ಅಹ್ಮೇದ ಸಾ: ಶಾಂತ ನಗರ ಭಂಕೂರ ಇವರ ತಂದೆ  ದಿನಾಂಕ: 24/09/2017 ರಂದು ಮುಂಜಾನೆ ತಮ್ಮ ಹೊಂಡಾ ಆಕ್ಟೀವ ಮೊಟಾರ ಸೈಕಲ ನಂಬರ ಕೆ.ಎ. 03 ಹೆಚ್.ವಿ 9969  ತೆಗೆದುಕೊಂಡು ವಾಡಿ ಕ್ರಾಸಗೆ ನಾಷ್ಟ ಮಾಡಲು ಹೋಗುತ್ತಿದ್ದಾಗ ವಾಡಿ ಕ್ರಾಸ ಹತ್ತಿರ ರೋಡಿನಲ್ಲಿ  ದಿನಾಂಕ: 24/09/25017 ರಂದು ಮುಂಜಾನೆ 10-00 ಗಂಟೆಗೆ ಭಂಕೂರ ಕ್ರಾಸ ಕಡೆಯಿಂದ ಟಂ ಟಂ ಅಟೋ ನಂಬರ ಕೆ.ಎ. 32 ಸಿ 1859 ನೇದ್ದರ ಚಾಲಕ ತನ್ನ ಟಂ ಟಂ ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ತಂದೆ ನಡೆಯಿಸಿಕೊಂಡು ಹೋಗುತ್ತಿದ್ದ ಹೊಂಡಾ ಆಕ್ಟೀವಾ ಮೊಟಾರ ಸೈಕಲಕ್ಕೆ ಹಿಂದಿನಿ ಡಿಕ್ಕಿ ಪಡಿಸಿದರಿಂದ ನಮ್ಮ ತಂದೆ ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದು ತಲೆಗೆ ಒಳ ಪೆಟ್ಟು ಮತ್ತು ಹಣೆಗೆ ಹಾಗೂ ಬಲಗಾಲಿಗೆ , ಎಡಗೈಗೆ ತರುಚಿದ ರಕ್ತಗಾಯಾವಾಗಿ ಬೇಹುಷಾ ಆಗಿ ಬಿದ್ದರಿಂದ ನಮ್ಮ ತಂದೆಗೆ ಉಪಚಾರ ಕುರಿತು ಸರಕಾರಿ  ಆಸ್ಪತ್ರೆ ಶಹಾಬಾದಕ್ಕೆ ತೆಗೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಯುನೈಟೆಡ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ಇಂದು ದಿನಾಂಕ: 25-09-2017 ರಂದು ಬೆಳಗಿನಜಾವ ನಮ್ಮ ತಂದೆ ನೂರ ಅಹ್ಮೇದ ಇವರು ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಭಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಕಸ್ತೂರಬಾಯಿ ಗಂಡ ಬಸಂತ್ರಾಯ ಸಲದಳ್ಳಿ ಸಾ|| ಗಾಂದಿನಗರ ಮಳ್ಳಿ ತಾ|| ಜೇವರ್ಗಿ ರವರದು ನಮ್ಮೂರ ಸಿಮಾಂತರದಲ್ಲಿ ಸರ್ವೆ ನಂ 222 ನೇದ್ದರಲ್ಲಿ 5 ಎಕರೆ 16 ಗುಂಟೆ ಜಮೀನು ನನ್ನ ಹೆಸರಿಗೆ ಇರುತ್ತದೆ, ನನ್ನ ಹಿರಿ ಮಗ ಬಾಬುಗೌಡ ಈತನು ಮಾನಸಿಕ ಅಸ್ವಸ್ಥನಿದ್ದು, ನಮ್ಮ ಹೊಲವನ್ನು ನನ್ನ ಕಿರಿ ಮಗ ಶಂಕರಗೌಡ ಈತನು ನೋಡಿಕೊಳ್ಳುತ್ತಿರುತ್ತಾನೆ, ಹೊಲದ ಸಲುವಾಗಿ ನನ್ನ ಮಗ ಮಳ್ಳಿ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಸಾಲ ಪಡೆದುಕೊಂಡಿರುತ್ತಾನೆ, ಅದರಂತೆ ಖಾಸಗಿಯಾಗಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದು ಇರುತ್ತದೆ, ನನ್ನ ಮಗ ಆಗಾಗ ನಮಗೆ ಸಾಲ ಬಹಳ ಆಗಿದೆ ಅದನ್ನು ತೀರಿಸುವುದು ಹೇಗೆ, ಹೊಲದಲ್ಲಿ ಬೆಳೆನು ಸರಿಯಾಗಿ ಬೆಳೆಯುತ್ತಿಲ್ಲಾ, ಉರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾ, ನಾನು ಇರುವುದಕ್ಕಿಂತಾ ಸಾಯುವದೇ ಮೇಲು ಅಂತಾ ಹೇಳುತ್ತಾ ಚಿಂತೆ ಮಾಡುತ್ತಿದ್ದನು, ಆಗ ನಾವು ಅವನಿಗೆ ಸಮಾಧಾನ ಹೇಳುತ್ತೇದ್ದೇವು, ನಮ್ಮ ಮನೆ ಎರಡು ಅಂತಸ್ತಿನದು ಇರುತ್ತದೆ, ನನ್ನ ಮಗ ಮತ್ತು ಸೊಸೆ ಮೇಲಿರುವ ಕೋಣೆಲ್ಲಿ ಮಲಗುತ್ತಿದ್ದರು, ದಿನಾಂಕ 25-09-2017 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸೊಸೆ ಇಬ್ಬರು ಕೂಡಿ ಮೇಲೆ ಹೋಗಿ ನೋಡಿದಾಗ ನನ್ನ ಮಗ ಶಂಕರಗೌಡ ಈತನು ನೇಣು ಹಾಕಿ ಕೋಂಡಿದ್ದನು, ನಂತರ ನಾನು ಚಿರಾಡುತ್ತಿದ್ದಾಗ ನಮ್ಮ ಮನೆ ಹತ್ತಿರ ಇದ್ದ ಗುತ್ತಪ್ಪಗೌಡ ಸಾಸನೂ, ಅಪ್ಪಣ್ಣ ಹಾದಿಮನಿ ರವರು ಬಂದು ನನ್ನ ಮಗನಿಗೆ ಕೆಳಗೆ ಇಳಿಸಿ ನೋಡಿದಾಗ ನನ್ನ ಮಗ ಮೃತ ಪಟ್ಟಿದ್ದನು,          ನನ್ನ ಮಗ ಹೊಲದ ಸಲುವಾಗಿ ಮಳ್ಳಿ ಗ್ರಾಮದ ಕೆ.ಜಿ.ಬಿ ಬ್ಯಾಂಕನಲ್ಲಿ 60,000/- ರೂ ಮತ್ತು ಖಾಸಗಿಯಾದ ಸುಮಾರು 4,00,000/- ರೂ ಸಾಲ ಮಾಡಿಕೊಂಡಿದ್ದು, ಈ ಸಾಲ ಹೇಗೆ ತೀರಿಸಬೇಕು ಅಂತಾ ಚಿಂತೆ ಮಾಡುತ್ತಾ ಜಿಗುಪ್ಸೆಗೊಂಡು ಇಂದು ದಿನಾಂಕ 25-09-2017 ರಂದು ಬೆಳಿಗ್ಗೆ 06;30 ಗಂಟೆಯಿಂದ 07;00 ಗಂಟೆ ಮದ್ಯದಲ್ಲಿ ನಮ್ಮ ಮನೆಯ ಮೇಲಿನ ಕೋಣೆಯಲ್ಲಿ ಪೈಪಿನ ಅಡ್ಡಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/09/2017 ರಂದು ಭಂಕೂರ ಸೀಮಾಂತರದ ಕಾಗಿನಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಭಾಷ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನಂದ ದಾಬಾ ಹತ್ತಿರ ಭಂಕೂರ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ಲಾರಿ ನಂಬರ ಕೆ.ಎ. 34 9330 ಬರುತ್ತಿದ್ದು ಅದರ ಚಾಲಕ ಮತ್ತು ಅದರಲ್ಲಿದ್ದ ಇನ್ನೋಬ್ಬ ವ್ಯಕ್ತಿ ಪೊಲೀಸ ಜೀಪ ನೋಡಿ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಸದರಿ ಮರಳು ತುಂಬಿದ ಟಿಪ್ಪರ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿ ಟಿಪ್ಪರ ಲಾರಿ ಚಾಲಕ ಮತ್ತು ಮಾಲಿಕ ಸರಕಾರಕ್ಕೆ ಯಾವುದೆ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿನಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಅಲ್ತಾಫ ಅನ್ವರ ಬೇಗ ತಂದೆ ಮಿರ್ಜಾ ರುಸ್ತುಮ ಬೇಗ ಸಾ : ಸಾದಿಕ ಕಾಲನಿ ಎಮ್.ಎಸ್.ಕೆ. ಮಿಲ್ಲ ರೋಡ ಕಲಬುರಗಿ ರವರು ಮತ್ತು ಆತನ ಚಾಲಕ  ಮಶಾಕ ಇಬ್ಬರು   ಅಂಗಡಿ ಮುಚ್ಚಿ ಮನೆಗೆ ಹೋಗುವಾಗ ನಮ್ಮ ಅಂಗಡಿ ಎದುರು ಇರುವ ರಸ್ತೆ ಬದಿಯಲ್ಲಿ ಚಾಲಕ ಮಶಾಕ ಇತನು ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158  ನೇದ್ದು ಲಾಕ ಮಾಡಿದ ನಂತರ ವಾಹನದ ಕೀಲಿ ಅಂಗಡಿಯಲ್ಲಿ ಇಟ್ಟು ಇಬ್ಬರು ಮನೆಗೆ ಹೋದೇವು.  ಮರುದಿನ ದಿನಾಂಕ 24-09-2017 ರಂದು ಬೆಳಿಗ್ಗೆ 09-00 ಗಂಟೆಗೆ ಅಂಗಡಿಗೆ ನಾನು ಮತ್ತು ಮಶಾಕ ಇಬ್ಬರು ಬಂದು ನೋಡಲಾಗಿ ಅಂಗಡಿಯ ಎದುರು ಇರುವ ರಸ್ತೆ ಬದಿಯಲ್ಲಿ ರಾತ್ರಿ ನಿಲ್ಲಿಸಿ ಹೋದ ನಮ್ಮ ಬುಲೋರೋ ವಾಹನ ಕಾಣಿಸಲಿಲ್ಲಾ. ಯಾರೋ ಕಳ್ಳರು ನಮ್ಮ ಬುಲೋರೋ ಪಿಕ್ಕಪ್ಪ ಗೂಡ್ಸ್ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನನ್ನ ಕಳ್ಳತವಾದ ಬುಲೋರೋ ಪಿಕ್ಕಪ್ಪ ಗೂಡ್ಸ್ KA 36  9158 ವಿವರ ರೀತಿ ಇದೆ.  Chassi No. MA1ZN2GGA91D28894   Engine No. GG91D49527  Make BOLERO CAMPER DX2WD, Model -2009, Colour White , ಬಣ್ಣದ್ದು ಇರುತ್ತದೆ. ವಾಹನ ಕಿಮ್ಮತ್ತು ಅ:ಕಿ:  1,40,000/-  ರೂ. ಆಗುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 September 2017

KALABURAGI DISTRICT REPORTED CRIMES

ಆಕ್ರಮವಾಗಿ ಸಂಗ್ರಹಿಸಿದ್ದ  ಮರಳು ಜಪ್ತಿ :.
ಶಾಹಾಬಾದ ನಗರ ಠಾಣೆ : ದಿನಾಂಕ: 24.09.2017 ರಂದು ಮುತ್ತಗಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಜಗ್ಗಿ ದಾಸ್ತಾನು ಮಾಡಿ ಕಳ್ಳತನದಿಂದ ಸಾಗಾಟ ಮಾಡಲು ಸಿದ್ದತೆ ಮಾಡುತ್ತಿದ್ದಾರೆಂದು ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ  ಹೋದಾಗ ಅನಸುಬಾಯಿ ಇವರ ಹೊಲದ ಹತ್ತಿರ ನದಿಯ ದಂಡೆಯಲ್ಲಿ  ನಾಲ್ಕು ಜನರು ನದಿಯಲ್ಲಿಯ ಮರಳು ಕಬ್ಬಣದ ಬಕೇಟಗಳಿಗೆ ಹಗ್ಗದ ಸಹಾಯದಿಂದ ಜಗ್ಗುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿಮಾಡಿದಾಗ ಮೂರು  ಜನರು ಮತ್ತು ಒಬ್ಬ ಮಹಿಳೆ ಓಡಿ ಹೋದರು. ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಮೂರು ಕಬ್ಬಿಣದ ಬಕೇಟಗಳು ಅದಕ್ಕೆ  ಹಗ್ಗ ಜೋಡಿಸಿದ್ದು ಇವುಗಳ ಸಹಾಯದಿಂದ ನದಿಯಿಂದ ಮರಳು ದಾಸ್ತಾನು ಮಾಡಿದ್ದು ಇವುಗಳೆಲ್ಲವುಗಳ ಅ.ಕಿ  - 5000 ರೂ  & ಸ್ಥಳದಲ್ಲಿ ಅಂದಾಜು ಎರಡು ಬ್ರಾಸ್ ಮರಳು ಅ ಕಿ 2000 ರೂ ನೇದ್ದವುಗಳನ್ನು  ಜಪ್ತಿಮಾಡಿಕೊಂಡು ನಂತರ ಓಡಿ ಹೋದವರ ಬಗ್ಗೆ ವಿಚಾರಿಸಲಾಗಿ ತಿಳದು ಬಂದಿದ್ದೇನೆಂದರೆ. ಮುತ್ತಗಾ  ಗ್ರಾಮದ 1] ಸೂರ್ಯಾಕಾಂತ ತಂದೆ ಬಸವರಾಜ ಮಳ್ಳಿ 2] ಶರಣಗೌಡ ತಂದೆ ಬಸವರಾಜ ಮಾಲಿಪಾಟೀಲ 3] ಶಿವಯೋಗಿ ಕಡಬೂರ 4] ಅನಸುಬಾಯಿ ಅಂತಾ ಗೊತ್ತಾಗಿ  ಶಾಹಾಬಾದ ನಗರ ಠಾಣೆಗೆ ಬಂದು ಸದರಿಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ: 24/09/2017 ರಂದು ಶಹಾಬಾದದ ರಾಮಾ ಮೊಹಲ್ಲಾದ ಸರಕಾರಿ ಶಾಲೆಯ ಅವಾರಣದಲ್ಲಿ ಇಸ್ಪೀಟ ಜೂಜಾಟ ನಡೆದಿದೆ ಅಂತಾ ಬಾತ್ತಿ ಮೇರೆಗೆ  ಶ್ರೀ ಕಲ್ಯಾಣಿ ಎಎಸ್‌ಐ ಶಹಾಬಾದ ನಗರ ಠಾಣೆ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಳಳಕ್ಕೆ ಹೋಗಿ ಮರೆಯಲ್ಲಿ ನಿಂತು ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ  1) ಮಹ್ಮದ ಗೌಸ 2) ಮಹ್ಮದ ಮಾಜೀದ 3) ಜಾವೀದ ಪಟೇಲ 4) ಇಲಿಯಾಸ ಪಾಶಾ  5) ಮಹೆಬೂಬ 6) ಸದ್ದಾಂ ಹುಸೇನ ಸಾ: ರಾಮಾ ಮೊಹಲ್ಲಾ ಶಹಾಬಾದ  ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೀಟ ಜೂಜಾಟಕ್ಕೆ ಬಳಸಿದ ನಗದು ಹಣ 7020-00 ರೂ ಹಾಗೂ 52 ಇಸ್ಪೇಟ ಎಲೆಗಳನ್ನು  ವಶಪಡಿಸಿಕೊಂಡು ಸದರಿಯವರೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ. 24-9-2017 ರಂದು ನನ್ನ ಗಂಡ ಆರೀಫ್ ಶೇಟ ಇವರ ಪ್ಲ್ಯಾಸ್ಟೀಕ್ ಕಂಪನಿಯಲ್ಲಿ ಕೆಲಸಕ್ಕೆ ಹೋಗಿದ್ದು ಮದ್ಯಾನ ನನ್ನ ಮಗಳಿಗೆ ನನ್ನ ಗಂಡನಿಗೆ ಊಟಕೊಟ್ಟು ಬರುವದಕ್ಕಾಗಿ ಕಳುಹಿಸಿಕೊಟ್ಟಿದ್ದು,ಸ್ವಲ್ಪ ಸಮಯದ ನಂತರ ಸದರಿ ಆರೀಫ ಶೇಠ ಕಂಪನಿ ಎದರುಗಡೆ  ಜನರು ನೆರೆದಿದ್ದರು ಆಗ ನಾನು ಓಡುತ್ತಾ ಹೋಗಿ ನೋಡಲು ನನ್ನ ಮಗಳು ಅಳುತಿದ್ದಳು ಆಗ ಅವಳಿಗೆ ವಿಚಾರಿಸಲು  ಮದ್ಯಾನ ತಂದೆಯ ಊಟ ಒಳಗಡೆ ಇಡಲು ಹೋದಾಗ  ನನ್ನ ತಂದೆ ಕಂಪನಿಯ ಹೊರಗಡೆ ಮೂತ್ರ ವಿಸರ್ಜನೆಗೆ ಹೋಗಿದ್ದರು, ಆಗ ಒಳಗಡೆ ಕೆಲಸ ಮಾಡುತಿದ್ದ   ಗಣಪತಿ ತಂದೆ ತುಕರಾಮ ಮೇತ್ರೆ ಇತನು ಸದರಿ ಪ್ಲ್ಯಾಸ್ಟಿಕ ಕಂಪನಿಯಲ್ಲಿ ಒಳಗೆ ಮೂಲೆಯಲ್ಲಿ ನನಗೆ ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ನನಗೆ ಒತ್ತಿ ಹಿಡಿದುಕೊಂಡು, ಬಾಯಿ ಒತ್ತಿ ಹಿಡಿದು ಮುದ್ದಾಡುತ್ತಾ, ಎಳೆದಾಡಿ ನನ್ನ ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಜಬರದಸ್ತಿಯಿಂದ ನನಗೆ ಜಬರಸಂಭೋಗ ಮಾಡುವಾಗ ನಾನು ಜೋರಾಗಿ ಚೀರಾಡುವಾಗ ಅಷ್ಟರಲ್ಲಿ ಪಕ್ಕೆದ ಕಂಪನಿಯಲ್ಲಿದ್ದ ಒಬ್ಬ ಹುಡುಗ ಹಾಗೂ ನನ್ನ ಗಂಡ ನಮ್ಮ ಮಾಲಿಕ ಆರೀಫ್ ಶೇಠ ಓಡುತ್ತಾ ಬರುವಷ್ಟರಲ್ಲಿ ಬಿಟ್ಟಿರುತ್ತಾನೆ ಅಂತಾ ಅಳುತ್ತಾ ಹೇಳಿರುತ್ತಾಳೆ ಅಂತಾ ಶ್ರೀಮತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

24 September 2017

KALABURAGI DISTRICT REPORTED CRIMES

ಸುಲಿಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಯೂಸುಫ ಪಟೇಲ ತಂದೆ ಖಾಜಾ ಪಟೇಲ ಸಾ:ಮೀಜಬಾನಗರ ಎಂ.ಎಸ್‌.ಕೆ ಮೀಲ್ಕಲಬುರಗಿ ದಿನಾಂಕ:13-09-2017 ರಂದು ರಾಘವೇಂದ್ರ ನಗರ ಪೊಲೀಸ ಠಾಣೆಯಲ್ಲಿ ಗುನ್ನೆ ನಂ.189/17 ಕಲಂ:379 ಐಪಿಸಿ ಮತ್ತು 21 (1) ಎಮ್ಎಮ್‌‌ಆರ್‌‌ಡಿ ಕಾಯ್ದೆ 1957 ಪ್ರಕಾರ ಪ್ರಕರಣ ದಾಖಲಾಗಿದ್ದು ನಂತರ ಅರ್ಜಿದಾರನು ಮೇಲಾಧಿಕಾರಿಗಳಿಗೆ ಭೇಟಿ ಮಾಡಿ ಅರ್ಜಿ ನೀಡಿದ್ದು ಅದನ್ನು ಪರಿಶೀಲಿಸಲಾಗಿ ಅರ್ಜಿಯ ಜೊತೆ ಸಲ್ಲಿಸಿದ ಮೊಬೈಲ್ನಲ್ಲಿ ಮಾತನಾಡಿದ ಆಡಿಯೋ ಸಿಡಿ ಪರಿಶೀಲಿಸಲಾಗಿ ಕನಕರೆಡ್ಡಿ ಈತನು ಮೇಲಿಂದ ಮೇಲೆ ಅರ್ಜಿದಾರನಿಗೆ 15 ಸಾವಿರ ರೂ ಹಣದ ಕುರಿತು ಭೇಟಿಯಾಗಬೇಕು ಅಂತಾ ತಿಳಿಸಿದ್ದು ಅದರಂತೆ ಅರ್ಜಿದಾರನು ಹೆಚ್ಚುವರಿಯಾಗಿ ದಿನಾಂಕ 06-09-2017 ರಂದು 10 ಸಾವಿರ ರೂ ಹಣ ನೀಡಿರುವುದಾಗಿ ಮತ್ತು ಇನ್ನೂ 5 ಸಾವಿರ ರೂ ಕೊಡಲು ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ದಿನಾಂಕ:13-09-2017 ರಂದು ಅರ್ಜಿದಾರನ ಉಸುಕಿನ ಟಿಪ್ಪರ ಕನಕರೆಡ್ಡಿ ಈತನು ಹಿಡಿದು ಹೆಚ್ಚುವರಿಯಾಗಿ 25 ಸಾವಿರ ರೂ ಬೇಡಿಕೆ ಇಟ್ಟಿದ್ದು ಅದನ್ನು ಕೊಡದೇ ಇದ್ದಾಗ ಎಸಿಬಿ ದಾಳಿಯಿಂದಾಗಿ ಅಮಾನತ್ತು ಹೊಂದಿದ್ದ ಕನಕರೆಡ್ಡಿ ಹೆಚ್ಸಿ-262 ಈತನು ಹಣದ ಬಗ್ಗೆ ಬೇಡಿಕೆ ಇಟ್ಟಿರುತ್ತಾನೆ. ಮೇಲಿನ ಎಲ್ಲಾ ಘಟನೆ ಪರಿಶೀಲಿಸಿ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ : ಶ್ರೀ ಲಕ್ಷ್ಮಣ ತಂದೆ ಶಿವನಿಂಗಪ್ಪ ಮಾಂಗ ಸಾ: ತಡಕಲ ತಾ:ಆಳಂದ ರವರು ದಿನಾಂಕ 13-09-2017 ರಂದು ಶರಣು ಚಿಮ್ಮನ ಇವರ ಹೊಟೇಲದಲ್ಲಿ ಊಟ ಮಾಡಲು ಹೊದಾಗ ಹೊಟೇಲದಲ್ಲಿ 1) ಶರಣು ಚಿಮ್ಮನ 2) ದೇವಪ್ಪ ತಂದೆ ರೇವಣಪ್ಪಾ ಚಿಮ್ಮನ 3) ಕಾಶಪ್ಪ ತಂದೆ ರೇವಣಪ್ಪಾ ಚಿಮ್ಮನ ಇವರು ಇದ್ದು ಅವರು ನನಗೆ ಊಟ ಕೊಡಲುವುದಿಲ್ಲಾ ಅಂತಾ ನನ್ನೊಂದಿಗೆ ತಕರಾರು ಮಾಡಿ ಹೊಟೇಲದಿಂದ ಹೊರಹಾಕಿರುತ್ತಾರೆ. ನಂತರ ಅದೆ ದಿವಸ ರಾತ್ರಿ ನನ್ನ ಮನೆಯ ಮೇಲೆ ಅವರು ಕಲ್ಲು ಹೊಡೆದು ಅವಾಚ್ಯವಾಗಿ ಬೈದಿರುತ್ತಾರೆ. ನಂತರ ದಿನಾಂಕ 14/09/2017 ರಂದು ಬೆಳಿಗ್ಗೆ 8:00 ಗಂಟೆಗೆ ನಾನು ನಮ್ಮ ಮನೆಯ ಮೆಲೆ ಏಕೆ ಕಲ್ಲು ಹೊಡೆದಿದ್ದಿರಿ ಎಂದು ಕೇಳಿದಾಗ ದೇವಪ್ಪ ಚಿಮ್ಮನ ಇತನು ರಂಡಿ ಮಗನೇ ಮಾದಿಗ ಸೂಳೆ ಮಗನೇ ನಾವು ಇನ್ನು ಕಲ್ಲು ಹೊಡೆಯುತ್ತೇವೆ ಏನು ಸೆಂಟಾ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈಯುವಾಗ ಕಾಶಪ್ಪ ಚಿಮ್ಮನ ಹಾಗು ಶರಣು ಚಿಮ್ಮನ ಬಂದು ನನಗೆ ಕೈಹಿಡಿದು ಎಳೆದಾಡಿ ಜೊಲಾಜೊಲಿ ಮಾಡಿ ಕೈಯಿಂದ ಎದೆಯ ಮೆಲೆ ಮತ್ತು ಬೆನ್ನಿನ ಮೇಲೆ ಕೈಯಿಂದ ಗುತ್ತಿರುತ್ತಾರೆ ಆಗ ನಮ್ಮ ಗ್ರಾಮದ ರಾಣಪ್ಪ ತಂದೆ ನಾಗಪ್ಪ ಮಾಂಗ ಹಾಗು ಯಶ್ವಂತ ಇವರು ಬಂದು ಜಗಳ ಬಿಡಿಸುವಾಗ ಮಗನೇ ಇವತ್ತು ಉಳಿದಿದಿ ಇನ್ನೊಮ್ಮೆ ನೀನು ನಮ್ಮ ಹೊಟೇಲ ಕಡೆಗೆ ಬಂದರೆ ನಿನಗೆ ಖಲಾಷ ಮಾಡಿಯೇ ಬಿಡುತ್ತೇವೆ ಅಂತಾ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.