POLICE BHAVAN KALABURAGI

POLICE BHAVAN KALABURAGI

22 September 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ದಾಶಿಮಯ್ಯ ತಂದೆ ಶಂಕ್ರೇಪ್ಪ ವಡ್ಡನಕೇರಿ ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು ಕಮಲಾಪೂರ ಗ್ರಾಂ. ಪಂಚಾಯತಿಯ ವಾರ್ಡನಂ. 3 ರ  ಸದಸ್ಯನಿದ್ದು. ಈಗ್ಗೆ 3-4 ದಿವಸಗಳ ಹಿಂದೆ ನಮ್ಮೂರಿನ ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ ಇವಳು ವಾರ್ಡ ನಂ.4 ರ ನಿವಾಸಿಯಿದ್ದು. ತನ್ನ ಮನೆಯ ಮುಂದೆ ಸರಕಾರದ ವತಿಯಿಂದ ನಿರ್ಮಿಸಿದ ಸಿ.ಸಿ ರಸ್ತೆಯನ್ನು ತನ್ನ ಮನೆಗೆ ನಿರಿನ ಸಂಪರ್ಕ ಪಡೆಯುವ ಸಲುವಾಗಿ ವಿನಾಕಾರಣ ರಸ್ತೆಯನ್ನು ಒಡೆದು ಹಾಕಿದ್ದು. ಈ ವಿಷಯದ ಬಗ್ಗೆ ನಮ್ಮ ಗ್ರಾಮ ಪಂಚಾಯತ ಅಭೀವೃದ್ದಿ ಅಧಿಕಾರಿಗಳು ವಿಚಾರಣೆ ಕುರಿತು ಗ್ರಾಮ ಪಂಚಾಯತಗೆ ರಾಚಮ್ಮ ಇವಳಿಗೆ ಕರೆಯಿಸಿ ಅಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಕೂಡಿ ಈ ರಿತಿಯಾಗಿ ಸಿ.ಸಿ ರಸ್ತೆಯನ್ನು ಒಡೆದು ಹಾಳು ಮಾಡಿದ್ದು ತಪ್ಪು ನಿಮಗೆ ನಿರಿನ ಸಂಪರ್ಕ ಬೇಕಾದರೆ ನಾವು ಪಂಚಾಯತ ವತಿಯಿಂದ ಮಾಡಿಸಿ ಕೋಡುತ್ತೆವೆ ಒಡೆದು ಹಾಕಿದ ಸಿ.ಸಿ ರಸ್ತೆಯನ್ನು ನಿಮ್ಮ ಖರ್ಚಿನಲ್ಲಿ ರಿಪೇರಿ ಮಾಡಬೇಕು ಅಂತಾ ಹೇಳಿದ್ದಕ್ಕೆ ಅವಳು ಒಪ್ಪಿಕೊಂಡು ಹೋದಳು. ಆದರು ಸಹ ದಿನಾಂಕ:19.09.2017 ರಂದು ರಾಚಮ್ಮ ಹಾಗೂ ಆಕೆಯ ಗಂಡನಾದ ವಿಜಯರಾಜ ಮಕ್ಕಳಾದ ಶಿವಕುಮಾರ ಮತ್ತು ಶರಣು @ ಸುನೀಲ ಇವರೆಲ್ಲರೂ ಕೂಡಿ ಮತ್ತೆ ಸಿ.ಸಿ ರಸ್ತೆಯನ್ನು ಒಡೆದುಹಾಕಿ ನಿರು ಸರಬರಾಜು ಆಗುವ ಮೇನ ಪೈಪಗೆ ಹೋಲಹಾಕಿ ಒಂದು ಇಂಚು ಪೈಪನ್ನು ಜೋಡಣೆ ಮಾಡಿ ತನ್ನ ಮನೆಗೆ ನಿರಿನ ಸಂಪರ್ಕ ತೆಗೆದುಕೊಂಡಿರುತ್ತಾರೆ ಈ ವಿಷಯ ಗ್ರಾಮ ಪಂಚಾಯತ ಅಧ್ಯಕ್ಷಕರು ಹಾಗೂ ಪಿ.ಡಿ.ಓ ಹಾಗೂ ಸದಸ್ಯರಿಗೆ ಗೋತ್ತಾಗಿ ಅವರು ಪಡೆದುಕೊಂಡಿದ್ದ ನಿರಿನ ಕನಕ್ಷನ್ ಅನ್ನು ನಿನ್ನೆ ದಿನಾಂಕ:20.09.2017 ರಂದು ಎಲ್ಲರೂ ಕೂಡಿ ಕಟ್ಟ ಮಾಡಿರುತ್ತೇವೆ. ಹೀಗಿದ್ದು ಇಂಧು ದಿನಾಂಕ:21.09.2017 ರಂದು ಬೆಳಿಗ್ಗೆ 07.30 ಗಂಟೆಗೆ ನಾನು ಬಜಾರ ಕಡೆಗೆ ಬರುವ ಕುರಿತು ಮನೆಯಿಂದ ಹೋರಟು ಸುಧಾಕರ ಲೊಂಡೆ ಈತನ ಮನೆಯ ಎದುರಿನ ರಸ್ತೆಯ ಮೇಲಿಂದ ಹೋಗುತ್ತಿದ್ದಂತೆ 1. ವಿಜಯರಾಜ ತಂದೆ ಶಿವಪ್ಪ ರಾಜೇಶ್ವರ 2.ರಾಚಮ್ಮ ಗಂಡ ವಿಜಯರಾಜ ರಾಜೇಶ್ವರ 3. ಶಿವಕುಮಾರ ತಂದೆ ವಿಜಯರಾಜ ರಾಜೇಶ್ವರ ಮತ್ತು 4 ಶರಣು @ ಸುನೀಲ ತಂಧೆ ವಿಜಯರಾಜ ರಾಜೇಶ್ವರ ಹೀಗೆಲ್ಲರೂ ನನ್ನ ಎದುರಿನಿಂದ ಬರುತ್ತಿದ್ದಂತೆ ಅಲ್ಲಿಗೆ ಹಣಮಂತ ತಂದೆ ರುಕ್ಕಪ್ಪ ವಾಲಿಕರ ಈತನು ಸಹ ಅಲ್ಲಿಗೆ ಬಂದನು ಆಗ ಅವರೆಲ್ಲರೂ ನನಗೆ ಏ ಭೋಸಡಿ ಮಗನೆ ರಂಡಿ ಮಗನೆ ನಿನೆ ನಮ್ಮ ಮನೆಗೆ ತೆಗೆದುಕೊಂಡ ನಿರಿನ ಸಂಪರ್ಕ ಪಂಚಾಯತದವರಿಗೆ ಹೇಳಿ ಕಟ್ ಮಾಡಿಸಿದ್ದಿ ಅಂತಾ ಬೈದು ಅವರಲ್ಲಿ ಶಿವಕುಮಾರ ಈತನು ನನಗೆ ತಡೆದು ನನ್ನ ಬಲಗೈ ಹೆಬ್ಬರಳು ಹಿಡಿದು ತಿರುವಿದನು ಆಗ ವಿಜಯರಾಜ ಮತ್ತು ಶರಣು @ ಸುನೀಲ ಇಬ್ಬರೂ ನನಗೆ ಕೈಯಿಂದ ಮೈಕೈಗೆ ಬೆನ್ನಿಗೆ ಹೋಟ್ಟೆಗೆ ಹೋಡೆದು ಗುಪ್ತಪೆಟ್ಟು ಮಾಡಿರುತ್ತಾರೆ. ರಾಚಮ್ಮ ಇವಳು ನನಗೆ ಈ ಹಾಟ್ಯಾಂದು ಬಹಾಳ ಆಗ್ಯಾದ ಅಂತಾ ಬೈಯ ತೋಡಗಿದಳು ಆಗ ನನಗೆ ಹೋಡೆಯುವುದನ್ನು ಹಣಮಂತ ತಂದೆ ರುಕ್ಕಪ್ಪ ವಾಲಿಕಾರ ಈತನು ಬಿಡಿಸಿಕೋಳ್ಳು ಬಂದಾಗ ಅವರೆಲ್ಲರೂ ಆತನಿಗೆ ನಮ್ಮ ಜಗಳದಲ್ಲಿ ಈ ಹೋಲೆಯ ಮಾದಿಗರ ಕೆಲಸ ಏನಿದೆ ಅಂತಾ ಬೈದು ರಾಚಮ್ಮ ಇವಳು ಅಲ್ಲೆಬಿದ್ದ ಕಲ್ಲನ್ನು ತೆಗೆದುಕೊಂಡು ಅವನ ಎಡಗಡೆ ತಲೆಗೆ ಹೋಡೆಯಲು ಅವನ ತಲೆ ಒಡೆದು ರಕ್ತ ಸೋರ ಹತ್ತಿತು ಅಲ್ಲದೆ ಶಿವಕುಮಾರ ಈತನು ಹಣಮಂತ ಈತನಿಗೆ ಕಾಲಿನಿಂದ ಟೊಂಕಕ್ಕೆ ಒದ್ದಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಸುನಂದಾ ಗಂಡ ಬಸವರಾಜ್ ಸಗರಕರ್ ಸಾಃ ಫಿಲ್ಟರ್ ಬೇಡ್ ಆಶ್ರಯ ಕಾಲೋನಿ ಕಲಬುರಗಿ ರವರ ಗಂಡನು ಕಳೆದ 15-16 ವರ್ಷದ ಹಿಂದೆ ತಿರಿಕೊಂಡಿದ್ದು ದಿನಾಂಕ 21-09-2017 ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನನ್ನ ಕೆಲಸದ ಶಿಫ್ಟ್ ಇದ್ದುದ್ದರಿಂದ ನಾನು ಮನೆಯಿಂದ ಬೇಳಿಗ್ಗೆ 11-30 ಗಂಟೆಗೆ ಕೆಲಸಕ್ಕೆ ಬಂದು ರಾತ್ರಿ 8 ಪಿ.ಎಂದ ವರೆಗೆ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಹೋಗುವ ಕುರಿತು ಯುನೆಟಡ್ ಆಸ್ಪತ್ರೆಯಿಂದ ಶಹಾಬಜಾರಾದ ಮೂಖಾಂತರ ಲಾಲ ಹನುಮಾನ ಗುಡಿ ಶಹಾಬಜಾರವೆರೆಗ ಆಟೋದಲ್ಲಿ ಕುಳಿತುಕೊಂಡು ಲಾಲ ಹನುಮಾನ ಗುಡಿ ಹತ್ತೀರ ಆಟೋ ಇಳಿದು ನಂತರ ಬಸವಲಿಂಗ ನಗರ ಮಾರ್ಗವಾಗಿ ಶಹಾಬಜಾರ ಸುವರ್ಣ ನಗರ ಕ್ರಾಸದಿಂದ ಫಿಲ್ಟರ್ ಬೇಡ್ ಆಶ್ರಯ ಕಾಲೋನಿಗೆ ಹೋಗುವ ಕುರಿತು ಜ್ಞಾನಜ್ಯೋತಿ ಕನ್ನಡ ಕಾನ್ಮೆಂಟ್ ಶಾಲೆಯ ಹತ್ತೀರ ರೋಡಿನ ಮೇಲೆ ನೆಡೆದುಕೊಂಡು ಬರುತ್ತಿದ್ದಾಗ ನನ್ನ ಹಿಂದುಗಡೆಯಿಂದ ಒಂದು ಮೋಟಾರ ಸೈಕಲ ಮೇಲೆ ಇಬ್ಬರು ಅಪರಿಚಿತ ಹುಡುಗರು ಅಂದಾಜು 28-30 ವಯಸ್ಸಿನವರು ಮೋಟಾರ ಸೈಕಲ್ ಮೇಲೆ ಬಂದವರೆ ನನಗೆ ತಡೆದಯ ನಿಲ್ಲಿಸಲು ನಾನು ' ಯ್ಯಾಕೆ  ನಿವ್ಯಾರು ನನಗೆ ನಿಲ್ಲಿಸುತ್ತಿದ್ದಿರಿ' ಅಂತಾ ಕೇಳಲು ಒಬ್ಬನು ಗಾಡಿಯ ಮೇಲಿಂದ ಕಳೆಗೆ ಇಳಿದವನೆ '' ಎನೆ ರಂಡಿ ನಾನು ನಿನಗೆ ನಿಲ್ಲು ಅಂತಾ ಹೇಳಿದರೆ, ನಿಲ್ಲೋದಿಲ್ಲಾ ಬೋಸಡಿ' ಅವಾಚ್ಯವಾಗಿ ಬೈಯ್ಯಲು ಶರು ಮಾಡಿದ್ದು, ನನಗ್ಯಾಕೆ ಬೈಯ್ಯುತ್ತಿದ್ದಿ ಅಂತಾ ಕೇಳಿದ್ದಕ್ಕೆ, ಇನ್ನೊಬ್ಬನು ಸಹಃ ನನಗೆ ಕೈಯಿಂದ ಮುಖದ ಮೇಲೆ ಹೊಡೆದನು, ಈ ರಂಡಿಗೆ ಬಾಳ ಸೋಕ್ಕು ಬಂದಿದೆ ಮುಗಿಸಿಬಿಡಿ ಅಂತಾ ಅನ್ನಲು ಅವನ ಹಿಂದೆ ಇದ್ದ ಹುಡುಗ ತನ್ನ ಹತ್ತೀರ ಇದ್ದ ಚಾಕುವಿನಿಂದ ನನ್ನ ಹೊಟ್ಟೆಯಲ್ಲಿ ಬಲಭಾಗದ ಪಕ್ಕೆಯ ಹತ್ತೀರ ಚಿಚ್ಚಿ (ಹೊಡೆದನು) ಭಾರಿ ರಕ್ತಗಾಯ ಪಡಿಸಿದನು. ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡಲು ಅದೆ ರೋಡಿಗೆ ನನಗೆ ಪರಿಚಯದ ಆಟೋ ಬರುತ್ತಿದ್ದು ನಾನು ಚಿರಾಡುವ ಸಪ್ಪಳ ಕೇಳಿ ಆಟೋದಲ್ಲಿದ್ದಂತಹ ಮಲ್ಲಿಕಾರ್ಜುನ & ಕಾಶಿಬಾಯಿ ಇವರು ಓಡಿ ಬಂದು ನೋಡುವಷ್ಠರಲ್ಲಿಯೆ ನನಗೆ ಹೊಡೆಯುತ್ತಿದ್ದ ಆ ಇಬ್ಬರು ಮೋಟಾರ ಸೈಕಲ ಮೇಲೆ ಬಂದ ಹುಡುಗರು ತಮ್ಮ ಗಾಡಿ ಸಮೇತ ಅಲ್ಲಿಂದ ಓಡಿ ಹೋದರು, ಅವರ ಹೆಸರು ವಿಳಾಸ ನನಗೆ ಗೋತ್ತಿಲ್ಲಾ ಅವರಿಗೆ ನೋಡಿದರೆ ಗುರುತಿಸುತ್ತೇನೆ. ಅವರಿಬ್ಬರು ಕನ್ನಡ ಮಾತಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 19-09-2017 ರಂದು ಸಾಯಂಕಾಲ 6 ಗಂಟೆಯಿಂದ ದಿನಾಂಕ 20-09-2017 ರಂದು 7-30 ಎಎಮ ಮದ್ಯದ ಅವಧಿಯಲ್ಲಿ ಪಿರೋಜಾ ಬಾದ ಗ್ರಾಮದ ಸೀಮಾಂತರದಲ್ಲಿ ಬರುವ ಶಹಾಬಾದ ಕ್ರಾಸ ಹತ್ತಿರ ಇರುವ ಹೊಲದಲ್ಲಿರುವ ಎರ ಟೇಲ ಟವರಿಗೆ ವಿದ್ಯುತ್ತ ಸರಬರಾಜಿಗಾಗಿ ಅಳವಡಿಸಿರುವ 48 ಓಲ್ಟೇಜಿನ ವರ್ಲಾ  ಪ್ಲಸ್ 600 ಎಹೆಚ್ನ 24ಬ್ಯಾಟರಿ ಶೆಲ್ಗಳು ಅ,ಕಿ 21,000/-  ರೂಪಾಯಿಗಳು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಬಾಬು ತಂದೆ ಶಿವರಾಯ ನಿಂಬರ್ಗಾ  ಸಾ : ಜಿ.ಆರ್ ನಗರ ಖಾದ್ರಿ ಚೌಕ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

19 September 2017

KALABURAGI DISTRICT REPORTED CRIMES

ಕಳವು ಪ್ರಕರಣ :
ಅಫಜಲಪೂರ ಠಾಣೆ :  ಶ್ರೀ ಅಮೋಗಸಿದ್ದ ತಂದೆ ಭೂತಾಳಿ ಪೂಜಾರಿ ಸಾ|| ಮಯೂರ ತಾ|| ಜೇವರ್ಗಿ ಹಾ|| || ಮಣೂರ ಇವರು ಅಶೋಕ ತಂದೆ ಬಾಲಯ್ಯ ಗುತ್ತೇದಾರ ಸಾ|| ಕಲಬುರಗಿ ಇವರ ಒಡೆತನದ ವೈನಶಾಪದಲ್ಲಿ ಮ್ಯಾನೇಜರ ಅಂತ ಕೆಲಸ ಮಾಡಿಕೊಂಡು ವಾಸವಾಗಿದ್ದು ಸದರಿ ವೈನಶಾಪದಲ್ಲಿ ನನ್ನ ಜೋತೆಗೆ 1) ಮಡಿವಾಳಪ್ಪ ತಂದೆ ಚಂದ್ರಶಾ ಕುಂಬಾರ ಸಾ|| ಚಿಂಚೋಳಿ 2) ಸಾಯಬಣ್ಣ ತಂದೆ ಹಸನಪ್ಪ ರೂಪನೂರ ಸಾ|| ರಾಮನಗರ 3) ಸಿದ್ರಾಮ ತಂದೆ ಭೀಮಶಾ ದಿಕ್ಸಂಗಾ ಸಾ|| ಮಾಶಾಳ ಇವರು ಸಹ ಕೆಲಸ ಮಾಡುತ್ತಾರೆ, ನಾವು ನಾಲ್ಕು ಜನರು ದಿನಾಲು ರಾತ್ರಿ 11 ಗಂಟೆಯ ಒರೆಗೆ ವೈನಶಾಪದಲ್ಲಿ ಕೆಲಸ ಮಾಡಿ, ವೈನಶಾಪ್ ಬಂದ ಮಾಡಿ ನಂತರ ವೈನಶಾಪ ಒಳಗಡೆನೆ ಇರುವ ಇನ್ನೊಂದು ಕೋಣೆಯಲ್ಲಿ ಮಲಗುತ್ತೇವೆ.  ದಿನಾಂಕ 18-09-2017 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ಹೊರಗಡೆ ಹೋಗಲು ವೈನಶಾಪ ಸೆಟ್ಟರ ತಗೆಯಲು ಹೋದಾಗ, ವೈನಶಾಪ ಶೇಟ್ಟರ ಮದ್ಯದಲ್ಲಿ ಕೆಳಭಾಗ ಬೆಂಡ್ ಮಾಡಿ ಹೋಗಿ ಬರುವಂತೆ ದಾರಿ ಮಾಡಿದ್ದು ಕಂಡು ಗಾಬರಿಯಾಗಿ ನಾನು ಮೂರು ದಿನ ವ್ಯಾಪಾರ ಮಾಡಿ ಡ್ರಾದಲ್ಲಿ ಇಟ್ಟಿದ್ದ ಒಟ್ಟು 2 ಲಕ್ಷ 16 ಸಾವಿರ ರೂಪಾಯಿ ಹಣವನ್ನು ಚೆಕ್ ಮಾಡಿ ನೋಡಲಾಗಿ ಹಣ ಇರಲಿಲ್ಲ ಹಣವನ್ನು ಯಾರೊ ಕಳ್ಳತನ ಮಾಡಿಕೊಂಡು ಹೋಗಿದ್ದರು, ನಂತರ ನಾನು ಸದರಿ ವಿಷಯವನ್ನು ವೈನಶಾಪ ಮಾಲಿಕರಾದ ಅಶೋಕ ಗುತ್ತಾದಾರ ರವರಿಗೆ ಪೋನ ಮಾಡಿ ತಿಳಿಸಿದೆನು, ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಮ್ಮ ಮಾಲಿಕರು ಬಂದ ನಂತರ ವೈನಶಾಪದಲ್ಲಿ ಕೂಡಿಸಿದ ಸಿಸಿ ಕ್ಯಾಮಾರವನ್ನು ಪರಿಶೀಲಿಸಿ ನೋಡಲಾಗಿ, ಮದ್ಯರಾತ್ರಿ 01:00 ಗಂಟೆಯಿಂದ 02:00 ಗಂಟೆಯ ಮದ್ಯದ ಅವದಿಯಲ್ಲಿ ಯಾರೊ ಅಪರಿಚಿತ ಮೂರು ಜನರು ವೈನಶಾಪ ಅಂಗಡಿಯ ಶೇಟ್ಟರ ಎತ್ತಿ (ಮುರಿದು), ಡ್ರಾದಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೊಗುವುದು ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಶೇಖಪ್ಪ ಹಾಗೂ ಆಪಾದಿತರಾದ ಶಿವಣ್ಣ ಸಿತನೂರ, ಭೀಮಣ್ಣಾ ಸಿತನೂರ ಹುಣಸಪ್ಪಾ ಸೀತನೂರ ಇವರುಗಳಿಗೂ ಹೊಲಕ್ಕೆ ಹೊಗುವ ದಾರಿ ಸಂಬಂಧ ತಂಟೆ ತಕರಾರು ನಡೆಯುತ್ತಾ ಬಂದಿದ್ದು,  ದಿನಾಂಕ 17/09/2017 ರಂದು ಫಿರ್ಯಾದಿದಾ ರು  ತಮ್ಮ ಹೊಲದಲ್ಲಿದ್ದಾಗ, ಶಿವಣ್ಣನ ಹೆಂಡತಿ ಮಲ್ಲಮ್ಮ, ಭಿಮಣ್ಣನ ಹೆಂಡತಿ ಮಹಾದೇವಿ, ಹುಣಚಪ್ಪನ ಹೆಂಡತಿ ಶಾಂತಮ್ಮ ಇವರುಗಳು ತಮ್ಮ ಹೊಲದಿಂದ ಮನೆಗೆ ಬರುತ್ತಿರುವಾಗ ಫಿರ್ಯಾದಿದಾರರ ಸದರಿಯವರಿಗೆ ನಮಗೆ ಹೊಲಕ್ಕೆ ಹೊಗಲು ಅಡ್ಡಿಪಡಿಸುತ್ತಿರಿ ಇಲ್ಲಿಂದ ಹೊಗಬೇಡಿ ಅಂದಿದ್ದಕ್ಕೆ ಅವರುಗಳು ಫಿರ್ಯಾದಿಗೆ ಹಾಟ್ಯಾ ನೀನು ನಮಗೆ ಏನು ಕೇಳುತ್ತಿ ಅಂತಾ ಬೈಯುತ್ತಿದ್ದಾಗ ಕಾಂತಮ್ಮಳ ಪೋನಿಗೆ ಆಕೆಯ ಭಾವ ಶಿವಣ್ಣ ಈತನು ಪೋನ ಮಾಡಿ ಶೇಕ್ಯಾನಿಗೆ ಸರಿಯಾಗಿ ಮೇತ್ತಗೆ ಮಾಡಿ ಹೊಗ್ರಿ ಎಂದು ಪ್ರಚೋದನೆ ನೀಡಿದ್ದರಿಂದ ಫಿರ್ಯಾದಿದಾರರಿಗೆ ಮಹಾದೇವಿ ಮತ್ತು ಕಾಂತಮ್ಮ ಇವರು ನನಗೆ ಒತ್ತಿ ಹಿಡಿದು ನೇಲಕ್ಕೆ ಹಾಕಿದಾಗ ಮಲ್ಲಮ್ಮ ಇವಳು ಎಡಗೈ ತೊರಬೇರಳಿಗೆ ಬಡಿಗೆಯಿಂದ ಹೊಡೆದಿದ್ದು, ಆಗ ಫಿರ್ಯಾದಿದಾರರು ಚಿರಾಡುತ್ತಿದ್ದಾಗ ಶಕೀಲ ತಂದೆ ಮಶಾಕ ಮುಲ್ಲಾ ಇವರು ಬಂದು ಜಗಳ ಬೀಡಿಸಿದ್ದು, ಸದರಿಯವರು ಇನ್ನೂ ಮುಂದೆ ಈ ದಾರಿಯಲ್ಲಿ ಹೊಗಲು ಅಡ್ಡಿಪಡಿಸಿದರೆ ನಿನಗೆ ಖಲಾಸ ಮಾಡುತ್ಥೇವೆ ನಂತರ ಫಿರ್ಯಾದಿದಾರರ ಮನೆಗೆ ಬಂದಾಗ  ಆರೋಪಿತರಾದ ಮಹಾದೇವಿ ಗಂಡ ಭೀಮಣ್ಣ, ಶಿವಲೀಲಾ ಗಂಡ ನಿಂಗಪ್ಪ, ಶರಣಮ್ಮ ಗಂಡ ಚಂದ್ರಮಪ್ಪ, ಇವರು ಬಂದು ಫಿರ್ಯಾದಿದಾರರ ಹೆಂಡತಿಯಾದ ಶರಣಮ್ಮಳಿಗೆ ರಂಡಿ ನಮಗೆ ದಾರಿ ಕೊಡಲ್ಲ ಎಂದು ಶಿವಲೀಲಾ ಇವಳು ಕೈಯಿಂದ ಎಡಗಣ್ಣಿನ ಮೇಲೆ ಹೊಡೆದಳು, ಮಹಾದೇವಿ ಇವಳು ಫಿರ್ಯಾದಿಗೆ ಸರಿಯಾಗಿ ಮೇತ್ತಗೆ ಮಾಡುತ್ತೇನೆಂದು ಕೈಯಿಂದ ಹೊಡೆದು ನೇಲಕ್ಕೆ ಹಾಕಿದಾಗ ಮಹಾದೇವಪ್ಪ ತಂದೆ ಮಾಸಣ್ಣ ಇವರು ಬೀಡಿಸಿಕೊಂಡಿರುತ್ತಾರೆ,  ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ಶ್ರೀಮತಿ ಕಾಂತಮ್ಮ ಗಂಡ ಹುಣಚಪ್ಪಾ ಸೀತನೂರ ಸಾ; ಫರಹತಾಬಾದ ತಾ: ಜಿ: ಕಲಬುರಗಿ ರವರ ಗಂಡನಿಗೆ 4 ಜನ ಅಣ್ಣ ತಮ್ಮಂದಿರಿದ್ದು ಎಲ್ಲರೂ ಕೂಡಿಯೇ ಇರುತ್ತವೆ  ನಮ್ಮ ಹೊಲ ಸರ್ವೇ ನಂ 13 ತಿಳಗೋಳ ಸೀಮಾಂತರದಲ್ಲಿ  ಇರುತ್ತದೆ. ನಾವು ನಮ್ಮ ಹೊಲಗಳಿಗೆ ಹೋಗಬೇಕಾದರೆ ಶೇಖಪ್ಪಾ ಪೂಜಾರಿ  ರವರ ಸರಡಗಿ ಸೀಮೆಯ ಹೊಲ ಸರ್ವೆ ನಂ 62 ರ ಮುಖಾಂತರ ದಾಟಿ ಹೋಗುತ್ತೇವೆ ನಮ್ಮ ಹೊಲ ಸರ್ವೇ ನಂ 13 ದಾಟಿ ಶೇಕಪ್ಪಾ  ಪೂಜಾರಿ ತನ್ನ ಹೊಲ ಸರ್ವೇ ನಂ 14 ರಕ್ಕೆ ಹೋಗಬೇಕಾಗುತ್ತದೆ ಹೊಲಕ್ಕೆ ಹೋಗಿ ಬರುವ ದಾರಿಯ ಸಂಬಂಧ ಸುಮಾರು 2 ವರ್ಷದಿಂದ ತಕರಾರು ಜಗಳ ನಡೆಯುತ್ತಾ ಬಂದಿರುತ್ತದೆ.  ಹೀಗಿದ್ದು ದಿನಾಂಕ 17/09/17 ರಂದು ಸಾಯಂಕಾಲ 5:30 ಗಂಟೆ ಸುಮಾರಿಗೆ  ನಾನು ನಮ್ಮ ನೆಗಣಿಯರಾದ ಮಲ್ಲಮ್ಮ ಗಂಡ ಶಿವಣ್ಣಾ, ಮಹಾದೇವಿ ಗಂಡ ಭೀಮಣ್ಣಾ ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ  ನಾವು ಶೇಖಪ್ಪಾ  ಪೂಜಾರಿ ಹೊಲದ ಮುಖಾಂತರ ದಾರಿಯಿಂದ ಬರುವಾಗ ಅಲ್ಲಿ ಶೇಖಪ್ಪಾ ಪೂಜಾರಿ ಹಾಗೂ ಅವನ ಮಗ ಭೀಮಾಶಂಕರ ಇದ್ದು ಸದರಿಯವರು  ನಮಗೆ ತಡೆದು ಇಲ್ಲಿಂದ  ನಿಮಗೆ ದಾರಿ ಇಲ್ಲಾ ಏಕೆ ಹೋಗುತ್ತೀರಿ ಎಂದು ತಡೆದಾಗ ನಾವು ಅದಕ್ಕೆ ನಮ್ಮ ಹೊಲದಿಂದ ನೀನು ಹೋಗುತ್ತೀ ಎಂದಿದಕ್ಕೆ ಶೇಖಪ್ಪನು  ನಿಮ್ಮ ರಂಡಿರದು ಎಷ್ಟು ಜಿದ್ದು ಹೋಗಬೇಡ ಎಂದರು ಹೋಗುತ್ತೀರಿ ಎಂದು ಶೇಖಪ್ಪನು ತನ್ನ ಕೈಯಲ್ಲಿದ ಕೊಡಲಿ ಕಾವಿನಿಂದ ನನ್ನ ಎಡಗಾಲಿನ ಮೇಲೆ ಬಲಗೈ ರಟ್ಟೆಗೆ ಹೊಡೆದಾಗ ನಾನು ನೆಲಕ್ಕೆ ಬಿದ್ದೇನು, ಅವನ ಮಗ ಭೀಮಾಶಂಕರ ಕೈಯಿಂದ ಮುಖದ ಮೇಲೆ ಹೊಡೆದು ಈ ರಂಡಿದು ಬಹಳವಾಗಿದೆ ಎಂದು ಕೂದಲು ಹಿಡಿದು  ಎಳೆದಾಡಿ ಮಾನಬಂಗ ಮಾಡಿರುತ್ತಾನೆ ಆಗ ನಮ್ಮ ನೆಗೆಣಿ ಮಲ್ಲಮ್ಮಳಿಗೆ ಶೇಖಪ್ಪನು ಕೈಯಿಂದ ಹೊಡೆದು ಕಾಲಿನಿಂದ ಒದ್ದಿರುತ್ತಾನೆ. ಇನ್ನೊಬ್ಬ ನೆಗೆಣಿ ಮಹಾದೇವಿ ಗಂಡ ಭೀಮಣ್ಣಾ ಇವಳು ಓಡಿಸಿದ್ದು ಸದರ ಘಟನೆ ಸಿದ್ದಮ್ಮ ಗಂಡ ಸೈಬಣ್ಣಾ ನೋಡಿದ್ದು ಇದೆ ಸದರಿಯವರು ಇವಳನ್ನು ಮುಂದೆ ಈ ದಾರಿಯಿಂದ ಹೋದರೆ ನಿಮಗೆ ಜೀವ ಸಹಿತ ಇಡುವುದಿಲ್ಲಾ ಅಂತಾ ಜೀವದಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೂರ್ಯಕಾಂತ ತಂದೆ ಭೀಮಣ್ಣ ವಾರಿಕ  ಸಾ:ಕಮಲಾಪೂರ ತಾ:ಜಿ:ಕಲಬುರಗಿ ಇವರು. ದಿನಾಂಕ:16.-09-2017 ರಂದು ಸಾಯಂಕಾಲ ನಾನು ನನ್ನ ಮನೆಯ ಮುಂದಗಡೆ ಕುಳಿತಿದ್ದು ಅದೇ ವೇಳೆಗೆ ನನ್ನ ತಮ್ಮ ಹಣಮಂತ ವಾರಿಕ ಈತನು ಕುಡಿದ ನಶೆಯಲ್ಲಿ ಮನೆಯ ಕಡೆಗೆ ಬರುತ್ತಿದ್ದಾಗ ಅದನ್ನು ನೋಡಿ ನಾನು ಮನೆಯ ಒಳಗೆ ಹೋಗುತ್ತಿದ್ದಾಗ ಹಣಮಂತನು ನನಗೆ ಸೂಳೆ ಮಗನೆ ಬಾರೋ ಹೆಂಗಸ್ಯಾನಂಗ ಒಳಗ ಹೋಗ್ತಿ ಬಾರೋ ಅಂತಾ ಅಂದಿದ್ದು ಆಗ ನಾನು ಹೋರಗಡೆ ಬಂದು ತುಳಸಿ ಕಟ್ಟಿಯ ಹತ್ತೀರ ಕುಂತಾಗ ಅದೇ ವೇಳೆಗೆ ಮಹಾದೇವಿ ವಾರಿಕ ಇವಳು ಹೋರಗಡೆ ಬಂದು ನೀವು 3 ತಿಂಗಳಲ್ಲಿ ನಿಮ್ಮ ಮನೆಯವರೆಲ್ಲರೂ ಸಾಯಿತಿರಿ ಅಂತಾ ನನಗೆ ಬೈಯುತ್ತಿದ್ದಾಗ ನಾನು ಅವಳಿಗೆ ಅಮ್ಮಾ ನೀವು ಸುಮ್ಮನೆ ನಮಗ ಹೋಲಸಾಗಿ ಬೈಯುವುದು ಸರಿಯಲ್ಲ ಅಂತಾ ಅಂದಾಗ ಸಚಿನ ವಾರಿಕ ಈತನು ಓಡಿ ಬಂದವನೆ ನನ್ನ ಕುತ್ತಿಗೆ ಹಿಡಿದು ತುಳಸಿ ಕಟ್ಟಿಗೆ ಹೋಡೆದು ನನ್ನ ತಲೆಯ ಹಿಂಭಾಗಕ್ಕೆ ರಕ್ತ ಮತ್ತು ಗುಪ್ತಗಾಯ ಮಾಡಿದ್ದು ನಾನು ಒಮ್ಮಿಲೆ ಚಿರಿ ನೆಲದ ಮೇಲೆ ಬಿದ್ದೇನು ನಾನು ಚಿರಿದ ಸಪ್ಪಳ ಕೇಳಿ ಒಳಗಿನಿಂದ ನನ್ನ ಹೆಂಡತಿ ಶರಣಮ್ಮ ವಾರಿಕ ಇವಳು ಹೋರಗಡೆ ಬಂದಾಗ ಮಹಾದೇವಿ ಇವಳು ನನ್ನ ಹೆಂಡತಿಗೆ ಹಿಡಿದು ನಿಲ್ಲಿಸಿ ಅವಳ ತಲೆಯ ಮೇಲೆ ಚಪ್ಪಲಿಯಿಂದ 4-5 ಸಾರಿ ರಪರಪನೆ ಹೋಡೆದಳು ಆಗ ನಾನು ಮತ್ತು ನನ್ನ ಹೆಂಡತಿ ಚಿರಾಡುತ್ತಿದ್ದಾಗ ನಮಗೆ ಹೋಡೆಯುತ್ತಿದ್ದನ್ನು ನೊಡುತ್ತಿದ್ದ ಕಾಶಿನಾಥ ಉಪ್ಪಾರ ಮತ್ತು ಶಂಕ್ರೇಮ್ಮ ಬಂಡಿವಡ್ಡರ ಇವರು ಬಂದು ಜಗಳ ಬಿಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ರೇವೂರ ಠಾಣೆ : ದಿನಾಂಕ 17/09/2017 ರಂದು ಸಾಯಂಕಾಲ ನನ್ನ ಮಗ ಜಗಧೀಶನು ನಮ್ಮ ಮನೆಯಲ್ಲಿದ್ದಾಗ ನಮ್ಮೂರಿನ ಸುನೀಲ ತಂದೆ ಶ್ರೀಮಂತ ನಿಂಬಾಳ ಎಂಬಾತನು ಬಂದು ನನ್ನ ಮಗ ಜಗಧೀಶನಿಗೆ ಟ್ರ್ಯಾಕ್ಟರದಲ್ಲಿ ಉಸುಕು(ಮರಳು) ತುಂಬುವ ಕೆಲಸಕ್ಕೆ ಅಂತ ಕರೆದುಕೊಂಡು ಹೋಗಿರುತ್ತಾನೆ. ನನ್ನ ಮಗ ರಾತ್ರಿಯಾದರೂ ಮನೆಗೆ ಬರದ ಕಾರಣ ನಾನು ನಿಂಬಾಳದವರ ಮನೆಗೆ ಕೇಳಲು ಹೋದಾಗ ನನ್ನ ಮಗನಿಗೆ ಎಕ್ಸಿಡೆಂಟ ಆಗಿರುತ್ತದೆ ಅಂತಾ ಗೊತ್ತಾಯಿತು. ದಿನಾಂಕ: 18/09/2017 ರಂದು ಮದ್ಯರಾತ್ರಿ 03-00 ಗಂಟೆಯ ಸುಮಾರಿಗೆ ನನ್ನ ಮಗನಿಗೆ ಅಫಜಲಪೂರ ಸರಕಾರಿ ಆಸ್ಪತ್ರೆಗೆ ತಂದಿರುತ್ತಾರೆ ಅಂತ ಗೊತ್ತಾಗಿದ್ದರಿಂದ ನಾನು ಸರಕಾರಿ ಆಸ್ಪತ್ರೆಗೆ ಹೋದಾಗ ನನ್ನ ಮಗ ಮೃತಪಟ್ಟಿ ಬಗ್ಗೆ ಗೊತ್ತಾಗಿರುತ್ತದೆ. ನಂತರ ನನ್ನ ತಮ್ಮನಾದ ಲಕ್ಷ್ಮಿಪುತ್ರ ಎಂಬಾತನಿಂದ ಕೇಳಿ ಗೊತ್ತಾಗಿದ್ದೇನೆಂದರ ನಿನ್ನೆ ದಿನಾಂಕ: 17/09/2017 ರಂದು ರಾತ್ರಿ ಭೋಗನಳ್ಳಿ ಗ್ರಾಮಕ್ಕೆ ಹೋಗುವ ರೋಡಿಗೆ ಮಲ್ಲು ಖೇಮಜಿ ರವರ ಹೋಲದ ಹತ್ತಿರ ಜಗಧೀಶನು ಸುನೀಲ ನಿಂಬಾಳ ರವರ ಟ್ರ್ಯಾಕ್ಟರದಲ್ಲಿ ಕುಳಿತು ಹೋಗುತ್ತಿದ್ದಾಗ ಅದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಜಗಧೀಶನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದಿದ್ದು ಟ್ರ್ಯಾಕ್ಟರಗಾಲಿ ಮುಖ ಮತ್ತು ತಲೆಯ ಮೇಲೆ ಹಾಯ್ದು ಹೋಗಿದ್ದರಿಂದ ತಲೆ ಹಾಗೂ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೌಂಸ ಖಂಡಗಳು ಹೊರ ಬಂದು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಗೊಟತ್ತಾಗಿದ್ದು ತನ್ನ ಟ್ರ್ಯಾಕ್ಟರನ್ನು ಅತಿವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿ ಒಮ್ಮೆಲೆ ಬ್ರೇಕ ಹಾಕಿ ನನ್ನ ಮಗನ ಸಾವಿಗೆ ಕಾರಣನಾದ ಸುನೀಲ ನಿಂಬಾಳ ರವರ ಟ್ರ್ಯಾಕ್ಟರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ನೀಲಮ್ಮ ಗಂಡ ಭಾಗಪ್ಪ  ಕಡಜಿನವರ ಸಾ: ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

18 September 2017

Kalaburagi District Reported Crimes

ಮಟಕಾ ಜೂಝಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕಃ 16.09.2017 ರಂದು  ಮಧ್ಯಾಹ್ನ ಶಹಾಬಾದ ನಗರದ ಮಡ್ಡಿ-2 ಏರಿಯಾದಲ್ಲಿ  ಮಟಕಾ ಅದೃಷ್ಟ ಸಂಖ್ಯೆಗಳನ್ನು  ಬರೆದುಕೊಳ್ಳುತ್ತಿರುವ  ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಅಸ್ಲಾಮ ಪಾಷಾ ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಡ್ಡಿ-2 ಏರಿಯಾದಲ್ಲಿ  ಶ್ರೀ ರಾಮವಧೂತ  ಮಠದ ಹತ್ತಿರ ಹೋಗಿ ಸಾರ್ವಜನಿಕ ರಸ್ತೆಯಲ್ಲಿ  ಮಟಕಾ ನಂಬರ  ಬರೆದುಕೊಳ್ಳುತ್ತಿದ್ದವನಿಗೆ ಹಿಡಿದು ವಿಚಾರಿಸಲು  1) ರಾಜು ತಂದೆ ಪೀರಪ್ಪಾ ಕೋರೆ  ಸಾಃ ಮಡ್ಡಿ-2 ಶಹಾಬಾದ ಅಂತಾ ಹೇಳದನು. ಆರೋಪಿತನ ವಶದಲ್ಲಿದ್ದ  4 ಮಟಕಾ ಚೀಟಿಒಂದು ಬಾಲಪೆನ್ನು ಮತ್ತು  ಮಟಕಾಕ್ಕೆ ಸಂಬಂಧಪಟ್ಟ  3150/-ರೂ  ಹಣ ವಶಪಡಿಸಿಕೊಂಡು,  ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಗುರುನಾಥ ತಂದೆ ಮಲ್ಲಿಕಾರ್ಜುನ ಮರಬ ಸಾ:ಹೀರಾಪೂರ ತಾ:ಜಿ:ಕಲಬುರಗಿ ರವರು ತಿರುಗಾಡಲು ಟಾಟಾ ಇಂಡಿಕಾ ವಿಸ್ಟಾ ಕಾರ ನಂ. ಕೆಎ.28 ಎನ್.0237 ನೇದ್ದು ಖರಿದಿ ಮಾಡಿದ್ದು. ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ರವಿ ತಂದೆ ರೇವಣಸಿದ್ದಪ್ಪ ಶಿವಾದಿ ಈತನು ಓಕಳಿ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮೇಲ್ಕಂಡ ನನ್ನ ಕಾರನ್ನು ಕಲಬುರಗಿಯಿಂದ ನಡೆಸಿಕೊಂಡು ಹೋಗಿದ್ದು ಇರುತ್ತದೆ. ನಿನ್ನೆ ದಿನಾಂಕ:16.09.2017 ರಂದು ಮದ್ಯಾಹ್ನದ ವೇಳೆಯಲ್ಲಿ ಓಕಳಿ ಗ್ರಾಮದ ನನ್ನ ಗೆಳೆಯನಾದ ಅಂಬಾರಾಯ ಶೇರಿ ಇವರು ನನಗೆ ಫೊನ ಮಾಡಿ ಮೇಲ್ಕಂಡ ನನ್ನ ಕಾರನ್ನು ರವಿ ಈತನು ಕಮಲಾಪೂರನಿಂದ ಓಕಳಿ ಹೋಗುವ ರೋಡಿನ ವೀರಣ್ಣ ದೇವರ ಗುಡಿಯ ಹತ್ತೀರ ಅಪಘಾತ ಮಾಡಿದ್ದು. ರವಿ ಈತನು ಗಾಯಹೊಂದಿದ್ದು ಸದರಿಯವನಿಗೆ 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವ ಬಗ್ಗೆ ತಿಳಿಸಿದ್ದು. ನಂತರ ನಾನು ಗಾಬರಿಗೊಂಡು ನಿನ್ನೆ ಸಾಯಂಕಾಲದ ವೇಳೆಯಲ್ಲಿ ಕಲಬುರಗಿ ಯುನೈಟೆಡ ಆಸ್ಪತ್ರೆಗೆ ಹೋಗಿ ನೋಡಲು ರವಿ ಈತನಿಗೆ ಬಲಗಾಲ ಹಿಮ್ಮಡಿಯ ಹತ್ತೀರ ಬಲಕಾಲ ಕಪಗಂಡಕ್ಕೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು. ಬಲಕೈ ಮಧ್ಯದ ಬೆರಳಿಗೆ ರಕ್ತಗಾಯ ಹಾಗೂ ಬೆನ್ನಿಗೆ ಮತ್ತು ತಲೆಯ ಹಿಂಭಾಗಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದವು. ನಂತರ ಘಟನೆಯ ಬಗ್ಗೆ ಅಂಬಾರಾಯ ಈತನಿಗೆ ವಿಚಾರ ಮಾಡಲು ಅವರು ತಿಳಿಸಿದ್ದೆನಂದರೆ. ಇಂದು ಮದ್ಯಾಹ್ನ 01.00 ಗಂಟೆಯ ಸೂಮಾರಿಗೆ ನಾನು ಓಕಳಿಯಿಂದ ಮೋಟರ ಸೈಕಲ ಮೇಲೆ ಕಮಲಾಪೂರಕ್ಕೆ ಬರುತ್ತಿದ್ದಾಗ  ಅದೇ ವೇಳೆಗೆ ಎದುರಿನಿಂದ ಕಲಮಾಪೂರ ಓಕಳಿ ರೋಡಿನ ಇಳಿಜಾರಿನಲ್ಲಿ ವೀರಣ್ಣ ದೇವರ ಗುಡಿಯ ಹತ್ತೀರ ರವಿ ಶಿವಾದಿ ಈತನು ತಾನು ನಡೆಸುತ್ತಿದ್ದ ಟಾಟಾ ಇಂಡಿಕಾ ವಿಸ್ಟಾ ಕಾರ ನಂ.ಕೆಎ.28 ಎನ್.0237 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತ ಬಂದು ನಿಯಂತ್ರಣ ಕಳೆದುಕೊಂಡು ರಸ್ತೆ ಎಡಬದಿಯ ತಗ್ಗಿನಲ್ಲಿ ಕಾರ ಪಲ್ಟಿ ಮಾಡಿದ್ದು. ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹಣಮಯ್ಯ ತಂದೆ ವೇಂಕಯ್ಯ ಗುತ್ತೇದಾರ ಸಾ: ಬಳೂರ್ಗಿ ರವರು ವಾಕಿಂಗ್ ಸಲುವಾಗಿ ಬಳೂರ್ಗಿ ಅಫಜಲಪೂರ ರೋಡಿಗೆ ನಡೆದು ಕೊಂಡು ಹೋಗುತ್ತಿದ್ದಾಗ ನಿಂಗಯ್ಯ ಸ್ವಾಮಿ ತೋಟದ ಸಮೀಪ ಒಬ್ಬ ಮೋಟಾರ ಸೈಕಲ್ ಅವಾರನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಕೊಂಡು ಹಿಂದಿನಿಂದ ಬಂದು (ಅಫಜಲಪೂರ ಕಡೆಯಿಂದ) ಡಿಕ್ಕಿಪಡಿಸಿದ್ದು ನಾನು ಕೇಳಗೆ ಬಿದ್ದೇನು ಎದ್ದು ನೋಡಲು ನನಗೆ ಎರಡು ಮೋಳಕಾಲಿಗೆ ಹಣೆಗೆ ಹಿಮ್ಮಡಿಗೆ ರಕ್ತಗಾಯ ಮಾಡಿದ್ದು ಸದರಿ ಮೋಟಾರ ಸೈಕಲ್ ನೋಡಲು ಬಜಾಜ ಡಿಸ್ಕವರಿ ಅದರ ನಂಬರ ಕೆಎ-32-ಇಬಿ-3052 ಇದ್ದು ಅದರ ಮೇಲೆ ಮೂರು ಜನರು ಕುಳಿತು ಬರುತ್ತಿದ್ದು ಅವರೆಲ್ಲರೂ ಕೇಳಗೆ ಬಿದ್ದರು ಮೋಟಾರ ಸೈಕಲನ್ನು ಮಾಳಪ್ಪ ತಂದೆ ಚುಚಲಪ್ಪ ಪೂಜಾರಿ ಸಾ: ಬಳೂರ್ಗಿ ಇವರು ನಡೆಸುತ್ತಿದ್ದರು ಇನ್ನಿಬ್ಬರು ಹೆಸರು ಗೊತ್ತಿರುವುದಿಲ್ಲಾ ಸದರಿ ಮೋಟಾರ ಸೈಕಲ್ ಅಲ್ಲೇ ಬಿಟ್ಟು ಹೋಗಿರುತ್ತಾರೆ.  ಕಾರಣ ನನಗೆ ಮೋಟಾರ ಸೈಕಲ್ ನಂ  ಕೆಎ-32-ಇಬಿ-3052 ನೇದ್ದರ ಚಾಲಕನು ಅತೀವೇಗ ಹಾಗೂ ಅಲಕ್ಷತನದಿಂದ ಹಿಂದಿನಿಂದ ಬಂದು ಡಿಕ್ಕಿ ಪಡೆಸಿ ಗಾಯ ಪೆಟ್ಟುಕೊಳಿಸಿರುತ್ತಾರೆ  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ದಿನಾಂಕ: 16/09/2017 ರಂದು 14:15 ಗಂಟೆಗೆ ಯುನೇಟೆಡ್‌‌ ಆಸ್ಪತ್ರೆ ಕಲಬುರಗಿಯಲ್ಲಿ  ರಸ್ತೆ ಅಫಘಾತದಲ್ಲಿ ಭಾರಿ ಗಾಯಹೊಂದಿ ಸೇರಿಕೆಯಾದ
ಫರತಾಬಾದ ಠಾಣೆ : ಶ್ರೀ  ಅಬ್ದುಲ ರಹಿಮಾನ  ತಂದೆ ಅಶ್ರಫಮಿಯ್ಯ ಸಾ: ತಾಜನಗರ ಕಲಬುರಗಿ ರವರ ತಾಯಿಯಾದ ಪುತಲಿಬೇಗಂ ಇವಳು ಮಹಾನಗರ ಪಾಲಿಕೆಯಲ್ಲಿ ( Deputy Mayor) ಇರುತ್ತಾರೆ ನಮ್ಮ ತಾಯಿಯವರಿಗೆ ಸರಕಾರದ ವತಿಯಿಂದ  ಒಂದು ಇನ್ನೋವಾ ಕಾರ ನಂಬರ ಕೆಎ 32 ಎನ್‌‌ 7080 ಇದ್ದು ಅದು ಅವರ ಕೆಲಸಕ್ಕೆ  ಉಪಯೋಗಿಸುತ್ತಾ ಬಂದಿರುತ್ತಾರೆ . ದಿನಾಂಕ 15/09/2017 ರಂದು ರಂಗಮಪೇಟ ದಲ್ಲಿ ನಮ್ಮ ತಾಯಿಗೆ  ಸನ್ಮಾನ ಕಾರ್ಯಕ್ರಮ ಅಲ್ಲಿಯ ಜನರು ಇಟ್ಟುಕೊಂಡಿದ್ದರಿಂದ  ಸದರಿ ಕಾರಿನಲ್ಲಿ  ನಾನು ನನ್ನ ತಾಯಿ ಪುತಲಿಬೇಗಂ ಹಾಗೂ ಬಾಬುಮಿಯಾ ಶಾಮಿಯಾನ ಕೂಡಿ ಇನ್ನೋವಾ ಕಾರ ನಂ ಕೆಎ 32 ಎನ್‌‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ತಂದೆ ರಾಮಚಂದ್ರ ವಿಶ್ವಕರ್ಮ  ಸಾ: ಬ್ರಹ್ಮಪೂರ  ಕಲಬುರಗಿ ಯವನೊಂದಿಗೆ ಹೋಗಿ ಸನ್ಮಾನ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಕಲಬುರಗಿಗೆ ಬರುವಾಗ ಎನ್‌ಹೆಚ್‌ 218 ರೋಡಿನ ಸರಡಗಿ (ಬಿ) ಕ್ರಾಸ ದಾಟಿ ಮುಂದೆ ಬಂದಾಗ  ನಮ್ಮ ಕಾರಿನ  ಎದರುಗಡೆ ಒಂದು ಲಾರಿಯನ್ನು  ಟೋಚನ ಮಾಡಿಕೊಂಡು ಕಲಬುರಗಿ ಕಡೆಗೆ ಹೊಗುತ್ತಿದ್ದು ನಮ್ಮ ಕಾರ ಚಾಲಕನು  ಸದರಿ ಕಾರನ್ನು ಅತೀವೇಗದಿಂದ  ಹಾಗೂ ಅಲಕ್ಷತನದಿಂದ  ಓಡಿಸಿ ಎದುರಿನಿಂದ  ಬರುತ್ತಿದ್ದ ವಾಹನಗಳ ಹೆಡ್‌‌‌ ಲೈಟ ಬೆಳಕಿನಲ್ಲಿ  ಎದುರಿನ ಟೋಚನ ಮಾಡಿಕೊಂಡು ಹೊರಟ ಲಾರಿ ವಾಹನ ಕಾಣದಕ್ಕೆ  ಅದರ ಹಿಂಭಾಗಕ್ಕೆ  ಡಿಕ್ಕಿ ಪಡೆಯಿಸಿ  ಅಫಘಾತ ಮಾಡಿದಾಗ ಅಫಘಾತದಿಂದ ನನಗೆ ತಲೆಯ  ಎಡಭಾಗಕ್ಕೆ  ಭಾರಿ ರಕ್ತಗಾಯವಾಗಿದ್ದು ಮೂಗಿಗೆ ಎಡಗಣ್ಣಿಗೆ ಗಾಯವಾಗಿದ್ದು ಟೋಚನ ವಾಹನದ ನಂಬರ ಜಿಜೆ-01 5936 & ಲಾರಿ ನಂಬರ ಇರುವುದಿಲ್ಲಾ  ಸ್ಥಳದಲ್ಲಿಯೇ ನಿಂತಿದ್ದು ನಂತರ ನನಗೆ ಯಾವುದೋ ಒಂದು ವಾಹನದಲ್ಲಿ ಹಾಕಿಕೊಂಡು  ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ ಉಳಿದ ಯಾರಿಗೂ ಗಾಯವಾಗಿರುವುದಿಲ್ಲಾ  ಕಾರಣ ಇನ್ನೋವಾ ಕಾರ ನಂಬರ ಕೆಎ 32 ಎನ್‌ 7080 ನೇದ್ದರ ಚಾಲಕ ಲಕ್ಷ್ಮಿಕಾಂತ ಅತೀವೇಗದಿಂದ ಅಲಕ್ಷತನದಿಂದ ಓಡಿಸಿ ಟೋಚನ ವಾಹನ ಲಾರಿಗೆ ಡಿಕ್ಕಿ ಪಡಿಸಿ ನನಗೆ ಭಾರಿಗಾಯಗೊಳಿಸಿ ಸದರ ಕಾರ ಜಖಂಗೊಳಿಸಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.