POLICE BHAVAN KALABURAGI

POLICE BHAVAN KALABURAGI

29 October 2015

Kalaburagi District Reported Crimes

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 15-10-2015 ರಂದು ಸಾಯಂಕಾಲ ಶ್ರೀಶೈಲ್ ಹಾಗು ನಮ್ಮೂರಿನ ರೇವಣಸಿದ್ದ ಇಬ್ಬರೂ ಕುಡಿಕೊಂಡು ಸಂಡಾಸಕ್ಕೆ ಜೇವಗರ್ಿ-ಯಡ್ರಾಮಿ ಮುಖ್ಯೆ ರಸ್ತೆಯ ಆಲೂರು ಕಡೆಯ ರೋಡಿಗೆ ಹೋಗಿ ಸಂಡಾಸ ಕುಳಿತು ನಾವಿಬ್ಬರೂ ಮರಳಿ ಮನೆಯ ಕಡೆಗೆ ಕಚ್ಚಾ ರಸ್ತೆಯಿಂದ ಬರುತ್ತಿದ್ದಾಗ ಆಲೂರು ಕಡೆಯಿಂದ ಒಬ್ಬ ಮೊಟರ್ ಸೈಕಲ್ ಸವಾರನು ತನ್ನ ಮೊಟರ ಸೈಕಲನ್ನು ನೆಡೆಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನಾನು ಮತ್ತು ಮೊಟರ್ ಸೈಕಲ್ ಸವಾರ ಇಬ್ಬರು ಕೆಳಗೆ ಬಿದ್ದೆವು. ಆಗ ನಮ್ಮಿಬ್ಬರಿಗೆ ನನ್ನೊಂದಿಗೆ ಇದ್ದ ರೆವಣಸಿದ್ದಪ್ಪ ಇತನು ಎಬ್ಬಿಸಿ ಕೂಡಿಸಿದನು. ನನಗೆ ತೆಲೆಗೆ ಭಾರಿ ಗುಪ್ತ ಪೆಟ್ಟಾಗಿದ್ದು ಬಲಗಣ್ಣಿಗೆ ಗಾಯವಾಗಿದ್ದು ಅಲ್ಲದೆ ಎಡ ಮೊಳಕಲಿನ ಕೇಳಗೆ ತೆರಚೀದ ಗಾಯವಾಗಿರುತ್ತದೆ. ಅಲ್ಲದೆ ನನಗೆ ಡಿಕ್ಕಿ ಪಡಿಸಿದ ಮೋಟರ್ ಸೈಕಲ್ ಸವಾರನಿಗೆ ಮುಖಕ್ಕೆ ಅಲ್ಲಲ್ಲಿ ಗಾಯಗಳಾಗಿದ್ದು ಅವನ ಹೇಸರು ಮಹಾದೇವಪ್ಪ ತಂದೆ ಶಿವರಾಯ ವರವಿ ಅಂತ ಗೊತ್ತಾಯಿತು. ಮೊಟರ್ ಸೈಕಲ್ ನಂಬರ ನೊಡಲಾಗಿ ಕೆ ಎ 28 ಇ ಎಫ್ 1298 ಇತ್ತು ಆಗ ಸಮಯ 7 ಪಿ ಎಂ ಆಗಿತ್ತು.  ನನಗೆ ಉಪಚಾರ ಕುರಿತು ನನ್ನ ತಂದೆ ಅಮೃತ ನನ್ನ ಮಾವ ಸಿದ್ದಪ್ಪ ಹರನಾಳ, ಹಲಕಟ್ಟೆಪ್ಪ ರೇವಣಸಿದ್ದಪ್ಪ ಇಗೆಲ್ಲರೂ ಕುಡಿಕೊಂಡು ಯಡ್ರಾಮಿಯಲ್ಲಿ ಖಾಸಗಿಯಾಗಿ ತೋರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು ದಿನಾಂಕ 28-10-2015 ರಂದು ಮೃತ ಮಹಾದೇವಪ್ಪ ಇತನ ಅಣ್ಣನಾದ ಮಡಿವಾಳಪ್ಪ ತಂದೆ ಶಿವರಾಯ ದೊಡಮನಿ ಸಾ|| ವರವಿ ಇತನು ತನ್ನ ತಮ್ಮ ಮಹಾದೇವಪ್ಪ ಇತನು ಉಪಚಾರ ಪಡೆಯುತ್ತಿದ್ದ ಸೊಲ್ಲಾಪೂರ ಗಂಗಾಮಯ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾಗ ದಿನಾಂಕ 24-10-2015 ರಂದು ಮೃತಪಟ್ಟಿರುತ್ತಾನೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 01.10.2015 ರ 23.30 ಗಂಟೆಯಿಂದ ದಿ|| 02.10.2015 ರ 05:00 ಗಂಟೆಯ ಮಧ್ಯದ ಅವಧಿಯಲ್ಲಿ ಜೇವರಗಿ ಪಟ್ಟಣದ ಶಾಸ್ತ್ರಿ ಚೌಕ್ ಹತ್ತಿರ ಇರುವ ಮಲ್ಲಿಕಾರ್ಜುನ ಇವರ ಮನೆಯ ಮುಂದೆ ನಿಲ್ಲಿಸಿದ್ದು ನನ್ನ ಮೋಟಾರು ಮೊಟಾರ್ ಸೈಕಲ್ ನಂ ಕೆ.ಎ.-21 ಹೆಚ್‌-4598 ಅಂ.ಕಿ 15.000=00 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ಅಂತಾ ಶ್ರೀಶೈಲ ತಂದೆ ಬಸಣ್ಣ ಮೂಲಿಮನಿ ಸಾ|| ಸೊನ್ನ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

28 October 2015

Kalaburagi District Reported Crimes

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಮುನಪ್ಪ ತಂದೆ ಅಂಬಣ್ಣ ನಾಲ್ಕಮನ್ ಸಾ|| ಉಡಚಣ ಇದ್ದು ನಾವು ನಮ್ಮ ತಂದೆ ತಾಯಿಗೆ ನಾಲ್ಕುಜನ ಮಕ್ಕಳಿದ್ದು 1)ಪ್ರಭಾವತಿ,2)ನಾನೂ,3)ಮೃತ ನಿರ್ಮಲ ಅಂತ ಇದ್ದು ನಮ್ಮ ತಂಗಿಯಾದ ನಿರ್ಮಲಾ ಇವಳಿಗೆ 13 ವರ್ಷಗಳ  ಹಿಂದೆ ದಿಕ್ಸಂಗಾ (ಕೆ) ಗ್ರಾಮದ ಸುಖದೇವ ತಂದೆ ಖಾಜಪ್ಪ ಮ್ಯಾಕೆರಿ ಇವರ ಜೋತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ ಇಗ ನಮ್ಮ ತಂಗಿಗೆ ಮೂರುಜನ ಹೆಣ್ಣು ಮಕ್ಕಳು ಇರುತ್ತಾರೆ ನಮ್ಮ ತಂಗಿ ಆಗಾಗ ನಮ್ಮ ಮನೆಗೆ ಬಂದಾಗ ನನಗೆ ನಮ್ಮ ಅತ್ತೆಯಾದ ರುಕ್ಕವ್ವ.ಗಂಡ ಸುಖದೇವ ,ನಾದನಿಯರಾದ ಸತ್ಯವ್ವ, ಬಂಗರೇವ್ವ ಇವರೇಲ್ಲರು ರಂಡಿ ನಿನಗೆ ಗಂಡು ಮಕ್ಕಳು ಆಗುವದಿಲ್ಲ ಬರಿ ಹೆಣ್ಣೆ ಹಡದಿ ಅಂತ ಹೋಡೆ ಬಡೆ ಮಡುತ್ತಾರೆ ಅಂತಾ ಹೆಳುತಿದ್ದಳು ನಮ್ಮ ತಂದೆಯಾದ ಅಂಭಣ್ಣ ನಮ್ಮ ಗ್ರಾಮದ ಪ್ರಮುಖರು ಕೂಡಿ ದಿಕ್ಸಂಗಾ (ಕೆ) ಗ್ರಾಮದ ನಮ್ಮ ತಂಗಿಯ ಗಂಡನಿಗೆ ಹಾಗೂ ಅವರ ಮನೆಯವರಿಗೆ ತಿಳುವಳಿಕೆಯಿಂದ ಬುದ್ದಿಮಾತು ಹೇಳಿ ಬಂದಿರುತ್ತಾರೆ. ದಿನಾಂಕ 26-10-2015ರಂದು ನನ್ನ ತಂಗಿ ನನ್ನ ಮೊಬಾಯಿಲಗೆ ಪೋನ್ ಮಾಡಿ ನನಗೆ ನನ್ನ ಗಂಡ ಅತ್ತೆ,ನಾದನಿಯರಾದ ಸತ್ಯವ್ವವ ,ಬಂಗರವ್ವ ನನಗೆ ರಂಡಿ ಇವತ್ತು ನಿನಗೆ ಬಿಡಗಿಲ್ಲ ಇಲ್ಲಿ ಹೆಂಗ ಸಂಸಾರ ಮಾಡ್ತಿ ಮಾಡು ಏಣ್ಣಿ ಹಾಕಿ ಸುಡತಿವಿ ಬೋಸಡಿ ಅಂತ ಹೊಡೆ ಬಡೆ ಮಾಡುಕತ್ತಾರೆ ಅಂತ ತಿಳಿಸಿ ಪೋನ್ ಕಟ್ ಮಾಡಿದಳು ನಂತರ ನಾನು ಗಾಬರಿಯಾಗಿ ನಮ್ಮ ಗ್ರಾಮದವರಾದ ವಿಠ್ಠಲ ಕಡ್ಲಾಜಿ, ಶಿವಾನಂದ ಮೂಲಿಮನಿ, ನನ್ನ ಸಂಭಂದಿಕನಾದ ಸಂಜು ಗಾಯಕವಾಡ ಎಲ್ಲರಿಗೆ ವಿಷಯ ತಿಳಿಸಿ ಒಂದು ಖಾಸಗಿ ವಾಹಾನ ಮಾಡಿಕೊಂಡು ರಾತ್ರಿ 23:00ಗಂಟೆ ಸುಮಾರಿಗೆ ದಿಕ್ಸಂಗಾ ಗ್ರಾಮಕ್ಕೆ ನಮ್ಮ ತಂಗಿ ಮನೆಗೆ ಹೋಗಿ ನೋಡಲಾಗಿ ಮನೆಯ ಕೋಣೆಯಲ್ಲಿ ನಮ್ಮ ತಂಗಿಯ ಮೈಬೆಂಕಿಯಂದ ಸುಟ್ಟು ಬೆಂದಾದ ಸ್ಥಿತಿಯಲ್ಲಿ ಇದ್ದಳು ನಾವು ನಮ್ಮ ತಂಗಿಗೆಗೆ ವಿಚಾರಿಸಿದಾಗ ನನ್ನ ಗಂಡ ಅತ್ತೆ ನಾದನಿಯರಾದ ಸತ್ಯವ್ವ,ಬಂಗರವ್ವ ಇವರೆಲ್ಲರು ನನಗೆ ನಿನು ಜಿವಂತ ಇದ್ದರೆ ಬರಿ ಹೆಣ್ಣೆ ಹಡಿತಿ ಭೋಸಡಿ ಅಂತ ನನಗೆ ಹೊಡೆಬಡೆಮಾಡಿ ನನಗ ಕೋಣೆಯಲ್ಲಿ ಎಳೆದುಕೊಂಡು ಹೋಗಿ ನನ್ನ ಗಂಡ ಸೀಮೆಏಣ್ನೆ ನನ್ನ ಮೈಮೇಲೆ ಉಗ್ಗಿದಾಗ ನನ್ನ ನಾದನಿಯರು ಈ ರಂಡಿಗೆ ಇವತ್ತು ಸುಟ್ಟು ಖಲಾಸಮಾಡಮು ಅಂತ ಅಂದಾಗ ನಮ್ಮ ಅತ್ತೆ ಇವಳು ಬೆಂಕಿ ಕೊರೆದು ನನ್ನ ಮೈಮೇಲೆ ಒಗೆದು ನನಗೆ ಉರಿ ಹಚ್ಚಿ ಮನೆಯಿಂದ ಒಡಿಹೊಗಿರುತ್ತಾರೆ ಅಂತ ತಿಳಿಸಿದಳು ನಾವೇಲ್ಲರು ನಾವು ತಂದ ಖಾಸಗಿ ವಾಹನದಲ್ಲಿ ನಮ್ಮ ತಂಗಿಯನ್ನು ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ ಉಪಚಾರ ಫಲಕಾರಿಯಾಗದೆ ನಮ್ಮ ತಂಗಿ ನಿರ್ಮಲಾ ಇವಳು ಇಂದು ದಿನಾಂಕ 27-10-2015ರಂದು ಬೆಳಿಗ್ಗೆ ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಣಾಂತಿಕ ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಸುಭಾಷ ತಂದೆ ಅಶೋಕ ಚಿಂತಪಳ್ಳಿ ಸಾ: ಮಲ್ಲಪ್ಪ ಪೇಂಟರ ಮನೆಯಲ್ಲಿ ಕಿರಾಯಿ ಮಾಣಿಕೇಶ್ವರಿ ಕಾಲನಿ ಕಲಬುರಗಿ  ರವರು ಕೆರೆ ಭೋಸಗಾ ಕ್ರಾಸ ದಾಟಿ ಇರುವ ದಾಬಾಕ್ಕೆ ಊಟ ಮಾಡಲು ಒಬ್ಬನೇ ಹೋಗಿ, ದಾಬಾದ  ಒಳಗಡೆ ಹೋಗುವ ಬಾಗಿಲಿನಲ್ಲಿ ನಿಂತಾಗ ಅಪರಿಚಿತ ಇಬ್ಬರು ಫಿರ್ಯಾದಿಗೆ  ದಾಬಾದ ಬಾಗಿಲಿನಿಂದ ಸರಿ ಅಲೇ ನಿನ್ನ ಅವ್ವನ ತುಲ್ಲ ಅಂತಾ ಬೈದ್ದಿದ್ದು, ಅವರಿಬ್ಬರಿಗೆ ಸಿದಾ ಮಾತಾಡರೋ ನಿಮ್ಮ ಅವ್ವ ತುಲ್ಲ ಅಂತಾ ಯಾರಿಗೆ ಬೈಯ್ಯತ್ತಿದ್ದಿರೀ ಅಂತಾ ಕೇಳಿದ್ದಕ್ಕೆ ಅವರಿಬ್ಬರು ಫಿರ್ಯಾದಿಗೆ  ಕೊಲೆ ಮಾಡುವ ಉದ್ದೇಶದಿಂದ ಯಾವುದೋ ಹರಿತವಾದ ಆಯುಧದಿಂದ ನನ್ನ ಎದೆಗೆ ಚುಚ್ಚಿ ಮರಣಾಂತಿಕ ಹಲ್ಲೆ ಮಾಡಿ ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ರೋಜಾ ಠಾಣೆ : ಶ್ರೀಮತಿ ತಾಹೇರಾಬೇಗಂ ಗಂಡ ಶೇಖ ಮಹ್ಮದ ರಜಾಕ ಸಾ : ಮ.ನಂ 5449/3 ಬಿಬಿ ರಜಾ ಡಿಗ್ರಿ ಕಾಲೇಜ ಹತ್ತಿರ ಕಲಬುರಗಿ ರವರ ಗಂಡನಾದ ಶೇಖ ಮಹ್ಮದ ರಜಾಕ್ ಈತನು ಹೊರ ದೇಶದ ದುಬೈನಲ್ಲಿರುತ್ತಾರೆ. ಕಲಬುರಗಿಯಲ್ಲಿ ನಾನು ನನ್ನ ಮೂರು ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಹೇಸರಿನಲ್ಲಿ ಮತ್ತು ನನ್ನ ಗಂಡನ ಹೆಸರಿನಲ್ಲಿ ಕಲಬುರಗಿಯ ದರ್ಗಾ ಎಸ್.ಬಿ.ಹೆಚ್. ಬ್ಯಾಂಕ ಶಾಖೆಯಲ್ಲಿ ಖಾತೆ ಇರುತ್ತವೆ. ಮತ್ತು ಎ.ಟಿ.ಎಮ್.ಕಾರ್ಡ ಕೂಡಾ ಇರುತ್ತವೆ. ನನ್ನ ಗಂಡನು ಆಗಾಗ ತನ್ನ ಅಕೌಂಟಗೆ ಹಣ ಕಳುಹಿಸುತ್ತಿದ್ದನು ಮತ್ತು ಕಳುಹಿಸಿದ ಬಗ್ಗೆ ನಮಗೆ ಫೋನ ಮೂಲಕ ತಿಳಿಸುತ್ತಿದ್ದನು. ದಿನಾಂಕ 19-10-2015 ರಂದು ರಾತ್ರಿ ಅಂ 8.30 ಗಂಟೆಯ ಸುಮಾರಿಗೆ ನಮ್ಮ ಮನೆಯ ಮೊಬೈಲ್ ಫೋನ ನಂ 9448577202 ಇದು ನನ್ನ ಮಗನಾದ ಮಹ್ಮದ ಶಹಬಾಜ ಈತನ ಹತ್ತಿರ ಇದ್ದು ಆತನಿಗೆ ಮೊಬೈಲ್ ಪೋನ ನಂ 7259636446 ಇದರಿಂದ ಫೊನ ಮಾಡಿ ಮೈ ಬೆಂಗಳೂರು ಎಸ.ಬಿ.ಹೆಚ್. ಬ್ಯಾಂಕ ಮ್ಯಾನೇಜರ್ ಬಾತರಕರಹಾಹು ಕರ್ನಾಟಕೆ ಪೂರೆ ಎ.ಟಿ.ಎಮ್. ಕಾರ್ಡ ಚೆಕ ಕರ ರಹಾಹು ಆಪಕೆ ಕಾರ್ಡ ಕಾ ನಂಬರ ಅಬ ಆಯಾ ತುಮ್ಹಾರಾ ಕಾರ್ಡ ನಂಬರ ಕ್ಯಾ ಹೈ ಅಂತಾ ಕೇಳಿದಾಗ ನನ್ನ ಮಗ ನನ್ನ ಗಂಡನ ಹೆಸರಿನಲ್ಲಿರುವ ಎ.ಟಿ.ಎಮ್. ಕಾರ್ಡ ನಂ 5044352063200005481 ಅಂತಾ ಹೇಳಿದೆನು. ನಂತರ ಆತನು ಮೆಸೆಜ ಆತಾ ಆಪ ಮೆಸೆಜ್ ಆನೆಕೆ ಬಾದ ಉಸಮೆ 6 ನಂಬರ ಆತಾ ಓ ಆಪ ಪಡಕೆ ಮರೆಕು ಬೋಲನಾ ಅಂತಾ ತಿಳಿಸಿದಾಗ ಮೆಸೆಜ ಮೆ ಆಯೇಸೊ ನಂಬರ ಮೇರಾ ಬೇಟಾ 6-7 ಬಾರ ಪಡಕೆ ಬೋಲಾ ಆತನು ಅಚ್ಛಿ ಬಾತಹೈ ಆಪಕಾ ಕಾಮ ಹುವಾ ಸುಬೆ ಆಪಕಾ ಕಾರ್ಡ ರಿನಿವಲ್ ಹೋತಾ ನಯಾ ಕಾರ್ಡ ಆತಾ ಅಂತಾ ತಿಳಿಸಿದನು. ನಂತರ ಮರುದಿವಸ ದಿನಾಂಕ 20-10-2015 ರಂದು ಪೀರ್ ಸುಬೆ 7.30 ಬಜೆ ಪಹಲೆ ಆಯೆಸೋ ನಂಬರಸೆ ಫೊನ ಆಯಾ ಮೇರಾ ಬೇಟಾ ಫೋನ ಉಟ್ಯಾ ಅಬ್ದುಲರಜಾಕ ಕಾ ಕಾರ್ಡ ರಿನಿವಲ್ ಹುವಾ ಇಸಕೆ ವಾಸ್ತೆ ಏಕ್ ಐ.ಡಿ. ಫ್ರೂಫ್ ಹೋನಾ ತುಮ್ಹಾರಾ ಅಮ್ಮಿ ತಾಹೇರಾಬೇಗಂ ಕಾ ಬಿ ಎ.ಟಿ.ಎಮ್.ಕಾರ್ಡ ಹೈನಾ ಉಸಕಾಬಿ ರಿನಿವಲ್ ಕರನೆಕಾ ಹೈ ಉಸಕಾ ಬಿ ನಂಬರ ಬೋಲೊ ಅಂತಾ ಕೇಳಿದಾಗ ನನ್ನ ಮಗ ಮೇರಾ ಕಾರ್ಡ ನಂಬರ 5044352063200047509 ಬಿ ಬೋಲಾಬೋಲನೆಕೆ ಬಾದ 2 ಮೆಸೆಜ್ ಆಯಾ ಮೆಸೆಜ ಮೆ ಆಯೆಸೊ ನಂಬರ ಮೇರೆ ಬೇಟಾ ಪಡಕೆ ಬೋಲಾ ಬಾದಮೆ ಇನ್ಹೋನೆ ಇಸಕಾ ಭಿ ಐ.ಡಿ.ಫ್ರೂಫ್ ಚಾಹಿಯೆ ಆಪ ಕೆ ಪಾಸ ಔರ ಎಕ್ ಕಾರ್ಡ ಹೈನಾ ಉಸಕಾ ನಂಬರ ಬೋಲೊ ಅಂತಾ ತಿಳಿಸಿದಾಗ ಮೈನೆ ಮೇರೆ ಬೇಟೆಕೊ ನಂಬರ ಮತ್ ಬೋಲೊಬೇಟಾ ಅಂತಾ ತಿಳಿಸಿದಾಗ ಆತನು ಆಪ ನಂಬರ ನಹಿ ಬೋಲೆತೊ ತುಮ್ಹಾರಾ ಪೂರೆ ಪೈಸಾ ಜಾತೆ ದೆಖೋ ಅಂತಾ ಹೇಳಿದನು. ಮೈ ಮೇರಾ ಬೇಟೆಕೊ ನಕೊ ಬೋಲೊ ದೇಖೆಂಗೆ ಕ್ಯಾ ಹೋತಾ ಅಂತಾ ತಿಳಿಸಿದೆನು.ನಂತರ ದುಪ್ಹಾರ 3.30 ಬಜೆ ಫಿರ್ ಪಹಲೆಕಾ ನಂಬರಕಾ ಫೋನ ಆಯಾ ಮೇರೆಕು ಡೌಟ ಆಕೆ ಮೈ ಮೇರಾ ಬೇಟೆಕು ಬ್ಯಾಂಕ ಚಲೋ ದೇಖೇಂಗೆ ಅಂತಾ ಐಸಿಚ್ ಬಾತಕರ್ತೆ ಬ್ಯಾಂಕ ಕು ಆಕೆ ಬ್ಯಾಂಕ ಮೆ ಏಕ ನೌಕರಕು ಫೋನ ದಿಯಾ ಉನೊನೆ ಉಸಕೆ ಸಾಥ ಬಾತ್ ಕರ್ತೆ ವಕ್ತ ಫೋನ್ ಕಟ್ ಕರ್ದಿಯಾ ಬಾದಮೇ ಮೇರಾ ಅಕೌಂಟಮೇ ಔರ್ ಮೇರಾ ಶೊಹರ ಶೇಖ ಅಬ್ದುಲ ರಜಾಕ ಕೆ ಅಕೌಂಟಮೆ ಬ್ಯಾಂಕ ಮೇ ಪೈಸಾ ದೇಖೆತು ಮೇರಾ ಅಕೌಂಟಸೆ ದಿನಾಂಕ 20-10-2015 ಕು 5.000=00 ರೂ, ದಿನಾಂಕ 19-10-2015 ಕು 50.975=00 ರೂ,ಹೀಗೆ ಒಟ್ಟು 55.975=00 ರೂಪಾಗಳನ್ನು ನಮ್ಮ ಅಕೌಂಟನಿಂದ ನಮಗೆ ಮೋಸಮಾಡಿ ಫೋನ ನಂಬರ 7259636446 ರ ವ್ಯಕ್ತಿ ತನ್ನ ಹೆಸರು ಮತ್ತು ವಿಳಾಸ ಮರೆಮಾಚಿ ದೂರವಾಣಿ ಸಂಪರ್ಕ ಹೊಂದಿ ನಮ್ಮ ಕಾರ್ಡ ನಂಬರ ಬಳಸಿ ಹಣ ದೋಚಿರುತ್ತಾನೆ. ಅಲ್ಲದೆ ಇಂದು ದಿನಾಂಕ 27-10-2015 ರಂದು ಮದ್ಯಾಹ್ನ 4.50 ಗಂಟೆಗೆ ಮತ್ತೊಂದು ಫೊನ ನಂಬರ 7808334135 ಇದರಿಂದ ನಮ್ಮ ಫೊನ ನಂಬರ 9448577202 ಗೆ ಫೋನ ಮಾಡಿ ಆಪಕಾ ಎ.ಟಿ.ಎಮ್. ಕಾರ್ಡ ಬ್ಲಾಕ್ ಹೋಗಯಾ ಓ ಒಪನ ಕರನೆಕಾ ಹೈಕ್ಯಾ ಅಂತಾ ಕೇಳಿದಾಗ ನಾವು ಫೋನ ಕಟ್ ಮಾಡಿರುತ್ತೇವೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 October 2015

KALABURAGI DISTRICT REPORTED CRIMES.

ಗ್ರಾಮೀಣ ಠಾಣೆ : ದಿನಾಂಕ 26-10-15 ರಂದು ಬೆಳಿಗ್ಗೆ 10-00 ಗಂಟೆಗೆ  ಆರೋಪಿ ಸಾಯಿ ಇತನು ತನ್ನ ಮೋಟಾರ ಸೈಕಲ ಕೆಎ 32 ಇಸಿ 2923 ನೇದ್ದರ ಹಿಂದೆ ವೈಷ್ಣವಿ ಮತ್ತು ತನ್ನ ತಾಯಿ ಲಕ್ಷ್ಮೀಬಾಯಿ ಇವರಿಗೆ ಕೂಡಿಸಿಕೊಂಡು ದೇವಲಗಾಣಗಾಪೂರ ಮತ್ತು ಘತ್ತರಗಿ ದೇವರ ದರ್ಶನ ಕುರಿತು ತನ್ನ ಜೊತೆಯಲ್ಲಿ ಸುನೀಲ, ಸಂತೋಷ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ ಮತ್ತು  ರಾಜು, ಕಮಲಾಬಾಯಿ ಇವರಿಬ್ಬರು ಒಂದು ಮೋಟಾರ ಸೈಕಲ ಮೇಲೆ  ಕರೆದುಕೊಂಡು ಕರೆದುಕೊಂಡು ಹೋಗಿದ್ದು, ದೇವರ ದರ್ಶನ ಮುಗಿಸಿಕೊಂಡು,ಅದೇ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಸಂಜೆ 5-00 ಗಂಟೆ ಸುಮಾರಿಗೆ  ಘತ್ತರಗಿಯಿಂದ ಊರ ಕಡೆ ಅತಿವೇಗದಿಂದ ನಡೆಸುತ್ತಾ ಹೊರಟಿದ್ದು,ಸಂಜೆ 7-30 ಗಂಟೆ ಸುಮಾರಿಗೆ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹುಮನಾಬಾದ- ಕಲಬುರಗಿ ಮುಖ್ಯ ರಸ್ತೆಯ ಸ್ವಾಮಿ ಸಮರ್ಥ ಗುಡಿ ಹತ್ತಿರ ಬಂದಾಗ ಆರೋಪಿ ಸಾಯಿ ಕಣ್ಣಲ್ಲಿ ಯಾವುದೋ ಒಂದು ಸಣ್ಣ ಹುಳು ಬೀಳಲು ಅತಿವೇಗದಿಂದ ನಡೆಸುತ್ತಿದ್ದ  ತನ್ನ ಮೋಟಾರ ಸೈಕಲದ ವೇಗದ ಆಯ ತಪ್ಪಿ ರೋಡಿನ ಎಡ ಬದಿಯಲ್ಲಿ ಇರುವ ಗೂಟಕಲ್ಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ,  ಮೂವರು ಮೋಟಾರ ಸೈಕಲ ಮೇಲಿಂದ ರೋಡ ಬದಿಯಲ್ಲಿ ಬಿದ್ದೇವು. ಇದರಿಂದಾಗಿ ಆರೋಪಿ ಸಾಯಿ ಮತ್ತು ವೈಷ್ಣವಿ  ಹಾಗೂ ತಾಯಿ ಲಕ್ಷ್ಮೀಬಾಯಿ ಮೂವರಿಗೆ ರಕ್ತಗಾಯಗಳಾಗಿದ್ದು, ಲಕ್ಷ್ಮೀಬಾಯಿ ಇವಳಿಗೆ ಉಪಚಾರ ಕುರಿತು 108 ಅಂಬುಲೈನ್ಸ ಗಾಡಿಯಲ್ಲಿ  ಸರಕಾರಿ ದವಾಖಾನೆ ರಾತ್ರಿ 8-50 ಗಂಟೆಗೆ ತಂದಾಗ ವೈದ್ಯರು ನೋಡಿ ಈಗಾಗಲೇ ಮೃತಪಟ್ಟಿರುತ್ತಾಳೆ. ಅಂತಾ ಫಿರ್ಯಾದಿಗೆ ಅವನ ಮಗ ಮತ್ತು ವೈಷ್ಣವಿ ಮತ್ತು ಪ್ರತ್ಯಕ್ಷ ಸಾಕ್ಷಿದಾರಾದ ಸುನೀಲ ಮತ್ತು ಸಂತೋಷ ಇವರಿಂದ ಕೇಳಿ ಗೊತ್ತಾಗಿರುತ್ತದೆ. ಈ ಬಗ್ಗೆ  ನನ್ನ ಮಗ ಸಾಯಿ @ ಸಾಯಿನಾಥನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ್ಯಕ್ರಿಯೆ ಕುರಿತು ನನ್ನ ಹೆಂಡತಿ  ಶವ ಒಪ್ಪಿಸಬೇಕೆಂದು ಕೊಟ್ಟ ಹೇಳಿಕೆ  ಫಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಗುನ್ನೆ ದಾಖಲಾಗಿರುತ್ತದೆ. 
ಅಶೊಕ ನಗರ ಠಾಣೆ : ದಿನಾಂಕ: 26/10/2015 ರಂದು ಮದ್ಯಾಹ್ನ 3 ಗಂಟೆಗೆ ಶ್ರೀ ರೊದ್ದಮ್‌ ರಮೇಶಬಾಬು ತಂದೆ ರೊದ್ದಮ್‌ ಸತ್ಯನಾರಾಯಣ ವಯ||35 ವರ್ಷ ಉ|| ಬ್ಯಾಂಕ್‌ ಮ್ಯಾನೇಜರ್‌ ಸಾ|| ಕರ್ನೂಲ ಹಾ|||| ಕರುಣೇಶ್ವರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶವೇನಂದರೆ, ನಾನು ಕಳೆದ 4 ತಿಂಗಳಿಂದ ಎಸ್‌ಬಿಐ ಬ್ಯಾಂಕ ಕಪನೂರ ಇಂಡಸ್ತ್ರೀಯಲ್‌ ಎಸ್ಟೆಟ್ ಕಲಬುರಗಿ ಶಾಖೆಯಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡು ವಾಸವಾಗಿರುತ್ತೆನೆ. ನಾನು ಕರುಣೇಶ್ವರ ನಗರದ ಡಾ||ವಿ.ಕೆ ದೇಶಪಾಂಡೆ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿರುತ್ತೆನೆ. ನಮ್ಮ ಹತ್ತಿರ ಕೆಲವು ಬಂಗಾರದ ಆಭರಣಗಳು ಇದ್ದು ಅವುಗಳನ್ನು ನಾವು ಕಳ್ಳರ ಭಯದಿಂದ ಒಂದು ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಹಾಕಿ ಒಂದು ವಾರ ಆಲಮಾರಿಯಲ್ಲಿ ಮತ್ತೊಂದು ವಾರ ಕೀಚನ್‌ ರೂಮಿನ ಕಪಾಟಿನಲ್ಲಿ ಹೀಗೆ ಬೇರೆ-ಬೇರೆ ಸ್ಥಳಗಳಲ್ಲಿ ಇಡುತ್ತಾ ಬಂದಿರುತ್ತೆವೆ. ಹೀಗಿದ್ದು ದಿನಾಂಕ:24/10/2015 ರಂದು ರಾತ್ರಿ 11:30 ಗಂಟೆಯ ವರೆಗೆ ನಾನು ಮತ್ತು ನನ್ನ ಹೆಂಡತಿಯಾದ ರೊದ್ದಮ್ ಸುಜಾತ ಇಬ್ಬರು ಕೂಡಿ ಊಟ ಮಾಡಿ ಮಲಗಿಕೊಂಡಿರುತ್ತೆವೆ. ಮರುದಿವಸ ಅಂದರೆ ದಿನಾಂಕ:25/10/2015 ಬೆಳಗ್ಗೆ 5 ಗಂಟೆಗೆ ನನ್ನ ಹೆಂಡತಿಯಾದ ರೊದ್ದಮ್‌ ಸುಜಾತ ಇವಳು ಎದ್ದು ನೋಡಲಾಗಿ ನಮ್ಮ ಮನೆಯ ಹಿಂದಿನ ಬಾಗಿಲು ತೆರೆದಿದ್ದು ಕಂಡು ಗಾಬರಿಯಾಗಿ ನನ್ನ ಹತ್ತಿರ ಬಂದು ನನಗೆ ಎಬ್ಬಸಿ ನಮ್ಮ ಹಿಂದಿನ ಬಾಗಿಲು ತೆರೆದಿರುತ್ತದೆ ಅಂತಾ ಹೇಳಿದಾಗ ನಾನು ಕೂಡಾ ಎದ್ದು ನೋಡಲಾಗಿ ಬಾಗಿಲು ತೆರೆದಿದ್ದು ನಂತರ ಇಬ್ಬರು ಕೂಡಿ ಮನೆಯ ಹಾಲ್‌ನ ಕಪಾಟದಲ್ಲಿ ಬಂಗಾರ ಆಭರಗಳು ಇಟ್ಟಿದ ಪ್ಲಾಸ್ಟಿಕ್‌ಡಬ್ಬಿ  ನೋಡಲು ಕಾಣಲಿಲ್ಲ. ಪುನಃ ನಾವು ಡಬ್ಬಿಯನ್ನು ಬೇರೆ ಸ್ಥಳದಲ್ಲಿ ಇಟ್ಟಿರಬಹುದು ಅಂತಾ ತಿಳಿದು ಮನೆಯ ಎಲ್ಲಾ ಕಡೆಗೆ ಹುಡಕಾಡಿದರೂ ಕೂಡಾ ಬಂಗಾರದ ಆಭರಣಗಳಿದ್ದ ಡಬ್ಬಾ ಸಿಕ್ಕಿರುವದಿಲ್ಲ. ಅಲ್ಲದೆ ಡೈನಿಂಗ್‌ ಟೆಬಲ್‌ ಮೇಲಿಟ್ಟಿದ ನನ್ನ ಸ್ಯಾಮಸಂಗ್‌ ಕಂಪನಿಯ ಮೋಬೈಲ್‌ ಫೊನ್‌ ಸಿಮ್‌ ನಂ 9449875532,9448998488 ಅಂ:ಕಿ:3000/-ನೇದ್ದು ಮತ್ತು ಮೋಬೈಲ್‌ ಪಕ್ಕದಲ್ಲಿ ಇಟ್ಟಿದ್ದ ನನ್ನ ಹೆಂಡತಿಯ ಪರ್ಸನಲ್ಲಿಟ್ಟಿದ್ದ ನಗದು 1500/- ರೂಗಳು ಕಾಣಲಿಲ್ಲ. ಪ್ಲಾಸ್ಟಿಕ್‌ ಡಬ್ಬಿಯಲ್ಲಿ ಈ ಕೆಳಕಂಡ ಬಂಗಾರದ ಆಭರಣಗಳು ಇದ್ದಿದ್ದು ಇರುತ್ತವೆ. 1)    8 ಗ್ರಾಂನ ಒಂದು ಬಂಗಾರದ ಉಂಗುರು ಅಂ:ಕಿ:20,000/-ರೂಪಾಯಿ. 2)   6 ಗ್ರಾಂನ ಎರಡು ಬಂಗಾರದ ಉಂಗುರುಗಳು ಅ:ಕಿ:30,000/- ರೂಪಾಯಿ.3)   56 ಗ್ರಾಂನ 7 ಜೋತೆ ಬಂಗಾರದ ಕೀವಿಯ ಹೂಗಳು ಅ:ಕಿ:1,40,000/- ರೂಪಾಯಿ.4)   20 ಗ್ರಾಂನ ಒಂದು ಬಂಗಾರದ ಚಂಪಾಸರ ಅಂ:ಕಿ:50,000/- ರೂಪಾಯಿ.5)   15 ಗ್ರಾಂನ ಬಂಗಾರದ ಬಿಂದಿ ಅ:ಕಿ: 37,000/- ರೂಪಾಯಿ. 6)   16 ಗ್ರಾಂನ ಒಂದು ಬಂಗಾರದ ಬ್ರಾಸ್‌ಲೆಟ್‌ ಅ:ಕಿ:40,000/- ರೂಪಾಯಿ.7)   8 ಗ್ರಾಂನ ಒಂದು ಬಂಗಾರದ ಬ್ರಾಸ್‌ಲೆಟ್‌ ಅ:ಕಿ:20,000/- ರೂಪಾಯಿ.8)   5 ಗ್ರಾಂನ ಎರಡು ಬಂಗಾರ ನಾಣ್ಯಗಳು ಅ:ಕಿ:25,000/- ರೂಪಾಯಿ. ಹೀಗೆ ಒಟ್ಟು ನಗದು ಹಣ ಸೇರಿ3,66,500/-ರೂಪಾಯಿ ನೇದ್ದವುಳನ್ನು ದಿನಾಂಕ:24/10/2015 ರಂದು ರಾತ್ರಿ 11:30 ಗಂಟೆಯಿಂದ ದಿನಾಂಕ:25/10/2015 ರಂದು ಬೆಳಗಿನ 5 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಮುಂದಿನ ಬಾಗೀಲು ಅಷ್ಟೋಂದು ಭದ್ರ ಇರದ ಕಾರಣ ಮುಂದಿನ ಬಾಗಿಲಿನಿಂದ ಮನೆಯ ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ಮೇಲೆ ನಮೂದಿಸಿದ ಬಂಗಾರದ ಆಭರಣಗಳು, ಮೋಬೈಲ್‌ ಫೊನ್‌ ಮತ್ತು ನಗದು ಹಣ ಯಾರೋ ಕಳವು ಮಾಡಿಕೊಂಡು ಹಿಂದಿನ ಬಾಗಿಲ ಮುಖಾಂತರ ಹೋಗಿರುತ್ತಾರೆ.ಈ ಬಗ್ಗೆ ನಾನು ಮನೆಯಲ್ಲಿ ಹುಡಕಾಡಿ,ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ಮಾನ್ಯರು ಕಳ್ಳರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿ ಅರ್ಜಿಯ ಸಾರಾಂಶದ ಮೇಲಿಂದ ಅಶೋಕ ನಗರ ಪೋಲಿಸ್‌ ಠಾಣೆ ಗುನ್ನೆ ನಂ.132/15 ಕಲಂ 457,380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.