POLICE BHAVAN KALABURAGI

POLICE BHAVAN KALABURAGI

13 March 2014

Gulbarga District Reported Crimes

ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-03-2014  ರಂದು ನಿಂಬರ್ಗಾ ಗ್ರಾಮದ ಹತ್ತಿರ ಇರುವಾಗ 1115 ಗಂಟೆಯ ಸುಮಾರಿಗೆ ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ  ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಸಿಪಿಐ ಸಾಹೇಬ ಆಳಂದರವರ ನೇತೃತ್ವದಲ್ಲಿ ಪಿಎಸ್.ಐ ನಿಂಬರ್ಗಾ ಹಾಗು ಸಿಬ್ಬಂದಿಯವರು ಮತ್ತು ಪಂಚರೋದಿಗೆ  ಭಟ್ಟರ್ಗಾ ಗ್ರಾಮದ ಬಸ ನಿಲ್ದಾಣದ ಹತ್ತಿರ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ಸಾರ್ವಜನಿಕ ರೋಡಿನ ಮೇಲೆ ತನ್ನ ಮುಂದೆ ಒಂದು ರಟ್ಟಿನ ಪುಟ್ಟದಲ್ಲಿ ಮಧ್ಯದ ಪಾಕೇಟಗಳನ್ನು ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮಧ್ಯದ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು ನಾಗಪ್ಪ ತಂದೆ ಗಣಪತಿ ಪೂಜಾರಿ ಸಾ|| ಭಟ್ಟರ್ಗಾ ಅಂತ ತಿಳಿಸಿದನು, ಅವನಿಗೆ ಈ ಮಧ್ಯದ ಮಾರಾಟದ ಬಗ್ಗೆ ಲೈಸನ್ಸ ವಗೈರೆ ಕೇಳಿದ್ದು ಆದರೆ ಆತನು ತನ್ನ ಹತ್ತಿರ ಯಾವುದೆ ಲೈಸನ್ಸ ವಗೈರೆ ಇರುವದಿಲ್ಲ ಅಂತ ತಿಳಿಸಿದನು, ಅವನ ಮುಂದೆ ಇದ್ದ ಮಧ್ಯದ ಪಾಕೀಟಗಳನ್ನು ಪರಿಶೀಲಿಸಲಾಗಿ  180 ಎಮ್.ಎಲ್. ನ 26 ಒರಿಜನಲ್ ಚೋಯಸ ಪಾಕೇಟಗಳು ಅ.ಕಿ. 1300/- ಮತ್ತು ನಗದು ಹಣ 220/- ರೂ ಹೀಗೆ ಒಟ್ಟು 1520/- ಋಉ ಮತ್ತು ಸದರಿಯನನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಟಕಲ ಠಾಣೆ : ದಿನಾಂಕ 12.03.2014 ರಂದು ರಟಕಲ ಪೊಲೀಸ ಠಾಣೆಯ ಸರಹದ್ದಿನ ಪಂಗರಗಾ  ಗ್ರಾಮದಲ್ಲಿ ಯಾರೋ ಒಬ್ಬ ಅನದಿಕೃತವಾಗಿ ಕ್ವಾಟರ ಬಾಟಲಗಳು ಮಾರಾಟ ಮಾಡುತ್ತಿದ್ದಾನೆ ಅಂತ ಬಾತ್ಮಿ ಬಂದ ಮೇರೆಗೆ ನಾನು ಅಕ್ಕಮಹಾದೇವಿ ವಿ. ನೀಲೆ ಪಿ.ಎಸ್.ಐ ಸಂಗಡ ಸಿಬ್ಬಂದಿ ಜನರನ್ನು ಹಾಗು ಇಬ್ಬರು ಪಂಚರನ್ನು ಕರೆದು ಕೊಂಡು ಸದರಿ ಗ್ರಾಮಕ್ಕೆ ಹೋಗಿ ಬಾತ್ಮಿ ಇದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಕ್ವಾಟರ ಬಾಟಲಗಳನ್ನು ಮಾರಾಟ ಮಾಡುತ್ತಿರುವುದನ್ನು ನೋಡಿ ಸಿಬ್ಬಂದಿ ಸಹಾಯದಿಂದ ದಾಳಿ ಮಾಡಿ ಚನ್ನಪ್ಪ ತಂದೆ ಗಿರೇಪ್ಪ ಜಜ್ಜಲೆ  ಸಾ||ಪಂಗರಗಾ ಹಿಡಿದು ಸದರಿಯವನಿಂದ ನಗದು ಹಣ100/- ರೂ ಹಾಗು ಯು.ಎಸ್ ವಿಸ್ಕಿ 180 ಎಂ.ಎಲ್ 48 ಬಾಟಲಗಳು, ಒಟ್ಟು ಅ.ಕಿ 2304/- ರೂ ನೇದ್ದನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡದ್ದು ಸದರಿಯವನೊಂದಿಗೆ ಠಾಣೆಗೆ ಬಂದು ರಟಕಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

12 March 2014

Gulbarga District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ  ಲಕ್ಷ್ಮಿ ಗಂಡ ಹಣಮಂತು ಕುರಬುರ ಸಾ: ಕೊನಾಪೂರ ಗ್ರಾಮ ತಾ: ಸೇಡಂ ಇವರ  ಗಂಡನ ಅಣ್ಣ-ತಮ್ಮಂದಿರು ಒಟ್ಟು 3 ಜನರಿದ್ದು, 1] ಚನ್ನಪ್ಪ ತಂದೆ ಮಾಳಪ್ಪ 2] ಬೀರಪ್ಪ ತಂದೆ ಮಾಳಪ್ಪ 3] ನನ್ನ ಗಂಡನಾದ ಹಣಮಂತು ತಂದೆ ಮಾಳಪ್ಪ ಈ ರೀತಿಯಾಗಿ ಇರುತ್ತಾರೆ. ಈ 3 ಜನರು ಬೇರೆ-ಬೇರೆಯಾಗಿ ಬೇರೆ ಮನೆ ಮಾಡಿಕೊಂಡು, ಜೀವನ ಮಾಡುತ್ತಿದ್ದೇವು, ಪ್ರತಿಯೊಬ್ಬರಿಗೆ ಕೊನಾಪೂರ ಸಿಮೇಯಲ್ಲಿರುವ ಹಿರಿಯರ ಆಸ್ತಿಯಲ್ಲಿ, ತಲಾ 2 ಎಕರೆಗಳು ಬಂದಿದ್ದು, ನಮಗೆ 2 ಏಕರೆ ಜಮೀನು ಇರುತ್ತದೆ. ಮುಂದಿನ ವರ್ಷಕ್ಕಾಗಿ, ನಮ್ಮ 2 ಏಕರೆ ಜಮೀನು ಒಂದು ವರ್ಷಕ್ಕೆ 30 ಸಾವಿರ ರೂಪಾಯಿಗಳೂ ಕೊಟ್ಟು ನಮ್ಮೂರಿನ ರಾಮುಲು ತಂದೆ ಸಾಬಣ್ಣಾ ಇತನು ಕಡತಿ ಹಾಕಿಕೊಳ್ಳುವ ಕುರಿತು ಕೆಲವು ದಿವಸಗಳ ಹಿಂದೆ, ಮಾತಾಗಿತ್ತು, ಆದರೆ, ರಾಮುಲು ಇತನು ಮಾತಾಡಿದ ಪ್ರಕಾರ 25,000/- ರೂಪಾಯಿಗಳು ಕೊಡುತ್ತೇನೆ ಇನ್ನು 05,000/- ರೂಪಾಯಿಗಳು ಆಮೇಲೆ ಕೊಡುತ್ತೇನೆ ಅಂದಾಗ ನಾವು ಪೂರ್ತಿ ಹಣ ಕೊಡು ಅಂದಾಗ ನಮ್ಮೂರಿನ ವೆಂಕಟಪ್ಪ ಇತನು ಉಳಿದ 05,000/- ರೂಪಾಯಿ ನಾನು ಕೊಡುತ್ತೇನೆ ಅಂತಾ ಅಡ್ಡಬಂದು ಮಾತನಾಡಿದಾಗ, ನನ್ನ ಗಂಡನು ಇದಕ್ಕೆ ಒಪ್ಪಲಿಲ್ಲಾ. ಈ ವಿಷಯದಲ್ಲಿ ವೆಂಕಟಪ್ಪ ತಂದೆ ಹಾಶಪ್ಪ ಕುರಬುರ ಇತನು ನನ್ನ ಗಂಡನ ಸಂಗಡ ತಕರಾರು ಮಾಡುತ್ತಾ ಬಂದನು, ಆಗಾಗ ಕಿರಿಕಿರಿ ಮಾಡುತ್ತಿದ್ದನು. ದಿನಾಂಕ: 11-03-2014 ರಂದು ರಾತ್ರಿ 08:00 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಗಂಡನ ಅಣ್ಣನ ಹೆಂಡತಿಯಾದ ಕಮಲಮ್ಮ ಗಂಡ ಬೀರಪ್ಪ ಮತ್ತು ನಮ್ಮ ಸಂಬಂದಿಕನಾದ ಬಸ್ಸಪ್ಪ ತಂದೆ ನರಸಪ್ಪ ಸಾ: ರಿಬ್ಬನಪಲ್ಲಿ ಇವರು ಕೂಡಿ ಮನೆಯಲ್ಲಿ ಮಾತನಾಡುತ್ತಾ ಕುಳಿತ್ತಿದ್ದೇವು. ಮತ್ತು ನನ್ನ ಗಂಡನಾದ ಹಣಮಂತು ತಂದೆ ಮಾಳಪ್ಪ ಇವರು ಊರಾಗಿನಿಂದ ನಮ್ಮ ಮನೆಯೋಳಗೆ ಬಂದರು, ಸ್ವಲ್ಪ ಸಮಯದ ನಂತರ ನಮ್ಮೂರಿನ ವೆಂಕಟಪ್ಪ ತಂದೆ ಹಾಶಪ್ಪ ಕುರಬುರ ಇತನು ನಮ್ಮ ಮನೆಯಲ್ಲಿ ಬಂದು, ನನ್ನ ಗಂಡನ ಸಂಗಡ ಜಗಳಕ್ಕೆ ಬಿದ್ದು, ಏ ಭೋಸಡಿ ಮಗನೆ, ನಿಮ್ಮ ಹೊಲ ಕಡತಿ ಹಾಕುವ ವಿಷಯದಲ್ಲಿ ನನ್ನ ಸಂಗಡ ಜಗಳಾ ಮಾಡಿ, ಮರ್ಯಾದಿ ತೆಗಿತಿ ಮಗನೆ ಅನ್ನುತ್ತಾ. ನಿನಗೆ ಖಲಾಸ ಮಾಡೇ ಬಿಡುತ್ತೇನೆ ಅಂದು, ತನ್ನ ಕಾಲಿನಿಂದ ನನ್ನ ಗಂಡನ ನಾಜುಕು ಜಾಗವಾದ ತೊರಡಿಗೆ ಒದ್ದು, ಒಳಪೇಟ್ಟು ಮಾಡಿದನು. ಮತ್ತು ನನ್ನ ಗಂಡನಿಗೆ ಜೋರಾಗಿ ದಬ್ಬಿಸಿಕೊಟ್ಟಾಗ, ನನ್ನ ಗಂಡನು ಕೆಳಗೆ ಬಿದ್ದನು. ಮತ್ತು ಇತನ ತಲೆಗೆ ಒಳಗಿನ ಮನೆಯ ಬಾಗಿಲ ವಸ್ತಿಲು ತಲೆಗೆ ಬಡಿದು, ಒಳಪೇಟ್ಟಾಗಿ ಸ್ಥಳಲ್ಲಿಯೇ ಒದ್ದಾಡುತ್ತಾ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಪ್ರದೀಪ ತಂದೆ ಬಂಡೆಪ್ಪ ನಿಂಬೂರಕರ್ ಸಾ: ಮ.ನಂ:157 ಕಾಂತಾಕಾಲೋನಿ ಗುಲಬರ್ಗಾ ರವರು ದಿನಾಂಕ: 01-03-2014 ರಂದು 10:30 ಎಎಮ್ ಕ್ಕೆ ಹಾರಕೂಡ ಗ್ರಾಮದಲ್ಲಿ ನನ್ನ ತಾಯಿಯವರ ತಂದೆಯವರು ಮೃತಪಟ್ಟಿರುವದರಿಂದ ನಾನು & ಕುಟುಂಬದ ಎಲ್ಲಾ ಸದಸ್ಯರು ಹಾರಕೂಡ ಗ್ರಾಮಕ್ಕೆ ತೆರಳಿರುತ್ತೇವೆ. ನಮ್ಮ ಮನೆಗೆ ಬೀಗ ಹಾಕಿಕೊಂಡು ಮನೆಯ ಇನ್ನೊಂದು ಭಾಗದಲ್ಲಿ ಬಾಡಿಗೆ ಇರುವ ಶ್ರೀ ರವಿಕುಮಾರ ತಂದೆ ಸಾಯಬಣ್ಣ ಮೋರೆ ಇವರಿಗೆ ತಿಳಿಸಿ ಹಾರಕುಡಕ್ಕೆ ಹೋಗಿರುತ್ತೇವೆ. ದಿನಾಂಕ 12-03-2014 ರಂದು ಬೆಳಗ್ಗೆ 9:15 ಗಂಟೆಗೆ ನಮ್ಮ ಬಾಡಿಗೆದಾರರ ಗಮನಕ್ಕೆ ಕಳ್ಳತನ ಆಗಿರುವ ಕಂಡಿರುವದರಿಂದ ಅವರು ನಮಗೆ ಫೊನ  ಮೂಲಕ ತಿಳಿಸಿರುತ್ತಾರೆ. ನಾನು ಹಾರಕೂಡ ಗ್ರಾಮದಿಂದ ಗುಲಬರ್ಗಾ ಕ್ಕೆ ಬಂದು, ನನ್ನ ಮನೆಯಲ್ಲಿ ಬಂದು ನೋಡಿದಾಗ, ಮನೆಯ ಬಾಗಿಲಿನ ಕೊಂಡಿ ಮುರಿದಿದ್ದು ಒಳಗೆ ಹೋಗಿ ನೊಡಲು ಅಲಮಾರಗಳು ಎರಡು ತೆರೆದಿದ್ದು, ಅಲಮಾರದಲ್ಲಿನ  ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದವು. ಅಲಮಾರದಲ್ಲಿ ಇಟ್ಟಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಒಟ್ಟು 1,75,000/- ರೂ ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕಮಾಡಿಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಸಿಮಿತ್ರಪ್ಪ ತಂದೆ ಭೀಮಶಪ್ಪ ರವರು ದಿನಾಂಕ 11-03-2014 ರಂದು ತಮ್ಮ ಅಳಿಯನಾದ ಜಾನ ಇಬ್ಬರು ಕೂಡಿಕೊಂಡು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಕೆಬಿಎನ್ ಆಸ್ಪತ್ರೆಯಲ್ಲಿ ಅವರ ಸಂಬಂದಿಕರನ್ನು ಭೇಟಿಯಾಗುವ ಸಲುವಾಗಿ ಐವಾನ ಈ ಶಾಹಿ ರೋಡ ಮುಖಾಂತರವಾಗಿ ಲಾಹೋಟಿ ಕ್ರಾಸ್ ಕಡೆಗೆ ಇಬ್ಬರು ನಡೆದುಕೊಂಡು ಹೋಗುತ್ತಿರುವಾಗ ಸ್ಟೇಡಿಯಂ ಕಡೆಗೆ ಹೋಗುವ ರೋಡ ಹತ್ತಿರ ಮೋ/ಸೈಕಲ ನಂ ಕೆಎ-32 ಯು – 190  ನೇದ್ದರ ಸವಾರ ಪರಶುರಾಮ ಇತನು ಲಾಹೋಟಿ ಕ್ರಾಸ ಕಡೆಯಿಂದ ಎದುರಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ತಾನು  ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಮಾಡಿಯಾಳ ಗ್ರಾಮದ ಕಾವೇರಿ ವ|| 42 ವರ್ಷಸಾ|| ಮಾಡಿಯಾಳ  ಇವಳು ತನ್ನ ಮನೆಯಲ್ಲಿದ್ದಾಗ ಅದೇ ಗ್ರಾಮದ ಹಣಮಂತ ಪ್ರಭು ಪುರಲೆ ಎಂಬುವವನು ಮನೆಗೆ ನುಗ್ಗಿ ಗಾಸಲೇಟ ಕೊಡುವದಾಗಿ ಆಸೆ ತೋರಿಸಿ ತನ್ನ ಸಂಗಡ  ಮಲಗುವಂತೆ ಒತ್ತಾಯ ಮಾಡಿದ್ದು ಅದಕ್ಕೆ  ನಿರಾಕರಿಸಿದ್ದಕ್ಕೆ ಹಣಮಂತನು ಕೈ ಹಿಡಿದು ಜಗ್ಗಾಡಿ ಕಾಲಿನಿಂದ ತೊಡೆ ಹಾಗೂ ಸಂಸಾರದ ಮೇಲೆ ಒದ್ದು ಬಲವಂತವಾಗಿ ನೆಲಕ್ಕೆ ಹಾಕಿ ಸೀರೆ ಎತ್ತಿ ಸಂಭೋಗ ಮಾಡಲು ಯತ್ನಿಸಿದಾಗ  ಚೀರಾಡಿದ್ದು ಅವಳ ಸಪ್ಪಳ ಕೇಳಿ ನೆರೆ ಮನೆಯವರು ಬಂದಾಗ ಹಣಮಂತನು ಬಿಟ್ಟು ಹೋಗಿರುತ್ತಾನೆ ಅಂತ ಶ್ರೀಮತಿ ಶಶಿಕಲಾ ಗಂಡ ಶಿವಶರಣಪ್ಪ ಕಲ್ಯಾಣ  ಸಾ|| ಕೊಗನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀ ಮಜರ ಅಹ್ಮದ ತಂದೆ ಅಹ್ಮದ ಶರೀಫ್ ಸುಂಡಕೇ ಸಾ|| ಅಹ್ಮದ ರಜಾ ಕಾಲೋನಿ ರಜಾ-ಜಾಮಿಯಾ ಮಸ್ಜಿದ ಎದುರಿಗಡೆ ಗುಲಬರ್ಗಾ ರವರು ದಿನಾಂಕ 10.03.2014 ರಂದು ಮಧ್ಯಾನ 12.30 ಗಂಟೆಗೆ ನಾನು ನನ್ನ ಮಗಳ ಜೊತೆಗೆ ಪರೀಕ್ಷ ಫಲಿತಾಂಶ ನೋಡಿ ಬರಲು ಡೆಕ್ಕನ್ ಕಾಲೇಜಿಗೆ ಹೋಗಿದ್ದೆ ನನ್ನ ಹೆಂಡತಿ ನುಜತ ಸುಲ್ತನ ನನ್ನ ಮಗಳಾದ ನಿಖತ ಪರ್ವಿನ ಇವಳ ಡಿಲೇವರಿ ಆಗಿದ್ದರಿಂದ ಅವರ ಮನೆಯಾದ ಮಹಿಬೂಬ ನಗರದ ಕಾಲೊನಿಗೆ ಮಾತಾಡಿಸಿ ಬರಲು ಮನೆಗೆ ಕೀಲಿ ಹಾಕಿ ಹೋಗಿದ್ದೇವು ಮರಳಿ ಅಂದಾಜು ಮಧ್ಯಾನ 13.00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಮುಂದಿನ ಗೇಟಿಗೆ ಹಾಕಿದ ಕೀಲಿ ಹಾಗೇ ಇದ್ದು ಕೀಲಿ ತೆರೆದು ಮುಖ್ಯೆ ಬಾಗಿಲಿಗೆ ಹೋಗಿ ನೋಡಲಾಗಿ ಬಾಗಿಲಿಗೆ ಹಾಕಿದ ಕೊಂಡಿ ಮುರಿದಿ ಕೀಲಿ ಸಮೇತ ಕೆಳಗೆ ಬಿದ್ದಿದ್ದು ಬಾಗಿಲು ಅರ್ದ ತೆರೆದಿದ್ದು ನೋಡಿ ಘಾಬರಿಗೊಂಡು ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ನಲ್ಲಿರುವ ಅಲಮಾರಿಯ ಕೀಲಿ ರಾಡಿನಿಂದ ಮುರಿದಿದ್ದು ಬಾಗಿಲು ತೆರೆದಿದ್ದು ನೋಡಲಾಗಿ ಮತ್ತು ನನ್ನ ಹೆಂಡತಿಗೆ ಫೋನ್ ಮಾಡಿ ಕರೆಯಿಸಿ ಪರಿಶಿಲಿಸಲು ಅಲಮಾರಿಯಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 1,82,000/- ರೂ ಬೆಲೆಬಾಳುವಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸೈಯದ ಮುಜ್ಜಿಬ ಉಲ್ಲಾ ಖಾದರಿ ತಂದೆ ಸೈಯದ್ ಅಮೀದ್ ಉಲ್ಲಾ ಖಾದರಿ  ಸಾ: ಮ.ನಂ. 3-1023/1 ಎ/ಸಿ ಅತ್ತರಕಂಪೌಂಡ ಗಾಜಿಪೂರ ಗುಲಬರ್ಗಾದ ಇವರು ತಮ್ಮ  ಹಿರೊಹೊಂಡಾ ಸ್ಪ್ಲೆಂಡರ ಪ್ಲಸ್ ದ್ವಿಚಕ್ರ ವಾಹನ ನಂ; KA-25 W-4819 ಗ್ರೇ ಕಲರ, ಚೆಸ್ಸಿ ನಂ: 05E16C21835 ಇಂಜಿನ ನಂ: 05E15M22467 ಅ.ಕಿ 15,000/-ರೂ ಬೆಲೆಬಾಳುವದನ್ನು, ನ್ನ ದಿನನಿತ್ಯದ ಕೆಲಸದ ಸಲುವಾಗಿ ಉಪಯೋಗಿಸುತಿದ್ದು, ದಿನಾಂಕ: 12-01-2014 ರಂದು ರವಿವಾರ 4:00 ಪಿಎಮ್ ಕ್ಕೆ ಕೇಂದ್ರ ಬಸ್ ನಿಲ್ದಾಣದ ಒಳಗಡೆ ಆಟೋ ಸ್ಟ್ಯಾಂಡ ನಿಲ್ಲುವ ಸ್ಥಳದ ಹಿಂದುಗಡೆ ಫುಟಫಾತ ಮೆಲೆ ನನ್ನ ದ್ವಿಚಕ್ರ ವಾಹನ ನಿಲ್ಲಿಸಿ ಆಳಂದಕ್ಕೆ ಹೋಗಿದ್ದು ನಂತರ 6:00 ಪಿಎಮ್ ಮರಳಿ ಬಂದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿ ಚಕ್ರ ವಾಹನ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನದಿಂದ ಆಕ್ರಮ ಮರಳು ಸಾಗಿಸಿದ ಪ್ರಕರಣ :
ಫರತಾಬಾದ ಠಾಣೆ :  ಮಾನ್ಯ ಎಎಸ್‌ಪಿ ಸಾಹೇಬರು ಗ್ರಾಮಾಂತರ ಉಪ ವಿಬಾಗ ಗುಲಬರ್ಗಾರವರು ದಿನಾಂಕ: 08-03-2014  ರಂದು ರಾತ್ರಿ ವೇಳೆಯಲ್ಲಿ ನಿಮ್ಮ ಪಿಎಸ್‌‌ಐರವರಿಗೆ ಸಿಬ್ಬಂದಿಯೊಂದಿಗೆ ಹಸನಾಪೂರ ಗ್ರಾಮದ ಸೀಮಾಂತರ  ಬೀಮಾ ನದಿಯಲ್ಲಿ ಆಕ್ರಮವಾಗಿ ಕಳ್ಳತನದಿಂದ ಮರಳನ್ನು ಹಿಟಾಚಿ ಮತ್ತು ಜೆಸಿಬಿಯಿಂದ ತೆಗೆದು ಟಿಪ್ಪರನಲ್ಲಿ  ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ದಾಳಿ ಮಾಡಲು ಪಿ.ಎಸ್.ಐ ರವರಿಗೆ ತಿಳಿಸಿದ್ದು ಅವರು ಏನೂ ಕ್ರಮ ಕೈಕೊಂಡಿದ್ದಾರೆ ಅಂತಾ ಕೇಳಿದರು. ಅದಕ್ಕೆ ನಾನು ಪರಿಶೀಲಿಸಿ ನೋಡಲಾಗಿ ಪ್ರಕರಣ ದಾಖಲಾಗಿರಲಿಲ್ಲ. ಈ ವಿಷಯ ಮಾನ್ಯ ಎ.ಎಸ್.ಪಿ ಸಾಹೇಬರಿಗೆ ತಿಳಿಸಲಾಗಿ ಅದಕ್ಕೆ ಸಿಪಿಐ ಎಂಬಿ ನಗರ ವೃತ್ತ ಗುಲಬರ್ಗಾ ರವರು ಸಹ ವಿಚಾರಿಸಿದ್ದು ಅವರಿಗೆ ಇದೆ ವಿಷಯ ತಿಳಿಸಿದ್ದರ ಮೇರೆಗೆ ನನಗೆ ಕೂಡಲೇ ಸ್ಥಳಕ್ಕೆ ದಿನಾಂಕ: 8-3-2014 ರಂದು ರಾತ್ರಿ ಪಿ.ಎಸ್.ಐ ಫರಹತಾಬಾದ ರವರೊಂದಿಗೆ ಹೋದ ಸಿಬ್ಬಂಧಿಯವರಿಗೆ ವಿಚಾರಿಸಿ ಅವರೊಂದಿಗೆ ಹೋಗಿ ಅಲ್ಲಿ ಇರುವ ಆಕ್ರಮ ಮರಳು ಸಾಗಾಣಿಕೆ ಮಾಡುವ ಅಂದಿನ ದಿವಸ ಇದ್ದ   ವಾಹನಗಳನ್ನು ಜಪ್ತಿ ಮಾಡಿ ಕ್ರಮ ಕೈಕೊಳ್ಳಲು ಸೂಚಿಸಿರುತ್ತಾರೆ ಅಂತಾ ನಮಗೆ ಪಂಚರಿಗೆ ತಿಳಿಸಿ ಠಾಣೆಯಲ್ಲಿ ಇದ್ದ ಸಿಬ್ಬಂಧಿಯವರಾದ ವಿಜಯಕುಮಾರ ಸಿಪಿಸಿ 908, ಸುಬ್ಬು ನಾಯಕ ಸಿಪಿಸಿ 377 ರವರಿಗೆ ವಿಚಾರಿಸಲಾಗಿ ಅವರು ದಿನಾಂಕ: 8-3-2014 ರಂದು ರಾತ್ರಿ ಪಿ.ಎಸ್.ಐ ರವರೊಂದಿಗೆ ಮಾನ್ಯ ಎ.ಎಸ್.ಪಿ ಸಾಹೇಬರ ನಿರ್ದೇಶನದ ಮೇರೆಗೆ ಹಸನಾಪೂರ ಸೀಮಾಂತರದ ಭೀಮಾ ನದಿಯ ದಂಡೆಯ ಹತ್ತಿರ ಹೋಗಿ 1) ಒಂದು ಟಾಟಾ ಕಂಪನಿಯ  ಹಿಟಾಚಿ,  2) ಒಂದು ಜೆಸಿಬಿ  ಮತ್ತು 3) ಒಂದು ವಿಕೆಜಿ ಅಂತಾ ಬರೆದ ಟಿಪ್ಪರದಲ್ಲಿ ಆಕ್ರಮವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಬಗ್ಗೆ ಹೇಳಿದ್ದು ಅದಕ್ಕೆ ಪಿ.ಎಸ್.ಐ ಸಾಹೇಬರು ವಿಚಾರಿಸಿ ಬಂದಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಪುನಃ ನಮ್ಮೊಂದಿಗೆ ಬಂದು ಸದರಿ ಸ್ಥಳ ತೊರಿಸಲು ತಿಳಿಸಿದ್ದರಿಂದ ಅವರು ಸಹ ಒಪ್ಪಿದ್ದು ಅವರೊಂದಿಗೆ ಸದರಿ ಸ್ಥಳಕ್ಕೆ ಪೊಲೀಸ್ ವಾಹನ ಸಂಖ್ಯೆ ಕೆಎ-32 ಜಿ-430 ನೇದ್ದರಲ್ಲಿ ಹೋಗಿದ್ದು, ವಿಜಯಕುಮಾರ ಪಿಸಿ 908 ಮತ್ತು ಸುಬ್ಬು ನಾಯಕ ಪಿಸಿ 377 ರವರು ಇದೇ ಸ್ಥಳ ಇರುತ್ತದೆ ಅಂತಾ ತಿಳಿಸಿದರು. ಸ್ಥಳ ಪರಿಶೀಲನೆ ಮಾಡಲಾಗಿ ಟಾಟಾ ಹಿಟಾಚಿ ಕೆಂಪು ಬಣ್ಣದು ಸ್ಥಳದಲ್ಲಿಯೇ ಇದ್ದು ಆದರೆ ಒಂದು ಜೆ.ಸಿ.ಬಿ ಮತ್ತು ಒಂದು ಟಿಪ್ಪರ ಬಿಳಿಯ ಬಣ್ಣದ್ದು ವಿಕೆಜಿ ಅಂತಾ ಬರೆದಿದ್ದು ಸ್ಥಳದಲ್ಲಿ ಇರಲಿಲ್ಲ.  ಹಿಟಾಚಿ ಹತ್ತಿರ ಒಬ್ಬ ವ್ಯಕ್ತಿ ಇದ್ದು, ಅವನು ಪೊಲೀಸರನ್ನು ನೋಡಿ ಅಲ್ಲಿಂದ ಹೋಗಲು ಪ್ರಯತ್ನಸಿರುತ್ತಿರುವಾಗ ಸಿಬ್ಬಂಧಿಯೊಂದಿಗೆ ಎ.ಎಸ್.ಐ ರವರು ಆತನಿಗೆ ಹಿಡಿದು ವಿಚಾರಿಸಲಾಗಿ ಅವನು ತನ್ನ ಹೆಸರು ಜೆ.ಬಿ.ಚೆಲ್ಲಯ್ಯ ತಂದೆ ಎ. ಜೋಕಿನ ಸಾ: ಸಿ ಬ್ಲಾಕ್ ಎಸ್-6 ಏಷಿಯನ್ ಗಾರ್ಡನ ಗುಲಬರ್ಗಾ ಅಂತಾ ತಿಳಿಸಿ ತಾನು ರಿತೀಶ ತಂದೆ ಮಾಲಿಕಯ್ಯ ಗುತ್ತೇದಾರ ಸಾ: ಅಫಜಲಪೂರ ಹತ್ತಿರ ಮ್ಯಾನೇಜರ ಕೆಲಸ ಮಾಡಿಕೊಂಡು ಇದ್ದು ರಿತೀಶ ಗುತ್ತೇದಾರರು ಹೇಳಿದ ಮೇರೆಗೆ ನಾನು ಕಳ್ಳತನದಿಂದ ಆಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು  ದಿನಾಂಕ: 8-3-2014 ರಂದು ರಾತ್ರಿ ಇದ್ದ ಹಿಟಾಚಿ ಸ್ಥಳದಲ್ಲಿ ಇದದ್ದು ತೋರಿಸಿದ್ದು ಅದರ ಅಪೇರಟರ ವಿಜಯಕುಮಾರ ಅಂತಾ ಹೇಳಿದನು ಮತ್ತು ಅಂದಿನ ದಿವಸ ವಿಕೆಜಿ ಅಂತಾ ಬರೆದ ಟಿಪ್ಪರನಲ್ಲಿ 3 ಲೋಡ ಮರಳು ಅ.ಕಿ. 60,000=00 ರೂ. ದ್ದು ಕಳ್ಳತನದಿಂದ ಆಕ್ರಮವಾಗಿ ಸಾಗಿಸಿದ್ದು ಇರುತ್ತದೆ ಅಂತಾ ತಿಳಿಸಿದನು. ನಂತರ ಜೆ.ಸಿ.ಬಿ ಮತ್ತು ಟಿಪ್ಪರ ಬಗ್ಗೆ ವಿಚಾರಿಸಲು ಅವುಗಳನ್ನು ಬೇರೆ ಕಡೆ ಕೆಲಸಕ್ಕೆ ಕಳುಹಿಸಿರುವುದ್ದಾಗಿ ತಿಳಿಸಿದನು. ಮತ್ತು ಅವರ ಹೆಸರುಗಳು ಗೊತ್ತಿರುವುದಿಲ್ಲ ಅಂತಾ ತಿಳಿಸಿದ್ದರಿಂದ ನಾವು ಪಂಚರು ಸ್ಥಳದಲ್ಲಿ ಇದ್ದ ಟಾಟಾ ಹಿಟಾಚಿ ಪರೀಶಿಲಿಸಲು ಅದು ಕೆಂಪು ಬಣ್ಣದು ಇದ್ದು, ಅದರ ಅ.ಕಿ. 8,00,000=00 ರೂ. ಆಗಬಹುದು. ಹಿಟಾಚಿ ಡ್ರೈವರ ಇರದೆ ಇದ್ದ ಪ್ರಯುಕ್ತ ಅದನ್ನು ಸ್ಥಳದಲ್ಲಿಯೇ ಬಿಟ್ಟು  ಠಾಣೆಗೆ ಬಂದು ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ಶ್ರೀ ಚಿತಂಬರಾವ ತಂದೆ ಹುಲೆಪ್ಪಾ ಮೇತ್ರಿ, ಸಾಃ ಮ.ನಂ. 103, ಮಹಾಲಕ್ಷ್ಮಿ ಲೇಔಟ, ನೆಹರು ಗಂಜ ಗುಲಬರ್ಗಾ ರವರು  ದಿನಾಂಕ 11-03-2014 ರಂದು ಫಿರ್ಯಾದಿ ತನ್ನ ಮೋಟಾರ ಸೈಕಲ ನಂ. ಕೆ.ಎ 32 ವಿ4889 ನೇದ್ದರ ಮೇಲೆ ತನ್ನ ಮಗನಾದ ಶರಣಬಸ್ಪಪಾ ಈತನನ್ನು ಹಿಂದೆ ಕೂಡಿಸಿಕೊಂಡು ಮನೆಯಿಂದ ಸುಪರ ಮಾರ್ಕೆಟಕ್ಕೆ ಹೋಗುವ ಕುರಿತು ಹುಮನಾಬಾದ ರೋಡಿಗೆ ಇರುವ ದರ್ಬಾರ ಹೋಟೆಲ ಮುಂದೆ ಹೋಗುತ್ತಿದ್ದ ಆರೋಪಿ ಅಕ್ರಮಶಾ ತಂದೆ ಜಾಫರಶಾ ಈತನು ತನ್ನ ಟಾಟಾ ಎ.ಸಿ.ಇ ನಂ. ಕೆ.ಎ 37 8662 ನೇದ್ದನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಫಿರ್ಯಾದಿಗೆ ಮತ್ತು ಹಿಂದೆ ಕುಳಿಯ ಶರಣಬಸಪ್ಪಾ ಈತನಿಗೆ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀ ದಸ್ತಗೀರ ತಂದೆ ಮುರ್ತುಜಾ,  ಸಾಃ ರಾಜೀವ ಗಾಂಧಿ ನಗರ ಗುಲಬರ್ಗಾ ರವರು ದಿನಾಂಕ 10-03-2014 ರಂದು 8-00 ಪಿ.ಎಮ್ ಕ್ಕೆ  ರಾಜೀವ ಗಾಂಧಿ ನಗರದಲ್ಲಿರುವ ನಂಜೇಶ್ವರ ಗುಡಿಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಸಿದ್ರಾಮ ತಂದೆ ಶ್ರೀಮಂತ ಜಮಾದಾರ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 ಇ.ಬಿ 888 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತಾನು ಸಹ ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಫಿರ್ಯಾದಿ ಮತ್ತು ಆರೋಪಿ ಇಬ್ಬರು ಗಾಯಹೊಂದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.