POLICE BHAVAN KALABURAGI

POLICE BHAVAN KALABURAGI

08 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 07-02-2014 ರಂದು ಠಾಣೆಯ ಜೀಪ ನಂ. ಕೆ.ಎ 32, ಎಮ 1760 ನೇದ್ದರಲ್ಲಿ ನಾನು ಹಾಗೂ ಠಾಣೆಯ ಸಿಬ್ಬಂಧಿಯವರಾದ ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ 1830 ಗಂಟೆ ಸುಮಾರಿಗೆ ನಿಂಬರ್ಗಾ ಗ್ರಾಮದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಶ್ರೀ ದತ್ತಾತ್ರೇಯ ಎ.ಎಸ್.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ಫೊನ ಮುಖಾಂತರ ತಿಳಿಸಿದ್ದೇನೆಂದರೆ ನಿಂಬರ್ಗಾ ಗ್ರಾಮದಲ್ಲಿನ ಮೌಲಾ ನಗರದಲ್ಲಿಯ ಅಂಬೇಡ್ಕರ ಶಾಲೆಯ ಹಿಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಕೊಟ್ಟ ಮೇರೆಗೆ ಕೂಡಲೇ ನಾವಿಬ್ಬರು ಗ್ರಾಮದ ಅಂಬೇಡ್ಕರ ಸರ್ಕಲ ಹತ್ತಿರ ಜೀಪ ನಿಲ್ಲಿಸಿದ್ದು ಡಿ.ಸಿ.ಐ.ಬಿ ಘಟಕದ ಶ್ರೀ ದತ್ತಾತ್ರೇಯ ಎ.ಎಸ್.ಐ, ಶ್ರೀ ಶಿವಯೋಗಿ ಹೆಚ್.ಸಿ 220ಶ್ರೀ ಪ್ರಕಾಶ ಹೆಚ್.ಸಿ 370, ಅಂಬಾರಾಯ ಹೆಚ್.ಸಿ 54,ಮಲ್ಲಿಕಾರ್ಜುನ ಸಿ.ಹೆಚ್.ಸಿ 58, ಚಂದ್ರಕಾಂತ ಹೆಚ್.ಸಿ 78 ನಮ್ಮನ್ನು ಬಂದು ಸೇರಿಕೊಂಡರು ಆಗ ಇಬ್ಬರು ಪಂಚರನ್ನು ಬರಮಾಡಿಕೊಂಡು ಶ್ರೀ ಯು.ಶರಣಪ್ಪ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ ಸಿಬ್ಬಂಧಿಯೊಂದಿಗೆ ಬಾತ್ಮಿ ಬಂದ ಸ್ಥಳವಾದ ನಿಂಬರ್ಗಾ ಗ್ರಾಮದ ಮೌಲಾ ನಗರದಲ್ಲಿರುವ ಅಂಬೇಡ್ಕರ ಶಾಲೆಯ ಹಿಂದೆ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಬೀದಿ ದೀಪದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವ ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ನೂರಂದ ತಂದೆ ಸೈಬಣ್ಣ ಟಪ್ಪಾ  ಸಾ|| ನಿಂಬರ್ಗಾ ಗ್ರಾಮ ದವನನ್ನು ದಸ್ತಗೀರ ಮಾಡಿ ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 3620/-02. ಎರಡು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ವಿಲಾಸ ತಂದೆ ಮೋಹನ ಚಂದ್ರ ಬಸ್ತಾಳಕರ ಸಾ|| ಹೊನ್ನಕಿರಣಗಿ ತಾ|| ಜಿ|| ಗುಲಬರ್ಗಾ ಇದ್ದು  ನಮ್ಮ ಬ್ಲೂಡಾರ್ಟ ಎಕ್ಸಪ್ರೆಸ್ ಆಪೀಸದಿಂದ ಸುಮಾರು 8,13,717/- ರೂ ಬೆಲೆಬಾಳುವ  ಆನ್ ಲೈನ ಶಾಪಿಂಗ ದಿಂದ ಮೋಬೈಲ್. ಲ್ಯಾಪಟಾಪ. ಬಟ್ಟೆಗಳು, ಬಂದಿದ್ದು ಅವುಗಳನ್ನು ವಿತರಣೆಗಾಗಿ ಇಟ್ಟಿದ್ದವುಗಳು ದಿನಾಂಕ; 16-01-2014 ರಂದು 5 ಪಿ ಎಮ್‌ ದಿಂದ ದಿನಾಂಕ; 17-01-20148;40 ಎಎಮ್ ಅವದಿಯಲ್ಲಿ ಯಾರೋ ಕಳ್ಳರು ಶಟರ್ ತೆಗೆದು ನಮ್ಮ ಆಫೀಸದಿಂದ ಕಳ್ಳತನ ಮಾಡಿಕೊಂಡು ಹೊಗಿದ್ದು ಅದೆ ಕಾರಣ ಈ ಬಗ್ಗೆ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕ್ರಮ ಜರುಗಿಸಿ ನಮ್ಮ ಆಫೀಸದಿಂದ ಕಳ್ಳತನವಾದ ಆನ್ ಲೈನ ಶಾಪಿಂಗದಿಂದ ಬಂದಂತಹ 8,13,717/- ರೂ ಬೆಲೆಬಾಳುವ ವಸ್ತುಗಳನ್ನು ಮರಳಿ ಕೊಡಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ವಿಜಯಕುಮಾರ ತಂ ಪ್ರಭು ಚವ್ಹಾಣ ಸಾ|| ಮಹಾಗಾಂವ ತಾಂಡ ರವರ ಮಗಳಾದ ಮಮೀತಾ ಇವಳು ದಿನಾಂಕ 07-02-2014 ರಂದು ಮಮೀತಾ ಇವಳು ಶಾಲೆಗೆ ಹೋಗಿ ಮನೆಗೆ ಬಂದಿದ್ದು ಅವಳು ನಮ್ಮ ಮನೆಯ ಪಕ್ಕದಲ್ಲಿದ್ದ ವಿಠಲ ಚೋಕಲಾ ಇತನ ಮನೆಯ ಹಿಂದೆ ರಸ್ತೆಯ ಮೇಲೆ ಆಟ ಆಡುತ್ತಿದ್ದಳು ಅಲ್ಲೆ ರಸ್ತೆಯ ಪಕ್ಕ ತಾನು ಹಾಗೂ ತನ್ನ ತಾಂಡಾದ ಭೀಮಶ್ಯಾ ತಂ ಸಿತಾರಾಮ ಚವ್ಹಾಣ ಮಾತಾಡುತ್ತಾ ನಿಂತ್ತಿದ್ದು ಸೂಮಾರು 4.45 ಪಿ,ಎಮ್,ಕ್ಕೆ ಮಹಾಗಾಂವ ಕ್ರಾಸ ಕಡೆಯಿಂದ ಒಂದು ಪಿಯಾಗೋ ಎಪ್ ಟಂಟಂ ಗೂಡ್ಸ ವಾಹನದ ಚಾಲಕನು ತನ್ನ ವಶದಲ್ಲಿದ್ದ ವಾಹನವನ್ನು ಅತಿವೇಗ ಮತ್ತು ಅಲಕ್ಷತನಿದಂದ ಚಲಾಯಿಸಿಕೊಂಡು ಬಂದವನೆ ರಸ್ತೆಯ ಮೇಲೆ ಆಟ ಆಡುತಿದ್ದ ತನ್ನ ಮಗಳಾದ ಮಮೀತಾ ಇವಳಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದರಿಂದ ತನ್ನ ಮಗಳು ಚೀರಾಡಿ ಕುಸಿದು ಕೆಳಗೆ ಬಿದ್ದಾಗ ತಾನು ಹಾಗೂ ಬೀಮಶ್ಯಾ ಇಬ್ಬರೂ ಓಡಿ ಹೋಗಿ ನೋಡಲಾಗಿ ಮಮೀತಾಳ ಮೂಗಿನಿಂದ ರಕ್ತ ಬಂದಿದ್ದು ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದು ಮಮೀತಾ ಮಾತನಾಡಲಿಲ್ಲಾ ತಲೆಗೆ ಆದ ಭಾರಿ ರಕ್ತಗಾಯ ಮತ್ತು ಒಳಪೆಟ್ಟಿನಿಂದ ಅವಳು ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಟಂಟಂ ನಂ ನೋಡಲಾಗಿ ಅದು ಪಿಯಾಗೋ ಎಪ್, ಕಂಪನೀಯ ಗೂಡ್ಸ ಟಂಟಂ ನಂ ಕೆ,ಎ, 32 ಎ, 9507 ಅಂತಾ ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವೀರಭದ್ರಪ್ಪ ತಂದೆ ಮಲಕಣ್ಣಾ ಬಾಳದ  ಸಾ:ಟೆಂಗಳಿ ತಾ:ಚಿತ್ತಾಪೂರ ಹಾ:ವ: ದೇವಿ ನಗರ ಗುಲಬರ್ಗಾ ರವರು  ದಿನಾಂಕ 17-02-2014  ರಂದು ಮಧ್ಯಾಹ್ನ 2=15 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ವಾಯಿ 8340 ನೆದ್ದರ ಮೇಲೆ ಎಲ್.ಐ.ಸಿ.ಆಫೀಸ್ ನಿಂದ ಶಹಾಬಜಾರ ನಾಕಾ ಮುಖಾಂತರ ನಿಧಾನವಾಗಿ ಮೋ/ಸೈಕಲ್ ಚಲಾಯಿಸಿಕೊಂಡು ದೇವಿನಗರ ಕಡೆಗೆ ಹೋಗುವಾಗ ಖಾದ್ರಿ ಚೌಕ ದಾಟಿ ಸಂತೋಷ ಕಾಲೋನಿ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ: ಕೆಎ 32 ಬಿ 5423 ರ ಚಾಲಕನ ಅತಿವೇಗವಾಗಿ ಮತ್ತು ಅಲಕ್ಷತನದಿಂದ ರಾಂಗ ಸೈಡಿನಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಪೆಟ್ಟುಗೊಳಿಸಿ ತನ್ನ ಅಟೋರೀಕ್ಷಾ ಅಲ್ಲೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

07 February 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 06-02-2014 ರಂದು ಹಿತ್ತಲ ಶಿರೂರ ಗ್ರಾಮದ ಹರಿಜನವಾಡಾದಲ್ಲಿರುವ ಸಮುದಾಯ ಭವನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಹಾರ ಎಂಬ ಇಸ್ಪೀಟ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೆರೆಗೆ ನಾನು ಸಿಬ್ಬಂಧಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಮೂರಜನರನ್ನು ಹಿಡಿದಿದ್ದು 1. ಪಾಂಡುರಂಗ ತಂದೆ ಪ್ರಭು ಕಾಮನಕರ 2. ಶಿವಲಿಂಗ ತಂದೆ ಶಿವಪ್ಪ ಚಿಕಣಿ   3. ಸಂಜು ತಂದೆ ಮೌಲಪ್ಪ ಕಾಮನಕರ ಸಾ|| ಎಲ್ಲರು ಹಿತ್ತಲ ಶಿರೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 615/- ಜಪ್ತಿಮಾಡಿಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 06.02.2014  ರಂದು ಬೆಳಿಗ್ಗೆ 1030 ಗಂಟೆಗೆ ಟ್ರ್ಯಾಕ್ಟರ ನಂ ಕೆ.ಎ.32ಟಿ.ಎ.5429,5430 ನೇದ್ದರ ಚಾಲಕನಾದ ರಾಯಪ್ಪ ಈತನು ತಾನ ಚಲಾಯಿಸುತ್ತಿದ್ದ ಟ್ರ್ಯಾಕ್ಟರನ್ನು ಹುಮನಾಬಾದ ಬೇಸ್ ಕಡೆಯಿಂದ ರೋಡಿನಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರ ನಂಬರ ಕೆ.ಎ.32 ಎಮ್ 4152 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಕಾರ ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುತ್ತದೆ ಅಪಘಾತದಲ್ಲಿ ಅಟೋರಿಕ್ಷಾಕ್ಕೆ ಹಿಂಬದಿಯಲ್ಲಿ ನೆಗ್ಗಿದ್ದು ಮತ್ತು ಕಾರಿನ ಹಿಂಬದಿ ನೆಗ್ಗಿದ್ದು ಹಿಂಬದಿಯ ಪೂರ್ನಗ್ಲಾಸ್ ಒಡೆದು ಹೋಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ05-02-14 ರಂದು  ರಾತ್ರಿ 07-30 ಸುಮಾರಿಗೆ ದಿನಸಿ[ಕೆ] ತಾಂಡಾದಲ್ಲಿ  ನಳದ  ನೀರು ಬಿಟ್ಟಿದ್ದುಠಕ್ಕಾಬಾಯಿ ಗಂಡ ಮೋತಿರಾಮ ರಾಠೋಡ ಸಾ;ದಿನಸಿ[ಕೆ] ತಾಂಡಾ ತಾ;ಜಿ: ಗುಲಬರ್ಗಾ ರವರು ನೀರು ತುಂಬಿಕೊಂಡು ಹೋಗಿ  ಪಾಳಿಯಲ್ಲಿ ನಿಂತುಕೊಂಡಾಗ ಕವಿತಾ ಗಂಡ ಬಸವರಾಜ  ರಾಠೋಡ ಸಂಗಡ ಇಬ್ಬರೂ ಸಾ;ಎಲ್ಲರೂ ದಿನಸಿ[ಕೆ] ತಾಂಢಾ  ತಾ;ಜಿ: ಗುಲಬರ್ಗಾ  ಪಾಳಿಯಲ್ಲಿ ನಿಲ್ಲದೇ ನೀರು   ತುಂಬಿಕೊಂಡು   ಹೋರಟಾಗ  ನಾನು ಕೇಳಿದ್ದಕ್ಕೆ  ಫೀರ್ಯಾದಿಗೆ ಹೊಡೆ ಬಡೆ ಮಾಡಿ ಅವಾಚ್ಯ  ಬೈಯ್ದು  ಜೀವದ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಕಮಲಾಪೂರ ಠಢಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನರೋಣಾ ಠಾಣೆ : ಶ್ರೀ ಹೂವಪ್ಪಾ ತಂದೆ ದಾನಪ್ಪಾ @ ದಾನನೂರ ನಿಗ್ಗಡಗಿ ಸಾ :ಜವಳಗಾ ಬಿ ರವರ ಹೆಂಡತಿಯಾದ ಮಹಾನಂದ ಗಂಡ ದಾನಸೂರ @ ದಾನಪ್ಪ ನಿಗ್ಗುಡಗಿ ವಯ;23 ವರ್ಷ ಇವಳನ್ನು ದಿನಾಂಕ 31-01-2014 ರಂದು ರಾತ್ರ 9 ಗಂಟೆಯ ಸುಮಾರಿಗೆ ಮಹೇಶ ತಂದೆ ಚಂದ್ರಶಾ ಹೊಳ್ಕರ ಇವನು ತನ್ನ ಜೀಪ ನಂ ಎಪಿ 01 ಟಿ 6677 ನೇದ್ದರಲ್ಲಿ ಜಬರದಸ್ತಿ ಎಳೆದುಕೊಂಡು ಹೋಗುವಾಗ ನಾನು ಮತ್ತು ನನ್ನ ತ್ತಮ ಅಣ್ಣ ಹಾಗು ಅಣ್ಣನ ಹೆಂಡತಿ ಬಿಡಿಸಿಕೊಳ್ಳು ಹೋದರೆ ನಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ನನ್ನ ಹೆಂಡತಿಯನ್ನು ಜಬರದಸ್ತಿ  ಎಳೆದುಕೊಂಡು ಜೀಪನಲ್ಲಿ ಹಾಕಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

06 February 2014

Gulbarga District Reported Crimes

ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಜೈನೋದ್ದೀನ್ ತಂ, ಶಿರಾಜೋದ್ದೀನ್ ಶೇಖ್  ಸಾ||ಚಿಂಚೋಳಿ ಹಾ||||ಮೀಲತ್ ನಗರ ಗುಲಬರ್ಗಾ ದಿನಾಂಕ 04-01-2014 ರಂದು ಸಾಯಂಕಾಲ 4:00 ಗಂಟೆಗೆ ತನ್ನ  ಗೆಳೆಯನಾದ ಶೇಖ ಅಹ್ಮದ ತಂ, ಅಬ್ದುಲ್ ರಶೀದ ಶೇಖ್ ಇಬ್ಬರೂ ಕೂಡಿ ತಮ್ಮ ಗೆಳೆಯನ ಡಿಸ್ಕವರಿ ಮೋಟಾರ ಸೈಕಲ್ ನಂ: ಕೆ.ಎ-32-ವಾಯ್-5451 ನೇದ್ದನ್ನು ತೆಗೆದುಕೊಂಡು ನಾಗೂರು ಗ್ರಾಮಕ್ಕೆ ಗೆಳೆಯನ ಹತ್ತಿರ ಮಾತನಾಡಲಿಕ್ಕೆಂದು ಹೋಗಿ ಅಲ್ಲಿ ಮಾತನಾಡಿಸಿ ಮರಳಿ ಸಾಯಂಕಾಲ 7:30 ಪಿ.ಎಮ್ ಕ್ಕೆ ಅದೇ ಮೋಟಾರ ಸೈಕಲ್ ಮೇಲೆ ಕುಳಿತು ಗುಲಬರ್ಗಾಕ್ಕೆ ಹೊರಟ್ಟಿದ್ದು ಶೇಖ್ ಅಹ್ಮದ ಇತನು ಸದರ ಮೋಟಾರ ಸೈಕಲ್ ಚಲಾಯಿಸುತ್ತಿದ್ದು ಮಹಾಗಾಂವ ಕ್ರಾಸ ಹತ್ತಿರದ ಚಿಂಚೋಳಿ ರೋಡಿನ ಮೇಲೆ ತೋಟದ ಹತ್ತಿರ 7:30 ಪಿ.ಎಮ್ ಕ್ಕೆ ಶೇಖ್ ಅಹ್ಮದ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ್ ನ್ನು ರೋಡಿನ ಎಡಗಡೆಯಿಂದ ಸಾಹುಕಾಶವಾಗಿ ಚಲಾಯಿಸಿಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಒಬ್ಬ ಟಂಟಂ ನಂ; ಕ.ಎ-32-ಬಿ-1207 ನೇದ್ದರ ಚಾಲಕನು ತನ್ನ ಟಂಟಂ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ತಮ್ಮ ಮೋಟಾರ ಸೈಕಲ್ ಡಿಕ್ಕಿ ಹೊಡೆದಿದ್ದರಿಂದ ನನ್ನ ಬಲಗಾಲ ಮೊಳಕಾಲಿಗೆ ಬಾರಿರಕ್ತಗಾಯ ವಾಗಿದ್ದು ಶೇಖ ಅಹ್ಮದನಿಗೆ ಸಾಧಾಸ್ವರೂಪದ ಗಾಯಗಳಾಗಿ ರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.