POLICE BHAVAN KALABURAGI

POLICE BHAVAN KALABURAGI

23 August 2012

GULBARGA DISTRICT REPORTED CRIMES


ಅಶೋಕ ನಗರ ಪೊಲೀಸರ ಕಾರ್ಯಚರಣೆ ಮೋಸ ಮಾಡಿ ಬಂಗಾರ ಕಳ್ಳತನ ಮಾಡುವವರ ಬಂದನ:

ಗುಲಬರ್ಗಾ ನಗರದ ವಿದ್ಯಾನಗರದ ಕಾಂಬ್ಳೆ ಬಿಲ್ಡಿಂಗದಲ್ಲಿ ಬಾಡಿಗೆ ರೂಮದಲ್ಲಿರತುವ ನನ್ನ ರೂಮಿನ ಪಕ್ಕದಲ್ಲಿ 8 ದಿವಸದ ಹಿಂದೆ  ನಿರ್ಮಲಾ ಎನ್ನುವ ಹೆಣ್ಣುಮಗಳು ತಾನು ನರ್ಸ ಕೆಲಸ ಮಾಡಿಕೊಂಡುರುವುದಾಗಿ ಹೇಳಿ  ಬಾಡಿಗೆ ರೂಮಿನಲ್ಲಿ ಇದ್ದು,  ದಿನಾಂಕ 08/08/2012 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಹತ್ತಿರ ಬಂದು  ಫೋಟೊ ತೆಗೆಸಿಕೊಂಡು ಬರುವುದಾಗಿ ಹೇಳಿ ನಂಬಿಸಿ, ನನ್ನ  ಹತ್ತಿರ ಇದ್ದ ಬಂಗಾರದ ಕಿವಿ ಹೂವುಗಳು,  ಬಂಗಾರದ ಜೈನ  ಒಟ್ಟು 24,000/- ರೂಪಾಯ ಮೌಲ್ಯದ ವಡವೆಗಳನ್ನು ಮೊಸದಿಂದ ಕಳ್ಳತನ ಮಾಡಿಕೊಂಡು ಹೊಗಿರುತ್ತಾಳೆ. ಅಂತಾ ಕು|| ಮೀರಾ ತಂದೆ ಭೀಮಶ್ಯಾ ನಾಯ್ಕೊಡಿ ಸಾ: ಹೂವಿನಹಳ್ಳಿ ತಾ: ಅಫಜಲಪೂರ  ಇವಳು ಗುಲಬರ್ಗಾ ನಗರದಲ್ಲಿಯ ಓಂ ಕಾರ ಡಿಸ್ಟ್ರಿಬೂಟರದಲ್ಲಿ ಕಂಪ್ಯೂಟರ ಕೆಲಸ ರವರು ದೂರು ನೀಡಿದ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ. 420, 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. . ಪ್ರಕರಣದ  ತನಿಖೆ ಕೈಕೊಂಡ ಶ್ರೀ. ಟಿ.ಹೆಚ್‌.ಕರಿಕಲ್‌, ಪಿಐ  ಮತ್ತು ಸುರೇಶ  ಪಿಸಿ 1150,  ಬಸವರಾಜ ಪಿಸಿ 05,  ಉಮಣ್ಣ ಪಿಸಿ 118, ಶಂಕರಲಿಂಗ ಪಿಸಿ 1673,  ಉಮೇಶ ಪಿಸಿ 30 ರವರನ್ನೊಳಗೊಂಡ ತಂಡವು   ಘಟನಾ ಸ್ಥಳದಲ್ಲಿ ದೊರೆತ ಸಣ್ಣ ಕುರುಹು ಆಧಾರದ ಮೇಲಿಂದ, ಪೊಲೀಸ ತಂತ್ರಜ್ಞಾನದ ಸಹಾಯ ತೆಗೆದುಕೊಂಡು,  ದಿನಾಂಕ 13/08/2012 ರಂದು  ಮೋಸ ಮಾಡಿ ಬಂಗಾರ ಕಳ್ಳತನ ಮಾಡಿಕೊಂಡು ಹೊಗಿರುವ  ನಿರ್ಮಲಾ @ ಅಂಬಿಕಾ  ಗಂಡ ಅಂಬರೀಶ ಕೊಂಡ ಇವಳಿಗೆ ಪತ್ತೆ ಹಚ್ಚಿ, 10,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಕಿವಿ ಹೂವುಗಳನ್ನು ವಶಪಡಿಸಿಕೊಂಡು , ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಮತ್ತು ಇವಳ ಸಹಚರ  ಅಂಬರೀಶ ತಂದೆ ಸೈಬಣ್ಣ ಕೊಂಡ ಸಾ: ವಕೀಲ ಕಾಲೋನಿ ಗುಲಬರ್ಗಾ ಎನ್ನುವಳಿಗೆ ದಿನಾಂಕ 21/08/2012 ರಂದು ದಸ್ತಗಿರಿ ಮಾಡಿ, ಬಂಗಾರದ ಚೈನ ಹಾಗು  ಅಪರಾಧಕ್ಕೆ ಬಳಸಿದ  ಕರಿಸ್ಮಾ  ದ್ವಿಚಕ್ರ ವಾಹನ ನಂ. ಕೆಎ-32 ವಿ-5961 ಹೀಗೆ ಒಟ್ಟು 50,000/- ರೂಪಾಯಿ ಮೌಲ್ಯದ  ವಸ್ತುಗಳನ್ನು ವಶಡಿಸಿಕೊಂಡು, ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.  ಈ ರೀತಿ ಮೊಸ ಮಾಡಿ ಕಳ್ಳತನ ಮಾಡುವ ಆರೋಪಿತರ ಜಾಲ ಪತ್ತೆ ಹಚ್ಚಿದ್ದು, ಇನ್ನೊಬ್ಬ ಆರೋಪಿ ತಲೆ ನಾಪತ್ತೆಯಾಗಿದ್ದು, ತನಿಖೆ ಜಾರಿಯಲ್ಲಿರುತ್ತದೆ.  ಪತ್ತೆ ಮಾಡಿದ ಸಿಬ್ಬಂಧಿಯವರ ಕಾರ್ಯವನ್ನು ಮಾನ್ಯ ಶ್ರೀ. ಭೂಷಣ ಬೊರಸೆ  ಎ.ಎಸ್‌.ಪಿ  (ಎ) ಉಪ ವಿಭಾಗ ಗುಲಬರ್ಗಾ ರವರು ಶ್ಲಾಘನೆ ಮಾಡಿರುತ್ತಾರೆ.

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಪೊಲೀಸ್ ಠಾಣೆ : ಶ್ರೀ ಮಹ್ಮದ ಜಾಫರ ಅಲಿ ತಂದೆ ಅಬ್ದುಲ ಅಹ್ಮದ ಸಾಬ ವ|| 38,  ಉ|| ಖಾಸಗಿ ಕೆಲಸ, ಸಾ|| ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್  ಗುಲಬರ್ಗಾ ರವರು ನಮ್ಮ ಮನೆಯವರೆಲ್ಲರೂ ಕೂಡಿಕೊಂಡು ದಿನಾಂಕ 15-08-2012 ರಂದು ಬೆಂಗಳೂರಿಗೆ ಹೋಗಿರುದ್ದೆವು. ದಿನಾಂಕ 21-08-2012 ರಂದು ಮಧ್ಯಾಹ್ನ 1.30 ಗಂಟೆಗೆ ತಮ್ಮ ಮನೆಯ ಮುಂದಿನ ಮನೆಯವರಾದ ಶ್ರೀ ಉಬೇದ ಉಲ್ಲಾ ರವರು ಮೋಬಾಯಿಲ್ ಗೆ ಕರೆ ಮಾಡಿ  ನಿಮ್ಮ ಮನೆಯ ಬಾಗಿಲು ತೆರೆದಿದೆ  ಅಂತಾ ತಿಳಿಸಿದ್ದು, ನಾನು ಸದರಿಯವರಿಗೆ ಒಳಗೆ ಹೋಗಿ ನೋಡಲು ಹೇಳಿದಾಗ  ಸದರಿ ಉಬೇದ ಉಲ್ಲಾ ಇವರು ನಮ್ಮ ಮನೆಯೊಳಗೆ ಎಲ್ಲಾ ಸಾಮಾನು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ  ಅಂತಾ ತಿಳಿಸಿರುತ್ತಾರೆ. ನಾವು  ದಿನಾಂಕ 22-08-2012 ರಂದು ಬೆಂಗಳೂರಿನಿಂದ  ಬಂದು ನೋಡಲು ಮನೆಯಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅಲಮಾರಿಯಲ್ಲಿಟ್ಟಿದ್ದ   35,000/- ರೂ. ನಗದು ಹಣ, ಬಂಗಾರದ ಕಿವಿರಿಂಗ್   ಅ|| ಕಿ|| 3600/-,ಒಂದು ಗ್ಯಾಸ ಸಿಲೆಂಡರ್  ಅ|| ಕಿ|| 1200/-,ಒಂದು ಇನ್ ವೇಟರ್‌ ಅ|| ಕಿ|| 6000/-.ಸೀರೆಗಳು  ಅ|| ಕಿ|| 4000/-ರೂ, ಹೀಗೆ ಒಟ್ಟು 49,800/-ರೂಗಳು ನೇದ್ದವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 61/12 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ ಬಾಬುರಾವ ತಂದೆ ಹಣಮಂತಪ್ಪ ನೇಲೋಗಿ ಸಾ|| ಶಿವಸಾಗರ ಎಲೇಟ್ರಾನಿಕ ಪಾಲ ಕಾಂಪ್ಲೇಕ್ಸ್ ಸಿ,ಟಿ ಬಸಸ್ಟ್ಯಾಂಡ ಎದರುಗಡೆ ಗುಲಬರ್ಗಾ ರವರು ನಾವು ಮತ್ತು ನನ್ನ ಗೆಳೆಯರು ಕೂಡಿಕೊಂಡು ದಿನಾಂಕ: 20/08/2012 ರಂದು ರಾತ್ರಿ 00-40 ಗಂಟೆ ಸುಮಾರಿಗೆ ಸುಪರ ಮಾರ್ಕೆಟದ ಗೌರಿ ಸಾರಿ ಸೆಂಟರ ಎದರುಗಡೆ ಗೆಳೆಯರ ಜೋತೆ ನಿಂತು ಮಾತನಾಡುವಾಗ ನನ್ನ  ಜೇಬಿನಲ್ಲಿ ಇದ್ದ 32000/- ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂ:103/12 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ  ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 August 2012

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ಬಕ್ಕಣ್ಣಾ ತಂದೆ ಗುಂಡಪ್ಪ ಕೋಡ್ಡಿನ ಸಾ: ಉಡಬಾಳ ತಾ: ಹುಮ್ನಾಬಾದ ಹಾ:ವ: ಪಂಡಿತ ದೀನ ದಯಾಳ ಕಾಲೋನಿ ಗುಲಬರ್ಗಾ ರವರು, ದಿ: 21-08-12 ರಂದು ಸಂಜೆ 7-00 ಗಂಟೆ ಸುಮಾರಿಗೆ ನನ್ನ ಟಿವಿಎಸ್ ಗಾಡಿ ಕೆಎ 33 ಜೆ 5721 ನೇದ್ದರಲ್ಲಿ ಹುಮನಾಬಾದಕ್ಕೆ ಹೋಗಿ ಮರಳಿ ಮನೆಯ ಕಡೆ ಎಡ ಬದಿ ರೋಡ ಸೈಡ ಹಿಡಿದುಕೊಂಡು ರುಕುಂತೋಲಾ ದರ್ಗಾ ಇನ್ನೂ ಫರ್ಲಾಂಗ ಸ್ವಲ್ಪ ಮುಂದೆ ಇರುವಂತೆ ಒಂದು ದಾಲಮಿಲ್ಲ ಹೆಸರು ಗೊತ್ತಿಲ್ಲಾ ಎದುರಿನ ರೋಡಿನ ಮೇಲೆ ಹೊರಟಾಗ ಎದುರುನಿಂದ ರುಕುಂತೋಲಾ ದರ್ಗಾ ಕಡೆಯಿಂದ ಆಟೋ ರಿಕ್ಷಾ ಕೆಎ 32 ಬಿ 3038 ಚಾಲಕ ಅಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಮೋಟಾರ ಸೈಕಲಿಗೆ ಅಪಘಾತಪಡಿಸಿ ಗಾಯಗೊಳಿಸಿ, ಆಟೋ ಅಲ್ಲಿಯೇ ನಿಲ್ಲಿಸಿ ಓಡಿಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 272/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಎಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಹರೀಶ ತಂದೆ ಚಂದಪ್ಪ ದೊಡಮನಿ ಸಾ: ಕಾಂತ ಕಾಲೋನಿ ಗುಲಬರ್ಗಾ ರವರು, ದಿನಾಂಕ 20-08-12 ರಂದು ಸಾಯಂಕಾಲ 7-30  ಗಂಟೆಗೆ ಆರ್.ಪಿ ಸರ್ಕಲ ದಿಂದ ರಾಮಮಂದಿರ ರೋಡ ಮೇಲೆ ಯಾತ್ರಿಕ ನಿವಾಸ ಎದುರಿನ ಬಿ.ಹೆಚ್ ಪಾಟೀಲ ಆಸ್ಪತ್ರೆ ಎದುರುಗಡೆ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ಈತನು ತನ್ನ ಮೋಟಾರ ಸೈಕಲ ನಂ ಕೆಎ-39 ಜೆ-3912 ನೇದ್ದರ ಮೇಲೆ ನನ್ನನ್ನು ಕೂಡಿಸಿಕೊಂಡು ರಾಮಮಂದಿರದಿಂದ ಮನೆಗೆ ಬರುವಾಗ ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದಾಗ ನಾನು ನಿಧಾನವಾಗಿ ಚಲಾಯಿಸಿಲು ತಿಳಿಸಿದರು ಕೂಡಾ ಕೇಳದೆ ಅತೀವೇಗದಿಂದ ಚಲಾಯಿಸಿ ಎದುರುಗಡೆ ಬರುತ್ತಿರುವ ಮೋಟಾರ ಸೈಕಲನ್ನು ನೋಡಿ ಕಟ್ ಹೊಡಿದು ಒಮ್ಮೆಲೆ ಬ್ರೇಕ ಹಾಕಿ ಮೋ/ಸೈಕಲ ಕೆಳಗೆ ಕೆಡುವಿದರಿಂದ ವಿಜಯಕುಮಾರ ತಂದೆ ರಾಮಣ್ಣಾ ಸಾಗರ ನು ಕೆಳಗಡೆ ಬಿದ್ದು ತಲೆಗೆ ಭಾರಿ ಪೆಟ್ಟು ಬಿದ್ದು ಸ್ಥಳದಲ್ಲಿ ಮಾತನಾಡಲಿಕ್ಕೆ ಬರುತ್ತಿರಲಿಲ್ಲಾ ತಾವು ಮುಂದಿನ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ಸಂಖ್ಯೆ 85/12  ಕಲಂ: 279,338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿದೆ.  

ಮಹಿಳಾ ಪೊಲೀಸ ಠಾಣೆ : ಶ್ರೀಮತಿ ಅನಿತಾ ಗಂಡ ಬಸವರಾಜ ಠಣಕೆದಾರ ಸಾ : ಬಾಲಾಜಿ ನಗರ ಗುಲಬರ್ಗಾ ರವರು, ನನ್ನ ಮದುವೆಯನ್ನು ದಿನಾಂಕ 28.06.2012 ರಂದು ಸಂಪ್ರದಾಯದಂತೆ ಹಿರಿಯರೆಲ್ಲರೂ ಕೂಡಿಕೊಂಡು ಬಸವರಾಜ ತಂದೆ ಮಲ್ಲಪ್ಪಾ ಠಣಕೆದಾರ ಸಾ: ಹತ್ತಿಗುಡೂರ ತಾ: ಶಹಾಪುರ ಹಾ:ವ: ನಂದೀಶ್ವರ ಕಾಲೋನಿ ಬೀದರ.ಇತನೊಂದಿಗೆ ಮದುವೆ ಮಾಡಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು 4 ಲಕ್ಷ ರೂಪಾಯಿ ಕೊಟ್ಟಿದ್ದು ಇರುತ್ತದೆ. ಮದುವೆಯಾದಾಗಿನಿಂದಲೂ ನನ್ನ ಗಂಡ ನನ್ನೋಂದಿಗೆ ಜಗಳ ತೆಗೆದು ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿರುತ್ತಾನೆ ನನಗೆ ನೀನು ಇಷ್ಟವಿಲ್ಲ ಮತ್ತು ಇನ್ನು 10 ಲಕ್ಷ ರೂಪಾಯಿ ಹಣ ನಿಮ್ಮ ತಂದೆ ಕಡೆಯಿಂದ ತೆಗೆದುಕೊಂಡು ಬರಬೇಕೆಂದು ಜಗಳ ತೆಗೆಯುತ್ತಿದ್ದನು. ಹೀಗಿದ್ದು ದಿನಾಂಕ 20.08.2012 ರಂದು ರಾತ್ರಿ 10 ಗಂಟೆಗೆ ಬಾಲಾಜಿನಗರದಲ್ಲಿರುವ ನಮ್ಮ ಚಿಕ್ಕಪ್ಪನ ಮನೆಗೆ ಬಂದು ಸಿಕ್ಕಾಪಟ್ಟೆ ಗಲಾಟೆ ಮಾಡಿ ನಿನ್ನನ್ನು ಜೀವ ಸಹಿತ ಬಿಡುವದಿಲ್ಲಾ ಏಕೆಂದರೆ ನೀನು ನಾನು ಹೇಳಿದ ವಿಷಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲಾ ನಿನಗೆ ತಕ್ಕ ಪಾಠ ಕಲಿಸುತ್ತೆನೆಂದು ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ಕೊಟ್ಟು ಜೀವದ ಬೆದರಿಕೆ ಹಾಕಿ ಹೊರಟು ಹೋದನು. ಕಾರಣ ನನಗೆ ಮದುವೆಯಾದಾಗಿನಿಂದಲೂ ತವರು ಮನೆಯಿಂದ 10 ಲಕ್ಷ ರೂಪಾಯಿ ತರುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಟ್ಟ ನನ್ನ ಗಂಡ ಬಸವರಾಜ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಪೊಲೀಸ ಠಾಣೆಯಲ್ಲಿ ಗುನ್ನೆ ಸಂಖ್ಯೆ 59/2012 ಕಲಂ 498(ಎ) 506 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿದೆ.

21 August 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ದಿನಾಂಕ:20-08-=2012 ರಂದು ರಾತ್ರಿ ಸುಮಾರಿಗೆ ನಾನು ದೇವಪ್ಪಾ ಮತ್ತು ನಿಮ್ಮ ಮಗ ಶಿವಶರಣ್ಪಾ ಕೂಡಿ ಮದರಿ ಗ್ರಾಮಕ್ಕೆ ಹೋಗಿ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಟ್ರಾಕ್ಟರ ಖಣಕಿ ಲೋಡ ಇಳಿಸಿ ಬರುತ್ತಿರುವಾಗ ಸದರಿ ಟ್ರಾಕ್ಟರವನ್ನು ಶಿವಶರಣಪ್ಪನು ನಡೆಸುತ್ತಿದ್ದು, ನಾನು ಟ್ರಾಲಿಯಲ್ಲಿ ಕುಳಿತ್ತಿದ್ದೇನೆ. ಮುಂದೆ ನಾವು ರಾಷ್ಟ್ರೀಯ ಹೆದ್ದಾರಿ 218 ರಸ್ತೆಯ ಹಸನಾಪೂರ ಕ್ರಾಸ ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಾಗ ಎದುರುಗಡೆಯಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಬ್ಬ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನು ತನ್ನ ಬಸ್ಸನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಅಂದಾಜು 8-45 ಪಿ.ಎಮ್‌ ಸುಮಾರಿಗೆ ನಮ್ಮ ಟ್ರಾಕ್ಟರಕ್ಕೆ ಎದುರುಗಡೆಯಿಂದ ಡಿಕ್ಕಿ ಪಡಿಸಿದ್ದರಿಂದ ಶಿವಶರಣಪ್ಪಾ ಈತನು ಕೆಳಗೆ ಬಿದ್ದಾಗ ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಹೋಗಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವು ಮನೆಯಲ್ಲರೇಲ್ಲರೂ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನು ಅಪಘಾತದಿಂದ ಟ್ರಾಕ್ಟರನಿಂದ ಕೆಳಗೆ ಬಿದ್ದು ಟ್ರಾಕ್ಟರದ ಟ್ರಾಲಿಯ ಹಿಂದಿನ ಗಾಲಿ ಎದೆಯ ಹಾಗೂ ತಲೆಯ ಮೇಲೆ ಹಾದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನನ್ನ ಮಗನ ಸಂಗಡ ಇದ್ದ ದೇವಪ್ಪಾ ದಂಡೋತ್ತಿ ಈತನಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಅಲ್ಲೇ ನಿಂತ್ತಿದ್ದ ಬಸ್ ನಂಬರ ನೋಡಲು ಕೆಎ-32 ಎಫ್.-1084 ಇದ್ದು ಸದರಿ ಬಸ್ಸಿನ ಚಾಲಕನ ಹೆಸರು ಅಶೋಕ ತಂದೆ ಸೈದಪ್ಪಾ ಗಜಕೋಶ ಅಂತಾ ಗೊತ್ತಾಯಿತು. ಕಾರಣ ಸದರಿ ಬಸ್ಸಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀ ಶಿವಯೋಗೆಪ್ಪಾ ತಂದೆ ಸಾಯಿಬಣ್ಣ ಸಾ|| ನದಿಸಿನ್ನೂರ ತಾ|| ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ 279 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.