ಅನಧಿಕೃತವಾಗಿ ಸೀಮೆ ಎಣ್ಣೆ ಸಾಗುಸುತ್ತಿದ್ದ ಬಗ್ಗೆ:
ಸೇಡಂ ಪೊಲೀಸ ಠಾಣೆ:ದಿನಾಂಕ:- 01-02-2012 ರಂದು ರಾತ್ರಿ 11-20 ಪಿ.ಎಮ್.ಕ್ಕೆ ಸೇಡಂ ಪಟ್ಟಣದ ಉಡಗಿ ರಸ್ತೆಯಲ್ಲಿ ಅನಧಿಕೃತವಾಗಿ ಸಿಮೇ ಎಣ್ಣೆ ತಗೆದುಕೊಂಡು ಹೋಗುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ.ಬಿ.ಬನ್ನಟಿ ಸಿಪಿಐ ಸೇಡಂ ರವರು ಮತ್ತು ಸಿಬ್ಬಂದಿಯವರೊಂದಿಗೆ 00-05 ಎ.ಎಮ್.ಕ್ಕೆ ಸೇಡಂ ಕಡೆಯಿಂದ ಅತಿವೇಗವಾಗಿ ಹೋಗುತ್ತಿದ್ದ ಬುಲೋರೊ ಪಿಕ್ ಅಪ. ವ್ಯಾನ ನಂ ಕೆ-ಎ-33-7414 ನೇದ್ದಕ್ಕೆ ಉಡಗಿ ಗ್ರಾಮದ ಉರ್ದು ಸರಕಾರಿ ಶಾಲೆಯ ಮುಂದೆ ಹಿಡಿದು ಪರಿಶೀಲಿಸಲು ವಾಹನ ಚಾಲಕನು ತನ್ನ ಹೆಸರು ಚನ್ನಪ್ಪ ತಂದೆ ಶಿವನಾಗಪ್ಪ ಸಾ:ಹಂಗನಳ್ಳಿ ಆತನ ಪಕ್ಕದಲ್ಲಿ ಸಿಮೇ ಎಣ್ಣೆ ಮಾಲಿಕ ಶಾಂತಕುಮಾರ ತಂದೆ ಭೀಮರಾವ ಚವ್ಹಾಣ ಸಾ: ಸ್ಟೇಶನ ತಾಂಡ ಮಳಖೇಡ ಅಂತಾ ತಿಳಿಸಿದರು ಸದರಿ ಸುಮಾರು 600 ಲೀಟರ ಸೀಮೆ ಎಣ್ಣೆ ಅಂದಾಜು ಕಿಮ್ಮತ್ತು 12000-00 ರೂ. ಗಳ ಸಿಮೇ ಎಣ್ಣೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಅವರು ಇರುವುದಿಲ್ಲಾ ಅಂತಾ ತಿಳಿಸಿದ್ದರಿಂದ ಸರಕಾರ ಸಾರ್ವಜನಿಕರ ಪಡಿತರ ಚೀಟಿಯ ಮೇಲೆ ಹಂಚಿಕೆ ಮಾಡಲು ಪೊರೈಯಿಸಿದ ನೀಲಿ ಸಿಮೇ ಎಣ್ಣೆಯನ್ನು ಅನಧಿಕೃತ ಕಳ್ಳ ಸಂತೆಯಲ್ಲಿ ಮಾರಲು ಹೋಗುತ್ತಿದ್ದಾಗ ಹಿಡಿದು ಜಪ್ತಿ ಪಂಚನಾಮೆ ಮುಖಾಂತರ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಕೊಳ್ಳಲು ಜ್ಞಾಪನ ಪತ್ರದ ಮೂಲಕ ಸೂಚಿಸಿದ ಮೇರೆಗೆ ಸೇಡಂ ಠಾಣೆ ಗುನ್ನೆ ನಂ 25/2012 ಕಲಂ 7 ಇ.ಸಿ Essential Commodity Act ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ
POLICE BHAVAN KALABURAGI

02 February 2012
GULBARGA DIST REPORTED CRIME
01 February 2012
GULBARGA DIST REPORTED CRIME
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ನರೋಣಾ ಪೊಲೀಸ ಠಾಣೆ:ಶ್ರೀಮತಿ ಮಲ್ಲಮ್ಮ ಗಂಡ ಲಕ್ಷ್ಮಣ ಹರಳಯ್ಯ ಸಾ: ಬಸವನ ಸಂಗೋಳಗಿ ರವರು ನಾನು ಬಸವನ ಸಂಗೋಳಗಿಯಲ್ಲಿ ಪಂಚಾಯತ ವತಿಯಂದ ಕಸಗೂಡಿಸುವ, ಚರಂಡಿ ಸ್ವಚ್ಛ ಮಾಡುವ ಕೆಲಸ ಮಾಡುತ್ತಿರುವೆನು. ನನ್ನಂತೆ ನಮ್ಮೂರಿನ ಅಂಬಾಬಾಯಿ ಗಂಡ ಆನಂದರಾಯ ಬಾದನೆ ಗೋಳ ಇವಳು ಸಹ ನನ್ನಂತೆ ಪಂಚಾಯತ ಸಿಬ್ಬಂದಿ ಇದ್ದು ನಾವಿಬ್ಬರೂ ಕೆಲಸ ಮಾಡುತ್ತಿರುವೆವು.ಪ್ರತಿ ದಿನದಂತೆ ನಾನು ಮತ್ತು ಅಂಬಾಬಾಯಿ ಬಾದನಗೋಳ ಕೂಡಿ ಮುಂಜಾನೆ 6-00 ಗಂಟೆಯ ಸುಮಾರಿಗೆ ಊರಲ್ಲಿ ಹೋಗಿ ಕಸ ಗೂಡಿಸುತ್ತಾ ಮತ್ತು ಚರಂಡಿ ಸ್ವಚ್ಛ ಮಾಡುತ್ತಾ ಶಿವಾನಂದ ತಂದೆ ಬೀರಣ್ಣ ಪೂಜಾರಿ ಇವರ ಮನೆಯ ಹತ್ತಿರದ ಸಾರ್ವಜನಿಕ ಚರಂಡಿಯನ್ನು ನಾವಿಬ್ಬರು ಸ್ವಚ್ಛ ಮಾಡುತ್ತಿರುವಾಗ ಶಿವಾನಂದ ಪೂಜಾರಿ, ಸಿದ್ದಣ್ಣ ಪೂಜಾರಿ, ಸೂರ್ಯಕಾಂತ ಪೂಜಾರಿ, ಇವರು ಬಂದವರೆ ಅವರಲ್ಲಿ ಶಿವಾನಂದನು ಇತನು ಅವಾಚ್ಯವಾಗಿ ಬೈಯುತ್ತಿದ್ದನು. ಆಗ ನಾನು ಪಂಚಾಯತದ ಪಿ ಡಿ ಓ ಸಾಹೇಬರು ಸ್ವಚ್ಛ ಮಾಡಿರಿ ಅಂತಾ ಹೇಳಿದ್ದರಿಂದ ಸ್ವಚ್ಛ ಮಾಡುತ್ತಿದ್ದೇವು ಅಂತಾ ಅಂದಾಗ ಮೂರು ಜನರು ನನಗೆ ಸಮಗಾರತಿ ಅಂತಾ ಜ್ಯಾತಿ ಎತ್ತಿ ಅವಾಚ್ಯವಾಗಿ ಬೈಯುತ್ತಾ ತಲೆಯ ಕೂದಲು ಹಿಡಿದು ಎಳೆದಾಡಿ ನನ್ನ ಕಯಯಲ್ಲಿದ್ದ ಸಲಿಕೆಯಿಂದ ಹೊಡೆದು ರಕ್ತ ಘಾಯ ಪಡಿಸಿರುತ್ತಾರೆ. ವಿನಾಕರಣ ನನಗೆ ಜಗಳಾ ತೆಗೆದು ಬೈಯ್ದು ಜ್ಯಾತಿ ನಿಂದನೆ ಮಾಡಿ ಕೂದಲು ಹಿಡಿದು ಜಗ್ಗಿ ಅವಮಾನ ಮಾಡಿ ಹೊಡೆ ಬಡೆ ಮಾಡಿ ಹಲ್ಲೆ ಮಾಡಿದ ಮೂರು ಜನರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 16/2012 ಕಲಂ 323 324 504 354 ಸಂ: 34 ಐಪಿಸಿ ಮತ್ತು 3[1][11] ಎಸ್ ಸಿ/ಎಸ್ ಟಿ ಎಕ್ಟ 1989 ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಆಳಂದ ಠಾಣೆ :ಶ್ರೀ ಅಶೋಕರಡ್ಡಿ ತಂದೆ ರಾಮರಡ್ಡಿ ವ: 27 ವರ್ಷ ಪ್ರ. ಮು. ಗುರುಗಳು ಸ.ಹಿ.ಪ್ರಾ.ಶಾಲೆ ಖಂಡಾಳ ನಾನು ದಿನಾಂಕ 31/01/2012 ರಂದು ಸಾಯಾಂಕಾಲ 5.00 ಗಂಟೆಗೆ ಶಾಲೆ ಮುಚ್ಚಿಕೊಂಡು ಹೋಗಿದ್ದು ದಿನಾಂಕ 01/02/2012 ರಂದು 9.00 ಬೆಳಿಗ್ಗೆ ಗಂಟೆಗೆ ನಾನು ಮತ್ತು ಕೆಲವು ಶಾಲಾ ಮಕ್ಕಳು ಶಾಲೆಗೆ ಹೋಗಿ ನೋಡಿದಾಗ ಮುಖ್ಯ ಗುರುಗಳ ಕೋಣೆಯ ಕೊಂಡಿ ಮುರಿದ್ದು ಕೋಣೆಯಲ್ಲಿ ಇರುವ ಟಿ.ವಿ, ಟಿ.ವಿ ಬಾಕ್ಸ್ ಹಾಗೂ ಸೋಲಾರ ಬ್ಯಾಟರಿ ಅಂದಾಜು ಮೊತ್ತ 10800=00 ಗಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
GULBARGA DIST REPORTED CRIMES
ಜೂಜಾಟ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ದಿನಾಂಕ 31/01/12 ರಂದು ಮದ್ಯಾಹ್ನ ಸುಮಾರಿಗೆ ಹಮಾಲವಾಡಿ ಗಲ್ಲಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಜೂಜಾಟ ಆಡುತ್ತಿದ್ದರೆ ಅಂತಾ ಖಚಿತ ಬಾತ್ಮಿ ಬಂದಿದ್ದರಿಂದ ಟಿ.ಎಚ್.ಕರಿಕಲ್ ಪಿಐ ಅಶೋಕ ನಗರ ಮತ್ತು ಸಿಬ್ಬಂದಿಯವರಾದ ರಾಮು, ರಫಿಕ,ದೇವೆಂದ್ರಪ್ಪ ಪಿಸಿಗಳು ಕೂಡಿ ಜೂಜಾಟಗಾರರ ಮೆಲೆ ದಾಳಿ ಮಾಡಿ ಜೂಜಾಟಗಾರರಿಂದ ಜೂಜಾಟಕ್ಕೆ ಸಂಬಂದಿಸಿ ನಗದು ಹಣ 25300=00 ರೂ ಹಾಗೂ ಇಸ್ಪೀಟ ಎಲೆಗಳು ಜಪ್ತಿ ಮಾಡಿ ಮಲ್ಲಿಕಾರ್ಜುನ ಸಂಗಡ 5 ಜನರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಠಾಣೆ ಗುನ್ನೆ ನಂ 10/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ