POLICE BHAVAN KALABURAGI

POLICE BHAVAN KALABURAGI

02 June 2011

GULBARGA DISTRICT REPORTED CRIMES

ಕಳವು ಪ್ರಕರಣಗಳು ;
ಅಶೋಕ ನಗರ ಠಾಣೆ;
ಶ್ರೀ ಚಂದ್ರಕಾಂತ ತಂದೆ ನಾಮದೇವ ಸಾ; ಕೊಣ ಸಿರಸಗಿ ತಾ; ಜೇವರ್ಗಿ ರವರು ಶ್ರೀ ಶ್ರೀಮಂತ ಮಂಡಲ ಸಾ; ಅಶೋಕ ನಗರ ರವರ ಮನೆಯಲ್ಲಿ ಬಾಡಿಗೆ ಇದ್ದು ದಿನಾಂಕ 31-05-2011 ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಹ್ನ ಯಾರೋ ಕಳ್ಳರು ಯಾರು ಇಲ್ಲದ್ದನ್ನು ನೋಡಿ ಮನಗೆ ಹಾಕಿದ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಅಲಮಾರಾದಲ್ಲಿ ಇಟ್ಟಿದ್ದ ನಗದು ಹಣ 7000/- ಮತ್ತು ನಬಂಗಾರದ ಆಭರಣ ಹಾಗೂ ಬೆಳ್ಳಿಯ ಆಭರಣ ಹೀಗೆ ಒಟ್ಟು 1,05,600/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಜಾ ಠಾಣೆ ;ಶ್ರೀ ಮಹಮ್ಮದ ಫಯಾಜುದ್ದಿನ ತಂದೆ ಬರಾನುದ್ದನ್ ಸಾ; ಪಾಚಾಪೂರ ರೋಜಾ ಕೆ. ಗುಲಬರ್ಗಾ ರವರು ತಮ್ಮ ತಂಗಿಯ ಮದುವೆ ಕಾರ್ಯಕ್ರಮಕ್ಕೆ ಮಾಹಾರಾಷ್ಟ್ರದ ನಾಂದೇಡಕ್ಕೆ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 01-06-2011 ರಂದು ಬೆಳಗ್ಗೆ ಬಂದು ನೋಡಲು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಅಲಮಾರಾದಲ್ಲಿ ಇಟ್ಟಿದ್ದ ನಗದು ಹಣ 30,000/- ಮತ್ತು 10 ತೋಲೆ ಬಂಗಾರದ ಆಭರಣಗಳು ಹೀಗೆ ಒಟ್ಟು 1,80,000/- ರೂ ಕಿಮ್ಮತ್ತಿವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಮುಧೋಳ ಠಾಣೆ ;ದಿನಾಂಕ 01-06-2011 ರಂದು ಅಡಕಿ ಗ್ರಾಮದಿಂದ ಸೇಡಂ ಕಡೆಗೆ ಹೋಗುವ ರಸ್ತೆಯಲ್ಲಿ ಲಾರಿ ನಂ ಎಮ್.ಎಚ್. 25 ಯು 1299 ನೇದ್ದರ ಚಾಲಕನಾದ ವಿಜಯ ತಂದೆ ಲಕ್ಷ್ಮಣ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರಸ್ತೆಯ ಬಲಭಾಗಕ್ಕೆ ನಿಂತಿದ್ದ ಟಿಪ್ಪರ ನಂ ಕೆಎ 32 ಬಿ 3745 ನೇದ್ದಕ್ಕೆ  ಗುದ್ದಿ ಅಪಘಾತ ಪಡಿಸಿದ್ದರಿಂದ ಲಾರಿ ಚಾಲಕನಾದ ವಿಜಯ ಇತನಿಗೆ ಭಾರಿ ಗಾಯಗಳಾಗಿ ಸೇಡಂ ಆಸ್ಪತ್ರೆಯಲ್ಲಿ ಉಪಚಾರ ಹೋದುತ್ತಾ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ ;ಶ್ರೀ ಅಬ್ದುಲ ಶಹಾ ತಂದೆ ಮೈನೋದ್ದಿನ ಶಹಾ ಫಕೀರ ಇವರು ಠಾಣೆಗೆ ದಿನಾಂಕ 31-05-2011 ರಂದು ಪರಿಚಯದ ರೀಯಾಜ ಡ್ರೈವರ ಇವರು ಲಾರಿ ನಂ ಎಪಿ 9-ಯು-7952 ನೇದ್ದರ ಮೇಲೆ ಮೇಲೆ ತನ್ನ ಗೆಳೆಯ ಕಂಟು ಇತನು ಕ್ಲೀನರ್ ಇದ್ದು ಶಹಾಪೂರಕ್ಕೆ ಹೋಗಿ ಉಸುಕು ತರೋಣವೆಂದು ಹೇಳಿದಕ್ಕೆ ಮೂವರು ಕೂಡಿ ಶಹಾಪೂರಕ್ಕೆ ಹೋಗಿ ರಾತ್ರಿ ಉಸುಕು ತುಂಬಿಕೊಂಡು ಮರಳಿ ಊರಿಗೆ ಬರುವ ಕುರಿತು ಬರುವಾಗ ರೀಯಾಜ ಇತನು ತನ್ನ ಲಾರಿಯನ್ನು ಅತೀವೇಗ ದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದನು ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೆಯೇ ನಡೆಸುತ್ತಾ ಬರುವಕಾಲಕ್ಕೆ ದಿನಾಂಕ 01-06-2011 ರಂದು ಬೆಳಗ್ಗಿನ ಜಾವ 5 ಗಂಟೆಯ ಸುಮಾರಿಗೆ ಹುಮನಾಬಾದ ರೋಡಿನ ಅವರಾದ ಕ್ರಾಸಿನ ಸಮೀಪ ಸಣ್ಣ ಬ್ರಿಜ್ಡಿನ ಬದಿಯಲ್ಲಿ ಹೋಗುವಾಗ ಎದುರುಗಡೆಯಿಂದ ಲಾರಿ ನಂ< ಕೆಎ-24 3060 ನೇದ್ದರ ಚಾಲಕ ನೂರೋದ್ದಿನ ಇತನು ತನ್ನ ಲಾರಿಯನ್ನು ಅತೀವೇಗ ದಿಂದ ಅಲಕ್ಷತನದಿಂದ ನಡೆಸಿಕೊಂಡು ಪರಸ್ಪರ ಎರಡು ಲಾರಿಯ ಚಾಲಕರು ಮುಖ ಮುಖಿಯಾಗಿ ಡಿಕ್ಕಿ ಹೊಡೆದುಕೊಂಡ ಪರಿಣಾಮ ಕಂಟು ಇತನು ಲಾರಿಯಿಂದ ಹಾರಿ ಬಿದ್ದಾಗ ಲಾರಿಯ ಕ್ಯಾಬೀನ್ ಮುರಿದು ಆತನ ಮೇಲೆ ಬಿದ್ದು ಭಾರಿಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

01 June 2011

GULBARGA DISTRICT REPORTED CRIMES

ಕಳವು ಪ್ರಕರಣ ;

ಆಳಂದ ಠಾಣೆ ;ಶ್ರೀಮತಿ ಪ್ರತಿಭಾ ಗಂಡ ರಾಜೇಂದ್ರ ಸೀಗಿ ಸಾ; ಜೋಡಬಸವಣ್ಣ ಚೌಕ ಸೋಲ್ಲಾಪೂರ ರವರು ದಿನಾಂಕ 30-05-2011 ರಂದು ಸೋಲ್ಲಾಪೂರಕ್ಕೆ ಹೋಗುವ ಕುರಿತು ತಮ್ಮ ಬ್ಯಾಗಗಳಲ್ಲಿ ಬಟ್ಟೆಹಾಕಿಕೊಂಡು ವ್ಯಾನಿಟಿ ಬ್ಯಾಗನಲ್ಲಿ ನಗದು ಹಣ 11000/- ರೂ ಮತ್ತು ತಮ್ಮ ಬಂಗಾರದ ವಡವೆಗಳಾದ ಬಂಗಾರದ 4 ಬಿಲವಾರ, ಮಾಂಗಲ್ಯ ಚೈನ ಬಂಗಾರದ ಕರಿಮಣಿ ಸರ, ಲಾಕೇಟ, ಕಿವಿಯಲ್ಲಿಯ ಹೂವು, ಕಿವಿ ಓಲೆ ಹಳ್ಳಿನದು, ಬಂಘಾರದ ಮಾಟಣಿ, ಬೆಳ್ಳಿ ಕಾಲ ಚೈನ, 2 ಮೂಗಬಟ್ಟು, 3 ಜೋತೆ ಕಾಲುಂಗರ ಬೆಳ್ಳಿಯದ್ದು ಹೀಗೆ ಒಟ್ಟು 133 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 60 ಗ್ರಾಂ ಬೆಳ್ಳಿಯ ಆಭರಣಗಳನ್ನು ಒಟ್ಟು 2,60,000/- ರೂ ಕಿಮ್ಮತ್ತಿನವುಗಳನ್ನು ಒಂದು ಪರಸನಲ್ಲಿ ಇಟ್ಟು ಅದನ್ನು ವ್ಯಾನಿಟಿ ಬ್ಯಾಗನಲ್ಲಿ ಹಾಕಿ ಆಳಂದ ಬಸ್ಸ ನಿಲ್ದಾಣಕ್ಕೆ ತಂದೆ ತಾಯಿಯವರ ಜೋತೆ ಬಂದು ಸೊಲ್ಲಾಪೂರಕ್ಕೆ ಹೋಗುವ ಮಾಹಾರಾಷ್ಟ್ರಾ ಬಸ್ಸಿಗೆ ಬಹಳ ಜನರು ಬಸ್ಸ ಹತ್ತುತ್ತಿರುವುದರಿಂದ ನಾನು ಕೂಡ ಜನಗಳ ಮಧ್ಯ ಭುಜಕ್ಕೆ ವ್ಯಾನಿಟಿ ಬ್ಯಾಗ ಹಾಕಿಕೊಂಡು ಕೈಯಲ್ಲಿ ಬ್ಯಾಗ ಹಿಡಿದುಕೊಂಡು ಬಸ್ಸ ಹತ್ತಿದ್ದು ನಾನು ಬಸ್ಸ ಹತ್ತುವಾಗ ಯಾರೋ ಕಳ್ಳರು ನನ್ನ ವ್ಯಾನಿಟಿ ಬ್ಯಾಗ ಕತ್ತರಿಸಿ ಅದರ ಒಳಗಡೆ ಇದ್ದ ಸುಮಾರು 2,60,000/- ರೂ ಕಿಮ್ಮತ್ತಿನ ನಗದು ಹಣ ಒಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ ;

ನರೋಣಾ ಠಾಣೆ ;ಶ್ರೀ ಮದರ ಸಾಬ ತಂದೆ ಮಹಿಬೂಬ್ ಸಾಬ ಬಾಗವಾಲೆ ಸಾ: ವಿ.ಕೆ.ಸಲಗರ್ ;ರವರ ಮಗನಾದ ಸಿಕಂದರ ಇವನು ನಮ್ಮೂರಿನ ಅಣ್ಣಪ್ಪ ತಂದೆ ಜಂಪಣ್ಣ ಬೆಳಗಿ ಇವರ ಟ್ರ್ಯಾಕ್ಟರ ನಂ ಕೆಎ 32 ಟಿ 1714 ನೆದದ್ದನ್ನು ದಿನಾಂಕ 31-05-2011 ರಂದು ಸಣ್ಮೂಖಪ್ಪಾ ಮಗಿ ಇವರ ಹೊಲದಲ್ಲಿ ನೇಗಿಲು ಹೊಡೆಯಲು ಹೋಗಿದ್ದು ವಾಪಸ ಬರುವಾಗ ಉರ ಸಮೀಪ ಮಾಹಾಗಾಂವ ಕೆಗೆ ಹೋಗುವ ರೋಡಿನ ಸರಕಾರಿ ಭಾವಿ ಹತ್ತಿರ ತನ್ನ ಟ್ರ್ಯಾಕ್ಟರನ್ನು ಅತೀ ವೇಗ ಅಲಕ್ಷತನದಿಂದ ನಡೆಸಿಕೊಂಡು ಬಂದು ತಗ್ಗಿನಲ್ಲಿ ಬಿದ್ದು ಪಲ್ಟಿಹೊಡೆದು ಟ್ರ್ಯಾಕ್ಟರ ಕೆಳಗಡೆ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

31 May 2011

GULBARGA DISTRICT REPORTED CRIMES

ವರದಕ್ಷಣಿ ಕಿರುಕಳ ಮಹಿಳೆಯ ಸಾವು :
ಗ್ರಾಮೀಣಠಾಣೆ ;
ಶ್ರೀ ಖೀಜರ ಅಹ್ಮದ ತಂದೆ ಶಬ್ಬೀರ ಅಹ್ಮದ ಸಾ ಖಾಜಾ ಕಾಲನಿ ಗುಲಬರ್ಗಾ ತಂಗಿಯಾದ ನಿಖೀತ ಪರವೀನ ಎಂಬುವಳನ್ನು ಅಬ್ದುಲ ಗಫೂರ ಜೀಲಾನಿ @ ಮುನ್ನಾ ಎಂಬುವನಿಗೆ ಕೊಟ್ಟು ಲಗ್ನ ಮಾಡಿದ್ದು ಲಗ್ನವಾದ 6 - 7 ತಿಂಗಳ ಮಾತ್ರ ಸುಖಾವಾಗಿ ನೋಡಿಕೊಂಡು ನಂತರ ದಿನಾಲು ಗಂಡ , ಅತ್ತೆ , ಮೈದನರು ತವರು ಮನೆಯಿಂದ ವರದಕ್ಷಣೆ , ಬಂಗಾರ , ತಂದಿಲ್ಲಾ ಅಡುಗೆ ಮಾಡಲು ಬರುವದಿಲ್ಲಾ , ಮನೆ ಕೆಲಸ ಸರಿಯಾಗಿ ಬರುವದಿಲ್ಲಾ ಎಂದು ಹೊಡೆ ಬಡೆ ಮಾಡುವುದು ಮತ್ತು ಕಿರುಕುಳ ಕೊಡುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿದ್ದು ಈ ವಿಷಯವನ್ನು ಅವಳ ಗಂಡನ ಮನೆಗೆ ತಂದೆ , ತಾಯಿಯವರು ಮತ್ತು ಇತರರು 3 - 4 ಸಲಾ ಹೋಗಿ ಬುದ್ದಿವಾದ ಹೇಳಿ ಗಂಡ ಮತ್ತು ಗಂಡಮನೆಯವರು ವರದಕ್ಷಣೆ ಕಿರುಕುಳ ಕೊಡುವದನ್ನು ನಿಲ್ಲಿಸಿರುವದಿಲ್ಲಾ ದಿನಾಂಕ 12-05-2011 ರಂದು ಬೆಳಗ್ಗೆ ಅಡುಗೆ ಮಾಡಿ ಎಲ್ಲರಿಗೂ ಊಟಕ್ಕೆ ಕೊಟ್ಟಾಗ ಮತ್ತೆ ಗಂಡ , ಮತ್ತು ಗಂಡನ ಮನೆಯವರು ನಿನ್ನಗೆ ಅಡುಗೆ ಸರಿಯಾಗಿ ಮಾಡಲು ಬರುವದಿಲ್ಲಾ , ಮನೆ ಕೆಲಸ ಬರುವದಿಲ್ಲಾ , ಇನ್ನು 2 ತೊಲೆ ಬಂಗಾರ ಮತ್ತು 25,000 /- ರೂ. ವರದಕ್ಷಣೆ ತರಬೇಕು ಎಷ್ಟು ಸಲಾ ಹೇಳಿದರು ತರುತ್ತಿಲ್ಲಾ ನಿನ್ನಿಂದ ನಮ್ಮಗೆ ಯಾವ ಲಾಭ ಇವರುದಿಲ್ಲಾ ಅಂತಾ ಗಂಡ , ಅತ್ತೆ , ಮೈದಿನರು ಕೈಯಿಂದ ಹೊಡೆ ಬಡೆ ಮಾಡಿ ಹಾಕಿ ಸ್ಟಿಕ್ ದಿಂದ ಕಾಲಿನಿಂದ ಹೊಡೆದು ಅವಮಾನಗೊಳಿಸಿದ್ದರಿಂದ ಅದನ್ನು ತಾಳದೆ ಅವಳು ಸೀಮೆ ಎಣ್ಣೆಯನ್ನು ಸುರಿದುಕೊಂಡು ಸುಟ್ಟಿಕೊಂಡಿರುತ್ತಾಳೆ ಅದರ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾ ನಂತರ ಮೇರಾಜ ಆಸ್ಪತ್ರೆಗೆ ತದನಂತರ ಹೆಚ್ಚಿನ ಉಪಚಾರ ಕುರಿತು ಮುಂಬೈಗೆ ತೆಗೆದುಕೊಂಡು ಹೋದಾಗ ಬೈಕಳದ ಮಸಿನಾ ಆಸ್ಪತ್ರೆಯಲ್ಲಿ ರಾತ್ರಿ 9 ಗಂಟೆಗೆ ಮೃತಪಟ್ಟಿರುತ್ತಾಳೆ ಅಮತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣಗಳು ;

ಮಾಡಬೂಳ ಠಾಣೆ ; ಶ್ರೀ ಮೋಹನ ತಂದೆ ಢಾಕು ಚವ್ಹಾಣ ಸಾ; ಲಕ್ಷಮಣ ನಾಯಕ ತಾಂಡಾ ಕಾಳಗಿ ರವರ ಕಾಕನ ಮಗನಾದ ಸುನೀಲ ತಂದೆ ಹರೀಶ್ಚಂದ್ರ ಚವ್ಹಾನ ಮತ್ತು ರಾಹುಲ ತಂದೆ ಥಾವರು ಕುಡಿಕೊಂಡು ತಮ್ಮ ಮೊಟಾರ ಸೈಕಲ್ ಮೇಲೆ ಹೋಗುತ್ತಿರುವಾಗ ಹೆಬ್ಬಾಳದ ಅಶೋಕ ನಗರದ ಹತ್ತಿರ ಟಿಪ್ಪರ ನಂ ಕೆಎ – 37 2206 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ದ್ವೀಚಕ್ರವಾಹನಕ್ಕೆ ಅಪಘಾತಪಡಿಸಿದ್ದು ಸುನೀಲ ಇತನು ಸ್ಥಳದಲ್ಲೆ ಮೃತಪಟ್ಟಿದ್ದು ಹಾಹುಲನೆಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ರೇವೂರ ಠಾಣೆ ;
ದಿನಾಂಕ 29-05-2011 ರಂದು ಶ್ರೀ ಭೀರಪ್ಪ ತಂದೆ ನಿಂಗಪ್ಪಾ ಮೋನುಟಗಿ ಸಾ; ಇಂಗಳಗಿ ಇವರು ಇಂಗಳಗಿ ಕ್ರಾಸ ಹತ್ತಿರಬಸ್ಸಿಗಾಗಿ ಕಾಯುತ್ತಾ ನಿಂತಿರುವಾಗ ಗುಲಬರ್ಗಾ ಕಡೆಯಿಂದ ಲಾರಿ ನಂ ಎಮ್.ಎಚ್. -12 ಎಫ್.ಸಿ.-8874 ನೇದ್ದರ ಚಾಲಕನಾದ ಭರತ ತಂದೆ ಅರ್ಜುನ ಪವಾರ ಸಾ ಮೊಹಲ ಜಿ; ಸೊಲ್ಲಾಪೂರ ಮಾಹಾರಾಷ್ಟ್ರ ಇತನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ರೋಡಿನ ಪಕ್ಕಕ್ಕೆ ಇರುವ ಗಿಡಕ್ಕೆ ಡಿಕ್ಕಿ ಪಡಿಸಿದ್ದು ಲಾರಿಯ ಕ್ಲೀನರ ಅಮೂಲ ತಂದೆ ಮೋತಿನಾಥ ಚೌಗಲೆ ಸಾ; ವಾಗೋಲಿ ಜಿ;ಅಹಮ್ಮದ ನಗರ ಮಾಹಾರಾಷ್ಟ್ರ ಇವನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.