18 October 2013

Gulbarga District Reported Crimes

ಹಲ್ಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಮೀರಾಜ ಪಟೇಲ ತಂದೆ ಇಸ್ಮಾಯಿಲ ಪಟೇಲ ಸಾ : ಬೀರನಳ್ಳಿ ದಿನಾಂಕ 17-10-13 ರಂದು  08:30 ಪಿ.ಎಮ್ ಕ್ಕೆ ತನ್ನ ಗ್ರಾಮದ ಭಾರತ ಕಟ್ಟೆಯ ಹತ್ತಿರ ನಿಂತಿದ್ದಾಗ 1) ಶಾಹೀದ ತಂದೆ ಖಾಜಾಮೀಯಾ  2) ಜಾವಿದ ತಂದೆ ಖಾಜಾಮೀಯಾ  3) ತೋಹಿದ ತಂದೆ ಖಾಜಾಮೀಯಾ  4) ಮಹೇಬೂಬ ತಂದೆ ಖಾಜಾಮೀಯಾ  5) ಮಹೇಮೂದ್ ತಂದೆ ಗುಲಾಮೋದ್ದಿನ್  6) ಯಾಶೀನ ತಂದೆ ಗುಲಾಮೋದ್ದಿನ್ 7) ಜಿಲಾನಿ ತಂದೆ ಯಾಜದಾನಿ 8) ಟೀಪು ತಂದೆ ಯಾಜದಾನಿ ಸಾ||ಎಲ್ಲರು ಬೀರನಳ್ಳಿ ಗ್ರಾಮ ತಾ|| ಸೇಡಂ  ಕೂಡಿಕೊಂಡು ಅಕ್ರಮ ಕೂಟರಚಿಸಿಕೊಂಡು ಬಂದು ಫಿರ್ಯಾದಿದಾರನಿಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ-ಬಡೆ ಮಾಡಿ ದುಃಖಾಪಾತ ಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀ ಸೂರ್ಯಕಾಂತ ತಂದೆ ಯಲ್ಲಪ್ಪ ಯಲ್ಮಾಮಡಗಿ ಸಾ: ರಾಣಾಪೂರ ರವರು ದಿನಾಂಕ 18-10-2013 ರಂಧು 11.30 ಗಂಟೆಗೆ  ಚಿಂಚೊಳಿಯಿಂದ ಚಂದಾಪೂರದ ಕಡೆಗೆ ಒಂದು ಆಟೋ ನಂ ಕೆ ಎ 32 ಎ 5482 ನೇದ್ದರ ಆಟೋದಲ್ಲಿ  ತಾನು ತನ್ನ ಹೆಂಡತಿ ಮತ್ತು ನನ್ನ ತಾಯಿ ಕುಡಿಕೊಂಡು ಆಟೋದಲ್ಲಿ ಹೋಗುತ್ತಿದ್ದಾಗ  ಶ್ರೀ ದೂಲಪ್ಪ ದೋಡ್ಮನಿ ರವರ ಮನೆಯ ಹತ್ತಿರ  ಚಾಲಕನು ತನ್ನ ಆಟೋವನ್ನು ಅತೀ ವೇಗದೀಮದ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಕೊಂಡು  ರಸ್ತೆಯ ಬಲಬದಿ  ನಾಲೆಯಲ್ಲಿ ಪಲ್ಟಿಮಾಡಿ  ನಮ್ಮ ಎಲ್ಲರೀಗೂ ರಕ್ತ ಮತ್ತು ತರಿಚಿ ಭಾರಿ ಗಾಯ ಗೋಳಿಸಿ ತನ್ನ ಆಟೋವನ್ನು ಅಲ್ಲೆ ಬಿಟ್ಟು ಚಾಲಕನಾದ ಕುಮಾರ ತಂಧೆ  ಬಿಮರಾವ್ ಪವಾರ ಎಂಬುವವನು ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments:

Post a Comment