20 November 2011

GULBARGA DIST CRIME

ಅಪಘಾತ ಪ್ರಕರಣ :
ರಟಕಲ್ ಪೊಲೀಸ್ ಠಾಣೆ :
ಶ್ರೀ ಖಾಜಾಸಾಬ ತಂದೆ ಯೂಸೂಪಖಾನ ರಿಕ್ಷವಾಲೆ ಸಾ ಸಂತ್ರಸವಾಡಿ ರವರು ಬಜಾಜ ಮೋಟಾರ ಸೈಕಲ್ ನಂ: ಕೆಎ 32 ಕ್ಯೂ9360 ನೇದ್ದರ ಮೇಲೆ ಗೌಸ ಗುಡುಭಾಯಿ ಮತ್ತು ಮಹಮದ ಆಶ್ರಪ ಮೂರು ಜನ ಕೂಡಿಕೊಂಡು ದಿನಾಂಕ: 11-11-2011 ರಂದು ಚಿಂಚೋಳಿಯಿಂದ ಗುಲಬರ್ಗಾ ಕಡೆಗೆ ಬರುತ್ತಿರುವಾಗ ಕಂಚನಾಳ ಕ್ರಾಸ ಸಮಿಪ ಹಿಂದೆ ಕುಳಿತ ಗೌಸಿತನು ಜಂಪಿನಲ್ಲಿ ಕೆಳಗೆ ಬಿದ್ದು ಭಾರಿ ರಕ್ತಗಾಯವಾಗಿದ್ದರಿಂದ ಗುಲಬರ್ಗಾದ ಆಸ್ಪತ್ರೆಗೆ ಉಪಚಾರ ಮಾಡಿಸಲು ಸೇರಿಕೆ ಮಾಡಿದ್ದು ಹೆಚ್ಚಿನ ಚಿಕಿತ್ಸೆ ಕುರಿತು ಸೋಲಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಉಪಚಾರ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ಮೃತನ ತಂದೆಯಾದ ಸೈಯದ ಖಾಜಾ ತಂದೆ ಸೈಯದ ಅಹಮದ ಅಲಿ ಗುಂಡುಭಾಯಿ ಸಾ ಸಂತ್ರಸವಾಡಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 62/2011 ಕಲಂ 279,337,338, 304 (ಎ) ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದರಿಂದ ತನಿಖೆ ಕೈಕೊಂಡಿರುತ್ತಾರೆ

No comments:

Post a Comment