17 September 2013

ಅಪಘಾತ ಪ್ರಕರಣ :

ಸಂಚಾರಿ ಠಾಣೆ : ದಿನಾಂಕ 16-09-2013 ರಂದು ಬೆಳಗ್ಗೆ 07-45 ಗಂಟೆಗೆ ಗಾಂದಿ ನಗರ ಕ್ರಾಸ್ ಹತ್ತಿರ ಅನಿತಾಬಾಯಿ ಗಂಡ ಹನುಮಾನಸಿಂಗ ಠಾಕೂರ, ಸಾಃ ಯುಲ್ಲಾಲಿಂಗ ಗುಡಿ ಹತ್ತಿರ ಶಿವಾಜಿ ನಗರ ರವರು ತಮ್ಮ ಗಂಡನೊಂದಿಗೆ ಗಂಜ ಬಸ್ ನಿಲ್ದಾಣ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಖಾನ್ ಮೋಟಾರ್ಸ ಕಾಂಪ್ಲೆಕ್ಸ ಎದರುಗಡೆ ರೋಡಿನ ಮೇಲೆ ಸುದೇಶ ತಂದೆ ಗಣಪತರಾವ ಈತನು ತಾನು ಚಲಾಯಿಸುತ್ತಿದ್ದ ಸ್ಕೂಲ ಬಸ್ ನಂ. ಕೆ.ಎ 32  9595 ನೇದ್ದನ್ನು ಹುಮನಾಬಾದ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಡೆದುಕೊಂಡು ಹೋಗುತ್ತಿದ್ದ ನನಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.