POLICE BHAVAN KALABURAGI

POLICE BHAVAN KALABURAGI

15 March 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸುಲೇಪೇಟ ಠಾಣೆ:
ನಾಗೇಶ ತಂದೆ ಸಾಬಣ್ಣ ಕುಕುಂದಿ ಸಾಃ ಭೂತಪೂರ ರವರು ನಾನು ದಿನಾಂಕಃ 14/03/2012 ರಂದು ಸಾಯಂಕಾಲ 4:30 ಗಂಟೆಯ ಸುಮಾರಿಗೆ ನಾಗಪ್ಪ ಕೊಡದೂರ ಇವರ ಚಹಾ ಹೊಟೆಲಕ್ಕೆ ಚಹಾ ಕುಡಿಯಲು ಹೋಗಿದ್ದಾಗ ಚಹಾ ಹೊಟೆಲ ಒಳಗಿನಿಂದ ನಮ್ಮೂರ ಬಾಲರಾಜ ತಂದೆ ರಾಮಚಂದ್ರ ಹಡಪಾದ ಇತನು ನನಗೆ ಡಿಕ್ಕಿ ಹೊಡೆದಿದ್ದು ನಾನು ಯಾಕೆ? ಅಂತಾ ಕೇಳಿದಕ್ಕೆ ಆತನು ನಿನೆ ನನಗೆ ಡಿಕ್ಕಿ ಹೊಡೆದು ಕೇಳುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಚಾಕುವಿನಿಂದ ಬಲಗೈ ಅಂಗೈಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 30/2012 ಕಲಂ. 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮಹ್ಮದ ಉಮರ ಫಾರೂಕ ತಂದೆ ಮಹ್ಮದ ಇಬ್ರಾಹಿಂ, ಸಾಃ ಮ. ನಂ. 4-601-65/ಎ3 ಎಮ್.ಬಿ.ನಗರ ಗುಲಬರ್ಗಾರವರು ನಾನು ದಿನಾಂಕ 13-03-2012 ರಂದು ಗೋಲಾ ಚೌಕ ಇರುವ ಸೋನಾ ಅಟೋ ಮೋಬೈಲ್ಸ ಎದುರು ಸಿ.ಸಿ ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆ.ಎ 32 ವೈ 5739 ನೇದ್ದರ ಸವಾರನು ಎಮ್.ಎ.ಟಿ ಕ್ರಾಸ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ನನಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:15/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಠಾಣೆ:
ಶ್ರೀಮತಿ. ಶ್ರತಿ ಗಂಡ ಮಲ್ಲಣ್ಣಾ ಮಾಡಬೂಳ ಸಾ: ಪ್ಲಾಟ ನಂ. 70 ಕೊತಂಬರಿ ಲೇಔಟ ಗುಲಬರ್ಗಾ ರವರು ನಾನು ನನ್ನ ಗೆಳತಿ ಸುಮಾ ಗಂಡ ಬಾಬುರೆಡ್ಡಿ ರವರೊಂದಿಗೆ ಮಾತಾಡಿಕೊಂಡು ಮರಳಿ ಮನೆಗೆ ನಡೆದುಕೊಂಡು ದಿನಾಂಕ 14-03-2012 ರಂದು ರಾತ್ರಿ 8-20 ಗಂಟೆ ಸುಮಾರಿಗೆ ಲೈಟ (ಕರೆಂಟ) ಹೋಗಿರುವ ಸಮಯದಲ್ಲಿ ಬರುತ್ತಿರುವಾಗ ಕೊತಂಬರಿ ಲೇಔಟ 4 ನೇ ಕ್ರಾಸಿಗೆ ಎದರುಗಡೆಯಿಂದ ಒಬ್ಬ ಮೊಟರ ಸೈಕಲ ಸವಾರನು ಬಂದವನೇ ನನ್ನ ಕೊರಳಿಗೆ ಕೈ ಹಾಕಿ 4 ತೊಲೆ ಬಂಗಾರದ ತಾಳಿ ಚೈನು (ಮಂಗಳಸೂತ್ರ)ವನ್ನು ಕಿತ್ತಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಅವನ ಮುಖ ಮತ್ತು ವಾಹನದ ಸಂಖ್ಯೆ ಕಾಣಿಸಿರುವುದಿಲ್ಲಾ. ನನ್ನ 4 ತೊಲೆಯ ಬಂಗಾರದ ತಾಳಿ ಚೈನು (ಮಂಗಳಸೂತ್ರ) ಅದರ ಅಂದಾಜು ಮೊತ್ತ 1,00,000/- (ಒಂದು ಲಕ್ಷ ರೂಪಾಯಿ) ಬೆಲೆಬಾಳುವದಾಗಿರುತ್ತದೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 23/2012 ಕಲಂ. 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮುಧೋಳ ಠಾಣೆ:
ಶ್ರೀಮತಿ ಸುನಿತಾ ಗಂಡ ನಾಗಲಿಂಗಯ್ಯಾ ಸ್ವಾಮಿ ರವರು ನನ್ನ ಮದುವೆ ದಿನಾಂಕ: 25-02-2008 ರಂದು ನಾಗಲಿಂಗಯ್ಯ ಸ್ವಾಮಿ ಜೋತೆ ನಡೆದಿದ್ದು, ಲಗ್ನದ ಕಾಲಕ್ಕೆ 5 ತೊಲಿ ಬಂಗಾರ ಹಾಗೂ ಒಂದು ಲಕ್ಷ ರೂಪಾಯಿ ಹಣ ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದು ನನಗೆ ಇನ್ನೂ ವರದಕ್ಷಿಣೆಯ ರೂಪದಲ್ಲಿ 2 ತೊಲಿ ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಒತ್ತಾಯಿಸಿ ಹೊಡೆ ಬಡೆಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದು ದಿನಾಂಕ: 14-03-2012 ರಂದು ಮುಂಜಾನೆ 8-30 ಗಂಟೆಗೆ ಸುನಿತಾ ಇವಳು ತನ್ನ ತವರು ಮನೆಯಾದ ಬೀದರಛೇಡ ಗ್ರಾಮದ ತಂದೆ-ತಾಯಿಯವರ ಮನೆಯಲ್ಲಿದ್ದಾಗ ನಾಗಲಿಂಗಯ್ಯನು ಸುನಿತಾಳಿಗೆ ಹೊಡೆಬಡೆಮಾಡಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 24/2012 ಕಲಂ: 498(ಎ) ಐಪಿಸಿ ಮತ್ತು 3,4 ಡಿ.ಪಿ ಎಕ್ಟ್-1961 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

14 March 2012

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸೇಡಂ ಪೊಲೀಸ್ ಠಾಣೆ: ಶ್ರೀ ಮಹ್ಮದ್ ಲಾಲಅಹ್ಮದ್ ಮಸಲದಾರ ಸಾ:ನಿಡಗುಂದಾ ತಾ:ಚಿಂಚೋಳಿ ರವರು ನಾನು ದಿನಾಂಕ;11-03-2012 ರಂದು ರಾತ್ರಿ 9-30 ಪಿ.ಎಮ್.ಕ್ಕೆ ನಮ್ಮ ಸಂಬಂಧಿಕರಿಗೆ ಸೇಡಂಕ್ಕೆ ಬಿಟ್ಟು ಬರಲು ನಮ್ಮೂರಲ್ಲಿ ಮದುವೆಗಾಗಿ ಬಂದ ಅಲ್ಲಾವುದ್ದಿನ್ ತಂದೆ ಮೈನೊದ್ದಿನಖಾನ ಸಾ:ಆಡಕಿ ಹುಡಾ ವರ ಮೋಟಾರ ಸೈಕಲ್ ನಂ-KA-02 ET-4892 ತೆಗೆದುಕೊಂಡು ಸೇಡಂಕ್ಕೆ ಬರುವಾಗ ಯಡ್ಡಳ್ಳಿ ಕ್ರಾಸ್ ಹತ್ತಿರ ಮೋಟಾರು ಸೈಕಲನ ಹಿಂದಿನ ಟಾಯರ್ ಪಂಕ್ಚರ ಆಗಿದ್ದು, ಮೋಟಾರು ಸೈಕಲಗೆ ಹ್ಯಾಂಡ ಲಾಕ ಮಾಡಿ ಯಡ್ಡಳ್ಳಿ ಕ್ರಾಸದಲ್ಲಿಟ್ಟು ಬೇರೆ ಜೀಪಿನಲ್ಲಿ ನಾವು ಸೇಡಂಕ್ಕೆ ಬಂದು ಕೆಲಸ ಮುಗಿಸಿಕೊಂಡು ನಂತರ ದಿನಾಂಕ:12-03-2012 ರಂದು ಬೆಳಗ್ಗೆ 8-00 ಗಂಟೆಗೆ ಹೋಗಿ ನೋಡಲಾಗಿ ಯಡ್ಡಳ್ಳಿ ಕ್ರಾಸ್ ದಲ್ಲಿಟ್ಟಿದ್ದ ಮೋಟಾರು ಸೈಕಲ್ ಇದ್ದಿರುವದಿಲ್ಲ ಮೋಟಾರು ಸೈಕಲ್ ನಂ-KA02ET4892 ಚೆಸ್ಸಿ ನಂ-05N16C02319 ಇಂಜೆನ್ ನಂ-05N15M57029, 2005 ಮಾಡಲ್, ಕಪ್ಪು ಬಣ್ಣ ಹೀರೊ ಹೊಂಡಾ ಸ್ಪಲೆಂಡರ್ ಪ್ಲಸ್ ಅಂ.ಕಿ 20,000/- ಇದ್ದು ಇದರ ಪೆಟ್ರೊಲ್ ಟ್ಯಾಂಕ ಮೇಲೆ ಪಾಕೀಟ್ ದಲ್ಲಿ ಒಂದು ಮೋಬೈಲ್ ನೋಕಿಯಾ ಕಂಪನಿದ್ದು 1200 ನೇದ್ದು ಅದರ ಸಿಮ್ ನಂ-8095309242 ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ-57/2012 ಕಲಂ- 379 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಅಶೋಕ ನಗರ ಠಾಣೆ: ಶ್ರೀ ರಾಯಪ್ಪ ತಂದೆ ಮಲ್ಲಪ್ಪ ದಂಡಗುಂಡ ಸಾ: ಕೊಂಚೂರ ಹಾ:ವ: ನೀಲಾಬಾಯಿ ರವರ ಪ್ಲಾಟದ ಒಂದು ರೂಂ ದಲ್ಲಿ ವಾಸ ಸಾ:ಊದನೂರ ರೋಡ ಯಶವಂತ ನಗರ ಗುಲಬರ್ಗಾ ರವರು ದಿನಾಂಕ: 13-03-2012 ರಂದು ರಾತ್ರಿ ರೂಂನಲ್ಲಿ ಮಲಗಿಕೊಂಡಿದ್ದಾಗ ಮಧ್ಯರಾತ್ರಿ ದಿನಾಂಕ:14-03-2012 ರಂದು 2-00 ಗಂಟೆಗೆ ಎದ್ದಾಗ ಮನೆಯಲ್ಲಿ ಒಬ್ಬ ಕಳ್ಳ ಹೊಕ್ಕಿ ಕೊಂಡಿದ್ದನ್ನು ಗಮನಿಸಿ "ಯಾರೋ ಮನೆಯಲ್ಲಿ ಹೊಕ್ಕಿಕೊಂಡಿದ್ದಿ ಆಂತಾ ಕೇಳಿದಾಗ ತಪ್ಪಿಸಿಕೊಂಡು ಓಡಿ ಹೋದನು. ಮನೆಯಲ್ಲಿ ಕಬ್ಬಿಣದ ಪೆಟ್ಟಿಗೆಯಲಿದ್ದ ಬಂಗಾರದ ಆಭರಣಗಳು ಮತ್ತು ನಗದು ಹಣ 10,000 ರೂ ಮತ್ತು ಚಾರ್ಜಿಂಗ ಹಚ್ಚಿದ ಆರ್ಮೋ ಕಂಪನಿಯ ಮೋಬೈಲ್ ಅದರ ಸಿಮ್ ನಂ 1 :9632911757 ಸಿಮ್ 2 9738911757 ಅ.ಕಿ.500 ರೂ ಹೀಗೆ ಒಟ್ಟು 73000 ರೂ ಕಿಮ್ಮತ್ತಿನ ಬೆಲೆಬಾಳುವ ಬಂಗಾರದ ಅಭರಣಗಳು, ನಗದುಹಣ ಮತ್ತು ಮೋಬೈಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ರವೀಂದ್ರನಾಥ ತಂದೆ ಶರಣಪ್ಪ ಮೋಗಾ ಸಾ ಕಿಣ್ಣಿಸಡಕ ಗ್ರಾಮ ತಾಜಿಗುಲಬರ್ಗಾರವರು ನಮಗೆ ನಮ್ಮೂರ ಸಂಜೀವಕುಮಾರ ಹೊಸಮನಿ ಈತನು ನಮ್ಮ ಸಂಭಂದಿಕರಾದ ಬಾಬುರಾವ ಸೊನ್ನದಿ ಮತ್ತು ಸುಂದರಾಬಾಯಿ ಪಂಡರಗೇರಾ ಇವರ ವಿರುದ್ದ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದಿದ್ದರಿಂದ ಆಗಾಗ ತಕರಾರು ಆಗುತ್ತಿದೆ, ಆ ಕಾರಣಕ್ಕಾಗಿ ಸಂಜೀವಕುಮಾರ ಮತ್ತು ಆತನ ಅಣ್ಣ ತಮ್ಮಂದಿರು ನಮ್ಮೊಂದಿಗೆ ವಿನಾಃಕಾರಣ ವೈಮನಸ್ಸು ಬೆಳಸಿಕೊಂಡು ಬಂದಿರುತ್ತಾರೆ. 1 ತಿಂಗಳ ಹಿಂದೆ ಸಂಜೀವ ಕುಮಾರ ಈತನು ಮೃತಪಟ್ಟಿರುತ್ತಾನೆ. ದಿನಾಂಕ: 13/03/2012 ರಂದು ಬೆಳೆಗ್ಗೆ ನಾನು ಸಂಜೀವಕುಮಾರ ಈತನ ಮನೆಯ ಮುಂದಿನ ರಸ್ತೆಯ ಮುಖಾಂತರ ಹೋಗುತ್ತಿದ್ದಾಗ ಈತನ ಅತ್ತಿಗೆ ಕವಿತಾ ಹೊಸಮನಿ ಇವಳು ನನ್ನನ್ನು ನೋಡಿ ಅವಾಚ್ಯವಾಗಿ ಬೈಯುತ್ತಿದ್ದಾಗ ವಿನಾಃಕಾರಣ ಅವಾಚ್ಯವಾಗಿ ಬೈಯ್ಯುವುದು ಸರಿ ಕಾಣುವುದಿಲ್ಲ ಅಂತಾ ಹೇಳಿ ನಾನು ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಕವಿತಾ ಇವಳ ಗಂಡ ರಾಜೇಂದ್ರ ಹೊಸಮನಿ ಮತ್ತು ಶರಣಪ್ಪ ಇಂಗನಕಲ್ಲ ಇವರು ಬಡಿಗೆಯಿಂದ ಹೊಡೆಬಡೆ ಮಾಡಿರುತ್ತಾರೆ, ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಲಲಿತಾ ಇವಳಿಗೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ. 341, 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ, ಕವಿತಾ ಗಂಡ ರಾಜೇಂದ್ರ ಹೊಸಮನಿ ಸಾಕಿಣ್ಣಿಸಡಕ ಗ್ರಾಮ ತಾಜಿಗುಲಬರ್ಗಾರವರು ನನ್ನ ಮೈದುನಾದ ಸಂಜಿವಕುಮಾರ ಇತನು ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮ ಗ್ರಾಮದ ಸುಂದರಬಾಯಿ ಇವಳ ವಿರುದ್ದ ಗೆದ್ದು ಬಂದಿದ್ದರಿಂದ ಇವಳ ಮಕ್ಕಳಾದ ರಾಹುಲ ಪಂಡರಗೇರಾ ರವರು ನಮ್ಮೊಂದಿಗೆ ವೈಷಮ್ಯ ಬೆಳೆಸಿಕೊಂಡು ಆಗಾಗ ತಕರಾರು ಮಾಡಿಕೊಂಡು ಬರುತ್ತಿದ್ದಾರೆ, ಸುಮಾರು 1 ತಿಂಗಳ ಹಿಂದೆ ನನ್ನ ಮೈದುನ ಸಂಜುಕುಮಾರ ಈತನು ಮೃತಪಟ್ಟಿರುತ್ತಾನೆ. ದಿನಾಂಕ:13/3/12 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಗ್ರಾಮದ ಲಲಿತಾಬಾಯಿ ಗಂಡ ರವಿ ಮತ್ತು ರವಿ ತಂದೆ ಶರಣಪ್ಪಾ ಹಾಗು ರಾಹುಲ್ ತಂದೆ ಶಂಕರ ಎಲ್ಲರೂ ಕೂಡಿಕೊಂಡು ನಮ್ಮ ಮನೆ ಮುಂದೆ ಬಂದು ವಿನಾಃಕಾರಣ ನನಗೆ ಅವಾಚ್ಯವಾಗಿ ಬೈದು ಹೋದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮಗೆ ಅನ್ಯಾಯ ಮಾಡಿ ಗೆದ್ದಿದ್ದಿರಿ ಈಗ ಸುಂಜುಕುಮಾರ ಈತನು ಮೃತಪಟ್ಟಿದ್ದು ದೇವರು ನಿಮಗೆ ಸರಿಯಾಗಿ ಬುದ್ದಿ ಕಲಿಸಿದ್ದಾನೆ. ಅಂತಾ ಅವಾಚ್ಯವಾಗಿ ಬೈಯುತ್ತಿದ್ದರು. ನಾನು ಮನೆಯಿಂದ ಹೊರಗೆ ಬಂದು ಯಾಕೆ ಸುಮ್ಮನೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಿರಿ, ಇದು ಸರಿಯಲ್ಲಾ ನಮ್ಮ ಮೈದುನ ತೀರಿಕೊಂಡಿದ್ದು ನಮಗೆ ದುಖಃವಾಗಿದೆ ಸುಮ್ಮನೇ ಹೋಗಿರಿ ಅಂತಾ ಹೇಳಿ ಮನೆ ಕಡೆಗೆ ಹೋಗುತ್ತಿದ್ದಾಗ ಹೊಡೆ ಬಡೆ ಮಾಡಿರುತ್ತಾರೆ, ಮನೆಯಲ್ಲಿದ್ದ ನನ್ನ ಗಂಡ ರಾಜೇಂದ್ರ ಮತ್ತು ನಾದಿನಿ ಇವರು ಜಗಳ ಬಿಡಿಸಲು ಬಂದಾಗ ಅವರಿಗೂ ಸಹ ಹೊಡೆಬಡೆ ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 29/2012 ಕಲಂ. 341, 323, 324, 504 ಸಂ. 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.